![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Nov 8, 2024, 11:00 AM IST
ಮಣಿಪಾಲ: ಮಾಹೆ ವಿ.ವಿ.ಯ 32ನೇ ಘಟಿಕೋತ್ಸವ ಇಲ್ಲಿನ ಕೆಎಂಸಿ ಗ್ರೀನ್ಸ್ನಲ್ಲಿ ನ.8 ರಿಂದ 10ರ ವರೆಗೆ ನಡೆಯಲಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳನ್ನು ಗೌರವಿಸಲು ಅಧ್ಯಾಪಕರು, ಅತಿಥಿಗಳು ಮತ್ತು ವಿದ್ಯಾರ್ಥಿಗಳು ಹಾಗೂ ಅವರ ಪಾಲಕ, ಪೋಷಕರನ್ನು ಒಟ್ಟುಗೂಡಿಸುವ ಕಾರ್ಯಕ್ರಮ ಇದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಯುಜಿಸಿ ಅಧ್ಯಕ್ಷ ಪ್ರೊ| ಮಾಮಿದಾಳ ಜಗದೀಶ್ ಕುಮಾರ್, ಹೊಸದಿಲ್ಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಬೊಟಿಕ್ ಆ್ಯಂಡ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ನಿರ್ದೇಶಕ ಡಾ| ಇಂದ್ರಜಿತ್ ಭಟ್ಟಾಚಾರ್ಯ, ಹೊಸದಿಲ್ಲಿಯ ಐಸಿಎಂಆರ್ ಡೈರೆಕ್ಟರ್ ಜನರಲ್ ಡಾ| ರಾಜೀವ್ ಬಹ್ಲ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮದಲ್ಲಿ 5,767 ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುವುದು.
ಮಾಹೆ ಮಣಿಪಾಲದ ವಿವಿಧ ಕಾಲೇಜುಗಳ 9 ಅತ್ಯುತ್ತಮ ವಿದ್ಯಾರ್ಥಿಗಳಿಗೆ ಅವರ ಅಸಾಧಾರಣ ಕೊಡುಗೆಗಳು ಮತ್ತು ಸಾಧನೆಗಳಿಗಾಗಿ 2024ರಲ್ಲಿ ಪ್ರತಿಷ್ಠಿತ ಡಾ| ಟಿಎಂಎ ಪೈ ಚಿನ್ನದ ಪದಕ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
https://social.manipal.edu/live/ ಮೂಲಕವೂ ಘಟಿಕೋತ್ಸವ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.
You seem to have an Ad Blocker on.
To continue reading, please turn it off or whitelist Udayavani.