Malpe ಮೀನುಗಾರಿಕೆ ಬಂದರು: ಸಂಚಾರ ಸ್ತಂಭನ

ಅಪಾಯಕಾರಿ ಹೊಳೆ ಉದ್ದಕ್ಕೂ ಯಾಂತ್ರಿಕ ದೋಣಿಗಳ ಲಂಗರು

Team Udayavani, Jul 29, 2024, 5:47 PM IST

bandaru

ಮಲ್ಪೆ: ಏಷ್ಯಾದ ಅತೀ ದೊಡ್ಡ ಸರ್ವಋತು ಮೀನುಗಾರಿಕಾ ಬಂದರಿನ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದು ಮೀನುಗಾರರಿಗೆ ದೊಡ್ಡ ತಲೆನೋವಾಗಿದೆ. ಮುಖ್ಯವಾಗಿ ಮಲ್ಪೆಯಲ್ಲಿ ಮೀನುಗಾರರಿಗೆ ತಮ್ಮ ಬೋಟ್‌ಗಳನ್ನು ನಿಲ್ಲಿಸಲು ಸ್ಥಳಾವಕಾಶದ ಕೊರತೆಯಿಂದಾಗಿ ಹೊಳೆಯಲ್ಲೇ ನಿಲ್ಲಿಸುವ ಅನಿವಾರ್ಯತೆ ಇದೆ.

ಮಲ್ಪೆ ಬಂದರಿನಲ್ಲಿ ವರ್ಷ 365 ದಿನವೂ ಮೀನುಗಾರಿಕಾ ಚಟುವಟಿಕೆ ನಡೆಸಬಹುದು. ಮಂಗಳೂರು – ಕಾರವಾರ ನಡುವೆ ಇರುವ ಈ ಬಂದರಿನಲ್ಲಿ ಸಾವಿರಾರು ಕೋಟಿ ರೂ. ಮೀನುಗಾರಿಕಾ ವ್ಯವಹಾರ ನಡೆಯುತ್ತದೆ. ಬಂದರುಗಳ ವಿಸ್ತರಣೆಯ ಈ ಸಮಸ್ಯೆ ಇಂದು ನಿನ್ನೆಯದಲ್ಲ.

ಪ್ರತೀ ವರ್ಷ ಮೀನುಗಾರರನ್ನು ಕಾಡುತ್ತಿದೆ. ಈ ಭಾರಿ ಬೋಟ್‌ ಒತ್ತಡದ ಸಮಸ್ಯೆ ಮತ್ತಷ್ಟು ಹೆಚ್ಚಿದ್ದು, ಅನ್ಯಮಾರ್ಗ ವಿಲ್ಲದ ಹೆಚ್ಚಿನ ಬೋಟ್‌ ಮಾಲಿಕರು ಬೋಟ್‌ಗಳನ್ನು ಹೊಳೆಯಲ್ಲೇ ಇರಿಸಬೇಕಾಗಿದೆ. ಸಣ್ಣ ದೋಣಿಗಳನ್ನು ಕಡೆಕಾರು, ಕುತ್ಪಾಡಿ, ಉದ್ಯಾವರ ಕನಕೋಡ ಭಾಗದ ಹೊಳೆಯಲ್ಲಿ ಲಂಗರು ಹಾಕಿದ್ದು ಕಂಡು ಬರುತ್ತದೆ

ಹೊಳೆಯಲ್ಲಿ ಅಪಾಯಕಾರಿ

ಹೊಳೆ ಪ್ರದೇಶಗಳಲ್ಲಿ ಬೋಟ್‌ಗಳನ್ನು ಲಂಗರು ಹಾಕುವುದು ಅಪಾಯಕಾರಿ. ನೀರಿನ ಇಳಿತ ಸಮಯ ಬೋಟಿನ ಅಡಿಭಾಗ ನೆಲ ಸ್ಪರ್ಶ ವಾದಾಗ ಬೋಟ್‌ ಅಡ್ಡ ಬೀಳುವ ಪ್ರಮೇಯ ಇರುತ್ತದೆ. ಅಲ್ಲದೆ ಈ ಭಾಗದಲ್ಲಿ ನೀರಿನ ಸೆಳೆತದಿಂದಾಗಿ ಬೋಟಿಗೆ ಕಟ್ಟಲಾದ ಹಗ್ಗ ಕಡಿದು ಹೋದಲ್ಲಿ ಕೊಚ್ಚಿ ಹೋಗುವ ಸಂಭವೂ ಜಾಸ್ತಿಯಾಗಿದೆ.

ಮಲ್ಪೆ ವ್ಯಾಪ್ತಿಯಲ್ಲಿ ಆಳಸಮುದ್ರ, ತ್ರಿಸೆವೆಂಟಿ, ಪಸೀìನ್‌, ಸಣ್ಣಟ್ರಾಲ್‌ಬೋಟು ಸೇರಿದಂತೆ ಸುಮಾರು 3 ಸಾವಿರದಷ್ಟು ಯಾಂತ್ರಿಕ ಬೋಟ್‌ಗಳಿವೆ. ಆದರೆ ಈಗಿರುವ ಬಂದರಿನ 1ಮತ್ತು 2ನೇ ಹಂತದ ಜೆಟ್ಟಿ, ಬಾಪುತೋಟದ ಬಳಿಯ 3ನೇ ಜೆಟ್ಟಿ, ಮಂಜು ದಕ್ಕೆಯ ಬಳಿ ನಬಾರ್ಡ್‌ ಯೋಜನೆಯಡಿ ನಿರ್ಮಾಣವಾದ ಹೊಸ ಜೆಟ್ಟಿಯಲ್ಲಿ ಸುಮಾರು 850 ರಿಂದ 1000 ಬೋಟ್‌ಗಳು ನಿಲ್ಲುವುದಕ್ಕೆ ಮಾತ್ರ ಅವಕಾಶವಿದೆ. ಉಳಿದ ಬೋಟುಗಳನ್ನು ಹೊಳೆಯಲ್ಲಿ ನಿಲ್ಲಿಸಬೇಕಾಗಿದೆ.

ಪ್ರಾಕೃತಿಕ ವಿಕೋಪದ ಸಮಯದಲ್ಲಿ ರಾಜ್ಯದ ಹೊರಬಂದರು, ಹೊರ ರಾಜ್ಯದ ಬೋಟುಗಳು ಇಲ್ಲಿಗೆ  ಬರುತ್ತವೆ. ಇನ್ನು ನಾಡದೋಣಿಗಳಾದ ಕಂತುಬಲೆ, ಪಟ್ಟಬಲೆ, ಟ್ರಾಲ್‌ದೋಣಿ, ಡಿಸ್ಕೊ, ಕೈರಂಪಣಿ ಸೇರಿದಂತೆ ಒಟ್ಟು 2600 ದೋಣಿಗಳಿಗೆ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಸುರಕ್ಷಿತವಾಗಿ ನಿಲ್ಲಲು ನೆಲೆ ಇಲ್ಲದಂತಾಗಿದೆ.

ರಾಜ್ಯ ಸರಕಾರಕ್ಕೆ ಒತ್ತಡ

ಬೋಟುಗಳ ಸಂಖ್ಯೆಗೆ ಅನುಗುಣವಾಗಿ ಜೆಟ್ಟಿ ವಿಸ್ತರಣಾ ಕೆಲಸಗಳು ಆಗಬೇಕು. ರಾಜ್ಯದ ಮೀನುಗಾರಿಕಾ ಬಂದರುಗಳ ಅಭಿವೃದಿಗೆ ಕೇಂದ್ರ ಸರಕಾರ 1600 ಕೋ. ರೂ. ಈಗಾಗಲೇ ಅನುದಾನ ನೀಡಿದೆ. ಆದರೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಾಜ್ಯ ಸರಕಾರ ತನ್ನ ಅನುಪಾತದ ಹಣವನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ. ಬಂದರು ವಿಸ್ತರಣೆಗೊಳ್ಳದೇ ಮೀನುಗಾರರಿಗೆ ಸಂಕಷ್ಟ ಎದುರಾಗಿದೆ. ಶೀಘ್ರ ಸ್ಪಂದನೆಗೆ ರಾಜ್ಯ ಸರಕಾರಕ್ಕೆ ಒತ್ತಡ ಹೇರಲಾಗುವುದು.

– ಯಶ್‌ಪಾಲ್‌ ಸುವರ್ಣ, ಶಾಸಕರು, ಉಡುಪಿ

ಅಂದಾಜು ಪಟ್ಟಿ ಸಲ್ಲಿಕೆ

ಪಡುಕರೆ ಭಾಗದಲ್ಲಿ ನಿರ್ಮಾಣವಾಗಲಿರುವ 650 ಮೀ. ಜೆಟ್ಟಿ ವಿಸ್ತರಣೆಗೆ ಈಗಾಗಲೇ ಅಂದಾಜು ಪಟ್ಟಿ ತಯಾರಿಸಿ ಮೀನುಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸಲಾಗಿದೆ. ಔಟರ್‌ ಹಾರ್ಬರ್‌ ನಿರ್ಮಾಣದ ಬಗ್ಗೆ
ಮೀನುಗಾರಿಕೆ ಇಲಾಖೆಯ ಎಂಜಿನಿಯರ್‌ಗಳು ಅಧ್ಯಾಯನ ತಂಡವನ್ನು ರಚಿಸಿ ವರದಿ ನೀಡಿಲಿದ್ದಾರೆ. ಆ ಬಳಿಕವಷ್ಟೇ ಮುಂದಿನ ಕಾರ್ಯಯೋಜನೆಯನ್ನು ಕೈಗೊಳ್ಳಲಾಗುವುದು.

– ಹರೀಶ್‌ ಕುಮಾರ್‌, ಹೆಚ್ಚುವರಿಗೆ ನಿರ್ದೇಶಕರು, ಮೀನುಗಾರಿಕೆ ಇಲಾಖೆ ಮಲ್ಪೆ

ಬೊಬ್ಬರ್ಯ ಪಾದೆ ಬಳಿಯೂ ಲಂಗರು:

ಕಲ್ಮಾಡಿ ಬೊಬ್ಬರ್ಯ ಪಾದೆಯ ಬಳಿ ಹೊಳೆಯ ಬದಿಯಲ್ಲಿ ನಾಡದೋಣಿ, ಸಣ್ಣಗಾತ್ರದ ಯಾಂತ್ರಿಕ ದೋಣಿಗಳು ಸೇರಿದಂತೆ ಒಟ್ಟು 700 ರಷ್ಟು ದೋಣಿಗಳನ್ನು ಇಲ್ಲಿ ಲಂಗರು ಹಾಕಲಾಗಿದೆ. ಇಲ್ಲಿನ ಹೊಳೆಗೆ ಪಡುಕರೆ ಸೇತುವೆ ಅಡ್ಡಲಾಗಿ ಇರುವುದರಿಂದ ದೊಡ್ಡಗಾತ್ರದ ಬೋಟುಗಳು ಚಲಿಸಲು ತಡೆಯಾಗುತ್ತಿದೆ. ಪಡುಕರೆ ಭಾಗದಲ್ಲಿ ಯಾಂತ್ರಿಕ ಬೋಟು ತಂಗಲು 500 ಮೀಟರ್‌ ಉದ್ದದ ಜೆಟ್ಟಿ, ನಾಡದೋಣಿಗೆ 150 ಮೀ. ಜೆಟ್ಟಿ ನಿರ್ಮಾಣ, ಮಾತ್ರವಲ್ಲದೆ ಬಂದರು ಭಾಗದ ಪೂರ್ವದಲ್ಲಿ ನೀರು ಹರಿಯುವ ತೋಡಿನಲ್ಲಿ ನಾಡದೋಣಿಗೆ ತಂಗುದಾಣ ನಿರ್ಮಾಣ ಪ್ರಸ್ತಾವನೆಯನ್ನು ಎರಡು ಮೂರು ವರ್ಷಗಳ ಹಿಂದೆಯೂ ಮೀನುಗಾರ ಸಂಘ ಸರಕಾರಕ್ಕೆ ನೀಡಿದ್ದು ಇದುವರೆಗೆ ಯಾವುದೇ ಸ್ಪಂದನೆ ಸಿಗಲಿಲ್ಲ ಎನ್ನಲಾಗಿದೆ.

 

ಟಾಪ್ ನ್ಯೂಸ್

police crime

Kolkata; ಟ್ರೈನಿ ವೈದ್ಯೆ ಕೇಸು:1 ಕಿ.ಮೀ. ಬರಲು ಪೊಲೀಸರಿಗೆ 1ತಾಸು!

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Census

Census ಈ ಬಾರಿ ಜಾತಿ ಕಾಲಂ ಸೇರ್ಪಡೆಗೆ ಕೇಂದ್ರ ಸರಕಾರ‌ ಚಿಂತನೆ?

Namma-clinic

Karnataka; ಬಸ್‌ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ ಸಮುಚಿತ ನಿರ್ಧಾರ

Dinesh-Meeting

Bengaluru: ನಿಫಾಗೆ ಬಲಿಯಾದ ವಿದ್ಯಾರ್ಥಿಯ ಸಂಪರ್ಕದಲ್ಲಿದ್ದ 25 ಮಂದಿ ಪತ್ತೆ

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

police crime

Kolkata; ಟ್ರೈನಿ ವೈದ್ಯೆ ಕೇಸು:1 ಕಿ.ಮೀ. ಬರಲು ಪೊಲೀಸರಿಗೆ 1ತಾಸು!

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Census

Census ಈ ಬಾರಿ ಜಾತಿ ಕಾಲಂ ಸೇರ್ಪಡೆಗೆ ಕೇಂದ್ರ ಸರಕಾರ‌ ಚಿಂತನೆ?

1-eewqe

‘Wrestling Champions Super League’: ಅನುಮತಿ ನೀಡಲು ನಕಾರ

1-gread

Manipur ಸಚಿವ ಖಶಿಮ್‌ ಮನೆ ಮೇಲೆ ಗ್ರೆನೇಡ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.