Malpe: ಸಿದ್ಧಗೊಳ್ಳುತ್ತಿವೆ ಸಾಂಪ್ರದಾಯಿಕ ಗೂಡುದೀಪಗಳು

ಮೂಡುಬೆಟ್ಟಿನ ಅಂಗಡಿಯಲ್ಲಿ ಯುವತಿಯರು, ಮಕ್ಕಳ ಕೈಯಲ್ಲಿ ಅರಳುತ್ತಿದೆ ಆಕಾಶದೀಪ

Team Udayavani, Oct 27, 2024, 5:09 PM IST

10

ಮಲ್ಪೆ: ಬೆಳಕಿನ ಹಬ್ಬ ದೀಪಾವಳಿಯ ಅಂದ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಬಣ್ಣ ಬಣ್ಣದ ಗೂಡು ದೀಪಗಳು. ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಸಿಂಥೆಟಿಕ್‌ ಬಟ್ಟೆಯಿಂದ ತಯಾರಿಸಿದ ಚೀನ ಮೇಡ್‌ ಗೂಡು ದೀಪಗಳ ಪ್ರಾಬಲ್ಯವಿದ್ದರೂ ಅದನ್ನು ಮುರಿದು ಈಗ ಮತ್ತೆ ಸಾಂಪ್ರದಾಯಿಕ ಗೂಡುದೀಪಗಳು ಜನಾಕರ್ಷಣೆ ಸೃಷ್ಟಿಸಿಕೊಂಡಿವೆ. ಅದರಲ್ಲೂ ಸ್ಥಳೀಯವಾಗಿಯೇ ಇದರ ನಿರ್ಮಾಣ ಮತ್ತು ಮಾರಾಟ ನಡೆಯು ತ್ತಿರುವುದು ಗಮನ ಸೆಳೆದಿದೆ.

ಉಡುಪಿ ಮತ್ತು ಮಲ್ಪೆಯ ಕೆಲವು ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗೂಡುದೀಪಗಳನ್ನು ನಿರ್ಮಿಸಿ ಅಂಗಡಿಗಳಿಗೆ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಸ್ಥಳೀಯವಾಗಿ ನಿರ್ಮಿಸಿದ ಗೂಡುದೀಪಗಳು ಹೆಚ್ಚಿನ ಅಂಗಡಿಗಳಲ್ಲಿ ಕಾಣಸಿಗುತ್ತವೆ.

ಮೂಡುಬೆಟ್ಟು ಮಧ್ವನಗರದ ಸಮೀಪದ ಮಮತಾ ಆಚಾರ್ಯ ಅವರ ನೇತೃತ್ವದಲ್ಲಿ ಯುವತಿಯರ ತಂಡ ಉಡುಪಿ ಬಳಿ ಒಳಕಾಡುವಿನ ಅಂಗಡಿ ಒಂದರಲ್ಲಿ ಕಳೆದ 6-7 ತಿಂಗಳಿನಿಂದ ಗೂಡುದೀಪ ತಯಾರಿಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಸಾಂಪ್ರದಾಯಿಕ ಶೈಲಿಯಲ್ಲಿ ಮಾಡಲ್ಪಟ್ಟ ಗೂಡುದೀಪಗಳಿಗೆ 250ರಿಂದ 1,000 ರೂ. ಬೆಲೆ ನಿಗದಿಪಡಿಸಲಾಗಿದೆ. ಒಂದೊಂದು ಗೂಡುದೀಪಗಳು ವಿಭಿನ್ನ ವಿನ್ಯಾಸದಿಂದ ಮನ ಸೆಳೆಯುತ್ತದೆ.

ಬಿದಿರಿನ ಗೂಡುದೀಪದ ತಯಾರಿ ಹೀಗೆ…
ಸೀಮೆ ಕೋಲುಗಳನ್ನು ಸಪೂರ ಕಡ್ಡಿಗಳನ್ನಾಗಿಸಬೇಕು. ಇಂತಹ 36 ಕಡ್ಡಿಗಳು ಬೇಕು. ಇದರಲ್ಲಿ 4 ಕಡ್ಡಿಗಳು ಇತರ ಕಡ್ಡಿಗಿಂತ ಉದ್ದ ಇರಬೇಕು. ಇದನ್ನು ಆಧಾರ ಕಡ್ಡಿ ಎಂದು ಕರೆಯಲಾಗುತ್ತದೆ. ಮೇಣದ ದೀಪವನ್ನು ಇಡುವುದಾದರೆ ಈ 32 ಕಡ್ಡಿಗಳಲ್ಲದೆ 2 ಹೆಚ್ಚುವರಿ ಕಡ್ಡಿ ಬೇಕಾಗುತ್ತದೆ. ಕಡ್ಡಿಗಳನ್ನು ಸಿದ್ಧಮಾಡಿಕೊಂಡ ಬಳಿಕ ಆಧಾರ ಕಡ್ಡಿಗಳನ್ನು ಹೊರತುಪಡಿಸಿ ಇತರ ಕಡ್ಡಿಗಳನ್ನು ಚೌಕಾಕಾರವಾಗಿ ನೂಲಿನಿಂದ ಕಟ್ಟಿಕೊಳ್ಳಬೇಕು, 32 ಕಡ್ಡಿಗಳಿಂದ 8 ಚೌಕಗಳನ್ನು ಒಂದೇ ರೀತಿಯಲ್ಲಿ ರಚಿಸಿಕೊಳ್ಳಬೇಕು. ನಂತರ ಆಧಾರ ಕಡ್ಡಿಯಲ್ಲಿ ಆಳತೆ ಮಾಡಿ ಗುರುತು ಮಾಡಿಕೊಳ್ಳಬೇಕು. ಕಡ್ಡಿಯ ಒಂದೊಂದು ಬದಿ ಸಮಾನ ಅಂತರದ ಮೂರು ಗುರುತು ಮಾಡಿ, ಒಳತುದಿಯಲ್ಲಿ ಬರುವ ಗುರುತಿಗೆ ಚೌಕಾಕಾರದ ಪಟ್ಟಿಯನ್ನು ತುದಿಯಿಂದ ತುದಿಗೆ ಕಟ್ಟಬೇಕು, ನಾಲ್ಕು ಕಡ್ಡಿಗಳಿಗೆ ನೂಲಿನಿಂದ ಕಟ್ಟಿದ ಬಳಿಕ ಆಧಾರ ಕಡ್ಡಿಯಲ್ಲಿ ಅದನ್ನು ನಿಲ್ಲಿಸಿ ಅದರ ಉಳಿದ ತುದಿಯನ್ನು ಒಂದಕ್ಕೊಂದು ಜೋಡಿಸಬೇಕು. ಆ ಬಳಿಕ ಬಣ್ಣದ ಪೇಪರ್‌ ಅಥವಾ ಗ್ಲಾಸ್‌ ಪೇಪರ್‌ ಅನ್ನು ಗಮ್‌ನ ಸಹಾಯದಿಂದ ಅಂಟಿಸಲಾಗುತ್ತದೆ. ಬಾಲ, ಹೂವಿಗೆ ವಿವಿಧ ರೀತಿಯ ಬಣ್ಣದ ಪೇಪರ್‌ ಬಳಸಲಾಗುತ್ತದೆ.

-ನಟರಾಜ್‌ ಮಲ್ಪೆ

ಟಾಪ್ ನ್ಯೂಸ್

BJP-Team

Waqf Property: ವಕ್ಫ್ ವಿವಾದ: ವಿಜಯಪುರ ರೈತರ ಅಹವಾಲು ಆಲಿಸಲು ಬಿಜೆಪಿಯಿಂದ ತಂಡ ರಚನೆ

15

Movie: 45 ಕೋಟಿ ಬಜೆಟ್‌, 60 ಸಾವಿರ ಗಳಿಕೆ; ಇದು ಭಾರತದ ಬಿಗೆಸ್ಟ್ ಫ್ಲಾಪ್ ಸಿನಿಮಾ

1-a-PK

Pakistan; ನಾಯಕತ್ವ ತೊರೆದ ಬಾಬರ್ ಅಜಂ: ವೈಟ್ ಬಾಲ್ ಕಪ್ತಾನನಾಗಿ ರಿಜ್ವಾನ್

Sharanagowda-Kandakura

JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ

1-mp-lungi

Video Viral; ಲುಂಗಿಯಲ್ಲಿ ಡ್ಯೂಟಿ ಮಾಡಿದ ಎಸ್ ಐ!: ಮಹಿಳೆಯೊಂದಿಗೆ ಅಸಭ್ಯ ವರ್ತನೆ

BBK11: ಶಾಕಿಂಗ್.! ಫಿನಾಲೆವರೆಗೂ ಬರ್ತಾರೆ ಅನ್ಕೊಂಡಿದ್ದ‌ ಆ ಸ್ಪರ್ಧಿ ಇವತ್ತೇ ಮನೆಯಿಂದ ಔಟ್?

BBK11: ಶಾಕಿಂಗ್.! ಫಿನಾಲೆವರೆಗೂ ಬರ್ತಾರೆ ಅನ್ಕೊಂಡಿದ್ದ‌ ಆ ಸ್ಪರ್ಧಿ ಇವತ್ತೇ ಮನೆಯಿಂದ ಔಟ್?

MB Patil 2

Waqf; ವಿಜಯಪುರದಲ್ಲಿ ಗೆಜೆಟ್ ದೋಷದಿಂದ ರೈತರ ಜಮೀನಿನಲ್ಲಿ ಗೊಂದಲ: ಎಂ.ಬಿ.ಪಾಟೀಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

puttige-4

Udupi; ಗೀತಾರ್ಥ ಚಿಂತನೆ-76: ಕುಲಕ್ಷಯ=ಕುಲಸಂಸ್ಕೃತಿಯ ಕ್ಷಯ

12(1)

Kota: ದುರಸ್ತಿಗಾಗಿ ಕಾಯುತ್ತಿವೆ ಹೆದ್ದಾರಿ ಗುಂಡಿಗಳು

11

Kaup ಕೊಳಚೆ ನೀರಿಗೆ ಇಲ್ಲಿದೆ ಪರಿಹಾರ!

9(2)

Udupi: ಮೂಲೆಗುಂಪಾದ ಹೊಸ ಅಗ್ನಿಶಾಮಕ ಠಾಣೆ ಬೇಡಿಕೆ

8(1)

Udupi: ಅಳಿವಿನಂಚಿನಲ್ಲಿರುವ ಪ್ರಾಚೀನ ಸ್ಮಾರಕಗಳ ರಕ್ಷಣೆಗೆ ಟೀಮ್‌ ತೌಳವ

MUST WATCH

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

ಹೊಸ ಸೇರ್ಪಡೆ

14

Dandeli:ಮನೆಯಿಂದ ಹೊರ ಹಾಕಲ್ಪಟ್ಟ ವೃದ್ಧ; ಆಶ್ರಯ ನೀಡಲು ಮುಂದಾದ ಚಿನ್ನಯ್ಯ ಆಶೀರ್ವಾದಂ ಗಜ್ಜ

BJP-Team

Waqf Property: ವಕ್ಫ್ ವಿವಾದ: ವಿಜಯಪುರ ರೈತರ ಅಹವಾಲು ಆಲಿಸಲು ಬಿಜೆಪಿಯಿಂದ ತಂಡ ರಚನೆ

puttige-4

Udupi; ಗೀತಾರ್ಥ ಚಿಂತನೆ-76: ಕುಲಕ್ಷಯ=ಕುಲಸಂಸ್ಕೃತಿಯ ಕ್ಷಯ

15

Movie: 45 ಕೋಟಿ ಬಜೆಟ್‌, 60 ಸಾವಿರ ಗಳಿಕೆ; ಇದು ಭಾರತದ ಬಿಗೆಸ್ಟ್ ಫ್ಲಾಪ್ ಸಿನಿಮಾ

1-a-PK

Pakistan; ನಾಯಕತ್ವ ತೊರೆದ ಬಾಬರ್ ಅಜಂ: ವೈಟ್ ಬಾಲ್ ಕಪ್ತಾನನಾಗಿ ರಿಜ್ವಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.