![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 5, 2023, 11:34 PM IST
ಕಾರ್ಕಳ: ಬಸ್ಸಿನಿಂದ ಇಳಿಯುವ ವೇಳೆ ಬಸ್ಸಿನ ಬಾಗಿಲಿನ ಬಳಿಕ ರಾಡ್ಗೆ ಕೈಸಿಲುಕಿ ಅಂಗನವಾಡಿ ಕಾರ್ಯಕರ್ತೆಯ ಬೆರಳು ತುಂಡಾದ ಘಟನೆ ಆ.4ರಂದು ನಡೆದಿದೆ.
ಬಜಗೋಳಿಯ ಆರ್ ಕೆ ನಗರ ನಿವಾಸಿ, ಅಂಗನವಾಡಿ ಕಾರ್ಯಕರ್ತೆ ಚಂದ್ರಕಲಾ ಎಂಬವರು ಕರ್ತವ್ಯಕ್ಕೆಂದು ತೆರಳಲು ಮುಡಾರು ಗ್ರಾಮದ ಬಜಗೋಳಿಯ ಬಸ್ಸು ನಿಲ್ದಾಣದಲ್ಲಿ ಬಸ್ಸು ಹತ್ತಿದ್ದು, ನಲ್ಲೂರು ಗ್ರಾಮದ ಕರಿಮಾರ್ ಕಟ್ಟೆ ಎಂಬಲ್ಲಿ ಬಸ್ಸಿನಿಂದ ಇಳಿಯುತ್ತಿರುವಾಗ ಬಸ್ಸಿನ ಬಾಗಿಲ ಬಳಿಯಲ್ಲಿ ಆಧಾರವಾಗಿ ಹಿಡಿದುಕೊಂಡಿದ್ದು ರಾಡಿನ ಅಂಚಿಗೆ ಕೈ ಸಿಲುಕಿಕೊಂಡಿದ್ದರಿಂದ, ಮಹಿಳೆಯ ಬಲ ಕೈಯ ಮಧ್ಯದ ಬೆರಳು ಪೂರ್ತಿಯಾಗಿ ತುಂಡಾಗಿದೆ.
ಇಳಿಯುವುದಕ್ಕಿಂತ ಮುಂಚೆಯೇ ಬಸ್ಸಿನ ಕಂಡಕ್ಟರ್ ಚಾಲಕನಿಗೆ ಬಸ್ ಅನ್ನು ಮುಂದಕ್ಕೆ ಚಲಾಯಿಸುವಂತೆ ಸೂಚನೆ ನೀಡಿದ್ದು, ಬಸ್ಸಿನ ಚಾಲಕನು ಬಸ್ಸಿನಿಂದ ಇಳಿಯುತ್ತಿದ್ದ ಪ್ರಯಾಣಿಕರನ್ನು ಗಮನಿಸದೇ ಬಸ್ಸನ್ನು ಏಕಾಏಕಿ ಮುಂದಕ್ಕೆ ಚಲಾಯಿಸಿಕೊಂಡು ಹೋದ ಪರಿಣಾಮ ಘಟನೆ ನಡೆದಿದೆ ಎಂದು ಕಾರ್ಯಕರ್ತೆ ನೀಡಿದ ದೂರಿನಂತೆ ನಿರ್ಲಕ್ಷ್ಯದ ಚಾಲನೆ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.