Padubidri: ಅಪಾಯದಲ್ಲಿವೆ ಓವರ್‌ ಹೆಡ್‌ ಟ್ಯಾಂಕ್‌ಗಳು!

ಹಳೆ ನೀರಿನ ಟ್ಯಾಂಕ್‌ಗಳು ಕುಸಿಯುವ ಭೀತಿ ;ತುಕ್ಕು ಹಿಡಿದ, ಮುರಿದ ಏಣಿಗಳು

Team Udayavani, Sep 1, 2024, 6:04 PM IST

Padubidri: ಅಪಾಯದಲ್ಲಿವೆ ಓವರ್‌ ಹೆಡ್‌ ಟ್ಯಾಂಕ್‌ಗಳು!

ಪಡುಬಿದ್ರಿ: ಸರಕಾರ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಹಳ್ಳಿ ಹಳ್ಳಿಗಳಿಗೆ ನೀರು ಸರಬರಾಜು ಮಾಡುತ್ತಿದೆ. ಹೊಸ ಹೊಸ ಪೈಪ್‌ ಲೈನ್‌ ಹಾಕಲಾಗುತ್ತಿದೆ. ಆದರೆ, ಹಳೆಯದಾದ ಓವರ್‌ ಟ್ಯಾಂಕ್‌ಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಓವರ್‌ ಹೆಡ್‌ ಟ್ಯಾಂಕ್‌ಗಳು ಕುಸಿದ, ಮುರಿದು ಬಿದ್ದ ಘಟನೆಗಳು ನಡೆದಿವೆ. ಉಡುಪಿ ಜಿಲ್ಲೆಯಲ್ಲೂ ಕೆಲವೊಂದು ಕಡೆ ಟ್ಯಾಂಕ್‌ಗಳು ಶಿಥಿಲಾವಸ್ಥೆಯಲ್ಲಿರುವುದು ಬೆಳಕಿಗೆ ಬಂದಿದೆ.

ಟ್ಯಾಂಕ್‌ನೊಳಗೆ ಮುರಿದ ಏಣಿ
ಪಡುಬಿದ್ರಿ ಗ್ರಾ. ಪಂ. ವ್ಯಾಪ್ತಿಯ ಪಾದೆಬೆಟ್ಟು ಗ್ರಾಮದಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ ಎಷ್ಟೊಂದು ಶಿಥಿಲವಾಗಿದೆ ಎಂದರೆ, ಅದಕ್ಕೆ ಸರಿಯಾಗಿ ಹತ್ತಲು ಏಣಿ ಇಲ್ಲ. ಟ್ಯಾಂಕ್‌ನೊಳಗಿನ ಏಣಿಯೂ ಮುರಿದಿದೆ. ಇಂಥ ಸ್ಥಿತಿಯಲ್ಲೂ ಇದರಿಂದ ನೀರು ಸರಬರಾಜು ನಡೆಯುತ್ತಿದೆ

ಇದನ್ನು ನಿಗದಿತ ಸಮಯದಲ್ಲಿ ಸ್ವತ್ಛಗೊಳಿಸಬೇಕಾದಾಗ ಪಂಚಾಯತ್‌ ನೌಕರರು ಜೀವವನ್ನು ಪಣಕ್ಕಿಟ್ಟೇ ಕೆಲಸ ಮಾಡುತ್ತಾರೆ. ಆಗಲೇ ತುಕ್ಕು ಹಿಡಿದಿರುವ ನೀರಿನ ಟ್ಯಾಂಕ್‌ನ ಕಬ್ಬಿಣದ ಏಣಿಯೇರಿ, ಟ್ಯಾಂಕೊಳಗಿನ ಏಣಿ ತುಂಡಾಗಿರುವ ಕಾರಣದಿಂದ ಹಗ್ಗ ಕಟ್ಟಿ ಇಳಿದು ನೀರಿನ ಟ್ಯಾಂಕ್‌ನ ಕಾರ್ಯಭಾರ ನಿರ್ವಹಿಸುತ್ತಾರೆ. (ಮೇಲಿಂದ ಒಳಗಿಳಿಯಲು ಕಟ್ಟಿರುವ ಹಗ್ಗವನ್ನೂ ಇಲ್ಲಿ ನಾವು ಚಿತ್ರದಲ್ಲಿ ಕಾಣಬಹುದು).

ಮಳೆಗಾಲ ಬೇರೆ. ಅದರಲ್ಲೂ ಟ್ಯಾಂಕ್‌ನ ಮೇಲೆ ರಕ್ಷಣೆಗೆ ಅಳವಡಿಸಿದ ಕಬ್ಬಿಣದ ಆವರ್ಕವೂ “ಬೆಂಡ್‌” ಆಗಿದೆ. ಹಾಗಿದ್ದರೂ ದಿಟ್ಟತನದಿಂದ ಕರ್ತವ್ಯ ನಿರ್ವಹಿಸುವ ಅವರಿಗೆ ಶಹಭಾಷ್‌ ಎನ್ನಬೇಕು. ಆದರೆ, ಇಂಥ ದುಸ್ಥಿತಿಗೆ ಕಾರಣವಾದ ಪರಿಸ್ಥಿತಿಗೆ ಏನು ಹೇಳಬೇಕು?

ಪಡುಬಿದ್ರಿ ಗ್ರಾಪಂ. ಆವರಣದಲ್ಲೂ ಹಳೆ ಟ್ಯಾಂಕ್‌
ಈ ರೀತಿಯ ಅತೀ ಹಳೆಯ ಟ್ಯಾಂಕ್‌ ಒಂದು ಪಡುಬಿದ್ರಿ ಗ್ರಾ. ಪಂ. ಆವರಣದಲ್ಲೇ ಇದೆ. ಇಲ್ಲಿ ಸುಮಾರು ಏಳೆಂಟು ವರ್ಷಗಳ ಹಿಂದೆ ಗ್ರಾಮೀಣ ರಸ್ತೆ ರಚನೆಗಾಗಿ ಜಿ. ಪಂ. ಎಂಜೀನಿಯರಿಂಗ್‌ ವಿಭಾಗವೇ ಸರ್ವೇ ನಡೆಸಿದ್ದಾಗಲೇ ಟ್ಯಾಂಕ್‌ನ ಬದಿ ರಸ್ತೆ ರಚನೆಗೆ ಯೋಗ್ಯವಲ್ಲ. ಹಳೆಯ ನೀರಿನ ಟ್ಯಾಂಕ್‌ ಇದು. ಕಂಪನದಿಂದ ಅಪಾಯ ಎಂಬುದಾಗಿಯೂ ವರದಿಗಳು ಸಾರಿವೆ. ಇದು ಜಿಲ್ಲೆಯಲ್ಲಿ ಗ್ರಾಮೀಣ ನೀರು ಸರಬರಾಜಿನ ಓವರ್‌ ಹೆಡ್‌ ಟ್ಯಾಂಕುಗಳು ಯಾವ ಸ್ಥಿತಿಯಲ್ಲಿವೆ ಎಂಬುದನ್ನು ಜಗಜ್ಜಾಹೀರು ಮಾಡಿವೆ. ಪಡುಬಿದ್ರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಓವರ್‌ಹೆಡ್‌ ಟ್ಯಾಂಕುಗಳ ಕುರಿತಾದ ಸರ್ವೇ ಕಾರ್ಯವು ತಿಂಗಳ ಹಿಂದಷ್ಟೇ ನಡೆದಿದೆ. ಇದರ ವರದಿ ಇನ್ನಷ್ಟೇ ತಮ್ಮ ಕೈಸೇರಬೇಕಿದೆ ಎಂದು ಪಿಡಿಒ ಮಂಜುನಾಥ ಶೆಟ್ಟಿ ಹೇಳಿದ್ದಾರೆ.

ಯಾರು ಇದಕ್ಕೆ ಹೊಣೆ?
ಗ್ರಾಮೀಣ ಕುಡಿಯುವ ನೀರಿನ ಯೋಜನೆಯಲ್ಲಿ ಎಲ್ಲ ತಾಂತ್ರಿಕ ಅಂಶಗಳನ್ನು ಆಯಾಯ ಜಿ.ಪಂ. ಗ್ರಾಮೀಣ ನೀರು ಪೂರೈಕೆಯ ಎಂಜಿನಿಯರಿಂಗ್‌ ವಿಭಾಗವು ಅವಲೋಕಿಸುತ್ತಿರುತ್ತದೆ. ಕಾಲ, ಕಾಲಕ್ಕೆ ಇದೇ ನೀರಿನ ಟ್ಯಾಂಕುಗಳ ಮೇಲುಸ್ತುವಾರಿಯೂ ಜಿ.ಪಂ. ಗೆ ಸೇರಿರುತ್ತದೆ. ಸಿಮೆಂಟ್‌ ಉದುರಿದಾಗ ಅದಕ್ಕೆ ನಡೆಯಬೇಕಾದ ತೇಪೆ ಕಾಮಗಾರಿಗಳು, ಏಣಿಗಳ ಬದಲಾವಣೆ, ಟ್ಯಾಂಕ್‌ ಒಳಗಡೆಯ ಸ್ಥಿತಿಗತಿ ಪರಿಶೀಲಿಸಿ ಕ್ರಮಗಳ ಜರಗಿಸುವಿಕೆಯೂ ಕೂಡಾ ಜಿ.ಪಂ. ತಾಂತ್ರಿಕ ವಿಭಾಗದ ಅಧೀನದಲ್ಲಿರುತ್ತದೆ ಎಂಬ ಅಂಶವೂ ಇದುವರೆಗೂ ಜನತೆಯ ಎದುರು ತೆರೆದುಕೊಂಡಿಲ್ಲ.

ಜಿಲ್ಲಾದ್ಯಂತ ಟ್ಯಾಂಕ್‌ ಸರ್ವೇ
ಉಡುಪಿ ಜಿ. ಪಂ. ಮುಖ್ಯ ಸಿಇಒ ಪ್ರತೀಕ್‌ ಬಾಯಲ್‌ ಅವರು ಸುಮಾರು 2 ತಿಂಗಳ ಹಿಂದಷ್ಟೇ ಜಿಲ್ಲೆಯ ಕುಡಿಯುವ ನೀರಿನ ಟ್ಯಾಂಕುಗಳ ಪರಿಸ್ಥಿತಿಯ ಪರಾಮರ್ಶೆಗೆ ಮುಂದಾಗಿದ್ದಾರೆ. ತಿಂಗಳ ಹಿಂದಷ್ಟೇ ಈ ಕುರಿತಾಗಿ ಜಿ. ಪಂ. ಎಂಜೀನಿಯರಿಂಗ್‌ ವಿಭಾಗದ ಮೂಲಕ ಜಿಲ್ಲಾದ್ಯಂತದ ಓವರ್‌ಹೆಡ್‌ ಟ್ಯಾಂಕ್‌ಗಳ ಸರ್ವೇಯನ್ನೂ ನಡೆಸಲಾಗಿದೆ. ಆದರೆ, ಅದರ ಪೂರ್ಣ ವರದಿ ಇನ್ನೂ ಬಂದಿಲ್ಲ.

ಒಟ್ಟು ಎಷ್ಟು ಟ್ಯಾಂಕ್‌?
ಉಡುಪಿ ಜಿಲ್ಲೆಯ ಏಳೂ ತಾಲೂಕುಗಳ 155 ಗ್ರಾ. ಪಂ.ಗಳ 245 ಹಳ್ಳಿಗಳಲ್ಲಿ ಒಟ್ಟು 895 ಗ್ರಾಮೀಣ ಕುಡಿಯುವ ನೀರಿನ ಟ್ಯಾಂಕ್‌ ಗಳಿವೆ. ಅವುಗಳಲ್ಲಿ ಎರಡು ಶಿಥಿಲಗೊಂಡಿದ್ದು ಅವುಗಳನ್ನು ಕೆಡವಲಾಗಿದೆ.

ಜಿ.ಪಂ. 840 ಓವರ್‌ ಹೆಡ್‌ ಟ್ಯಾಂಕ್‌ಗಳ ತಪಾಸಣೆ ನಡೆಸಿ ಶುಚಿ ಗೊಳಿಸುವ ಕಾರ್ಯವನ್ನೂ ಪೂರೈಸಿದೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸರಬರಾಜಿನ ಒಟ್ಟು 1,483 ಜಲಮೂಲ ಗಳಿದ್ದು, ಅವುಗಳ ತಪಾಸಣೆ ನಡೆದಿದೆ.

ಮಾಹಿತಿ ನೀಡಿ…
ಅಪಾಯಕಾರಿ ಸ್ಥಿತಿಯಲ್ಲಿರುವ ಓವರ್‌ಹೆಡ್‌ ಟ್ಯಾಂಕ್‌ಗಳು ನಿಮ್ಮ ವ್ಯಾಪ್ತಿಯಲ್ಲೂ ಇದ್ದರೆ, ಫೋಟೋ ತೆಗೆದು, ವಿವರಗಳೊಂದಿಗೆ ನಮ್ಮ ವಾಟ್ಸ್ಯಾಪ್ ಸಂಖ್ಯೆ 63629 06071ಗೆ ಬರೆದು ಕಳುಹಿಸಿ.

-ಆರಾಮ

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

ಮಲ್ಪೆ ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Malpe ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವಚ್ಛತೆ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.