ಕೋವಿಡ್-19 ಭೀತಿ ನಡುವೆ ಮುಂಗಾರುಪೂರ್ವ ಸಿದ್ಧತೆ ಚುರುಕು

 1,745 ಕ್ವಿಂ. ಬಿತ್ತನೆ ಬೀಜ ದಾಸ್ತಾನು, ಮೇ ಅಂತ್ಯದವರೆಗೆ ವಿತರಣೆ

Team Udayavani, May 12, 2020, 5:39 AM IST

ಕೋವಿಡ್-19 ಭೀತಿ ನಡುವೆ ಮುಂಗಾರುಪೂರ್ವ ಸಿದ್ಧತೆ ಚುರುಕು

ಉಡುಪಿ: ಕೋವಿಡ್-19 ಸೋಂಕಿನಿಂದ ಜಿಲ್ಲೆ ಹೊರ ಬಂದಂತಿದೆ. ಎಲ್ಲ ಕ್ಷೇತ್ರಗಳಂತೆ ಕೃಷಿ ಚಟುವಟಿಕೆಗೂ ಚಾಲನೆ ಸಿಕ್ಕಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮೊದಲ ಕಾರ್ಯ ಭತ್ತದ ಬೀಜದ ವಿತರಣೆ ಮೇ ಆರಂಭದಲ್ಲಿ ಆರಂಭಗೊಂಡಿದೆ.

ಜಿಲ್ಲೆಯಲ್ಲಿ 1,745 ಕಿಂಟ್ವಾಲ್‌ ಭತ್ತದ ಬೀಜ ದಾಸ್ತಾನಿದೆ. ಮೇ 1ರಿಂದ ಜಿಲ್ಲೆಯ 9 ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆ ನಡೆಯುತ್ತಿದೆ. ಈ ರೈತ ಕೇಂದ್ರಗಳಿಂದ ರೈತರು ಭತ್ತ ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿದ್ದಾರೆ. ಮೇ 1ರಿಂದ 10ರ ವರೆಗಿನ 10 ದಿನಗಳ ಅಂತರದಲ್ಲಿ ನೋಂದಣಿ ಮಾಡಿಕೊಂಡ 220 ಮಂದಿ ರೈತರು ಬೀಜ ಕೊಂಡು ಹೋಗಿದ್ದಾರೆ. ಮೇ ಅಂತ್ಯದ ವರೆಗೆ ರೈತರಿಗೆ ಭತ್ತದ ಬೀಜ ವಿತರಣೆಯಾಗಲಿದೆ. ಬಹುತೇಕ ರೈತರು ನೋಂದಣಿ ಮಾಡಿಕೊಂಡಿದ್ದು , ಬಾಕಿ ಉಳಿದವರು ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.

ಜಿಲ್ಲೆಯ ವಿವಿಧ ತಾಲೂಕುಗಳ 9 ರೈತ ಸಂಪರ್ಕ ಕೇಂದ್ರಗಳ ಪೈಕಿ ಕೋಟದಲ್ಲಿ 320 ಕ್ವಿಂಟಾಲ್‌, ಬ್ರಹ್ಮಾವರ 255 ಕ್ವಿಂಟಾಲ್‌, ಉಡುಪಿ 130 ಕ್ವಿಂಟಾಲ್‌, ಕಾಪು 275 ಕ್ವಿಂಟಾಲ್‌, ಕುಂದಾಪುರ 195 ಕ್ವಿಂಟಾಲ್‌, ಬೈಂದೂರು 295 ಕ್ವಿಂಟಾಲ್‌, ವಂಡ್ಸೆ 170 ಕ್ವಿಂಟಾಲ್‌, ಕಾರ್ಕಳ 50 ಕ್ವಿಂಟಾಲ್‌, ಅಜೆಕಾರುವಿನಲ್ಲಿ 50 ಕಿಂಟ್ವಾಲ್‌ಗ‌ಳಷ್ಟು ಭತ್ತದ ಬೀಜ ವಿತರಣೆ ನಡೆದಿದೆ.

ಕೃಷಿ ಇಲಾಖೆ ರಾಜ್ಯ ಬಿತ್ತನೆ ಬೀಜ ನಿಗಮಕ್ಕೆ 2,350 ಕಿಂಟ್ವಾಲ್‌ ಬೀಜಕ್ಕೆ ಬೇಡಿಕೆ ಸಲ್ಲಿಸಿತ್ತು, ಜಿಲ್ಲೆಯಲ್ಲಿ 2.9 ಲಕ್ಷ ಮಂದಿ ಕೃಷಿಕರಿದ್ದಾರೆ.

ಈ ಪೈಕಿ 54 ಸಾವಿರ ಮಂದಿ 36 ಸಾವಿರ ಹೆಕ್ಟೇರ್‌ ಭೂಮಿಯಲ್ಲಿ ಭತ್ತ ಬೆಳೆಯುತ್ತಾರೆ. ಭತ್ತದ ಕೃಷಿಕರಿಗೆ ಎಂಒ-4 ಮಾದರಿ ಭತ್ತವನ್ನು ವಿತರಿಸಲಾಗುತ್ತಿದೆ.

ಬೀಜಕ್ಕೆ 1 ಕೆ.ಜಿ.ಗೆ 30 ರೂ. ದರವಿದೆ. 8 ರೂ. ಸಬ್ಸಿಡಿ ದೊರಕುತ್ತದೆ. ಸ್ವಂತ ಜಮೀನು ಹೊಂದಿರದವರಿಗೆ, ಅನ್ಯ ಜಿಲ್ಲೆಗಳಲ್ಲಿ ವಾಸವಿದ್ದು ಭತ್ತದ ಕೃಷಿ ನಡೆಸುವವರಿಗೆ ಖರೀದಿ ವೇಳೆ ವಿನಾಯಿತಿ ಇರುವುದಿಲ್ಲ. ಭತ್ತದ ಕೃಷಿ ಮಾಡುವವರು ಮುಂದಿನ ಎರಡು ವರ್ಷಗಳಿಗೆ ಬೇಕಾಗುವಷ್ಟು ಬೀಜವನ್ನು ಸ್ವತಃ ರೈತರೇ ಈ ವರ್ಷದಿಂದ ಸಂಗ್ರಹಿಸಿಟ್ಟು ಕೊಳ್ಳಬೇಕು. ಮುಂದಿನ ಎರಡು ವರ್ಷ ಹಳೆ ರೈತರಿಗೆ ಬೀಜ ವಿತರರಣೆ ಇರುವುದಿಲ್ಲ ಎಂದು ಕೃಷಿ ಇಲಾಖೆ ತಿಳಿಸಿದೆ.

ಯಂತ್ರಗಳು ಬಾಡಿಗೆಗೆ
ಭತ್ತದ ಕೃಷಿಕರಿಗೆ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳಲ್ಲಿ ಕೃಷಿ ಚಟುವಟಿಕೆ ನಡೆಸಲು ವಿವಿಧ ಯಂತ್ರಗಳು ಬಾಡಿಗೆಗೆ ದೊರಕುತ್ತವೆ.
ಬ್ರಹ್ಮಾವರ, ಅಜೆಕಾರು, ಬೈಂದೂರು 3 ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಯಂತ್ರಗಳು ದೊರೆಯುತ್ತವೆ. ಕೃಷಿ ಯಂತ್ರಗಳ ಆವಶ್ಯಕತೆಯಿರುವವರು ಮುಂಗಡವಾಗಿ ಬಾಡಿಗೆ ಯಂತ್ರಗಳನ್ನು ಕಾಯ್ದಿರಿಸಿಕೊಳ್ಳಬೇಕು.

ಮಾಹಿತಿಯ ಅವಶ್ಯವಿರುವವರು ಕೋಟ 8277929753, ಬ್ರಹ್ಮಾವರ 8277932503, ಉಡುಪಿ 8277929751 (8277932515 ಸಹಾಯಕ ನಿರ್ದೇಶಕರು), ಕಾಪು 8277929752, ಕುಂದಾಪುರ 8277929754 (8277932503 ಸಹಾಯಕ ನಿರ್ದೇಶಕರು), ವಂಡ್ಸೆ 8277929755,ಬೈಂದೂರು 8277932520, ಕಾರ್ಕಳ 8277932523 (8277932505 ಸಹಾಯಕ ನಿರ್ದೇಶಕರು) ಅಜೆಕಾರು 8277932527 ಈ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಲು ಕೃಷಿ ಇಲಾಖೆ ತಿಳಿಸಿದೆ.

ಬೀಜ ವಿತರಣೆ
ಭತ್ತದ ಕೃಷಿ ಚಟುವಟಿಕೆ ನಡೆಸುವ ರೈತರಿಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತದ ಬೀಜದ ವಿತರಣೆಯಾಗುತ್ತಿದೆ. ವಿತರಣೆ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಮುಂದಿನ ಎರಡು ವರ್ಷಗಳಿಗೆ ಬೇಕಾದ ಬಿತ್ತದ ಬೀಜವನ್ನು ರೈತರು ಈ ಬಾರಿ ಸಂಗ್ರಹಿಸಿಟ್ಟುಕೊಳ್ಳುವುದು ಅವಶ್ಯಕ.
-ಕೆಂಪೇಗೌಡ,ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆ, ಉಡುಪಿ

ಕಾಪು ರೈತ ಸಂಪರ್ಕ ಕೇಂದ್ರದಲ್ಲಿ
ಬಿತ್ತನೆ ಬೀಜಕ್ಕಾಗಿ ನೂಕುನುಗ್ಗಲು
ಕಾಪು: ಕೋವಿಡ್‌-19 ಹರಡು ವಿಕೆಯ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್‌ ಡೌನ್‌ ಸಡಿಲಿಕೆಯಾಗುತ್ತಿದ್ದಂತೆಯೇ ಕಾಪುವಿನ ವಿವಿಧೆಡೆ ಜನಜಂಗುಳಿ ಹೆಚ್ಚಾಗುತ್ತಿದ್ದು ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಕ್ಕಾಗಿ ಜನ ಮುಗಿ ಬಿದ್ದ ಘಟನೆ ಸೋಮವಾರ ನಡೆದಿದೆ.

ಮುಂಗಾರು ಋತು ಪ್ರಾರಂಭದ ಹಿನ್ನೆಲೆಯಲ್ಲಿ ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆಯಾಗುತ್ತಿದ್ದು ಸೋಮವಾರ ನೂರಾರು ಮಂದಿ ರೈತರು ಏಕಾಏಕಿಯಾಗಿ ಕೃಷಿ ಕೇಂದ್ರಕ್ಕೆ ಆಗಮಿಸಿ, ಬಿತ್ತನೆ ಬೀಜ ಖರೀದಿಗೆ ತೊಡಗಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಯಿತು.

ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ಸಾಮಾಜಿಕ ಅಂತರದ ಪಾಲನೆಯಿಲ್ಲದೆ ಜನರು ಗುಂಪು ಗೂಡಿರುವ ಬಗ್ಗೆ ಸ್ಥಳೀಯರು ಪೊಲೀಸ್‌ ಇಲಾಖೆ ಮತ್ತು ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಕಾಪು ಎಎಸ್ಸೆ ರಾಜೇಂದ್ರ ಮಣಿಯಾಣಿ ಜನರೊಂದಿಗೆ ಮಾತುಕತೆ ನಡೆಸಿ ಸೂಕ್ತ ವ್ಯವಸ್ಥೆಯೊಂದಿಗೆ ಬಿತ್ತನೆ ಬೀಜ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಮುಂದೆ ಎಚ್ಚರಿಕೆ
ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಕೃಷಿ ನಡೆಸುವ ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಸೋಮವಾರ 80 ಮಂದಿಗೆ ಟೋಕನ್‌ ನೀಡಲಾಗಿತ್ತು. ಆದರೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ರೈತರು ಬಂದ ಪರಿಣಾಮ ನೂಕುನುಗ್ಗಲು ಉಂಟಾಗಿದೆ. ಬಿಸಿಲಿನಿಂದಾಗಿ ಜನ ಒಮ್ಮೆಲೇ ಒಳಗೆ ಬಂದ ಪರಿಣಾಮ ಜನರಿಗೆ ತೊಂದರೆಯಾಗಿದೆ. ಇದುವರೆಗೆ ಯಾವುದೇ ಗೊಂದಲವಿಲ್ಲದೆ 270 ಕ್ವಿಂಟಾಲ್‌ ಬಿತ್ತನೆ ಬೀಜ ವಿತರಿಸಲಾಗಿದೆ. ಮುಂದೆ ಪ್ರತೀ ದಿನ 50 ಮಂದಿಗೆ ಮಾತ್ರ ಟೋಕನ್‌ ನೀಡಿ, ಯಾವುದೇ ತೊಂದರೆಯಿಲ್ಲದೆ ಬೀಜ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು.
-ಪುಷ್ಪಲತಾ, ಕೃಷಿ ಅಧಿಕಾರಿ, ಕಾಪು ರೈತ ಸಂಪರ್ಕ ಕೇಂದ್ರ

ಟಾಪ್ ನ್ಯೂಸ್

Kollywood: ನಟ ಸೂರ್ಯನಿಗೆ ಅಟ್ಲಿ ಕುಮಾರ್ ಆ್ಯಕ್ಷನ್‌ ಕಟ್?‌

Kollywood: ನಟ ಸೂರ್ಯನಿಗೆ ಅಟ್ಲಿ ಕುಮಾರ್ ಆ್ಯಕ್ಷನ್‌ ಕಟ್?‌

11-honanvaar

Honnavara: ಲಿಂಗನಮಕ್ಕಿಯಿಂದ ನೀರು, ಜೋಗಕ್ಕೆ ಕಳೆ, ಕೊಳ್ಳದಲ್ಲಿ ಕಳವಳ

1-pk

UPSC ಯಿಂದ ಪೂಜಾ ಖೇಡ್ಕರ್ IAS ಅರ್ಹತೆಯೇ ರದ್ದು: ಭವಿಷ್ಯದ ಪರೀಕ್ಷೆಗಳಿಂದ ನಿರ್ಬಂಧ

Wayanad Tragedy: ತಾಯಿ ಜೊತೆ ಸಂಬಂಧಿಕರ ಮನೆಗೆ ತೆರಳಿದ್ದ ಸಿದ್ದಾಪುರದ ವಿದ್ಯಾರ್ಥಿ ಮೃತ್ಯು

Wayanad Tragedy: ತಾಯಿ ಜೊತೆ ಸಂಬಂಧಿಕರ ಮನೆಗೆ ತೆರಳಿದ್ದ ಸಿದ್ದಾಪುರದ ವಿದ್ಯಾರ್ಥಿ ಮೃತ್ಯು

ʼURI’ ಖ್ಯಾತಿಯ ಆದಿತ್ಯ ಧಾರ್‌ ಸಿನಿಮಾದಲ್ಲಿ ಅಜಿತ್‌ ದೋವಲ್‌ ಪಾತ್ರದಲ್ಲಿ ಆರ್.‌ ಮಾಧವನ್

ʼURI’ ಖ್ಯಾತಿಯ ಆದಿತ್ಯ ಧಾರ್‌ ಸಿನಿಮಾದಲ್ಲಿ ಅಜಿತ್‌ ದೋವಲ್‌ ಪಾತ್ರದಲ್ಲಿ ಆರ್.‌ ಮಾಧವನ್

1-ls-aa

Olympics: ಜೊನಾತನ್ ಕ್ರಿಸ್ಟಿಗೆ ಶಾಕ್ ನೀಡಿದ ಲಕ್ಷ್ಯ ಸೇನ್: ಸಿಂಧು 16ರ ಸುತ್ತಿಗೆ

Shocking: ತರಗತಿಗೆ ಬಂದೂಕು ತಂದು ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿದ 5 ವರ್ಷದ ಬಾಲಕ

Shocking: ಶಾಲೆಗೆ ಗನ್ ತಂದು ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿದ ಐದು ವರ್ಷದ ಬಾಲಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

udu

Kodavoor ಮೂಡುಬೆಟ್ಟು ಕಡಿದಾದ ತಿರುವು

Screenshot (47)

Udupi: ಪ್ಲ್ಯಾಟ್ ಫಾರಂ ಬದಲಾವಣೆಯೇ ದೊಡ್ಡ ಸರ್ಕಸ್‌!

bridge

Belman: ನದಿ ದಾಟಬೇಕಾದರೆ ಏಣಿ ಹತ್ತಿ ಇಳಿಯಬೇಕು!

Screenshot (40)

Hebri: ನಮಗೆ ಕಾಲು ಸಂಕ ಬೇಕು: ಮತ್ತಾವು ಸಂಕದಲ್ಲಿ ಹೆಜ್ಜೆ ಹೆಜ್ಜೆಗೂ ಆತಂಕ

accident

Udupi;ಬಸ್ ಗೆ ಹಿಂಬದಿಯಿಂದ ಎಕ್ಸ್‌ಪ್ರೆಸ್‌ ಬಸ್ ಢಿಕ್ಕಿ: ಚಾಲಕನಿಗೆ ಗಾಯ

MUST WATCH

udayavani youtube

ಸ್ಟ್ರೋಕ್ ಆದ ಮೇಲೆ ಜನರು ಯಾಕೆ ಸಕ್ರಿಯರಾಗಿರಬೇಕು?

udayavani youtube

ಪುಟ್ಟಣ್ಣ ಹೋಟೆಲ್ ಬೆಣ್ಣೆ ಸೆಟ್ ದೋಸೆಗೆ ಮನಸೋಲದವರಿಲ್ಲ! | ಶ್ರೀ ನಂಜುಂಡೇಶ್ವರ ಹೋಟೆಲ್ |

udayavani youtube

ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

udayavani youtube

ದೇಶವನ್ನೇ ಬೆಚ್ಚಿ ಬೀಳಿಸಿದ ಕರ್ನಾಟಕದ ವಿಕೃತ ಕಾಮಿ

udayavani youtube

ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ| ಭಯಭೀತರಾದ ಜನ

ಹೊಸ ಸೇರ್ಪಡೆ

Kollywood: ನಟ ಸೂರ್ಯನಿಗೆ ಅಟ್ಲಿ ಕುಮಾರ್ ಆ್ಯಕ್ಷನ್‌ ಕಟ್?‌

Kollywood: ನಟ ಸೂರ್ಯನಿಗೆ ಅಟ್ಲಿ ಕುಮಾರ್ ಆ್ಯಕ್ಷನ್‌ ಕಟ್?‌

11-honanvaar

Honnavara: ಲಿಂಗನಮಕ್ಕಿಯಿಂದ ನೀರು, ಜೋಗಕ್ಕೆ ಕಳೆ, ಕೊಳ್ಳದಲ್ಲಿ ಕಳವಳ

1-pk

UPSC ಯಿಂದ ಪೂಜಾ ಖೇಡ್ಕರ್ IAS ಅರ್ಹತೆಯೇ ರದ್ದು: ಭವಿಷ್ಯದ ಪರೀಕ್ಷೆಗಳಿಂದ ನಿರ್ಬಂಧ

Wayanad Tragedy: ತಾಯಿ ಜೊತೆ ಸಂಬಂಧಿಕರ ಮನೆಗೆ ತೆರಳಿದ್ದ ಸಿದ್ದಾಪುರದ ವಿದ್ಯಾರ್ಥಿ ಮೃತ್ಯು

Wayanad Tragedy: ತಾಯಿ ಜೊತೆ ಸಂಬಂಧಿಕರ ಮನೆಗೆ ತೆರಳಿದ್ದ ಸಿದ್ದಾಪುರದ ವಿದ್ಯಾರ್ಥಿ ಮೃತ್ಯು

ʼURI’ ಖ್ಯಾತಿಯ ಆದಿತ್ಯ ಧಾರ್‌ ಸಿನಿಮಾದಲ್ಲಿ ಅಜಿತ್‌ ದೋವಲ್‌ ಪಾತ್ರದಲ್ಲಿ ಆರ್.‌ ಮಾಧವನ್

ʼURI’ ಖ್ಯಾತಿಯ ಆದಿತ್ಯ ಧಾರ್‌ ಸಿನಿಮಾದಲ್ಲಿ ಅಜಿತ್‌ ದೋವಲ್‌ ಪಾತ್ರದಲ್ಲಿ ಆರ್.‌ ಮಾಧವನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.