ಶ್ರೀ ಕಾಶೀ ಮಠ ಸಂಸ್ಥಾನ ವಾರಾಣಸಿ: ವಾಲ್ಕೇಶ್ವರ ಶಾಖಾ ಮಠ ಲೋಕಾರ್ಪಣೆ


Team Udayavani, Mar 1, 2024, 6:20 AM IST

1-aaasa

ಮಣಿಪಾಲ/ ವಾಲ್ಕೇಶ್ವರ: ಪ್ರತಿಷ್ಠಿತ ಶ್ರೀ ಸಂಸ್ಥಾನ ವಾರಾಣಸಿಯ ಶ್ರೀ ಕಾಶೀ ಮಠದ ಜೀರ್ಣೋದ್ಧಾರಗೊಂಡ ವಾಲ್ಕೇಶ್ವರ ಬಾಣಗಂಗಾ ಶಾಖೆಯ ನೂತನ ಶಿಲಾಮಯ ಕಟ್ಟಡವನ್ನು ಶ್ರೀ ಕಾಶಿ ಮಠಾಧೀಶರಾದ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿಯವರು ಗುರುವಾರ ಲೋಕಾರ್ಪಣೆಗೊಳಿಸಿದರು.

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಫೆ. 28ರಂದು ರಾಕ್ಷೋಘ್ನ ಹೋಮ, ನವಗ್ರಹ ವಾಸ್ತು ಹವನ ಹಾಗೂ ಫೆ. 29ರಂದು ಧನ್ವಂತರಿ, ಮೃತ್ಯುಂಜಯ ಹವನ ಮತ್ತಿತರ ವಿಧಿ-ವಿಧಾನಗಳು ನೆರವೇರಿದವು. ಫೆ. 29ರ ಸಂಜೆ ಜಿಎಸ್‌ಬಿ ಸಮಾಜದ ಪ್ರಸಿದ್ಧ ಕಲಾವಿದರಿಂದ ಭಜನ್‌ ಸಂಧ್ಯಾ, ಸ್ವಾಮೀಜಿಗಳ ಉಪಸ್ಥಿತಿ ಯಲ್ಲಿ ಧಾರ್ಮಿಕ ಸಭೆ ನಡೆಯಿತು. ಕಾಶೀ ಮಠಾಧೀಶರನ್ನು ಜಿಎಸ್‌ಬಿ ಸಮಾಜ ಬಾಂಧವರು ಮತ್ತು ಭಕ್ತರು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು. ಭಕ್ತರಿಂದ ಸಂಕೀರ್ತನೆ, ಶ್ರೀಗಳ ಪಾದಪೂಜೆ ನೆರವೇರಿತು. ಶ್ರೀಗಳು ಫಲಪುಷ್ಪ, ಮಂತ್ರಾಕ್ಷತೆಯನ್ನಿತ್ತು ಹರಸಿದರು.

ವಾಲ್ಕೇಶ್ವರ ಶ್ರೀ ಕಾಶೀ ಮಠದ ಅಧ್ಯಕ್ಷ ಜಿ.ಜಿ. ಪ್ರಭು, ಕಾರ್ಯಾಧ್ಯಕ್ಷ ದಯಾನಂದ ಪೈ, ಉಪ ಕಾರ್ಯಾಧ್ಯಕ್ಷರಾದ ಜಿ.ಡಿ. ರಾವ್‌ ಮತ್ತು ಉಮೇಶ್‌ ಭಟ್‌, ಪ್ರಮುಖರಾದ ರಘವೀರ್‌ ಭಂಡಾರಿ ಮತ್ತು ರವೀಂದ್ರ ಡಿ. ಪೈ, ಡಾ| ಭುಜಂಗ ಪೈ, ಮೋಹನದಾಸ್‌ ಪಿ. ಮಲ್ಯ, ಜಗನ್ನಾಥ್‌ ಶೆಣೈ ಮೈಸೂರು, ದೀಪಕ್‌ ಅರವಿಂದ ರಾವ್‌, ರಘುನಂದನ್‌ ಕಾಮತ್‌, ಕೆ.ಎಸ್‌. ಪ್ರಭು, ಗಣೇಶ್‌ ಪ್ರಭು ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದೀಪಕ್‌ ಭಾಸ್ಕರ್‌ ಶೆಣೈ, ಉಪಾಧ್ಯಕ್ಷ ಪ್ರಕಾಶ್‌ ಜಿ. ಕಾಮತ್‌, ಕಾರ್ಯದರ್ಶಿ ಆರ್‌.ಜಿ. ಭಟ್‌, ಜತೆ ಕಾರ್ಯದರ್ಶಿ ಉಮಾನಾಥ್‌ ನಾಯಕ್‌, ಕೋಶಾಧಿಕಾರಿ ಉಮೇಶ್‌ ಸುರೇಂದ್ರ ಕಾಮತ್‌, ಜತೆ ಕೋಶಾಧಿಕಾರಿ ಯು. ಪ್ರಭಾಕರ ಭಟ್‌, ಸದಸ್ಯರಾದ ಅಶೋಕ್‌ ಕಿಣಿ, ನಿತಿನ್‌ ಜಗದೀಶ್‌ ಪ್ರಭು, ಅಮಿತ್‌ ದಿನೇಶ್‌ ಪೈ, ಹೇಮ್‌ಪ್ರಕಾಶ್‌, ರಮೇಶ್‌ ವಾಮನ್‌ ಭಂಡರ್ಕಾರ್‌, ಕಾರ್ಯಕಾರಿ ಸಮಿತಿಯ ಸದಸ್ಯರು, ಮುಂಬಯಿ ಗ್ರಾಮ್‌ ಕಮಿಟಿಯ ಸದಸ್ಯರು ಪಾಲ್ಗೊಂಡಿದ್ದರು.

ಮುಂಬಯಿ ಮತ್ತು ವಿವಿಧ ಉಪನಗರಗಳಾದ ಜಿಎಸ್‌ಬಿ ಸಭಾ ದಹಿಸರ್‌-ಬೊರಿವಲಿ, ಜಿಎಸ್‌ಬಿ ಮಂಡಳ ಥಾಣೆ, ಜಿಎಸ್‌ಬಿ ಸೇವಾ ಮಂಡಲ ಮುಂಬಯಿ ಸಹಿತ ಜಿಎಸ್‌ಬಿ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು, ಭಕ್ತರು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ಪಾಲ್ಗೊಂಡು ಶುಭಹಾರೈಸಿದರು.

ಶ್ರೀ ಕ್ಷೇತ್ರದಲ್ಲಿ ಮಾ. 1ರಿಂದ ಮಾ. 9ರ ವರೆಗೆ ಸೀಯಾಳಾಭಿಷೇಕ, ದುರ್ಗಾ ನಮಸ್ಕಾರ ಪೂಜೆ, ನವ ಚಂಡಿಕಾ ಯಾಗ, ಮುದ್ರಾಧಾರಣೆ, ಪವಮಾನ ಅಭಿಷೇಕ, ಸುಂದರಕಾಂಡ ಕಲಶಾಭಿಷೇಕ, ಮಹಾವಿಷ್ಣು ಕಲಶಾಭಿಷೇಕ, ಸುಂದರ ಕಾಂಡ ಹವನ ಪಾರಾಯಣ, ವೇದವ್ಯಾಸ ಸಹಸ್ರನಾಮ ಹವನ ಸೇರಿದಂತೆ ವಿವಿಧ ಪೂಜೆ ಹವನಗಳು, ಅಭಿಷೇಕಗಳು, ರಾಮಾಯಣ ಪಾರಾಯಣ ಹಾಗೂ ವಿವಿಧ ಸೇವೆಗಳನ್ನು ಆಯೋಜಿಸಲಾಗಿದೆ.

ರಾಮ ಲಕ್ಷ್ಮಣರು ನೆಲೆಸಿದ್ದ ಸ್ಥಳ

ಶ್ರೀರಾಮ ಮತ್ತು ಲಕ್ಷ್ಮಣ ಸೀತೆಯನ್ನು ಹುಡುಕಲು ಹೊರಟಿದ್ದಾಗ ಈ ಸ್ಥಳದಲ್ಲಿ ನೆಲೆ ನಿಂತಿದ್ದರು ಎಂಬ ಪ್ರತೀತಿಯಿದೆ. ಶ್ರೀರಾಮನ ಬಾಯಾರಿಕೆಯನ್ನು ನೀಗಿಸಲು ಲಕ್ಷ್ಮಣನು ಬಾಣವನ್ನು ನೆಲಕ್ಕೆ ಪ್ರಯೋಗಿಸಿದಾಗ ನೆಲದಿಂದ ನೀರು ಚಿಮ್ಮಿತು. ಈ ಕಾರಣದಿಂದಲೇ ಈ ಸ್ಥಳವು ಬಾಣಗಂಗಾ ಎಂದು ಪ್ರಸಿದ್ಧಿ ಪಡೆದಿದೆ.

ವಾಲ್ಕೇಶ್ವರ ಸ್ಥಳನಾಮ ವಿಶೇಷ

ಶ್ರೀರಾಮನು ಬಾಣಗಂಗಾದಲ್ಲಿ ತಂಗಿದ್ದಾಗ ಮರಳು, ನೀರನ್ನು ಬಳಸಿ ಶಿವಲಿಂಗವನ್ನು ನಿರ್ಮಿಸಿ ಪೂಜೆಯನ್ನು ಸಲ್ಲಿಸಿರುವುದರಿಂದ ಮೂಲತಃ ಇದನ್ನು ವಾಲು ಚ ಈಶ್ವರ ಎಂದು ಕರೆಯಲಾಯಿತು (ವಾಲು ಎಂದರೆ ಮರಳು). ಮುಂದೇ ಇದೇ ವಾಲ್ಕೇಶ್ವರ ಆಯಿತು. ಬಾಣಗಂಗಾ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದೆ.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

4

Malpe: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

1

Udupi: ಅಡ್ಡಗಟ್ಟಿ ಹಲ್ಲೆ, ಜೀವಬೆದರಿಕೆ; ದೂರು

13(1)

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ ಚುರುಕು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.