ವಾಹನ ದಟ್ಟಣೆ ಕೇಂದ್ರ ಕರಾವಳಿ ಜಂಕ್ಷ ನ್‌


Team Udayavani, Mar 23, 2022, 2:31 PM IST

junction

ಉಡುಪಿ: ನಗರಕ್ಕೆ ಪ್ರವೇಶ ಕಲ್ಪಿಸುವ ಕರಾವಳಿ ಜಂಕ್ಷನ್‌ ಬಳಿ ದಿನನಿತ್ಯ ಟ್ರಾಫಿಕ್‌ ದಟ್ಟಣೆ ಕಂಡುಬರುತ್ತಿದೆ.

ಮಲ್ಪೆಯಂತಹ ಮೀನುಗಾರಿಕಾ ಪ್ರದೇಶ ಹಾಗೂ ಸದಾ ಚಟುವಟಿಕೆಯಿಂದ ಕೂಡಿರುವ ಈ ಭಾಗದಿಂದ ದಿನನಿತ್ಯ ಹಲವಾರು ಸರಕು ವಾಹನಗಳು, ಬಸ್‌, ಕಾರುಗಳು ಈ ಮಾರ್ಗದ ಮೂಲಕವೇ ಹಾದು ಹೋಗಬೇಕಾಗುತ್ತದೆ. ಹಾಗೇನೆ ಮಂಗಳೂರು ಮೂಲಕ ಬಂದವರೂ ಈ ರಸ್ತೆಯ ಮೂಲಕ ನಗರಕ್ಕೆ ಪ್ರವೇಶ ಪಡೆಯಬಹುದು. ಮತ್ತೂಂದು ಬದಿಯಲ್ಲಿ ಅಂಬಾಗಿಲು ಬಳಿಯಿಂದ ಬರುವ ವಾಹನಗಳು ಬನ್ನಂಜೆ, ಎಸ್‌ಪಿ ಕಚೇರಿ ಸಹಿತ ನಗರ ಪ್ರವೇಶಿಸಲು ಇದೇ ಮಾರ್ಗ. ಇತ್ತ ಉಡುಪಿ ನಗರದಿಂದ ಹೊರಹೋಗುವ ಅಂದರೆ ಮಲ್ಪೆ ಭಾಗಕ್ಕೆ ಹಾಗೂ ಕುಂದಾಪುರ ಭಾಗಕ್ಕೆ ತೆರಳಲೂ ಇದೇ ರಸ್ತೆ ಬೇಕು. ಈ ಕಾರಣದಿಂದ ಈ ಭಾಗದಲ್ಲಿ ಟ್ರಾಫಿಕ್‌ ದಿನನಿತ್ಯ ಕಂಡುಬರುತ್ತಿದೆ.

ಮೂಲಸೌಕರ್ಯ ಕೊರತೆ

ಮೇಲ್ನೋಟಕ್ಕೆ ಕಂಡುಬರುವಂತೆ ಕರಾವಳಿ ಜಂಕ್ಷನ್‌ ಭಾಗ ಇಕ್ಕಟ್ಟಿನಿಂದ ಕೂಡಿದೆ. ಸೂಕ್ತ ಬಸ್‌ ಬೇ ಕೂಡ ಈ ಭಾಗದಲ್ಲಿಲ್ಲ. ಕುಂದಾಪುರಕ್ಕೆ ತೆರಳುವ ಬಸ್‌ ಗಳು ಜಂಕ್ಷನ್‌ನಲ್ಲಿ ನಿಲ್ಲುವ ಕಾರಣ ಹಾಗೂ ಮಲ್ಪೆಗೆ ತೆರಳುವ ಬಸ್‌ಗಳು ಆ ಭಾಗದಲ್ಲಿ ನಿಲ್ಲುವ ಕಾರಣ ವಾಹನಗಳ ಚಾಲನೆ ಕಷ್ಟಕರವಾಗುತ್ತಿದೆ.

ವಿರುದ್ಧ ದಿಕ್ಕಿನಲ್ಲಿ ಸಂಚಾರ

ಉಡುಪಿಯಿಂದ ಶಾರದಾ ಹೊಟೇಲ್‌ ಸಹಿತ ಆ ಭಾಗಕ್ಕೆ ತೆರಳುವ ಅಂಗಡಿಗಳಿಗೆ ತೆರಳುವವರು ವಿರುದ್ಧ ದಿಕ್ಕಿನಲ್ಲಿ ಸಂಚಾರ ಮಾಡುತ್ತಿರುವುದು ಕಂಡುಬರುತ್ತಿದೆ. ಟ್ರಾಫಿಕ್‌ ಪೊಲೀಸರು ಸ್ಥಳದಲ್ಲಿದ್ದರೆ ಇಂತಹವರಿಗೆ ದಂಡ ತಪ್ಪುವುದಿಲ್ಲ. ಬೆಳಗ್ಗೆ ಹಾಗೂ ಸಂಜೆ ವೇಳೆ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಈ ವೇಳೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿದರೆ ಅಪಘಾತಗಳೂ ನಡೆಯುವ ಸಾಧ್ಯತೆಗಳಿರುತ್ತವೆ.

ಬೀದಿದೀಪವೂ ಮಾಯ

ಅಂಬಲಪಾಡಿ ಜಂಕ್ಷನ್‌ನಿಂದ ಸರ್ವಿಸ್‌ ರಸ್ತೆಯ ಕರಾವಳಿ ಬೈಪಾಸ್‌ ವರೆಗೆ ಹಗಲು ಹೊತ್ತಿನಲ್ಲಿ ಈ ಭಾಗದಲ್ಲಿ ಟ್ರಾಫಿಕ್‌ ದಟ್ಟಣೆಯಾದರೆ ರಾತ್ರಿ ವೇಳೆ ಬೀದಿದೀಪ ಇಲ್ಲದೆ ಪಾದಚಾರಿಗಳಿಗೆ ರಸ್ತೆ, ಹೊಂಡ, ವಾಹನಗಳು ಗೋಚರಕ್ಕೆ ಬರುತ್ತಿಲ್ಲ. ಈ ಬಗ್ಗೆ ಪ್ರತಿಭಟನೆ ನಡೆದರೂ ಆಡಳಿತ ಸ್ಪಂದಿಸಿಲ್ಲ. ಬೀದಿದೀಪ ಅಳವಡಿಕೆಗೆ ನಗರಸಭೆ ಗಮನಹರಿಸಿದರೆ ರಾತ್ರಿ ಸಂಚಾರವಾದರೂ ಸುಗಮವಾಗಲು ಸಾಧ್ಯವಿದೆ.

ದಟ್ಟಣೆ ತಪ್ಪಿಸಲು ಏನು ಮಾಡಬಹುದು?

ಮಂಗಳೂರಿನಿಂದ ಆಗಮಿಸುವ ವಾಹನಗಳು ಕರಾವಳಿ ಮೂಲಕ ಬಾರದೆ ಕಿನ್ನಿಮೂಲ್ಕಿ ಅಥವಾ ಅಂಬಾಗಿಲು ಮೂಲಕ ನಗರವನ್ನು ಪ್ರವೇಶಿಸಬಹುದು.

ಕರಾವಳಿ ಜಂಕ್ಷನ್‌ನಲ್ಲಿ ಸಿಗ್ನಲ್‌ ಅಳವಡಿಸಿದರೂ ಸಮಸ್ಯೆ ಪರಿಹಾರ ಕಾಣದ ಸ್ಥಿತಿಯಿದೆ. ಟ್ರಾಫಿಕ್‌  ಪೊಲೀಸ್‌ ಸಿಬ್ಬಂದಿ ಸಂಖ್ಯೆಯೂ ಹೆಚ್ಚಳವಾಗಬೇಕಿದೆ.

ಮಲ್ಪೆ ಭಾಗದ ರಸ್ತೆ ವಿಸ್ತರಣೆಯಾದರೆ ಬ್ಲಾಕ್‌ ತಪ್ಪಲಿದೆ.

-ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.