Viral: ರೋಡಲೀ ಸಾಗುತಾ… ಹೊಂಡವ ದಾಟಲು: ರಸ್ತೆ ಹೊಂಡಗಳ ವೈರಲ್‌ ಸಾಂಗ್‌ ಹುಟ್ಟಿದ್ದು ಹೇಗೆ?

ರೋಡಲೀ ಸಾಗುತಾ... ಹೊಂಡವ ದಾಟಲು ಜೀವವೇ ಬಾಯಿಗೆ ಬಂದಂತಿದೆ!

Team Udayavani, Aug 16, 2024, 11:34 AM IST

5-viral-song

ಕಟಪಾಡಿ: ಕರಾವಳಿಯ ರಸ್ತೆಗಳ ಹೊಂಡಗುಂಡಿಯ ವಿಡಿಯೊ ಜತೆಗೆ ಆಕರ್ಷಕ ಹಾಡೊಂದು ವೈರಲ್‌ ಆಗುತ್ತಿರುವುದನ್ನು ನೀವು ಕೇಳಿರಬಹುದು. ರಸ್ತೆ ಹೊಂಡಗಳ ಅವ್ಯವಸ್ಥೆ ವಿರುದ್ಧ ಮೂಡಿಬಂದ ಹಾಡಿನ ಹಿಂದೆ ಕುತೂಹಲಕಾರಿ ಕಥೆ ಇದೆ!

ರೋಡಲೀ ಸಾಗುತಾ.. ಹೊಂಡವ ದಾಟಲು ಜೀವವೇ ಬಾಯಿಗೆ ಬಂದಂತಿದೆ ಎಂದು ಆರಂಭಗೊಳ್ಳುವ ಈ ಹಾಡಿನ ನಡುವೆ ಅಯ್ಯೋ ಅಯ್ಯೋ ನಮಗ್ಯಾರ್ಗತಿ, ಹೇಳ್ಳೋರ್‌ ಕೇಳ್ಳೋರ್‌ ಇಲ್ಲ ಈ ಸರ್ತೀ ಅಯ್ಯೋ…. ಉಂದು ಎಂಚಿ ಸಾವುಯೇ ಎಂಬ ಆಕ್ರೋಶವೂ ಇದೆ.

ಹಾಡು ಹುಟ್ಟಿದ್ದು ಹೇಗೆ? ಹಾಡುಗಾರ ಯಾರು?

ಅಂದ ಹಾಗೆ ಈ ಹಾಡನ್ನು ಬರೆದು ಹಾಡಿದವರು ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ ಕುರ್ಕಾಲು ಜಯನಗರ ನಿವಾಸಿಯಾಗಿರುವ ಮದನ್‌ ಮಣಿಪಾಲ. ಇವರು ಮೂಲತಃ ಒಬ್ಬ ಹಾಡುಗಾರ. ಆದರೆ ಈ ರಸ್ತೆಗಳನ್ನು ನೋಡಿ ಹಾಡೊಂದು ಹಾಗೇ ಹುಟ್ಟಿಕೊಂಡು ಈಗ ಜಾಲತಾಣಗಳಲ್ಲಿ ವೈರಲ್‌ ಆಗುವಂತಾಗಿದೆ.

ವಯೋ ವೃದ್ಧ ದಂಪತಿ ತಮ್ಮ ದ್ವಿಚಕ್ರ ವಾಹನದಿಂದ ಇಳಿದು ನಡೆದು ಹೊಂಡ ಗುಂಡಿ ದಾಟಿ ಬಳಿಕ ದ್ವಿಚಕ್ರ ವಾಹನ ಹತ್ತಿ ಪ್ರಯಾಣ ಬೆಳೆಸಿದ ಪರಿಯನ್ನು ಕಂಡು ಮನಕಲಕಿ ಸಾಹಿತ್ಯವನ್ನು ರಚಿಸಿದ್ದಾಗಿ ಸಂಗೀತ ಕಲಾವಿದ ಮದನ್‌ ಮಣಿಪಾಲ ಅವರು ಉದಯವಾಣಿ ಜತೆ ಮಾತನಾಡುತ್ತಾ ಹೇಳಿದರು.

ಹೊಂಡ ಗುಂಡಿಯ ಸಂಕಷ್ಟವನ್ನು ಸ್ವತಃ ಅನುಭವಿಸಿದ ಅವರಿಗೆ ವೃದ್ಧ ದಂಪತಿಯ ನೋವು ಇನ್ನಷ್ಟು ಕಾಡಿತು. ಹೀಗಾಗಿ ಸಾಹಿತ್ಯ ರಚನೆಯಾಯಿತು. ಹಾಡನ್ನು ಅವರೇ ಹಾಡಿದರು. ಇಷ್ಟೇ ಇದ್ದರೂ ಸಾಲದು ಎಂಬಂತೆ ಗುಂಡಿಗಳ ಚಿತ್ರಣ, ಜನರು ಪಡುತ್ತಿರುವ ಪಾಡನ್ನು ವಿಡಿಯೊ ಚಿತ್ರೀಕರಣ ನಡೆಸಿ ವಿಡಿಯೊ ಸಾಂಗ್‌ ಆಗಿ ಪರಿವರ್ತಿಸಿದರು. ಅದು ಜಾಲತಾಣದಲ್ಲಿ ಹರಿದಾಡಿ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.

ಮದನ್‌ ಗೋಪಾಲ್‌ ಅವರು ಮೂಲತಃ ಕಟಪಾಡಿ, ಸುಭಾಷ್‌ ನಗರ, ಬಂಟಕಲ್‌ ಭಾಗದ ರಸ್ತೆ ಹೊಂಡಗಳನ್ನು ಉಲ್ಲೇಖೀಸಿದ್ದಾರೆ. ಆದರೆ, ಈಗ ಅವರ ವೀಡಿಯೋದ ಹಾಡಿನ ಭಾಗವನ್ನಷ್ಟೇ ತೆಗೆದು ಜನರು ತಮ್ಮ ಊರಿನ ಹೊಂಡಗಳ ಚಿತ್ರಣವನ್ನು ಸೇರಿಸಿ ಹೊಸ ಹೊಸ ವೀಡಿಯೊ ಮಾಡುತ್ತಿದ್ದಾರೆ.

ಮೂಲ ಹಾಡು ಯಾವುದು ಗೊತ್ತೇ?

ಮದನ್‌ ಮಣಿಪಾಲ್‌ ಅವರು ಸಾಹಿತ್ಯ ರಚಿಸಿ ಹಾಡಿರುವ ಹಾಡಿನ ಮೂಲ ಸಾಹಿತ್ಯ ಆಗಸ್ಟ್‌ 15ರಂದು ತೆರೆ ಕಂಡ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರು ನಾಯ ಕ ನಾ ಗಿರುವ “ಕೃಷ್ಣಂ ಪ್ರಣಯ ಸಖೀ’ ಚಿತ್ರದ ಜನ ಪ್ರಿಯ ಹಾಡಿನದ್ದು. “ದ್ವಾಪರಾ ದಾಟುತಾ ನನ್ನನೇ ನೋಡಲು, ನನ್ನನೇ ಸೇರಲು ಬಂದ ರಾಧಿಕೆ….’ ಹಾಡಿನ ಧಾಟಿಯಲ್ಲಿ ಮೂಡಿಬಂದ ರೋಡಲೀ ಸಾಗುತಾ.. ಹೊಂಡವ ದಾಟಲು ಜೀವವೇ ಬಾಯಿಗೆ ಬಂದಂತಿದೆ’ ಎಂಬ ಹಾಡು ಇದೀಗ ಸಾಕಷ್ಟು ರೀಲ್ಸ್‌ ಆಗುತ್ತಿದೆ.

ಕುಂಟುತಾ ಸಾಗಿ ಹೊಂಡ ತಪ್ಪಿಸಲು ಜೀವ ಝಲ್‌ ಎಂದಿದೆ. ಬೇರೆ ದಾರೀನು ಇಲ್ಲ ನಮಗಿನ್ನು, ಹೊಂಡವೇ ಉಳಿದಿದೇ.. ನಾವು ಹಾಕಿದ್ದ ಓಟಿನ ಬೆಲೆಯು ಈಗ ಗೊತ್ತಾಗಿದೆ ಎಂಬ ಹಾಡಿನ ಸಾಲುಗಳು ಜನರ ಆಕ್ರೋಶಕ್ಕೆ ಜೀವ ನೀಡಿವೆ.

ಬಸ್‌ ಚಾಲಕ ಗುಂಡಿಗೆ ಬಿದ್ದ ಬೇಸರದಲ್ಲಿ ಮೂಡಿದ ವೀಡಿಯೋ

ದಿನಂಪ್ರತಿ ಮೂರು ಟ್ರಿಪ್‌ ಇದೇ ರಸ್ತೆಯಲ್ಲಿ ಬಸ್‌ ಚಲಾಯಿಸುವ ಡ್ರೈವರ್‌ ಕರ್ತವ್ಯ ಬಿಟ್ಟು ದ್ವಿಚಕ್ರ ವಾಹನದಲ್ಲಿ ಸಾಗುವಾಗ ಇಲ್ಲಿನ ಗುಂಡಿಗೆ ಬಿದ್ದು ಏಟಾಗಿದ್ದು, ಇದೀಗ ಮನೆಯಲ್ಲಿ ರೆಸ್ಟ್‌ ನಲ್ಲಿರುವುದು ರಸ್ತೆಯ ದುಃಸ್ಥಿತಿಗೆ ಸಾಕ್ಷಿ. ನನ್ನ ಮನೆಗೆ ಸಾಗುವ ಹಾದಿಯಲ್ಲಿ ನಿತ್ಯ ಐದು ನಿಮಿಷ ನಿಂತು ಇತರೇ ವಾಹನಗಳು ಸಾಗುವ ನಿತ್ಯ ಬವಣೆಯನ್ನು ಕಂಡು ಸಾಹಿತ್ಯ ರಚಿಸಿ, ವೀಡಿಯೋ ಚಿತ್ರೀಕರಿಸಿ, ಹಾಡು ರೆಕಾರ್ಡಿಂಗ್‌ ಪೂರೈಸಿದ್ದೇನೆ. ಸುಮಾರು ಮೂರೂವರೆ ಸಾವಿರ ರೂ. ಖರ್ಚಾ ಗಿದೆ. ಯಾವುದೇ ಪಕ್ಷಗಳ ವಿರುದ್ಧದ ಹಾಡಲ್ಲ. ರಸ್ತೆಯ ಹೊಂಡ-ಗುಂಡಿಗಳ ಪರಿಸ್ಥಿತಿಯ ಕರಾಳ ಮುಖವನ್ನು ವಿಡಿಯೋ ಸಾಂಗ್‌ ಮೂಲಕ ತೆರೆದಿಟ್ಟಿದ್ದೇನೆ. –ಮದನ್‌ ಮಣಿಪಾಲ, ಸಾಹಿತ್ಯ ಬರೆದ ಹಾಡುಗಾರ

-ವಿಜಯ ಆಚಾರ್ಯ ಉಚ್ಚಿಲ

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

4(1

Manipal: ನಮ್ಮ ಸಂತೆಯಲ್ಲಿ ಜನ ಸಾಗರ

Namma-SANTHE-1

Manipal: ನಮ್ಮ ಸಂತೆಗೆ ಎರಡನೇ ದಿನವೂ ಅಭೂತಪೂರ್ವ ಸ್ಪಂದನೆ: ಇಂದೇ ಕೊನೆಯ ದಿನ

8

Karkala: ಚಾರ್ಚ್‌ಗಿಟ್ಟ ಮೊಬೈಲ್‌ ಸ್ಫೋ*ಟ; ಮನೆಗೆ ಬೆಂಕಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.