ಎನ್‌ಆರ್‌ಐ ಫೋರಂಗೆ ಉಪಾಧ್ಯಕ್ಷರಿಲ್ಲದೆ 4 ವರ್ಷ; 2018ರ ಮೇ ಬಳಿಕ ಆಗದ ನೇಮಕಾತಿ

ಕೋವಿಡ್ , ಉಕ್ರೇನ್‌ ಯುದ್ಧ ಸಂದರ್ಭ ಸಮಿತಿ ನಿಷ್ಕ್ರಿಯ

Team Udayavani, May 30, 2022, 7:30 AM IST

ಎನ್‌ಆರ್‌ಐ ಫೋರಂಗೆ ಉಪಾಧ್ಯಕ್ಷರಿಲ್ಲದೆ 4 ವರ್ಷ; 2018ರ ಮೇ ಬಳಿಕ ಆಗದ ನೇಮಕಾತಿ

ಕುಂದಾಪುರ: ವಿದೇಶಗಳಲ್ಲಿ ಯುದ್ಧ, ನೆರೆ, ಪ್ರಾಕೃತಿಕ ವಿಪತ್ತು, ಕೊರೊನಾದಂತಹ ಸಂಕಷ್ಟ ಮಯ ಸಂದರ್ಭಗಳಲ್ಲಿ ಅಲ್ಲಿ ನೆಲೆಸಿರುವ ರಾಜ್ಯದ ಜನರು, ವಿದ್ಯಾರ್ಥಿಗಳಿಗೆ ತುರ್ತು ನೆರವಾಗಲು ಸ್ಥಾಪನೆಯಾಗಿರುವ ಅನಿವಾಸಿ ಭಾರತೀಯ ಸಮಿತಿ (ಎನ್‌ಆರ್‌ಐ ಫೋರಂ)ಗೆ ನಾಲ್ಕು ವರ್ಷಗಳಿಂದ ಉಪಾಧ್ಯಕ್ಷರೇ ಇಲ್ಲ.
ಈ ಸಮಿತಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರು. ಇದರ ಕಾರ್ಯಭಾರವೆಲ್ಲ ಉಪಾಧ್ಯಕ್ಷ ರದ್ದೇ ಆಗಿರುತ್ತದೆ. ಎಲ್ಲವನ್ನು ಮುಖ್ಯಮಂತ್ರಿ ಯವರೇ ನಿಭಾಯಿಸಲು ಅಸಾಧ್ಯ. ಆದ್ದರಿಂದ ಉಪಾಧ್ಯಕ್ಷರ ಹುದ್ದೆಯೇ ಪ್ರಮುಖ.

ಭರ್ತಿ ನಾಲ್ಕು ವರ್ಷ
ಉಡುಪಿ ಮೂಲದ ಆರತಿ ಕೃಷ್ಣ ಅವರು 2018ರ ಮೇ 31ರ ವರೆಗೆ ಉಪಾಧ್ಯಕ್ಷರಾಗಿದ್ದರು, ಅಲ್ಲಿಂದ ಈ ಹುದ್ದೆ ಖಾಲಿಯಿದೆ. ಅಂದರೆ ಈ ವರ್ಷದ ಮೇ 31ಕ್ಕೆ ಈ ಹುದ್ದೆಗೆ ಹೊಸಬರ ನೇಮಕವಾಗದೆ ಭರ್ತಿ ನಾಲ್ಕು ವರ್ಷಗಳಾಗುತ್ತವೆ.

2008ರಲ್ಲಿ ಆರಂಭ
ರಾಜ್ಯದಿಂದ ಉದ್ಯೋಗಕ್ಕಾಗಿ ತೆರಳಿರುವವರು, ಶಿಕ್ಷಣಕ್ಕಾಗಿ ಹೋಗಿರುವ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಏನಾದರೂ ಸಮಸ್ಯೆ ಎದುರಾದರೆ ತುರ್ತಾಗಿ ಸ್ಪಂದಿಸಿ, ನೆರವಾಗುವ ಉದ್ದೇಶದಿಂದ 2008ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ಎನ್‌ಆರ್‌ಐ ಫೋರಂ ಆರಂಭಿಸಲಾಗಿತ್ತು. ಆದರೆ ಕೊರೊನಾ ಸಂಕಷ್ಟ, ಮೊನ್ನೆಯ ಉಕ್ರೇನ್‌ – ರಷ್ಯಾ ಯುದ್ಧ ಪರಿಸ್ಥಿತಿಯ ವೇಳೆ ಕ್ರಿಯಾಶೀಲವಾಗಿರಬೇಕಿದ್ದ ಎನ್‌ಆರ್‌ಐ ಫೋರಂ ನಿಷ್ಕ್ರಿಯವಾಗಿತ್ತು. ಮುಖ್ಯವಾಗಿ ಉಪಾಧ್ಯಕ್ಷರಿಲ್ಲದುದೇ ಇದಕ್ಕೆ ಕಾರಣ.

ಸಂಪುಟ ದರ್ಜೆ ಸ್ಥಾನ
ಎನ್ನಾರೈ ಸಮಿತಿಯ ಉಪಾಧ್ಯಕ್ಷ ಹುದ್ದೆ ಸಂಪುಟ ದರ್ಜೆ ಸ್ಥಾನಮಾನದ್ದಾಗಿದ್ದು, 2008- 12ರ ವರೆಗೆ ಮಂಗಳೂರಿನ ಕ್ಯಾ| ಗಣೇಶ್‌ ಕಾರ್ಣಿಕ್‌, 2013-2016ರ ವರೆಗೆ ವಿ.ಸಿ. ಪ್ರಕಾಶ್‌ ಹಾಗೂ 2016 – 2018ರ ವರೆಗೆ ಆರತಿ ಕೃಷ್ಣ ಅವರು ಉಪಾಧ್ಯಕ್ಷರಾಗಿದ್ದರು.

ಮಾಹಿತಿಯೇ ಇಲ್ಲ
ಫೋರಂನಲ್ಲಿ ಉಪಾಧ್ಯಕ್ಷರಿಲ್ಲದಿದ್ದರೆ ವಿದೇಶದಲ್ಲಿ ಏನೇ ಘಟನೆಗಳು ಆದಾಗಲೂ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ಉಡುಪಿಯಿಂದ ಯಾವೆಲ್ಲ ದೇಶಕ್ಕೆ ಉದ್ಯೋಗ ಅಥವಾ ವಿದ್ಯಾರ್ಜನೆಗಾಗಿ ಯಾರೆಲ್ಲ ಹೋಗಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿಯೇ ಇಲ್ಲ. ಇಲ್ಲಿಂದ ವಿದೇಶಕ್ಕೆ ಹೋಗು ವವರು ಡಿಸಿ ಕಚೇರಿಯಲ್ಲಿ ತಮ್ಮ ವಿಳಾಸ, ಫೋನ್‌ ನಂಬರ್‌ ಸಹಿತ ನೋಂದಣಿ ಮಾಡಿಸಿಕೊಂಡು ಹೋದರೆ ಪ್ರಯೋಜನವಾಗಲಿದೆ ಎನ್ನುವುದಾಗಿ ಅನಿವಾಸಿ ಭಾರತೀಯರಿಗೆ ನೆರವಾಗುತ್ತಿರುವ ಶಿವಾನಂದ ತಲ್ಲೂರು ತಿಳಿಸಿದ್ದಾರೆ.

ಸ್ಪಂದನೆಯೇ ಇಲ್ಲ
ಎನ್‌ಆರ್‌ಐ ಸಮಿತಿಗೆ ಸಿಎಂ, ಉಪಾಧ್ಯಕ್ಷ ಹುದ್ದೆಯೊಂದಿಗೆ ಐಎಎಸ್‌ ಅಥವಾ ಕೆಎಎಸ್‌ ದರ್ಜೆಯ ಸದಸ್ಯ ಕಾರ್ಯದರ್ಶಿಗಳಿರುತ್ತಾರೆ. ಈಗ ಸದಸ್ಯ ಕಾರ್ಯದರ್ಶಿ ಮಾತ್ರ ಇರುವುದರಿಂದ ಯಾವುದೇ ರೀತಿಯ ಸ್ಪಂದನೆ ಸಾಧ್ಯವಾಗುತ್ತಿಲ್ಲ. ಉಪಾಧ್ಯಕ್ಷರಿದ್ದರೆ ಸರಕಾರ, ರಾಯಭಾರ ಕಚೇರಿಯನ್ನೆಲ್ಲ ತ್ವರಿತವಾಗಿ ಸಂಪರ್ಕಿಸಿ, ನೆರವಾಗಲು ಸಾಧ್ಯವಾಗುತ್ತದೆ.

ಎನ್‌ಆರ್‌ಐ ಫೋರಂಗೆ 4 ವರ್ಷಗಳಿಂದ ಉಪಾಧ್ಯಕ್ಷರೇ ಇಲ್ಲ. ಅದಕ್ಕಿಂತ ಹಿಂದೆ ನಾನು ಉಪಾಧ್ಯಕ್ಷನಾಗಿದ್ದೆ. ಈಗಲೂ ಅನೇಕ ಮಂದಿ ನಾನೇ ಆ ಹುದ್ದೆಯಲ್ಲಿದ್ದೇನೆಂದು ಕರೆ ಮಾಡಿ, ಸಹಕಾರ ಕೋರುತ್ತಾರೆ. ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ. ಸಂದಿಗ್ಧ ಪರಿಸ್ಥಿತಿ ಬಂದಾಗ ನೇಮಕಾತಿ ಮಾಡುವ ಬದಲು, ಅದಕ್ಕೆ ಮೊದಲೇ ಸಿದ್ಧರಾಗುವುದು ಉತ್ತಮ. ಇನ್ನಾದರೂ ಹೊಸಬರ ನೇಮಕ ಆಗಲಿ.
– ಆರತಿ ಕೃಷ್ಣ, ಎನ್‌ಆರ್‌ಐ ಫೋರಂ
ಹಿಂದಿನ ಉಪಾಧ್ಯಕ್ಷೆ

ಇದು ಬಹಳ ಪ್ರಮುಖವಾದ ಹುದ್ದೆ. ಕೂಡಲೇ ಅರ್ಹರಾದವರನ್ನು ನೇಮಕ ಮಾಡಬೇಕು ಎನ್ನುವುದಾಗಿ ಮುಖ್ಯಮಂತ್ರಿಯವರನ್ನು ಒತ್ತಾಯಿಸುತ್ತೇನೆ. ಅವರನ್ನು ಭೇಟಿಯಾದಾಗ ಉಪಾಧ್ಯಕ್ಷರ ನೇಮಕ ಕುರಿತಂತೆ ಗಮನಕ್ಕೆ ತರಲಾಗುವುದು.
– ಕ್ಯಾ| ಗಣೇಶ್‌ ಕಾರ್ಣಿಕ್‌,
ಎನ್‌ಆರ್‌ಐ ಫೋರಂ ಮೊದಲ ಉಪಾಧ್ಯಕ್ಷ

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.