Dengue: ಕುಂದಾಪುರದಲ್ಲಿ 6 ತಿಂಗಳಲ್ಲಿ 76 ಮಂದಿಗೆ ಡೆಂಗ್ಯೂ
ಗ್ರಾಮಾಂತರದಲ್ಲಿ ಹೆಚ್ಚಾಗಿದ್ದ ಸಮಸ್ಯೆ ನಗರಕ್ಕೂ ಕಾಲಿಟ್ಟಿದೆ
Team Udayavani, Jul 7, 2024, 6:42 AM IST
ಕುಂದಾಪುರ: ತಾಲೂಕಿನಲ್ಲಿ ಕಳೆದ 6 ತಿಂಗಳುಗಳಲ್ಲಿ ಸುಮಾರು 40 ಜನರಿಗೆ ಡೆಂಗ್ಯೂ ಜ್ವರ ಬಂದಿದ್ದರೆ, ವಿವಿಧೆಡೆ ಉದ್ಯೋಗ ಮಾಡುತ್ತಿದ್ದ 36 ಮಂದಿ ಜ್ವರಬಾಧಿತರಾಗಿ ಕುಂದಾಪುರಕ್ಕೆ ಬಂದಿದ್ದಾರೆ!
ಮಲೆನಾಡು ಪ್ರಾಂತ್ಯ
ತಾಲೂಕಿನ ಮಲೆನಾಡು ಹಾಗೂ ಅರೆಮಲೆನಾಡು ಪ್ರಾಂತ್ಯದಲ್ಲಿ ಡೆಂಗ್ಯೂ ಬಾಧೆ ಹೆಚ್ಚು. 2-3 ವರ್ಷಗಳಿಂದ ಕೊಲ್ಲೂರು ಹಾಗೂ ಹಳ್ಳಿಹೊಳೆಯಲ್ಲಿ ಹೆಚ್ಚಿನ ಪ್ರಕರಣ ಕಂಡುಬಂದಿದೆ. ಹಗಲು ವೇಳೆ ಕಡಿಯುವ ಸೊಳ್ಳೆಯಿಂದ ಡೆಂಗ್ಯೂ ಬರುತ್ತಿದ್ದು, ರಾತ್ರಿ ವೇಳೆ ಕಡಿಯುವ ಸೊಳ್ಳೆ ಯಿಂದ ಆನೆಕಾಲು ಹಾಗೂ ಮಲೇರಿಯಾ ಬರುತ್ತದೆ. ಆದ್ದರಿಂದ ಹಗಲು ವೇಳೆಯೂ ಸೊಳ್ಳೆ ಪರದೆ ಬಳಸುವ ಮೂಲಕ ಜಾಗರೂಕತೆ ವಹಿಸಬೇಕಿದೆ.
ವರ್ಷವಿಡೀ ಕ್ರಮ
ಕೊಲ್ಲೂರು, ಹಳ್ಳಿಹೊಳೆಯಲ್ಲಿ ವರ್ಷವಿಡೀ ಎಂಬಂತೆ ಡೆಂಗ್ಯೂ ತಡೆಗೆ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುತ್ತದೆ. ಇತರೆಡೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರ ಸುರûಾ ಅಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು ಕ್ಷೇತ್ರ ಭೇಟಿ ನಡೆಸುತ್ತಿದ್ದಾರೆ. ಸೊಳ್ಳೆಗಳ ನಿಯಂತ್ರಣ, ಸೊಳ್ಳೆ, ಲಾರ್ವಾ ನಾಶ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ನೀಡುತ್ತಿದ್ದಾರೆ. ಪೇಟೆಗಳಲ್ಲಿ ಅಂಗಡಿಗಳ ಸುತ್ತಮುತ್ತ ಇರುವ ಎಳನೀರಿನ ಚಿಪ್ಪಿನಲ್ಲಿ, ತೆರೆದ ಬಾಟಲಿಗಳಲ್ಲಿ ತುಂಬಿದ ನೀರನ್ನು ಚೆಲ್ಲುವ ಕೆಲಸ ಆರೋಗ್ಯ ಇಲಾಖೆ ಕಾರ್ಯಕರ್ತರಿಂದ ನಡೆಯುತ್ತಿದೆ. ಈ ಕೆಲಸಕ್ಕೆ ಜನರೂ ಕೈ ಜೋಡಿಸಿದರೆ ಸುಲಭವಾಗಲಿದೆ.
ಜಾಗರೂಕತೆ ಅವಶ್ಯ
ಕುಂದಾಪುರ ತಾಲೂಕಿನ ವಿವಿಧೆಡೆಯವರಿಗೆ ಜ್ವರ ಬಂದಷ್ಟೇ ಪ್ರಮಾಣದಲ್ಲಿ, ಮೂಲತಃ ಕುಂದಾಪುರದವರಾಗಿದ್ದು ಇತರೆಡೆ ಉದ್ಯೋಗದಲ್ಲಿದ್ದು ಡೆಂಗ್ಯೂ ಬಾಧೆಗೆ ಒಳಗಾಗಿ ಕುಂದಾಪುರದಲ್ಲಿ ಚಿಕಿತ್ಸೆ ಪಡೆದವರ ಪ್ರಮಾಣವೂ ದೊಡ್ಡದಿದೆ. ಆದ್ದರಿಂದ ಅಂತಹ ಪ್ರಕರಣ ಕಂಡುಬಂದರೆ ಅಂತಹವರನ್ನು ಜಾಗರೂಕತೆಯಿಂದ ಆರೈಕೆ ಮಾಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಸೊಳ್ಳೆ ಪರದೆ ಉಪಯೋಗಿಸಲಿ, ಪ್ರತ್ಯೇಕವಾಗಿರಲಿ, ಉತ್ತಮ ಪೌಷ್ಟಿಕ ಆಹಾರ ಸೇವಿಸಲಿ ಇತ್ಯಾದಿ ಸೂಚನೆಗಳನ್ನು ನೀಡುತ್ತಿದೆ.
ನಗರಕ್ಕೆ ಹಬ್ಬಿದ ಡೆಂಗ್ಯೂ
ಮಲೆನಾಡಿನ ಗ್ರಾಮಾಂತರದಲ್ಲಿ ಕಂಡುಬರುತ್ತಿದ್ದ ಡೆಂಗ್ಯೂ ಈಗ ನಗರದಲ್ಲೂ ಕಾಣಿಸಿಕೊಳ್ಳುತ್ತಿದೆ. ನಗರದ ತಾಲೂಕು ಆಸ್ಪತ್ರೆಯಲ್ಲಿ 10 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಾರ್ಡ್ ಗಳನ್ನು ತೆರೆಯಲಾಗಿದೆ. ಡೆಂಗ್ಯೂ ಬಾಧಿತರಿಗಾಗಿ ವಿಶೇಷ ವಾರ್ಡ್ ರಚಿಸಲಾಗಿದೆ.
ಆಸ್ಪತ್ರೆಗಳು ಸಜ್ಜು
ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಡೆಂಗ್ಯೂ ಬಾಧಿತರಿಗೆ ಚಿಕಿತ್ಸೆ ನೀಡಲು ಎಲ್ಲ ಸೌಕರ್ಯಗಳೂ ಇವೆ. ಪ್ಲೇಟ್ಲೆಟ್ ಕಡಿಮೆಯಾಗದಂತೆ ನೋಡುವುದು, ಕಡಿಮೆಯಾದರೆ ಪ್ಲೇಟ್ಲೆಟ್ ನೀಡುವುದು, ಜ್ವರಕ್ಕೆ ಔಷಧ ನೀಡುವುದೇ ಡೆಂಗ್ಯೂಗೆ ಮಾಡಬೇಕಾದ ಮುಖ್ಯ ಆರೈಕೆ. ಜ್ವರ ಕಂಡು ಬಂದರೆ ತತ್ಕ್ಷಣ ಆಸ್ಪತ್ರೆಗೆ ಧಾವಿಸುವುದೇ ನಾವು ಮಾಡುವ ಮೊದಲ ಕರ್ತವ್ಯ ಆಗಬೇಕಿದೆ. ಡೆಂಗ್ಯೂ ಜ್ವರ ಪೀಡಿತರು ದಾಖಲಾದರೆ ಮಾಹಿತಿ ನೀಡುವಂತೆ ಖಾಸಗಿ ಆಸ್ಪತ್ರೆಯವರಿಗೂ ಆರೋಗ್ಯ ಇಲಾಖೆ ಸೂಚಿಸಿದೆ.
ಕೈ ಜೋಡಿಸಿ
ಆರೋಗ್ಯ ಕಾರ್ಯಕರ್ತರ ಜತೆ ಕೈ ಜೋಡಿಸಿ. ಸೊಳ್ಳೆ ಹಾಗೂ ಲಾರ್ವಾ ನಿರ್ಮೂಲನೆಗೆ ನೆರವಾಗಿ. ವಾರಕ್ಕೊಮ್ಮೆ ಡ್ರೈ ಡೇ ಎಂದು ಮಾಡುತ್ತಿದ್ದು, ಆ ದಿನ ಬಕೆಟ್ ಹಾಗೂ ತೆರೆದ ವಸ್ತುಗಳಲ್ಲಿ ನಿಂತ ನೀರನ್ನು ಚೆಲ್ಲುವ ಕೆಲಸವನ್ನು ಪ್ರತಿಯೊಂದು ಮನೆಯ ಪರಿಸರದಲ್ಲೂ ಮಾಡಬೇಕು. ಫಾಗಿಂಗ್ ಇತ್ಯಾದಿ ಸ್ಥಳೀಯಾಡಳಿತಗಳ ಮೂಲಕ ನಡೆಯುತ್ತಿದೆ.
ಡಾ| ಪ್ರೇಮಾನಂದ್, ತಾಲೂಕು ಆರೋಗ್ಯಾಧಿಕಾರಿ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Disease: ಉಪ್ಪುಂದದಲ್ಲಿ ಕಾಲರಾ ಭೀತಿ; 200ಕ್ಕೂ ಅಧಿಕ ಮಂದಿ ಅಸ್ವಸ್ಥ; ತಹಶೀಲ್ದಾರ್ ಭೇಟಿ
Udupi: ಸರಣಿ ಕಳ್ಳತನ; 3 ಮಂದಿಯ ಕೃತ್ಯ! ಸಿಸಿಟಿವಿಯಲ್ಲಿ ದಾಖಲು
Udupi: ದಾಳಿ ಹೆಸರಲ್ಲಿ ಹಣ ಪಡೆದು ವಂಚನೆ: ಮುಂಜಾಗ್ರತೆಗೆ ಸೂಚನೆ
Navarathiri: ಉಚ್ಚಿಲ ದಸರಾ: ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ
Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Minchu Hulu Review: ಮಿಂಚುಹುಳು ತಂದ ಹೊಸಕಿರಣ
Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ
Vinesh Phogat; ನನ್ನ ತಂದೆಯ ಸಹಾಯವನ್ನು ವಿನೇಶ್ ಮರೆತಿದ್ದಾರೆ: ಬಬಿತಾ ಫೋಗಾಟ್
Bigg Boss: ಬಿಗ್ ಬಾಸ್ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.