ಗ್ರಾಮೀಣ ಆರ್ಥಿಕತೆಗೆ ಹೊಡೆತ


Team Udayavani, Sep 6, 2021, 3:20 AM IST

ಗ್ರಾಮೀಣ ಆರ್ಥಿಕತೆಗೆ ಹೊಡೆತ

ಕೋವಿಡ್ ಲಾಕ್‌ಡೌನ್‌ ಬಳಿಕ ಬಹುತೇಕ ವಾಣಿಜ್ಯ ಚಟುವಟಿಕೆಗಳು ಹಳಿ ತಪ್ಪಿವೆ. ಕಾಯಿಲೆ ವಕ್ಕರಿಸಿದಾಗ ಅದರ ನಿರ್ವಹಣೆ ಕುರಿತು ಸರಿಯಾಗಿ ಮಾಹಿತಿ ಇಲ್ಲದೆ ಲಾಕ್‌ಡೌನ್‌ ಅನಿವಾರ್ಯವಾಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದ ಬಳಿಕವೂ ವೀಕೆಂಡ್‌ ಕರ್ಫ್ಯೂ ಹೇರಿರುವುದರಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಗ್ರಾಮೀಣ ಆರ್ಥಿಕತೆಗೆ ಮೇಲಕ್ಕೆ ಏಳಲಾಗದ ರೀತಿಯ ಹೊಡೆತ ಬೀಳುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದ ಹರಡುವಿಕೆ ಇದ್ದರೂ ಸರಕಾರ ಹೆಚ್ಚುವರಿಯಾಗಿ ವಾರಾಂತ್ಯ ಕರ್ಫ್ಯೂ ಹೇರಿದೆ. ಈ ಮೂಲಕ ಹಳಿಗೆ ಬರುತ್ತಿದ್ದ ವಾಣಿಜ್ಯ ಚಟುವಟಿಕೆಗಳು ಮತ್ತೆ ಹಳಿ ತಪ್ಪಲಾರಂಭಿಸಿವೆ.

ಕುಂದಾಪುರದ ಶನಿವಾರದ ಸಂತೆಗೆ ಬೇರೆ ಬೇರೆ ಊರುಗಳಿಂದ ತರಕಾರಿ, ಹಣ್ಣು ಹಂಪಲು ತಂದವರು ಮಾರಾಟ ಮಾಡಲಾಗದೇ ತಲೆ ಮೇಲೆ ಕೈ  ಹೊತ್ತು ಹೋಗುವಂತಹ ಸ್ಥಿತಿ ಬಂದಿದೆ. ಸಂಬಂಧಪಟ್ಟ ಆಡಳಿತ ಪೂರ್ವ ಸೂಚನೆ ನೀಡದ ಫ‌ಲ ಇದು. ಅಷ್ಟಾಗಿಯೂ ಕಡಿಮೆ ಸಂಖ್ಯೆಯಲ್ಲಿ

ಬಂದ ವ್ಯಾಪಾರಿಗಳ ಜತೆ ಕೆಲವು ಪೊಲೀಸರು ನಿಷ್ಕರುಣೆಯಿಂದ ವರ್ತಿಸಿದ್ದು ವ್ಯಾಪಾರಿ ವರ್ಗದಿಂದ ಆಕ್ಷೇಪಣೆಗೆ ಕಾರಣವಾಗಿದೆ. ಶನಿವಾರ, ರವಿವಾರ

ಮಾತ್ರ ವ್ಯಾಪಾರ ಮಾಡುವಂತಿಲ್ಲ; ಸೋಮವಾರದಿಂದ ಶುಕ್ರವಾರವರೆಗೆ ಯಾವುದೇ ಅಡೆತಡೆ ಇಲ್ಲ ಎನ್ನುವುದೇ ಹಾಸ್ಯಾಸ್ಪದವಾಗಿದೆ.

ಕುಂದಾಪುರ ಸಂತೆಗೆ ನೂರಾರು ವರ್ಷಗಳ ಇತಿಹಾಸವಿದೆ. ಗ್ರಾಮೀಣ ಪ್ರದೇಶದಿಂದ ವಿವಿಧ ವಸ್ತುಗಳ ಖರೀದಿಗಾಗಿ ನಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜನ ಬರುವ ದಿನ ಎಂದರೆ ಸಂತೆಯ ದಿನ. ಗ್ರಾಮಾಂತರದಿಂದ ಬರುವ ಮಂದಿ ಸಂತೆ ವ್ಯವಹಾರ ಮುಗಿಸಿ ನಗರದಲ್ಲಿ ಸುತ್ತಾಡಿ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ಹೋಗುತ್ತಾರೆ. ಇದು ಹಿಂದಿನಿಂದಲೂ ಬಂದ ಪರಿಪಾಠ. ಆದರೆ ವಾರಾಂತ್ಯ ಕರ್ಫ್ಯೂ ಹೇರಿಕೆಯಿಂದ ಇದೆಲ್ಲ ಅಯೋಮಯವಾಗಿದೆ. ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಪೇಟೆಗೆ ಬರುವಂತಿಲ್ಲ. ವರ್ತಕರು ತಾವು ತಂದಿರುವ ಸಾಮಗ್ರಿಗಳನ್ನು ಮಾರುವಂತಿಲ್ಲ. ಒಟ್ಟಾರೆಯಾಗಿ ಜನರಿಗೂ, ವ್ಯಾಪಾರಿಗಳಿಗೂ ಇದರಿಂದ ಸಮಸ್ಯೆಯಾಗಿದೆ. ಮಾತ್ರವಲ್ಲದೆ ಮತ್ತೆ ಹಳಿ ಏರುತ್ತಿದ್ದ ಗ್ರಾಮೀಣ ಆರ್ಥಿಕತೆಗೂ ಹೊಡೆತ ನೀಡಿದೆ.

ಸೆಲೂನ್‌ಗಳಿಗೆ ಕೂಡ ಈ ವಾರಾಂತ್ಯ  ಹೊಸ ಸಂಕಟ ಉಂಟು ಮಾಡಿದೆ. ಮಂಗಳವಾರ ವಾರದ ರಜೆ, ಶನಿವಾರ, ರವಿವಾರ ಕರ್ಫ್ಯೂ. ವಾರದಲ್ಲಿ ನಾಲ್ಕೇ ದಿನ ಕಾರ್ಯನಿರ್ವಹಿಸುವಂತಾಗಿದೆ. ಬೇರೆಡೆಯಿಂದ ಬಂದು ಉದ್ಯೋಗದಲ್ಲಿರುವವರಿಗೆ ವೇತನ ಕೊಡುವುದು ಹೇಗೆಂಬ ಚಿಂತೆ ಉಂಟಾಗಿದೆ. ಬಸ್‌ಗಳಲ್ಲೂ ರಜಾದಿನ ಹೆಚ್ಚಿನ ಜನರ ಓಡಾಟ ಇಲ್ಲದ ಕಾರಣ ಆದಾಯಕ್ಕೆ ಖೋತಾ ಆಗಿ ಕೆಲವು ಬಸ್‌ಗಳು ವಾರಾಂತ್ಯ ಕರ್ಫ್ಯೂ ಸಂದರ್ಭ ಓಡಾಟವನ್ನೇ ಸ್ಥಗಿತಗೊಳಿಸಿವೆ. ಶಾಲೆ, ಕಾಲೇಜು ಆರಂಭಿಸಿ, ಮದುವೆಗೆ 400 ಜನ

ಸೇರಬಹುದೆನ್ನುವ ಸರಕಾರ ಏಕಾಏಕಿ ವಾರಾಂತ್ಯ ಕರ್ಫ್ಯೂ ಹೇರಿ ಜನಜೀವನದ  ಜತೆ ಆಟವಾಡುತ್ತಿರುವುದು ಸರಿಯಲ್ಲ. ಸರಕಾರವು ಆಯಾ ಪ್ರದೇಶದ ಪರಿಸ್ಥಿತಿಯನ್ನು ಅರಿತುಕೊಂಡು ಸೂಕ್ತ ರೀತಿಯ ಕಟ್ಟುನಿಟ್ಟಿನ ಕ್ರಮದ  ಮೂಲಕ ಕೊರೊನಾ ಹರಡುವಿಕೆ ನಿಯಂತ್ರಿಸಲಿ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ.

–   ಸಂ.

ಟಾಪ್ ನ್ಯೂಸ್

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

Tarpana

Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಂಗೊಳ್ಳಿ: ಉಸಿರಾಟದ ತೊಂದರೆಯಿಂದ ಮೀನುಗಾರ ಸಾವು

Gangolli: ಉಸಿರಾಟದ ತೊಂದರೆಯಿಂದ ಮೀನುಗಾರ ಸಾವು

Kundapura: ಜಾಲತಾಣದಿಂದಾಗಿ ಲೈಂಗಿಕ ದೌರ್ಜನ್ಯ ಹೆಚ್ಚಳ

Kundapura: ಜಾಲತಾಣದಿಂದಾಗಿ ಲೈಂಗಿಕ ದೌರ್ಜನ್ಯ ಹೆಚ್ಚಳ

Karkala:ಪಶ್ಚಿಮಘಟ್ಟದ ತಪ್ಪಲಿನ ಶಾಲೆಗಳ ಮಕ್ಕಳಲ್ಲಿ ಕಾಡಿನ ಬಗ್ಗೆ ಪ್ರೀತಿ ಮೂಡಿಸುವ ಕಲಾವಿದೆ

Karkala:ಪಶ್ಚಿಮಘಟ್ಟದ ತಪ್ಪಲಿನ ಶಾಲೆಗಳ ಮಕ್ಕಳಲ್ಲಿ ಕಾಡಿನ ಬಗ್ಗೆ ಪ್ರೀತಿ ಮೂಡಿಸುವ ಕಲಾವಿದೆ

Accident-Logo

Kundapura: ಖಾಸಗಿ ಬಸ್‌ಗಳ ಢಿಕ್ಕಿ: 7 ಮಂದಿಗೆ ಗಾಯ

Kundapura: ಪೆಟ್ರೋಲ್‌ ಹಾಕಿಸಿ ಹಲ್ಲೆ: ದೂರು

Kundapura: ಪೆಟ್ರೋಲ್‌ ಹಾಕಿಸಿ ಹಲ್ಲೆ: ಪ್ರಕರಣ ದಾಖಲು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.