ಅರೆಹೊಳೆ ರಾಜಕಾಲುವೆ: ಶಾಶ್ವತ ತಡೆಗೋಡೆ ಮರೀಚಿಕೆ

ಹತ್ತಾರು ಎಕರೆ ಗದ್ದೆಗೆ ಕಾಲುವೆಯಿಂದ ನೀರು ನುಗ್ಗುವ ಭೀತಿ

Team Udayavani, May 20, 2022, 10:38 AM IST

barrier

ನಾವುಂದ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಎರಡನೇ ವಾರ್ಡಿನ ಅರೆಹೊಳೆ ಸಮೀಪ ಕಳೆದ 5-6 ವರ್ಷಗಳಿಂದ ಮಳೆಗಾಲದಲ್ಲಿ ರಾಜು ಕಾಲುವೆ ಒಡೆದು ಹೋಗಿ, ಕೃಷಿಗೆ ಹಾನಿಯಾಗುತ್ತಿದ್ದು, ಇಲ್ಲಿನ ರೈತರು ತಡೆಗೋಡೆಗೆ ಒತ್ತಾಯಿಸುತ್ತಿದ್ದರೂ, ಶಾಶ್ವತ ಪರಿಹಾರ ಮಾತ್ರ ಮರೀಚಿಕೆಯಾಗಿದೆ.

ಅರೆಹೊಳೆ ಮದಗ ಹಾಗೂ ಅಲ್ಲಿನ ಸುತ್ತಮುತ್ತಲಿನ ಹಾಡಿಯ ನೀರು ಈ ರಾಜಕಾಲುವೆಯಲ್ಲಿ ಹರಿದು ಬಂದು, ಸೌಪರ್ಣಿಕ ನದಿ ಸೇರಬೇಕು. ಆದರೆ ಈ ಕಾಲುವೆ ಮಣ್ಣಿನಿಂದ ನಿರ್ಮಿಸುವುದರಿಂದ ಭಾರೀ ಮಳೆಗೆ ಅಲ್ಲಲ್ಲಿ ಒಡೆದು ಹೋಗಿ ಕೃಷಿ ಭೂಮಿಗಳಿಗೆ ಗುಡ್ಡದ ಮಣ್ಣು ನುಗ್ಗಿ, ಕೃಷಿ ಚಟುವಟಿಕೆ ತುಂಬಾ ತೊಂದರೆ ಆಗುತ್ತಿದೆ.

50 ಎಕರೆಗೂ ಮಿಕ್ಕಿ ಭೂಮಿ

ಅರೆಹೊಳೆಯ ಈ ರಾಜುಕಾಲುವೆ ಒಡೆದ ಪ್ರದೇಶದಲ್ಲಿ ಸುಮಾರು 50 – 60 ಎಕರೆ ಕೃಷಿ ಭೂಮಿಯಿದ್ದು, ಇಲ್ಲಿ ಹತ್ತಾರು ಮಂದಿ ಕೃಷಿಕರು ಭತ್ತದ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ.

ಕಳೆದ 5 ವರ್ಷಗಳಿಂದಲೂ ಈ ಭಾಗದ ರೈತರು ಈ ಸಮಸ್ಯೆಯನ್ನು ಅನುಭವಿಸುತ್ತಲೇ ಇದ್ದಾರೆ. ಗುಡ್ಡದಿಂದ ಭಾರೀ ಪ್ರಮಾಣದಲ್ಲಿ ಹರಿದು ಬರುವ ನೀರು ಮಾತ್ರವಲ್ಲದೆ, ಕಸ-ಕಡ್ಡಿ, ಮಣ್ಣು, ಮರಳು ಎಲ್ಲವೂ ನಾಟಿ ಮಾಡಿದ ಗದ್ದೆಗಳಿಗೆ ಸೇರುತ್ತಿದೆ. ಇದರಿಂದ ಬೆಳೆದ ಬೆಳೆ ಅರ್ಧಕರ್ಧ ನಾಶವಾಗುತ್ತದೆ.

ಶೀಘ್ರ ತಡೆಗೋಡೆ ನಿರ್ಮಿಸಿ

ಈ ರಾಜಕಾಲುವೆಗೆ 100 ವರ್ಷಗಳ ಇತಿಹಾಸವಿದೆ. ಹಿಂದೆ ಗುಡ್ಡದಿಂದ ಹರಿದು ಬರುವ ನೀರಿನ ಪ್ರಮಾಣ ಅಷ್ಟೊಂದು ಇರಲಿಲ್ಲ. ಹಾಗಾಗಿ ಸಮಸ್ಯೆ ಯಾಗುತ್ತಿರಲಿಲ್ಲ. ಈಗ ಅಂದರೆ ಕಳೆದ 5 ವರ್ಷಗಳಿಂದ ನೀರಿನ ಹರಿವು ಹೆಚ್ಚಿದ್ದು, ಮಣ್ಣಿನಿಂದ ನಿರ್ಮಿಸುವ ತಡೆಗೋಡೆ ಭಾರೀ ಮಳೆ ಬಂದಾಗ ಒಡೆದು ಹೋಗುತ್ತದೆ. ಅದಕ್ಕಾಗಿ ಶಾಶ್ವತ ಅಂದರೆ ಕಲ್ಲುಗಳನ್ನು ಕಟ್ಟಿ, ಸಿಮೆಂಟ್‌ (ರಿವಿಟ್‌ಮೆಂಟ್‌) ಹಾಕಿ ತಡೆಗೋಡೆ ನಿರ್ಮಿಸಿದರೆ ಈ ಸಮಸ್ಯೆ ಇರುವುದಿಲ್ಲ. ಈಗಿನ್ನು ಮುಂಗಾರು ನಾಟಿ ಕಾರ್ಯ ಆರಂಭವಾಗಲಿದ್ದು, ತಡೆಗೋಡೆ ನಿರ್ಮಿಸ ದಿದ್ದರೆ ಮತ್ತೆ ಕೃಷಿಗೆ ಹಾನಿಯಾಗುವ ಭೀತಿಯಿದೆ ಎಂದು ಇಲ್ಲಿನ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಸುದಿನ ವರದಿ

ಅರೆಹೊಳೆಯ ರಾಜಕಾಲುವೆ ಒಡೆದು, ಇಲ್ಲಿನ ಕೃಷಿ ಪ್ರದೇಶಗಳಿಗೆ ಹಾನಿಯಾಗುತ್ತಿರುವ ಬಗ್ಗೆ, ಶಾಶ್ವತ ತಡೆಗೋಡೆ ಬೇಕು ಎನ್ನುವ ಕುರಿತಂತೆ ‘ಉದಯವಾಣಿ ಸುದಿನ’ವು ಕಳೆದ ವರ್ಷದ ಜು. 20ರಂದು ವಿಶೇಷ ವರದಿ ಪ್ರಕಟಿಸಿತ್ತು.

ಮನವಿ ನೀಡಿದರೂ ಪ್ರಯೋಜನವಾಗಿಲ್ಲ

ಈ ಕಾಲುವೆ ಅಲ್ಲಲ್ಲಿ ಒಡೆದು ಹೋಗಿ ಕೃಷಿ ಭೂಮಿಗಳಿಗೆ ಗುಡ್ಡದ ಮಣ್ಣು ನುಗ್ಗಿ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾ.ಪಂ. ಅಧ್ಯಕ್ಷರ ಸಹಿತ ಎಲ್ಲರಿಗೂ ಮನವಿ ಮಾಡಿದರೂ, ಏನೂ ಪ್ರಯೋಜನವಾಗಿಲ್ಲ. -ಮಂಜುನಾಥ್‌ ನಾವುಂದ ಕೆಳಾಬದಿ, ಕೃಷಿಕರು

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

4(1

Manipal: ನಮ್ಮ ಸಂತೆಯಲ್ಲಿ ಜನ ಸಾಗರ

Namma-SANTHE-1

Manipal: ನಮ್ಮ ಸಂತೆಗೆ ಎರಡನೇ ದಿನವೂ ಅಭೂತಪೂರ್ವ ಸ್ಪಂದನೆ: ಇಂದೇ ಕೊನೆಯ ದಿನ

8

Karkala: ಚಾರ್ಚ್‌ಗಿಟ್ಟ ಮೊಬೈಲ್‌ ಸ್ಫೋ*ಟ; ಮನೆಗೆ ಬೆಂಕಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.