ಮುಂಬಯಿಗೆ ತೆರಳಿದ್ದ ಯುವಕ ನಾಪತ್ತೆ- ತಂದೆ-ತಾಯಿಯಲ್ಲಿ ಲಕ್ಷ ರೂ. ಪಡೆದುಕೊಂಡು ಹೋಗಿದ್ದ
Team Udayavani, Aug 7, 2024, 7:30 AM IST
ಕುಂದಾಪುರ: ಮುಂಬಯಿಗೆ ತೆರಳುವುದಾಗಿ ಮತ್ಸ್ಯಗಂಧ ರೈಲಿನಲ್ಲಿ ಆ. 5ರಂದು ಅಪರಾಹ್ನ 3.15ರ ಸುಮಾರಿಗೆ ತೆರಳಿದ್ದ ಕಾವ್ರಾಡಿ ಗ್ರಾಮದ ಮೂಡುವಾಲ್ತೂರಿನ ಗುಂಡು ಅವರ ಪುತ್ರ ಮನೀಶ್ (26) ನಾಪತ್ತೆಯಾಗಿದ್ದಾರೆ.
ಮನೀಶ್ ಮುಂಬಯಿನಲ್ಲಿ ಚಿಕ್ಕಪ್ಪ ಸತೀಶ್ ಅವರೊಂದಿಗೆ ಕ್ಯಾಟರಿಂಗ್ ಸೇಲ್ಸ್ಮನ್ ಆಗಿ ಕೆಲಸ ಮಾಡಿಕೊಂಡಿದ್ದು, ಕಳೆದ ಜು. 31ರಂದು ಊರಿಗೆ ಬಂದಿದ್ದ. ಮನೆಗೆ ಬಂದ ವೇಳೆ ತಾನು ಕೈ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಹಣ ಬೇಕಾಗಿದೆ ಎಂದು ಅಮ್ಮನಲ್ಲಿ ಹೇಳಿ, ಅವರ ಖಾತೆಯಲ್ಲಿದ್ದ 50 ಸಾವಿರ ರೂ. ಹಣ ತೆಗೆದುಕೊಂಡು ಅನಂತರ ಮತ್ತೆ ತಂದೆ ಅವರಲ್ಲಿಯೂ 50 ಸಾವಿರ ರೂ. ಹಣವನ್ನು ತೆಗೆದುಕೊಂಡಿದ್ದ.
ಆ. 5ರಂದು ಮುಂಬಯಿಗೆ ಹೋಗುವುದಾಗಿ ಮೂಡ್ಲಕಟ್ಟೆಯ ರೈಲ್ವೇ ನಿಲ್ದಾಣದಿಂದ ರೈಲಿನಲ್ಲಿ ಹೊರಟಿದ್ದು, ಸಂಜೆ ತಂದೆ ಕರೆ ಮಾಡಿದಾಗ ಕಾರವಾರದಲ್ಲಿರುವುದಾಗಿ ತಿಳಿಸಿದ್ದ.
ಆ. 6ರ ಬೆಳಗ್ಗೆ 4.45ಕ್ಕೆ ತಮ್ಮ ಸಚಿನ್ಗೆ ವಾಟ್ಸ್ಆ್ಯಪ್ನಲ್ಲಿ “ನಾನು ತಪ್ಪು ಮಾಡಿದೆ. ಮುಂಬಯಿಗೆ ಕೆಲಸಕ್ಕೆ ಹೋಗುತ್ತಿಲ್ಲ, ಮನೆಯಲ್ಲಿ ಹಣ ತೆಗೆದುಕೊಂಡು ಏನೂ ಹೇಳಿರುವುದಿಲ್ಲ, ಹಣವನ್ನೆಲ್ಲ ಕಳೆದುಕೊಂಡು ಈಗ ನನ್ನಲ್ಲಿ ಏನೂ ಉಳಿದಿಲ್ಲ. ನಾನು ಈಗ ಎಲ್ಲಿಗೆ ಹೋಗುತ್ತೇನೆ ಎಂದು ಗೊತ್ತಿಲ್ಲ. ಮುಂದಕ್ಕೆ ಕೆಲಸ ಮಾಡಿ ಹಣ ಸಂಪಾದನೆ ಮಾಡಿ ಮನೆಗೆ ಹಣ ಕೊಡುತ್ತೇನೆ. ನನ್ನನ್ನು ಇನ್ನು ಮುಂದೆ ಹುಡುಕುವ ಪ್ರಯತ್ನ ಮಾಡಬೇಡಿ’ ಎನ್ನುವ ವಾಯ್ಸ್ ಸಂದೇಶ ಕಳುಹಿಸಿದ್ದ. ಆ ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.