

Team Udayavani, Jul 21, 2022, 6:21 PM IST
ಕುಂದಾಪುರ: ಕೋಟೇಶ್ವರ ಗ್ರಾಮದ ಕೋಸ್ಟಲ್ ಕ್ರೌನ್ ಬಳಿ ಹೆದ್ದಾರಿಯಲ್ಲಿ ಪಾದಚಾರಿ ಬಾಲಕನಿಗೆ ಬೈಕ್ ಢಿಕ್ಕಿಯಾಗಿದೆ.
ಸಂದೀಪ್ ಶೆಟ್ಟಿ ಬುಲೆಟ್ನಲ್ಲಿ ಸುತೇಶ ಶೆಟ್ಟಿ ಅವರನ್ನು ಕುಳ್ಳಿರಿಸಿಕೊಂಡು ಕುಂದಾಪುರ ಕಡೆಯಿಂದ ತೆಕ್ಕಟ್ಟೆ ಕಡೆಗೆ ಹೋಗುತ್ತಿದ್ದಾಗ ಮನೆಯವರ ಜೊತೆ ರಸ್ತೆ ದಾಟಿ ಅಂಚಿಗೆ ತಲುಪುತ್ತಿದ್ದ ಆಯನ್(6)ಗೆ ಢಿಕ್ಕಿ ಹೊಡೆದಿದೆ. ಗಾಯಾಳು ಬಾಲಕನನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂದೀಪ್ಶೆಟ್ಟಿ ಹಾಗೂ ಸುತೇಶ ಶೆಟ್ಟಿ ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.