ನಮ್ಮನೆ ಹೊಸ್ತಿಗೆ ನಮ್ದೇ ಕದಿರು!
Team Udayavani, Sep 27, 2022, 9:32 AM IST
ಕುಂದಾಪುರ: ನಮ್ಮನೆ ಹೊಸ್ತಿಗೆ ನಮ್ದೇ ಕದಿರು ಎಂಬ ಅಭಿಯಾನ ಇಲ್ಲಿನ ಕೋಡಿ ಭಾಗದಲ್ಲಿ ಆರಂಭವಾಗಿದೆ.
ಹೊಸ ಅಕ್ಕಿ ಊಟ ಗಣೇಶ ಚತುರ್ಥಿಯಿಂದ ಆರಂಭಿಸಿ ನವರಾತ್ರಿ ವಿಜಯದಶಮಿವರೆಗೆ ಕರಾವಳಿಯಲ್ಲಿ ಸಾಮಾನ್ಯವಾಗಿ ಹೊಸ ಅಕ್ಕಿ ಊಟ ಮಾಡುತ್ತಾರೆ. ರೈತಾಪಿ ಕುಟುಂಬಗಳು ತಮ್ಮ ಗದ್ದೆಯಲ್ಲಿ ಬೆಳೆದ ಪೈರನ್ನು ದೇವರಿಗೆ ಅರ್ಪಿಸಿ ಮನೆಯಲ್ಲಿ ದೇವರ ಎದುರು ಇಟ್ಟು ಬಾಗಿಲ ದಾರಂದಕ್ಕೆ ಕಟ್ಟಿ ಹೊಸ ಅಕ್ಕಿಯಿಂದ ಮಾಡಿದ ಪಾಯಸದ ಅಡುಗೆಯನ್ನು ಊಟ ಮಾಡುತ್ತಾರೆ. ಆದರೆ ಈಗ ಭತ್ತದ ಗದ್ದೆಗಳೇ ಕಡಿಮೆಯಾಗಿವೆ. ಇದ್ದ ಗದ್ದೆಗಳು ಹಡಿಲು ಬಿದ್ದಿವೆ. ಬೇಸಾಯ ಮಾಡುವವರೇ ಇಲ್ಲ ಎಂದಾಗಿದೆ.
ಬೆಳೆದಲ್ಲಿಂದ ಯಾರು ಭತ್ತ ಬೆಳೆಯುತ್ತಾರೋ ಅವರ ಗದ್ದೆಗೆ ಹೋಗಿ ಕದಿರು ತರುವ ಸಂಪ್ರದಾಯ ಚಾಲ್ತಿಯಲ್ಲಿದೆ. ಕೆಲವು ಗದ್ದೆಗಳಲ್ಲಿ ಅರ್ಧಕ್ಕರ್ಧ ಹೀಗೆ ಹೊಸ ಅಕ್ಕಿ ಊಟಕ್ಕೆ ನೀಡಲೆಂದೇ ಖಾಲಿಯಾಗುವುದೂ ಇದೆ. ಮೊದಲೇ ಮಳೆ ಅಕಾಲದಲ್ಲಿ ಬಂದು ಗದ್ದೆಯಲ್ಲಿದ್ದ ಪೈರೆಲ್ಲ ನಾಶವಾದ ಚಿಂತೆ. ಅದರ ಮಧ್ಯೆ ಇದ್ದಬದ್ದವರೆಲ್ಲ ಕದಿರಿಗೆ ದುಂಬಾಲು ಬೀಳುವ ಚಿಂತೆ. ಕೊಡಲೂ ಅಕ್ಕಪಕ್ಕದ ಸುಮಾರು 30 ಮನೆಯವರಿಗೆ ಇದರಿಂದಲೇ ಕದಿರು ಕೊಡುವುದಾಗಿ ಹೇಳಿದ್ದೇನೆ. ಯಾರ್ಯಾರ ಗದ್ದೆಗೆ ಹೋಗಬೇಡಿ, ನಮ್ಮಲ್ಲೇ ಪಡೆದುಕೊಳ್ಳಿ ಎಂದು ಸೂಚಿಸಿದ್ದೇನೆ. ಪ್ರತಿ ಮನೆಯವರೂ ತಮ್ಮ ಸಣ್ಣ ಜಾಗದಲ್ಲೇ ಒಂದಡಿಯಷ್ಟಾದರೂ ಭತ್ತ ಬೆಳೆದರೂ ಅವರ ಮನೆಯ ಆಚಾರ, ವಿಚಾರ ಸಂಸ್ಕೃತಿ ಪಾಲನೆಗೆ ಇದು ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯ ಅವರದ್ದು.
ದೇವಾಲಯದಲ್ಲಿ ನೀಡಬೇಕು: ಹಡಿಲು ಬಿದ್ದ ಗದ್ದೆಗಳನ್ನು ತೆಗೆದುಕೊಂಡು ಊರ ಪ್ರಮುಖ ದೇವಸ್ಥಾನದವರು ಭತ್ತ ಬೆಳೆದು ಊರಿನ ಭಕ್ತರಿಗೆ ನೀಡುವ ಕ್ರಮ ಆರಂಭವಾಗಬೇಕು. ಇದರಿಂದ ಕೃಷಿಯೂ ಪುನರುತ್ಥಾನವಾಗುತ್ತದೆ, ರೈತರಿಗೂ ಅನಗತ್ಯ ಕಿರಿಯಾಗುವುದು ತಪ್ಪುತ್ತದೆ. -ಕೋಡಿ ಅಶೋಕ್ ಪೂಜಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.