Ajekar: ನೀರೆ ಪಂಚಾಯತ್‌ ವಿನೂತನ ಕ್ರಮದಿಂದ ಜಂಗುಳಿ ಪ್ರದೇಶ ಬದಲಾದ ಕತೆ

ಅಂದು ಕಸದ ಕೊಂಪೆ, ಇಂದು ಸೆಲ್ಫಿ ಕಾರ್ನರ್‌!

Team Udayavani, Sep 30, 2024, 1:15 PM IST

5(1)

ಅಜೆಕಾರು: ನೀರೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗುಡ್ಡೆಯಂಗಡಿ ಬಳಿಯ ನೀರೆ ಜಂಗುಳಿ ಪ್ರದೇಶ ವರ್ಷಗಳ ಹಿಂದೆ ತ್ಯಾಜ್ಯಗಳ ಕೊಂಪೆಯಾಗಿ ಮಾರ್ಪಾಡಾಗಿತ್ತು. ಆದರೆ ಪಂಚಾಯತ್‌ನ ವಿನೂತನ ಕ್ರಮದಿಂದ ಅದು ಆಕರ್ಷಕ ಸೆಲ್ಫಿ ಕಾರ್ನರ್‌ ಆಗಿ ಬದಲಾಗಿದೆ!

ನೀರೆ ಪಂಚಾಯತ್‌ ಆಡಳಿತವು ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಪಂಚಾಯತ್‌ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಸ, ತ್ಯಾಜ್ಯ ಬೀಳದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದೆ. ಬೇಕಾಬಿಟ್ಟಿ ಕಸ ಎಸೆಯುವವರ ಮೇಲೆ ಕಠಿನ ಕ್ರಮ ಕೈಗೊಂಡು ದಂಡ ಹಾಕುವ ಕ್ರಮವನ್ನು ಈಗಾಗಲೇ ಮಾಡಿ ತೋರಿಸಿದೆ.
ಈ ನಡುವೆ, ಕಾರ್ಕಳ-ಉಡುಪಿ ಮುಖ್ಯ ರಸ್ತೆಯ ನೀರೆ ಜಂಗುಳಿ ಎಂಬ ಜನ ವಸತಿ ಇಲ್ಲದ ಅರಣ್ಯ ಪ್ರದೇಶದಲ್ಲಿ ಅಪರಿಚಿತರು ತ್ಯಾಜ್ಯವನ್ನು ಸುರಿದು ಹೋಗುತ್ತಿದ್ದರು. ಇದು ಪಂಚಾಯತ್‌ ಆಡಳಿತಕ್ಕೆ ಸಮಸ್ಯೆ ತಂದೊಟ್ಟಿತ್ತು. ಕಸ ಎಸೆಯುತ್ತಿದ್ದ ಜಾಗದಲ್ಲಿ ಹಲವು ಬಾರಿ ಎಚ್ಚರಿಕೆಯ ಫ‌ಲಕ ಅಳವಡಿಸಿದ್ದರು ಪ್ರಯೋಜನಕ್ಕೆ ಬಂದಿರಲಿಲ್ಲ.

ಅದು ಬ್ಲ್ಯಾಕ್‌ಸ್ಪಾಟ್‌ ಆಗಿತ್ತು
ಈ ಜಂಗುಳಿ ಪ್ರದೇಶ ಎಷ್ಟೊಂದು ಅಪಖ್ಯಾತಿಗೆ ಗುರಿಯಾಗಿತ್ತು ಎಂದರೆ ಉಡುಪಿ ಜಿಲ್ಲೆಯ ಪ್ರಮುಖ ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿತ್ತು. ಸುಮಾರು 3 ಕಿ.ಮೀ. ಯಷ್ಟು ರಸ್ತೆಯು ಅರಣ್ಯ ಆವೃತವಾಗಿರುವುದು ಕಸ ಎಸೆಯುವುವವರಿಗೆ ಅನುಕೂಲವಾಗಿತ್ತು.

ಯಾವುದೇ ಮನೆ, ಜನವಸತಿ ಇಲ್ಲದ ಕಾರಣ ಸಾರ್ವಜನಿಕರು, ಪ್ರವಾಸಿಗರು ಗೋಣಿಗಳಲ್ಲಿ ಕಸವನ್ನು ತುಂಬಿಸಿ ಈ ಪ್ರದೇಶದಲ್ಲಿ ಎಸೆದು ಹೋಗುತ್ತಿದ್ದರು.

ಮಾಡಿದ ಬದಲಾವಣೆ ಏನು?
ನೀರೆ ಗ್ರಾಮ ಪಂಚಾಯತ್‌ ಈ ಸವಾಲನ್ನು ಧನಾತ್ಮಕವಾಗಿ ಸ್ವೀಕರಿಸಿತು. ಇದೊಂದು ಅತ್ಯಂತ ಸುಂದರ ಪ್ರಕೃತಿ ರಮ್ಯ ಪ್ರದೇಶವಾಗಿದೆ. ಅಲ್ಲಿ ನಿಂತರೆ ಪ್ರಕೃತಿ ಸೊಗಸಾಗಿ ಕಾಣುತ್ತದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಕಸ ಎಸೆಯುವ ಜಾಗವನ್ನೇ ಪ್ರಕೃತಿ ವೀಕ್ಷಣ ಜಾಗವಾಗಿ ಮಾರ್ಪಡಿಸಿದೆ. ಇಲ್ಲಿನ ಪ್ರದೇಶವನ್ನು ಸ್ವತ್ಛಗೊಳಿಸಿದ್ದಲ್ಲದೆ ಕುಳಿತುಕೊಳ್ಳಲು ಬೆಂಚ್‌ಗಳನ್ನು ಅಳವಡಿಸಲಾಗಿದೆ ಹಾಗೂ ಸೆಲ್ಫಿ ಕಾರ್ನರ್‌ ನಿರ್ಮಿಸಿ ಪ್ರಕೃತಿ ನಡುವೆ ಫೋಟೊ ತೆಗೆಸಿಕೊಳ್ಳಲು ಅವಕಾಶವಾಗಿದೆ. ಹೀಗೆ ಮಾಡಿದ ಬಳಿಕ ಅಲ್ಲಿ ಕಸ ಎಸೆಯುವುದು ನಿಂತಿದೆ. ಮಾತ್ರವಲ್ಲ, ಪ್ರವಾಸಿಗರು ಕೂಡಾ ಅಲ್ಲಿ ನಿಂತು ಫೋಟೊ ತೆಗೆದುಕೊಂಡು ಹೋಗುತ್ತಿದ್ದಾರೆ.

ಸೆಲ್ಫಿ ಕಾರ್ನರ್‌ ಯೋಜನೆಗೆ ಸಾಹಸ್‌ ಸಂಸ್ಥೆ ಕೈ ಜೋಡಿಸಿದೆ. ನೀರೆ ಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಪರಿಕಲ್ಪನೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ವತ್ಛತೆ ಕಾಪಾಡುವಲ್ಲಿ ಯಶಸ್ವಿ
ಗ್ರಾಮಸ್ಥರ ಸಹಕಾರದಿಂದ ಸ್ವತ್ಛತೆ ಕಾಪಾಡುವಲ್ಲಿ ಪಂಚಾಯತ್‌ ಯಶಸ್ವಿಯಾಗಿದೆ, ಗಾಂಧಿ ಗ್ರಾಮ ಪುರಸ್ಕಾರವೂ ಬಂದಿದೆ. ಆದರೆ ಹೊರ ಪ್ರದೇಶದ ಅಪರಿಚಿತರು ಪಂಚಾಯತ್‌ ವ್ಯಾಪ್ತಿಯಲ್ಲಿ ಕಸ ಎಸೆಯುವ ಸಮಸ್ಯೆ ಉಂಟಾಗಿತ್ತು. ಈ ನಿಟ್ಟಿನಲ್ಲಿ ಕೊಳಚೆ ಪ್ರದೇಶ ಸ್ವತ್ಛಗೊಳಿಸಿ ಪ್ರಯಾಣಿಕರ ಸೆಲ್ಪಿ ಕಾರ್ನರ್‌ ಆಗಿ ಆಗಿ ಬದಲಾಯಿಸಲಾಗಿದೆ.
-ಅಂಕಿತಾ ನಾಯಕ್‌, ಪಿಡಿಒ ನೀರೆ ಗ್ರಾ.ಪಂ.

ಗ್ರಾಮ ಕಸ ರಹಿತವಾಗಿದೆ
ಪಂಚಾಯತ್‌ ಸದಸ್ಯರು, ಪಿಡಿಒ, ಸಿಬಂದಿಯವರ ಸಹಕಾರದಿಂದ ಗ್ರಾಮ ಕಸ ರಹಿತವಾಗಿದೆ. ಹಿಂದೆ ಕಸ ಎಸೆಯುತ್ತಿದ್ದ ಜಾಗ ಈಗ ವಿನೂತನ ರೀತಿಯಲ್ಲಿ ಗಮನ ಸೆಳೆಯುತ್ತಿದೆ.
-ಸಚ್ಚಿದಾನಂದ ಪ್ರಭು, ಅಧ್ಯಕ್ಷರು, ನೀರೆ ಗ್ರಾ.ಪಂ.

-ಜಗದೀಶ್‌ ಅಂಡಾರು

ಟಾಪ್ ನ್ಯೂಸ್

Sleep Champion; lady from Bangalore won Rs 9 lakh by sleeping

Sleep Champion; ನಿದ್ದೆ ಮಾಡಿ 9 ಲಕ್ಷ ರೂ ಗೆದ್ದ ಬೆಂಗಳೂರಿನ ಯುವತಿ

Renukaswamy Case: ಜಾಮೀನಿಗೆ ಕಾದು ಕುಳಿತ ʼದಾಸʼನಿಗೆ ಮತ್ತೆ ನಿರಾಸೆ; ವಿಚಾರಣೆ ಮುಂದೂಡಿಕೆ

Renukaswamy Case: ಜಾಮೀನಿಗೆ ಕಾದು ಕುಳಿತ ʼದಾಸʼನಿಗೆ ಮತ್ತೆ ನಿರಾಸೆ; ವಿಚಾರಣೆ ಮುಂದೂಡಿಕೆ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರ್‌ 45 ಬಗ್ಗೆ ಶಿವಣ್ಣ ಮಾತು

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರರ್‌ 45 ಬಗ್ಗೆ ಶಿವಣ್ಣ ಮಾತು

Transportation agency issue; Minister Ramalinga Reddy challenged BJP

Koppala: ಸಾರಿಗೆ ಸಂಸ್ಥೆ ವಿಚಾರ; ಬಿಜೆಪಿಗೆ ಸವಾಲು ಹಾಕಿದ ಸಚಿವ ರಾಮಲಿಂಗಾ ರೆಡ್ಡಿ

Temple Priest: ದೇವಾಲಯದ ಅರ್ಚಕನನ್ನೇ ಹೊತ್ತೊಯ್ದ ಚಿರತೆ… 11 ದಿನದಲ್ಲಿ 7ನೇ ಪ್ರಕರಣ

Temple Priest: ದೇವಾಲಯದ ಅರ್ಚಕನನ್ನೇ ಹೊತ್ತೊಯ್ದ ಚಿರತೆ… 11 ದಿನದಲ್ಲಿ 7ನೇ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Udupi: ತಾಲೂಕು ಕಚೇರಿಗಳಲ್ಲಿ 112 ಹುದ್ದೆ ಖಾಲಿ

4

Kundapura ಪ್ರವಾಸಿ ಬಂಗಲೆ: 4.5 ಕೋಟಿ ರೂಪಾಯಿಗಳ ಅಂದಾಜು ಪಟ್ಟಿ ಸಿದ್ಧ

1

Puttur: ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರ ಶೀಘ್ರ ಸಿದ್ಧ

Udupi: ಸರಕಾರಿ ವಸತಿ ಗ್ರಹಕ್ಕೆ ನುಗ್ಗಿದ ಕಳ್ಳರು… ಲಕ್ಷಾಂತರ ಮೌಲ್ಯದ ನಗನಗದು ದೋಚಿ ಪರಾರಿ

Udupi: ಸರಕಾರಿ ವಸತಿ ಗೃಹಕ್ಕೆ ನುಗ್ಗಿದ ಕಳ್ಳರು… ಲಕ್ಷಾಂತರ ಮೌಲ್ಯದ ನಗನಗದು ದೋಚಿ ಪರಾರಿ

Chikkamela: ಯಕ್ಷಗಾನಕ್ಕೆ ಮುಸ್ಲಿಂ, ಕ್ರೈಸ್ತರ ಮನೆಗಳಲ್ಲೂ ಸ್ವಾಗತ

Chikkamela: ಯಕ್ಷಗಾನಕ್ಕೆ ಮುಸ್ಲಿಂ, ಕ್ರೈಸ್ತರ ಮನೆಗಳಲ್ಲೂ ಸ್ವಾಗತ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Sleep Champion; lady from Bangalore won Rs 9 lakh by sleeping

Sleep Champion; ನಿದ್ದೆ ಮಾಡಿ 9 ಲಕ್ಷ ರೂ ಗೆದ್ದ ಬೆಂಗಳೂರಿನ ಯುವತಿ

Renukaswamy Case: ಜಾಮೀನಿಗೆ ಕಾದು ಕುಳಿತ ʼದಾಸʼನಿಗೆ ಮತ್ತೆ ನಿರಾಸೆ; ವಿಚಾರಣೆ ಮುಂದೂಡಿಕೆ

Renukaswamy Case: ಜಾಮೀನಿಗೆ ಕಾದು ಕುಳಿತ ʼದಾಸʼನಿಗೆ ಮತ್ತೆ ನಿರಾಸೆ; ವಿಚಾರಣೆ ಮುಂದೂಡಿಕೆ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

8

Udupi: ತಾಲೂಕು ಕಚೇರಿಗಳಲ್ಲಿ 112 ಹುದ್ದೆ ಖಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.