![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 3, 2020, 3:09 AM IST
ಕುಂದಾಪುರ: ಬೈಂದೂರು ಗ್ರಾಮ ಪಂಚಾಯತನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಿ ಆಕ್ಷೇಪಗಳಿದ್ದರೆ ಒಂದು ತಿಂಗಳ ಒಳಗಾಗಿ ತಿಳಿಸುವಂತೆ ಸೂಚಿಸಿ ಸರಕಾರ ಡಿ. 31ರಂದು ಗಜೆಟ್ ನೋಟಿಫಿಕೇಶನ್ ಹೊರಡಿಸಿದೆ.
ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎ. ವಿಜಯಕುಮಾರ್ ಹೊರಡಿಸಿದ ನೋಟಿಫಿಕೇಶನ್ ಪ್ರಕಾರ, ಬೈಂದೂರು, ಯಡ್ತರೆ ಮತ್ತು ಪಡುವರಿ ಪಂಚಾಯತ್ಗಳನ್ನು ವಿಲೀನಗೊಳಿಸಿ ಬೈಂದೂರು ಪಟ್ಟಣ ಪಂಚಾಯತ್ ಆಗಿ ರಚನೆ ಮಾಡಲಾ ಗಿದೆ. ಹೊಸ ಪಟ್ಟಣ ಪಂಚಾಯತ್ ಒಟ್ಟು ಜನಸಂಖ್ಯೆ 24,957 ಹೊಂದಿರ ಲಿದೆ. ಇದರಲ್ಲಿ ಬೈಂದೂರು, ಯಡ್ತರೆ, ತೆಗ್ಗರ್ಸೆ, ಪಡುವರಿ ಗ್ರಾಮಗಳ ಭೌಗೋಳಿಕ ಪ್ರದೇಶಗಳು ಒಳಗೊಳ್ಳ ಲಿವೆ. ಆಕ್ಷೇಪಗಳಿದ್ದರೆ ಗಜೆಟ್ ಪ್ರಕಟಗೊಂಡು ತಿಂಗಳ ಒಳಗೆ ಲಿಖೀತವಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಬೈಂದೂರು ಪ.ಪಂ. ರಚನೆ ಕುರಿತು ಸರಕಾರದ ಜತೆ ಮುತುವರ್ಜಿಯಲ್ಲಿ ಶ್ರಮಿಸಿ ಪ್ರಯತ್ನ ಪಡಲಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಮತ್ತು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಇದು ಸಾಧ್ಯವಾಗಿದೆ ಎಂದು ಶಾಸಕ ಸುಕುಮಾರ ಶೆಟ್ಟಿ ಹೇಳಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.