![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 25, 2021, 10:56 PM IST
ಮುಳ್ಳಿಕಟ್ಟೆ: ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳಿಕಟ್ಟೆ ಸಮೀಪದ ಕೆಸಿಡಿಸಿ ಕಚೇರಿ ರಸ್ತೆಯಿಂದ ಮಂಕಿ ಹೂವನ ಮನೆ ಪರಿ ಸರದ ಶೆಟ್ಟರಕೇರಿ ಮೂಲಕ ಒಳನಾಡು ಸಂಪರ್ಕಿಸುವ ಮಣ್ಣಿನ ರಸ್ತೆಗೆ ಅಂತೂ ಕಾಂಕ್ರೀಟ್ ಭಾಗ್ಯ ಒದಗಿ ಬಂದಿದೆ.
ಈ ಭಾಗದ ಜನರು ಈ ರಸ್ತೆಯ ಅಭಿವೃದ್ಧಿಯಾಗಬೇಕು ಎನ್ನುವುದಾಗಿ ದಶಕಕ್ಕೂ ಹೆಚ್ಚು ಕಾಲದಿಂದಲೂ ಒತ್ತಾಯಿಸುತ್ತಿದ್ದರು. ಇದೀಗ ಅವರ ಅವರ ಆಗ್ರ ಹ ಫಲಪ್ರದವಾಗುವ ಕಾಲ ಸನ್ನಿಹಿತವಾಗಿದೆ.
ಮುಳ್ಳಿಕಟ್ಟೆ – ಗಂಗೊಳ್ಳಿ ಮುಖ್ಯ ರಸ್ತೆಯಿಂದ ಕರ್ನಾಟಕ ರಾಜ್ಯ ರಸ್ತೆ ಗೇರು ಅಭಿವೃದ್ಧಿ ನಿಗಮದ ಕಚೇರಿಗೆ ಹೋಗುವ ರಸ್ತೆಯಿದ್ದು, ಅಲ್ಲಿಂದ ಮುಂದಕ್ಕೆ ಸ್ವಲ್ಪ ದೂರದವರೆಗೆ ಮಾತ್ರ ಈ ಹಿಂದೆ ಕಾಂಕ್ರೀಟ್ ಕಾಮಗಾರಿ ಆಗಿತ್ತು. ಅದರ ಆಚೆ ಮುಂದಕ್ಕೆ ಮಣ್ಣಿನ ರಸ್ತೆಯಾಗಿಯೇ ಇದ್ದು, ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದರು.
50ಕ್ಕೂ ಹೆಚ್ಚು ಮನೆ :
ಗುಜ್ಜಾಡಿ ಗ್ರಾಮದ ಮಂಕಿ ಹೂವನ ಮನೆ ಪರಿಸರ, ಶೆಟ್ಟರಕೇರಿ, ಒಳನಾಡು ಸೇರಿದಂತೆ ಇನ್ನಿತರ ಹಲವು ಕಡೆಗಳ 50 -60ಕ್ಕೂ ಹೆಚ್ಚು ಮನೆಗಳಿದ್ದು, ನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ.
ಧೂಳು – ಕೆಸರಿಗೆ ಮುಕ್ತಿ :
ಈ ಶೆಟ್ಟರಕೇರಿ – ಒಳನಾಡು ಸಂಪರ್ಕಿಸುವ ರಸ್ತೆಯಲ್ಲಿ ಮಳೆಗಾಲದಲ್ಲಾದರೆ ಕೆಸರುಮಯವಾಗಿದ್ದು, ಬೇಸಗೆಯಲ್ಲಿ ಧೂಳುಮಯವಾಗಿದ್ದು, ಸಂಚಾರವೇ ದುಸ್ತರವಾಗಿತ್ತು. ವಾಹನ ಸವಾರರು ಮಾತ್ರವಲ್ಲದೆ ಪಾದ ಚಾರಿಗಳು ನಿತ್ಯ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈಗ ಕಾಂಕ್ರೀಟ್ ಕಾಮಗಾರಿಗೆ ಅನುದಾನ ಮಂಜೂ ರಾಗಿದ್ದು, ಈ ಭಾಗದ ಜನ ನಿಟ್ಟುಸಿರು ಬಿಡುವಂತಾಗಿದೆ.
50 ಲಕ್ಷ ರೂ. ಅನುದಾನ : ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮುತುವರ್ಜಿಯಲ್ಲಿ ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಮೇಸ್ತ ಹಾಗೂ ಇತರೆ ಸ್ಥಳೀಯ ನಾಯಕರ ಪರಿಶ್ರಮದಿಂದ ಈ ರಸ್ತೆ ಅಭಿವೃದ್ಧಿಗೆ ವಾರಾಹಿ ನೀರಾವರಿ ನಿಗಮದಿಂದ 50 ಲಕ್ಷ ರೂ. ಅನುದಾನ ಮಂಜೂರಾಗಿದೆ. ಪ್ರಸ್ತುತ ಕಾಮಗಾರಿಯ ಕುರಿತಂತೆ ರೂಪುರೇಷೆಗಳನ್ನು ತಯಾರಿಸ ಲಾಗುತ್ತಿದ್ದು, ಸದ್ಯದಲ್ಲಿಯೇ ಟೆಂಡರ್ ಕರೆಯುವ ಸಾಧ್ಯತೆಗಳಿವೆ. ಒಟ್ಟಾರೆ 550ರಿಂದ 600 ಮೀಟರ್ ದೂರದವರೆಗೆ ಕಾಂಕ್ರೀಟ್ ಕಾಮಗಾರಿ ಆಗಲಿದೆ.
ಗುಜ್ಜಾಡಿ ಗ್ರಾಮದ ಈ ಶೆಟ್ಟರಕೇರಿ ರಸ್ತೆಯ ಅಭಿವೃದ್ಧಿಗೆ ವಾರಾಹಿ ನೀರಾವರಿ ನಿಗಮದಿಂದ 50 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಈಗ ಕಾಮಗಾರಿಯ ಯೋಜನೆಯನ್ನು ತಯಾರಿಸಲಾಗುತ್ತಿದ್ದು, ಆ ಬಳಿಕ ಅಂದರೆ ಎಪ್ರಿಲ್ನಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಮೇನಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆಗಳಿವೆ. – ಪ್ರಶಾಂತ್ ಕುಮಾರ್, ಎಂಜಿನಿಯರ್, ವಾರಾಹಿ ನೀರಾವರಿ ನಿಗಮ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.