“ಕ್ವಾರಂಟೈನ್‌ ಕೇಂದ್ರಗಳ ನಿರ್ವಹಣೆಗೆ ಕಂಟ್ರೋಲ್‌ ರೂಂ’

ಅಧಿಕಾರಿಗಳ, ವಿವಿಧ ಪಕ್ಷಗಳ ಮುಖಂಡರ ಸಭೆ

Team Udayavani, May 18, 2020, 5:30 AM IST

“ಕ್ವಾರಂಟೈನ್‌ ಕೇಂದ್ರಗಳ ನಿರ್ವಹಣೆಗೆ ಕಂಟ್ರೋಲ್‌ ರೂಂ’

ಕುಂದಾಪುರ: ಕ್ವಾರಂಟೈನ್‌ ಕೇಂದ್ರಗಳ ಸಮರ್ಥ ನಿರ್ವಹಣೆಗೆ ತಾಲೂಕಿನಲ್ಲಿ ಕಂಟ್ರೋಲ್‌ ರೂಂ ತೆರೆಯಬೇಕು ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.

ಅವರು ರವಿವಾರ ಇಲ್ಲಿನ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಅಧಿಕಾರಿಗಳ, ವಿವಿಧಪಕ್ಷಗಳ ಮುಖಂಡರ ಸಭೆ ನಡೆಸಿ ಮಾತನಾಡಿದರು.

ವ್ಯವಸ್ಥೆಗಳು ಸಮರ್ಪಕವಾಗಿ ಇಲ್ಲದ ಹಾಸ್ಟೆಲ್‌ಗ‌ಳನ್ನು ಕ್ವಾರಂಟೈನ್‌ ಕೇಂದ್ರಗಳಾಗಿ ಮೀಸಲಿಡುವುದು ಬೇಡ, ಅಂತೆಯೇ ಶೌಚಾಲಯ, ವಿದ್ಯುತ್‌ ವ್ಯವಸ್ಥೆ ಸರಿಯಾಗಿಲ್ಲದ ಪ್ರಾಥಮಿಕ ಶಾಲೆಗಳನ್ನು ಕೂಡಾ ಮೀಸಲಿಡುವುದು ಬೇಡ ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ ಶಾಸಕರು, ಕ್ವಾರಂಟೈನ್‌ ಕೇಂದ್ರಗಳಲ್ಲಿ ಉಂಟಾಗುವ ಸಮಸ್ಯೆ, ಆಹಾರ ಇತ್ಯಾದಿಗಳ ವಿವರಗಳನ್ನು ಒದಗಿಸುವ ಸಲುವಾಗಿ ಕಂಟ್ರೋಲ್‌ ರೂಂ ತೆರೆಯಿರಿ ಎಂದರು.

ಜಿಲ್ಲೆಯ ಗಡಿಯ ಒಳಗೆ ಎಷ್ಟು ಮಂದಿ ಆಗಮಿಸುತ್ತಾರೆ, ಎಷ್ಟು ಹೊತ್ತಿಗೆ ಆಗಮಿಸುತ್ತಾರೆ ಇತ್ಯಾದಿ ಮಾಹಿತಿ ಖಚಿತವಾಗಿ ದೊರೆಯುವುದಿಲ್ಲ. ಆದ್ದರಿಂದ ವ್ಯವಸ್ಥೆ ಮಾಡುವಾಗ ವಿಳಂಬ ಆಗುತ್ತಿದೆ. ಇದಕ್ಕಾಗಿ ಕ್ವಾರಂಟೈನ್‌ ಕೇಂದ್ರ ತಲುಪಿದ ಕೂಡಲೇ ಆಗಮಿಸಿದವರಿಗೆ ಉಪಾಹಾರ, ಊಟ ದೊರೆಯುವಂತೆ ಮಾಡಬೇಕು. ಅಲ್ಲದೇ ಆಗಮಿಸುವವರು ಕೂಡಾ ವ್ಯವಸ್ಥೆಯನ್ನು ದೂರುವ ಬದಲು ತುರ್ತು ಹಸಿವು ನೀಗಿಸಲು ಏನಾದರೂ ಆಹಾರ ಪದಾರ್ಥ ಇಟ್ಟುಕೊಂಡಿದ್ದರೆ ಸಮಸ್ಯೆಯಾಗುವುದಿಲ್ಲ. ಈಗಿನ್ನೂ ಹೊರರಾಜ್ಯಗಳಲ್ಲಿ ನೆಲೆಸಿದ ಈ ಊರಿನ ಶೇ.2ರಷ್ಟು ಜನ ಕೂಡಾ ಆಗಮಿಸಿಲ್ಲ. ಇನ್ನೂ ಎರಡು ಮೂರು ತಿಂಗಳ ಕಾಲ ಕ್ವಾರಂಟೈನ್‌ ಕೇಂದ್ರಗಳು ತೆರೆದಿದ್ದು ಬೇರೆ ರಾಜ್ಯಗಳಿಂದ ಜನ ಬರುತ್ತಲೇ ಇರುವ ಸಾಧ್ಯತೆಯಿದೆ. ಪಕ್ಷಭೇದ ಮರೆತು ಎಲ್ಲರೂ ಇವುಗಳ ನಿರ್ವಹಣೆಗೆ ನೆರವಾಗಲಿದ್ದಾರೆ ಎಂದರು.

ಅಧಿಕಾರಿಗಳನ್ನು ಬೈಯಬೇಡಿ. ಅವರ ಕಷ್ಟಗಳನ್ನೂ ಅರಿಯಿರಿ. ಓಟು ಹಾಕಿಸಿಕೊಂಡದ್ದಕ್ಕಾಗಿ ಜನಪ್ರತಿನಿಧಿಗಳಾದ ನಾವು ಎಲ್ಲವನ್ನೂ ಕೇಳಿಸಿಕೊಳ್ಳಬೇಕಾಗುತ್ತಿ¤ದೆ. ಆದರೆ ಸ್ಥಳೀಯವಾಗಿಯೂ ಆಗುವ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಳ್ಳಿ ಎಂದು ಕ್ವಾರಂಟೈನ್‌ಗೆ ಬರುವವರಿಗೆ ಶಾಸಕರು ಕಿವಿಮಾತು ಹೇಳಿದರು.

ಅಕ್ಷರದಾಸೋಹದ ಬಿಸಿಯೂಟ, ಬಿಸಿಎಂ ಹಾಸ್ಟೆಲ್‌ಗ‌ಳಲ್ಲಿ ಉಳಿಕೆಯಾದ ಅಕ್ಕಿ, ಬೇಳೆಯನ್ನು ಕ್ವಾರಂಟೈನ್‌ ಕೇಂದ್ರದಲ್ಲಿ ಇರುವವರ ಬಳಕೆಗೆ ನೀಡಲು ಅನುವು ಮಾಡಿಕೊಡುವಂತೆ ಶಾಸಕರು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸಭೆಯಿಂದಲೇ ದೂರವಾಣಿ ಮೂಲಕ ಮನವಿ ಮಾಡಿದರು.

ತಹಶೀಲ್ದಾರ್‌ ತಿಪ್ಪೇಸ್ವಾಮಿ, ಶಿಕ್ಷಣ ಇಲಾಖೆಯ ಸದಾನಂದ ಬೈಂದೂರು, ಅರುಣ್‌ ಕುಮಾರ್‌, ಬಿಸಿಎಂ ಇಲಾಖೆಯ ಬಿ.ಎಸ್‌. ಮಾದಾರ್‌, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪರಿಸರ ಎಂಜಿನಿಯರ್‌ ರಾಘವೇಂದ್ರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ್‌ ಕಾನ್ಮಕ್ಕಿ, ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಜ್ಯೋತಿ ಪುತ್ರನ್‌, ಕೋಣಿ ಕೃಷ್ಣದೇವ ಕಾರಂತ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಿರಣ್‌ ಕೊಡ್ಗಿ, ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಮುಖಂಡರಾದ ಗುಣರತ್ನ, ಸುರೇಶ್‌ ಶೆಟ್ಟಿ ಕಾಡೂರು, ಸುರೇಶ್‌ ಶೆಟ್ಟಿ ಬೀಜಾಡಿ, ಸುನಿಲ್‌ ಶೆಟ್ಟಿ, ಸಂತೋಷ್‌ ಶೆಟ್ಟಿ, ದಿವಾಕರ ಕಡ್ಗಿ, ಸುಧೀರ್‌, ಭಾಸ್ಕರ ಬಿಲ್ಲವ, ಮೋಹನದಾಸ ಶೆಣೈ, ಸದಾನಂದ ಬಳ್ಕೂರು, ಅರುಣ್‌ ಬಾಣ, ಗಿರೀಶ್‌ ಕುಂದಾಪುರ, ಅಶೋಕ್‌ ಪೂಜಾರಿ ಕೋಡಿ, ಕೃಷ್ಣ ಗೊಲ್ಲ ಅಧಿಕಾರಿ ವಿನಯ್‌ ಕುಮಾರ್‌, ಕಾಂಗ್ರೆಸ್‌ನ ಇಚ್ಛಿತಾರ್ಥ ಶೆಟ್ಟಿ, ವಿಜಯ ಪುತ್ರನ್‌,ಬಿಜೆಪಿಯ ಮೋಹನದಾಸ ಶೆಣೈ, ಉದಯ ನಾಯ್ಕ, ಸಂಪತ್‌ ಕುಮಾರ್‌ ಶೆಟ್ಟಿ,ಭರತ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಒಟ್ಟು 13 ಕೇಂದ್ರಗಳು
ಕುಂದಾಪುರ ಹೋಬಳಿಯಲ್ಲಿ 492 ಜನ 13 ಕೇಂದ್ರಗಳಲ್ಲಿದ್ದು, ಇದರಲ್ಲಿ ಪುರಸಭೆ ವ್ಯಾಪ್ತಿಯಲ್ಲಿ 8 ಕೇಂದ್ರಗಳಿವೆ. 200 ತಟ್ಟೆಗಳನ್ನು ಸರಕಾರದಿಂದ ನೀಡಲಾಗಿದ್ದು ಎಲ್ಲ ಕ್ವಾರಂಟೈನ್‌ ಕೇಂದ್ರಗಳ ಕಸ ವಿಲೇವಾರಿ ಜವಾಬ್ದಾರಿಯನ್ನು ಒಂದೇ ಸಂಸ್ಥೆ ನಿರ್ವಹಿಸಲಿದೆ. ಇನ್ನಷ್ಟು ಕಡೆ ಕ್ವಾರಂಟೈನ್‌ ಕೇಂದ್ರಗಳನ್ನು ತೆರೆಯಲಿದ್ದು, ಅಲ್ಲಿಗೆ ಸ್ಥಳೀಯವಾಗಿ ಆಹಾರ ಒದಗಿಸಲು ಸ್ಥಳೀಯರ ಉಸ್ತುವಾರಿ ವಹಿಸಲು ನಿರ್ಧರಿಸಲಾಯಿತು. ಪ್ರಸ್ತುತ ಆನೆಗುಡ್ಡೆ ದೇವಾಲಯ ಊಟವನ್ನು, ಪೇಟೆ ವೆಂಕಟರಮಣ ದೇಗುಲದ ವತಿಯಿಂದ ಉಪಾಹಾರವನ್ನೂ ನೀಡಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.

ಟಾಪ್ ನ್ಯೂಸ್

farooq

Jammu Kashmir Result: ಜಮ್ಮು-ಕಾಶ್ಮೀರದ ನೂತನ ಸಿಎಂ ಹೆಸರು ಘೋಷಿಸಿದ ಫಾರೂಕ್ ಅಬ್ದುಲ್ಲಾ

Huli Karthik: ಜಾತಿ ನಿಂದನೆ ಆರೋಪ; ಹಾಸ್ಯ ನಟ ಹುಲಿ ಕಾರ್ತಿಕ್‌ ಸೇರಿ ನಾಲ್ವರ ವಿರುದ್ಧ FIR

Huli Karthik: ಜಾತಿ ನಿಂದನೆ ಆರೋಪ; ಹಾಸ್ಯ ನಟ ಹುಲಿ ಕಾರ್ತಿಕ್‌ ಸೇರಿ ನಾಲ್ವರ ವಿರುದ್ಧ FIR

Haryana: ಕಾಂಗ್ರೆಸ್‌ ಅಭ್ಯರ್ಥಿ, ಕುಸ್ತಿಪಟು ಫೋಗಾಟ್‌ ಗೆ ಜಯ, ಬಿಜೆಪಿಯ ಯೋಗೇಶ್‌ ಗೆ ಸೋಲು

Haryana: ಕಾಂಗ್ರೆಸ್‌ ಅಭ್ಯರ್ಥಿ, ಕುಸ್ತಿಪಟು ಫೋಗಾಟ್‌ ಗೆ ಜಯ, ಬಿಜೆಪಿಯ ಯೋಗೇಶ್‌ ಗೆ ಸೋಲು

2-udupi

Udupi: ಕಾರು ಢಿಕ್ಕಿಯಾಗಿ ಬೈಕ್‌ ಸವಾರ ವಿದ್ಯಾರ್ಥಿ ಮೃತ್ಯು

Haryana Result: ಬಿಜೆಪಿಗೆ 3ನೇ ಬಾರಿ ಗದ್ದುಗೆ: ಚುನಾವಣ ಆಯೋಗಕ್ಕೆ ಕಾಂಗ್ರೆಸ್‌ ದೂರು

Haryana Result: ಬಿಜೆಪಿಗೆ 3ನೇ ಬಾರಿ ಗದ್ದುಗೆ: ಚುನಾವಣ ಆಯೋಗಕ್ಕೆ ಕಾಂಗ್ರೆಸ್‌ ದೂರು

Bigg Boss Tamil 8: ಬಿಗ್‌ ಬಾಸ್‌ ಮನೆಗೆ ಬಂದು 24 ಗಂಟೆಯೊಳಗೆ ಎಲಿಮಿನೇಟ್ ಆದ ನಟಿ

Bigg Boss Tamil 8: ಬಿಗ್‌ ಬಾಸ್‌ ಮನೆಗೆ ಬಂದು 24 ಗಂಟೆಯೊಳಗೆ ಎಲಿಮಿನೇಟ್ ಆದ ನಟಿ

Jammu Kashmir Result: ಮೆಹಬೂಬ ಮುಫ್ತಿ ಪುತ್ರಿಗೆ ಸೋಲು, National Conferenceಗೆ ಜಯ

Jammu Kashmir Result: ಮೆಹಬೂಬ ಮುಫ್ತಿ ಪುತ್ರಿಗೆ ಸೋಲು, National Conferenceಗೆ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6(1)

Kundapura: ಬಸ್ರೂರಿಗೇ ಕದಿರು ನೀಡುವ ಕೊಳ್ಕೇರಿ ಮನೆತನ

5(1)

Kundapura: ಈ ದೇವಿಯ ಊರಲ್ಲಿ ತೊಟ್ಟಿಲೇ ಕಟ್ಟುವುದಿಲ್ಲ!

2-udupi

Udupi: ಕಾರು ಢಿಕ್ಕಿಯಾಗಿ ಬೈಕ್‌ ಸವಾರ ವಿದ್ಯಾರ್ಥಿ ಮೃತ್ಯು

Geethanjali Silks: ಅ.9ರಂದು ಪುರುಷರ ಬಟ್ಟೆಗಳ ವಿಶಾಲ ವಿಭಾಗ ಗ್ರಾಹಕರಿಂದಲೇ ಉದ್ಘಾಟನೆ

Geethanjali Silks: ಅ.9ರಂದು ಪುರುಷರ ಬಟ್ಟೆಗಳ ವಿಶಾಲ ವಿಭಾಗ ಗ್ರಾಹಕರಿಂದಲೇ ಉದ್ಘಾಟನೆ

Ocean Pearl: ಅ.9: ಉಡುಪಿಯ ದಿ ಓಷಿಯನ್‌ ಪರ್ಲ್ ಟೈಮ್ಸ್‌ ಸ್ಕ್ವೇರ್‌ ಹೊಟೇಲ್‌ ಉದ್ಘಾಟನೆ

Ocean Pearl: ಅ.9: ಉಡುಪಿಯ ದಿ ಓಷಿಯನ್‌ ಪರ್ಲ್ ಟೈಮ್ಸ್‌ ಸ್ಕ್ವೇರ್‌ ಹೊಟೇಲ್‌ ಉದ್ಘಾಟನೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

farooq

Jammu Kashmir Result: ಜಮ್ಮು-ಕಾಶ್ಮೀರದ ನೂತನ ಸಿಎಂ ಹೆಸರು ಘೋಷಿಸಿದ ಫಾರೂಕ್ ಅಬ್ದುಲ್ಲಾ

Huli Karthik: ಜಾತಿ ನಿಂದನೆ ಆರೋಪ; ಹಾಸ್ಯ ನಟ ಹುಲಿ ಕಾರ್ತಿಕ್‌ ಸೇರಿ ನಾಲ್ವರ ವಿರುದ್ಧ FIR

Huli Karthik: ಜಾತಿ ನಿಂದನೆ ಆರೋಪ; ಹಾಸ್ಯ ನಟ ಹುಲಿ ಕಾರ್ತಿಕ್‌ ಸೇರಿ ನಾಲ್ವರ ವಿರುದ್ಧ FIR

7

Mangaluru: ಕಳ್ಳರ ನಿದ್ದೆಗೆಡಿಸಿದ ಮಹಿಳಾ ಸಾರಥ್ಯದ ಟೀಮ್‌!

6(1)

Kundapura: ಬಸ್ರೂರಿಗೇ ಕದಿರು ನೀಡುವ ಕೊಳ್ಕೇರಿ ಮನೆತನ

4-

Bidar: ವಿಮಾನಯಾನ ಸೇವೆ ಕುರಿತಂತೆ ಈಶ್ವರ ಖಂಡ್ರೆ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.