Watch: ಯಕ್ಷಗಾನದಲ್ಲೂ ಕೊರೊನಾ ಜಾಗೃತಿ; ಸಾಲಿಗ್ರಾಮ ಮೇಳದಿಂದ ವಿಶಿಷ್ಠ ಪ್ರಚಾರಾಂದೋಲನ

ಬಡಗುತಿಟ್ಟಿನ ಹೆಸರಾಂತ ಡೇರೆ ಮೇಳವಾದ ಸಾಲಿಗ್ರಾಮ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿಯು

Team Udayavani, Mar 17, 2020, 2:15 PM IST

ಯಕ್ಷಗಾನದಲ್ಲೂ ಕೊರೊನಾ ಜಾಗೃತಿ; ಸಾಲಿಗ್ರಾಮ ಮೇಳದಿಂದ ವಿಶಿಷ್ಠ ಪ್ರಚಾರಾಂದೋಲನ

Representative Image

ಕೋಟ: ಯಕ್ಷಗಾನ ಕಲೆ ಮನೋರಂಜನೆಯ ಜತೆ-ಜತೆಗೆ ಜನರಲ್ಲಿ ಧಾರ್ಮಿಕ, ಸಾಮಾಜಿಕ ಜಾಗೃತಿ ಮೂಡಿಸುವ ಮಾಧ್ಯಮವಾಗಿ ಶತಮಾನಗಳಿಂದ ಬೆಳೆದು ಬಂದಿದೆ.  ಇಲ್ಲಿ ಪ್ರದರ್ಶನವಾಗುವ ಪೌರಾಣಿಕ, ಸಾಮಾಜಿಕ ಪ್ರಸಂಗಗಳು ಮನೋರಂಜನೆ, ಜ್ಞಾನದ  ಜತೆಗೆ ಜನರಿಗೆ ಉತ್ತಮ ಸಾಮಾಜಿಕ ಸಂದೇಶವನ್ನು ನೀಡುತ್ತವೆ.

ಅದೇ ರೀತಿ ಕೊರೊನಾ ಎಂಬ ಮಹಾಮಾರಿ ವೈರಸ್ ವಿಶ್ವದಲ್ಲಿ ಸಾವಿರಾರು ಮಂದಿಯ ಪ್ರಾಣಾಹುತಿ ಪಡೆದು ಸಾಮಾಜಿಕ ಪಿಡುಗಾಗಿ ಮುನ್ನುಗ್ಗುತ್ತಿರುವ ಹಾಗೂ ಸರಕಾರ, ಆಡಳಿತ ವ್ಯವಸ್ಥೆ ಇದನ್ನು  ತಡೆಗಟ್ಟುವ ನಿಟ್ಟಿನಲ್ಲಿ ಸಮರೋಪಾಡಿಯಲ್ಲಿ  ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಬಡಗುತಿಟ್ಟಿನ ಹೆಸರಾಂತ ಡೇರೆ ಮೇಳವಾದ ಸಾಲಿಗ್ರಾಮ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿಯು  ತನ್ನ ಯಕ್ಷಗಾನ ಪ್ರದರ್ಶನಗಳಲ್ಲಿ  ಕೊರೊನಾ ವೈರಸ್ ಬಗ್ಗೆ  ಜನಸಾಮಾನ್ಯರಿಗೆ ಜಾಗೃತಿ ಸಂದೇಶದ ಪ್ರಚಾರಾಂದೋಲನವನ್ನು ಒಂದು ವಾರದಿಂದ ಮೇಳದ ಚಂದ್ರಮುಖಿ‌ ಸೂರ್ಯಸಖಿ ಪ್ರಸಂಗದ ಮಧ್ಯದಲ್ಲಿ  ನೀಡುತ್ತಿದ್ದು ಸಾವಿರಾರು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

ಯಾವುದೇ ಯಕ್ಷಗಾನ ಪ್ರದರ್ಶನದ ಮಧ್ಯದಲ್ಲಿ ಸೇವಾಕರ್ತರು ಹಾಗೂ ಪ್ರೇಕ್ಷಕರಿಗೆ ಧನ್ಯವಾದ ಸಮರ್ಪಿಸಿ, ಮೇಳದ ಮುನ್ನೋಟವನ್ನು ತಿಳಿಸುವ ಪರಿಪಾಠವಿದೆ. ಇದೀಗ ಈ ಮುನ್ನೋಟದ ಜತೆಗೆ ಎರಡು ನಿಮಿಷಗಳ ಕಾಲ ಕೊರೊನಾ ವೈರಸ್ ಕುರಿತು ಎಚ್ಚರಿಕೆ ಸಂದೇಶವನ್ನು ಪ್ರೇಕ್ಷಕರಿಗೆ ನೀಡುವ ಕಾರ್ಯವನ್ನು ಮೇಳ ಮಾಡುತ್ತಿದ್ದು,  ಪ್ರಧಾನ ವೇಷಧಾರಿಯಾದ ಬಳ್ಕೂರು ಕೃಷ್ಣಯ್ಯಾಜಿಯವರು ಭಾಷಣದ ಮೂಲಕ, ಕೊರೊನಾ ಖಾಯಿಲೆ ಮನುಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.

ಆದರೆ ವಿಶ್ವವನ್ನು ಅವಲೋಕಿಸಿದಾಗ ಭಾರತದಲ್ಲಿ ಇದರ ಪ್ರಮಾಣ ಸಾಕಷ್ಟು ಕಡಿಮೆ ಇದೆ ಎನ್ನುವುದೇ ಸಂತಸದ ಸಂಗತಿ.ಆದರೆ ನಾವು ಮೈಮರೆಯುವಂತಿಲ್ಲ, ಕೆಮ್ಮ, ಜ್ವರ, ನೆಗಡಿ ಮುಂತಾದ ಲಕ್ಷಣಗಳಿದ್ದರೆ ಜಾಗೃತಿವಹಿಸಬೇಕು ಹಾಗೂ ಅಂತವರಿಂದ ದೂರ ಇರಬೇಕು. ತಂಪು ಪಾನೀಯ ಮುಂತಾದ ವಸ್ತುಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು. ಆಹಾರ ಸೇವಿಸುವಾಗ ಆಗಾಗ ಕೈತೊಳೆದುಕೊಳ್ಳಬೇಕು, ಆರೋಗ್ಯದ ಸಮಸ್ಯೆಯಾದರೆ ತಪಾಸಣೆಗೆ ಒಳಪಡಬೇಕು ಎಂದು ಭಾಷಣದ ಮೂಲಕ ಜನರಿಗೆ ಜಾಗೃತಿ ಸಂದೇಶ ತಿಳಿಸುತ್ತಿದ್ದಾರೆ.

ಯಕ್ಷಗಾನ ಅತ್ಯಂತ ಜನಸಾಮಾನ್ಯರ ಮಾಧ್ಯಮವಾಗಿರುವುದರಿಂದ ಹಾಗೂ ಸಾಮಾಜಿಕ ಮಾಧ್ಯಮ, ಟಿ.ವಿ. ಪತ್ರಿಕೆಗಳನ್ನು ಅವಲೋಕಿಸದಿರುವ  ಎಷ್ಟೋ ಮಂದಿ ಗ್ರಾಮಂತರ ಭಾಗದ ಸಾಮಾನ್ಯ ಜನರು ಇದನ್ನು ನೋಡುವುದರಿಂದ ಅವರು ಈ ಬಗ್ಗೆ ಎಚ್ಚರವಾಗಬೇಕು ಹಾಗೂ  ಸರಕಾರದ ಜಾಗೃತಿ ಪ್ರಚಾರಕ್ಕೆ  ನಮ್ಮಿಂದಾದ ಅಳಿಲು ಸೇವೆಯನ್ನು  ನೀಡಬೇಕು ಎನ್ನುವ ನಿಟ್ಟಿನಲ್ಲಿ ಈ ಆಂದೋಲನವನ್ನು ಹಮ್ಮಿಕೊಂಡಿದ್ದೇವೆ. ಈ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು  ಸಾಲಿಗ್ರಾಮ ಮೇಳದ ಯಜಮಾನರಾದ ಪಳ್ಳಿ ಕಿಶನ್ ಹೆಗ್ಡೆ ತಿಳಿಸಿದ್ದಾರೆ.

*ಸ್ಟೋರಿ, ವೀಡಿಯೋ: ರಾಜೇಶ್ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.