Kundapura ಭಾಗದ ಅಪರಾಧ ಸುದ್ದಿಗಳು
Team Udayavani, May 7, 2024, 9:15 PM IST
ಕೆಂಚನೂರು: ಕೆರೆಗೆ ಬಿದ್ದು ಯುವಕ ಸಾವು
ಕುಂದಾಪುರ: ಕೆರೆಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋದ ಕೆಂಚನೂರು ಗ್ರಾಮದ ವೆಂಕ ಅವರ ಪುತ್ರ ಸುಧೀಂದ್ರ (31) ಅವರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.
ಮನೆಯಿಂದ ಹೋದ ಅವರು ಮರಳಿ ಬಾರದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಕೆರೆ ಸಮೀಪ ಬಂಡೆಯ ಬಳಿ ಚಪ್ಪಲಿ ಹಾಗೂ ಗಾಳದ ಬೆಂಡು ನೀರಿನಲ್ಲಿ ಪತ್ತೆಯಾಗಿತ್ತು. ಅನುಮಾನಗೊಂಡು ಈಜುಗಾರರನ್ನು ಕರೆಸಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂದಾವರ: ನದಿಗೆ ಬಿದ್ದು ಅಪರಿಚಿತ ಸಾವು
ಕುಂದಾಪುರ: ಕಂದಾವರ ಪರಿಸರದಲ್ಲಿ ತಿರುಗಾಡಿಕೊಂಡಿದ್ದ ಸುಮಾರು 35 ಪ್ರಾಯದ ಅಪರಿಚಿತ ವ್ಯಕ್ತಿ ಸಟ್ವಾಡಿ ತಿರುವಿನಲ್ಲಿರುವ ನದಿಗೆ ನೀರು ಕುಡಿಯಲು ಹೋಗಿ ಆಯತಪ್ಪಿ ನೀರಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಂದಾವರ ಪಂಚಾಯತ್ ಅಧ್ಯಕ್ಷೆ ಅನುಪಮಾ ಯು. ಅವರು ಕುಂದಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಬಸ್ಗೆ ಢಿಕ್ಕಿ; ಬೈಕ್ ಸವಾರರಿಗೆ ಗಾಯ
ಕುಂದಾಪುರ: ಸರ್ಜನ್ ಆಸ್ಪತ್ರೆ ಎದುರಿನ ರಾ.ಹೆ. 66ರಲ್ಲಿ ಖಾಸಗಿ ಬಸ್ಗೆ ಹಿಂದಿನಿಂದ ಢಿಕ್ಕಿಯಾದ ಬೈಕ್ ಪಲ್ಟಿಯಾಗಿ ಸವಾರ ಪ್ರಸನ್ನ ಹಾಗೂ ಸಹ ಸವಾರೆ ಸುಮಿತ್ರಾ ಗಾಯಗೊಂಡ ಘಟನೆ ಮೇ 7ರ ಬೆಳಗ್ಗೆ 7.55ರ ಸುಮಾರಿಗೆ ಸಂಭವಿಸಿದೆ. ಇಬ್ಬರನ್ನೂ ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಚಾಲಕ ಕೆ. ಲಕ್ಷ್ಮಣ ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.