Raghupathi Bhat: ಹಿಜಾಬ್ ನಿಷೇಧ ಧರ್ಮಾಧಾರಿತ ಅಲ್ಲ, ಸಮವಸ್ತ್ರ ಆಧಾರಿತ: ಭಟ್
Team Udayavani, May 31, 2024, 7:05 AM IST
ಕುಂದಾಪುರ: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧಾರಣೆ ನಿಷೇಧ ಮಾಡಿದ್ದು ಧರ್ಮಾಧಾರಿತವಾಗಿ ಅಲ್ಲ. ಸಮವಸ್ತ್ರ ಆಧಾರಿತವಾಗಿ. ಒಂದೂವರೆ ವರ್ಷ ಹಿಜಾಬ್ ಬದಿಗಿಟ್ಟು ಸಮವಸ್ತ್ರದಲ್ಲಿ ಆಗಮಿಸುತ್ತಿದ್ದ ಆಕೆ ಕಾಲೇಜಿನ ಶಿಸ್ತು ತಪ್ಪಿಸಿ ಸಂಘಟನೆಯ ಕುಮ್ಮಕ್ಕಿನಿಂದ ಕೊನೆಯ ಎರಡು ತಿಂಗಳು ಹಿಜಾಬ್ ಧರಿಸಿದ್ದರಿಂದ ಹೀಗೆಲ್ಲಾ ಆಯಿತು ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಹಿಜಾಬ್ ಪರ ಹೋರಾಟಗಾರ್ತಿ ಅಲಿಯಾ ಅಸ್ಸಾದಿ ಸಾಮಾಜಿಕ ಜಾಲತಾಣದಲ್ಲಿ ರಘುಪತಿ ಭಟ್ ಬಿಜೆಪಿಯಿಂದ ಉಚ್ಚಾಟನೆಗೊಂಡ ಕುರಿತು ಹಾಕಿದ ಪೋಸ್ಟ್ಗೆ ಪ್ರತಿಕ್ರಿಯಿಸಿ, ಆಕೆ ಒಳ್ಳೆ ವಿದ್ಯೆ ಕಲಿಯಲಿ. ಆಗ ಧರ್ಮಾಂಧತೆ ಬರುವುದಿಲ್ಲ. ದೇಶದ್ರೋಹದ ಚಿಂತನೆ ಬರುವುದಿಲ್ಲ ಎಂದಿದ್ದಾರೆ. ನೈಋತ್ಯ ಪದವೀಧರ ಕ್ಷೇತ್ರದಲ್ಲಿ 4 ಪ್ರಬಲ ಅಭ್ಯರ್ಥಿಗಳಿದ್ದು ವ್ಯಕ್ತಿಗಳ ಸಾಧನೆ ಆಧರಿಸಿ ನನಗೆ ಸುಶಿಕ್ಷಿತ ಜನ ಮತ ನೀಡಲಿದ್ದಾರೆ. ಈ ಮೊದಲು ಸಾರ್ವಜನಿಕ ಕೆಲಸಗಳಾದ ಕಾರಣ ಇನ್ನು ಮುಂದೆಯೂ ನನ್ನಿಂದ ಜನಸೇವೆ ಆಗಲಿದೆ ಎಂದು ನಂಬಿಕೆ ಇರಲಿದೆ. ನಾನು ಟೆಸ್ಟೆಡ್ ಗೂಡ್ಸ್. ನನ್ನದು ಹಿಂದೂ ಸಿದ್ಧಾಂತ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Google 25th Birthday! ಗ್ಯಾರೇಜ್ನಿಂದ ಮೌಂಟ್ವಿವ್ವರೆಗೆ….ಗೂಗಲ್ ರಜತ ಸಂಭ್ರಮ
Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್ ಖಾನ್
Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್ ಬಸ್’
Israel: ಬೈರೂತ್ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ಸಾವು: ಇಸ್ರೇಲ್ ಸೇನೆ
Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.