![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Dec 28, 2023, 12:23 AM IST
ಗಂಗೊಳ್ಳಿ: ಇಲ್ಲಿನ ದಾಕುಹಿತ್ಲು ರಿಂಗ್ ರೋಡ್ನಲ್ಲಿ ಟಾಟಾ ಏಸ್ ವಾಹನದ ಮೂಲಕ ಅಕ್ರಮವಾಗಿ ಮರಳು ಸಾಗಿಸುತ್ತಿದ್ದುದನ್ನು ಎಎಸ್ಐ ಮಂಜುನಾಥ, ಸಿಬಂದಿ ನಾಗರಾಜ ಹಾಗೂ ರಾಮ ಅವರು ಡಿ. 27ರ ಮುಂಜಾನೆ 5 ಗಂಟೆ ಸುಮಾರಿಗೆ ಪತ್ತೆ ಹಚ್ಚಿದ್ದಾರೆ.
ಈ ವೇಳೆ ಮರಳು ಸಾಗಿಸುತ್ತಿದ್ದ ವಾಹನವನ್ನು ತೊರೆದು ಚಾಲಕ ಪರಾರಿಯಾಗಿದ್ದಾನೆ. ವಾಹನದಲ್ಲಿ ಚೀಲದಲ್ಲಿ ತುಂಬಿಸಲಾಗಿದ್ದ ಅರ್ಧ ಯೂನಿಟ್ ಮರಳನ್ನು ವಶಕ್ಕೆ ಪಡೆಯಲಾಗಿದೆ.
ಈ ಮರಳನ್ನು ಆರೋಪಿ ಗುರುರಾಜ ಖಾರ್ವಿಯು ಎಲ್ಲಿಂದಲೋ ಕದ್ದು ತಂದು, ಮಾರಾಟಕ್ಕೆ ಕೊಂಡೊಯ್ಯುತ್ತಿದ್ದುದಾಗಿ ತಿಳಿದು ಬಂದಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.