![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Dec 23, 2023, 1:36 AM IST
ಗಂಗೊಳ್ಳಿ: ನೂಜಾಡಿ ಗ್ರಾಮ ಬಚ್ಚು ಅವರು ಮಣ್ಣಿನ ರಸ್ತೆ ಬದಿ ಕಟ್ಟಿಗೆ ಕಡಿಯುತ್ತಿದ್ದಾಗ ಅವರ ಮಗ ಸಂತೋಷ ಅವರು ಕಾರನ್ನು ಹಿಮ್ಮುಖವಾಗಿ ಚಲಾಯಿಸಿದ್ದರಿಂದ ಬಚ್ಚು ಗಂಭೀರ ಗಾಯಗೊಂಡಿದ್ದಾರೆ.
ಮನೆಯ ಹಿಂಬದಿಯ ಮಣ್ಣು ರಸ್ತೆಯಲ್ಲಿ ಒಮ್ಮೆಲೇ ಹಿಂದಕ್ಕೆ ಚಲಾಯಿಸಿದ ಪರಿಣಾಮ ರಸ್ತೆಯ ಬದಿಯಲ್ಲಿ ಕಟ್ಟಿಗೆ ಕಡಿಯುತ್ತಿದ್ದ ಬಚ್ಚು ಅವರಿಗೆ ಕಾರು ಢಿಕ್ಕಿ ಹೊಡೆದಿದೆ.
ರಸ್ತೆಗೆ ಬಿದ್ದ ಅವರ ಕಾಲುಗಳ ಮೇಲೆ ಕಾರಿನ ಚಕ್ರವು ಚಲಿಸಿದ ಕಾರಣ ಮೂಳೆ ಮುರಿತವಾಗಿದೆ. ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.