ಅನುದಾನ ಬಳಕೆ ಮಾನದಂಡ ಬದಲಾವಣೆಗೆ ಗ್ರಾ.ಪಂ.ಗಳ ಆಗ್ರಹ


Team Udayavani, Sep 7, 2021, 7:10 AM IST

ಅನುದಾನ ಬಳಕೆ ಮಾನದಂಡ ಬದಲಾವಣೆಗೆ ಗ್ರಾ.ಪಂ.ಗಳ ಆಗ್ರಹ

ಸಾಂದರ್ಭಿಕ ಚಿತ್ರ

ಉಪ್ಪುಂದ: ಕೇಂದ್ರ ಹಣಕಾಸು ಆಯೋಗದಿಂದ ಪ್ರತೀ ಪಂಚಾಯತ್‌ಗೆ ಬಿಡುಗಡೆಯಾಗುವ ಅನುದಾನದ ವಿನಿಯೋಗಕ್ಕೆ ವಿಧಿಸಿರುವ ಮಾನ ದಂಡಕ್ಕೆ ಕರಾವಳಿಯ ಬಹುತೇಕ ಗ್ರಾಮ ಪಂಚಾಯತ್‌ಗಳು ಆಕ್ಷೇಪ ವ್ಯಕ್ತ ಪಡಿಸಿವೆ. ಈ ಮಾರ್ಗಸೂಚಿಯು ಕುಡಿಯುವ ನೀರು ಮತ್ತು ನೈರ್ಮಲ್ಯ ಬಿಟ್ಟರೆ ಗ್ರಾಮಗಳ ಇನ್ನಿತರ ಅಭಿವೃದ್ಧಿಗೆ ಅಡ್ಡಿಯಾಗಿದೆ ಎನ್ನುವ ಕಳವಳ ಅವುಗಳದು.

ಕೇಂದ್ರ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗುವುದು 15ನೇ ಹಣಕಾಸು ಆಯೋಗದ ಶಿಫಾ ರಸಿನ ಪ್ರಕಾರ, ಆಯಾ ಪಂಚಾಯತ್‌ನ ಜನಸಂಖ್ಯೆಯನ್ನು ಆಧರಿಸಿ ಮಾರ್ಗಸೂಚಿಯ ಪ್ರಕಾರ ಅನುದಾನದ ಶೇ. 60ರಲ್ಲಿ ಶೇ. 30ರಷ್ಟನ್ನು ಕುಡಿಯುವ ನೀರು ಸರಬರಾಜು ಮತ್ತು ನಿರ್ವಹಣೆಗೆ, ಶೇ. 30ರಷ್ಟನ್ನು ನೈರ್ಮಲೀಕರಣಕ್ಕೆ ಮಾತ್ರ ಬಳಸಬೇಕು. ಇನ್ನುಳಿದ ಶೇ. 40ರಲ್ಲಿ ಶೇ. 25ರಷ್ಟನ್ನು ಪರಿಶಿಷ್ಟ ಜಾತಿ, ಪಂಗಡಕ್ಕೂ ಶೇ. 5ರಷ್ಟನ್ನು ಅಂಗವಿಕಲರ ಶ್ರೇಯೋಭಿವೃದ್ಧಿಗೂ ವಿನಿಯೋಗಿಸಬೇಕು.

ಹಿಂದಿನ ಯೋಜನೆಯಲ್ಲೇ ವಿನಿಯೋಗ :

ಉಡುಪಿ ಜಿಲ್ಲೆಯಲ್ಲಿ ಜಲಜೀವನ್‌ ಮಿಷನ್‌, ವಾರಾಹಿ ಯೋಜನೆಯಿಂದಾಗಿ ಶೇ. 100ರಷ್ಟು ಕುಡಿಯುವ ನೀರು ಸರಬರಾಜು ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾ.ಪಂ.ಗಳು 14ನೇ ಹಣಕಾಸು ಯೋಜನೆಯಡಿ ನೀರು, ನೈರ್ಮಲೀಕರಣಕ್ಕೆ ಒತ್ತು ನೀಡಿವೆ. ಈಗ ಮತ್ತೆ ಅದೇ ಕೆಲಸಗಳಿಗೆ ಬಹುಭಾಗ ಮೀಸಲಿಟ್ಟರೆ ಇತರ ಅಭಿವೃದ್ಧಿ ಹೇಗೆ ಎನ್ನುವ ಪ್ರಶ್ನೆ ಗ್ರಾ.ಪಂ.ಗಳದ್ದು.

ಎಷ್ಟು ಪಂಚಾಯತ್‌ಗಳು ಸುಸ್ಥಿರ? :

ಉಡುಪಿ ಜಿಲ್ಲೆಯಲ್ಲಿ 155 ಗ್ರಾ.ಪಂ.ಗಳಿವೆ. ಒಟ್ಟು 132 ಗ್ರಾ.ಪಂ.ಗಳು ಘನ-ದ್ರವ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಆರಂಭಿಸಿವೆ. ಕೆಲವು ಪಂಚಾಯತ್‌ಗಳು ಗ್ರಾಮ ಘಟಕದಡಿ ವಿಲೇವಾರಿ ಮಾಡುತ್ತಿವೆ. ದ.ಕ. ಜಿಲ್ಲೆಯಲ್ಲಿ 223 ಗ್ರಾ.ಪಂ.ಗಳಿವೆ. ಮಂಗಳೂರು, ಬಂಟ್ವಾಳ ವ್ಯಾಪ್ತಿಯ ಕೆಲವೆಡೆ ಮಾತ್ರ ನೀರಿನ ಸಮಸ್ಯೆ ಇದೆ. ಸಮಸ್ಯೆ ಒಟ್ಟು 10-12 ಗ್ರಾ.ಪಂ.ಗಳಲ್ಲಿ ಇರ

ಬಹುದು. 28 ಗ್ರಾ.ಪಂ.ಗಳಲ್ಲಿ ಸಮರ್ಪಕವಾಗಿ, ಇನ್ನು 47 ಗ್ರಾ.ಪಂ. ಮಾತ್ರವಲ್ಲದೆ, ಹೊಸದಾಗಿ 23 ತ್ಯಾಜ್ಯ ವಿಲೇ ಘಟಕಗಳು ಮಂಜೂರಾಗಿವೆ. ಸ್ವಚ್ಛತೆ, ನೀರಿನ ಸಮಸ್ಯೆ ಇರದಿದ್ದರೂ ನಿರ್ವಹಣೆಗೆ ಸ್ವಲ್ಪ ಅನುದಾನ ಬೇಕಿರುತ್ತದೆ.

ಗ್ರಾ.ಪಂ.ಗಳ ವಾದವೇನು? :

ಮಾರ್ಗಸೂಚಿ ಪ್ರಕಾರ ಅನುದಾನದ ಶೇ. 60ರಲ್ಲಿ ಬಹ್ವಂಶ ಬಳಕೆಯಾದರೆ ಉಳಿಯು ವುದು ಶೇ. 15ರಷ್ಟು ಮಾತ್ರ. ಅಂದರೆ 1 ಕೋ.ರೂ. ಅನುದಾನ ಸಿಕ್ಕಿದರೆ ಕೇವಲ 15 ಲಕ್ಷ ರೂ. ಮಾತ್ರ ಇತರ ಅಭಿವೃದ್ಧಿಗಳಿಗೆ  ಸಿಗುತ್ತದೆ. ಈ ನಿಬಂಧನೆಗಳಿಂದ ಕುಡಿಯುವ ನೀರು, ನೈರ್ಮಲ್ಯ ವಿಚಾರದಲ್ಲಿ ಅಭಿವೃದ್ಧಿ ಸಾಧಿಸಿರುವ ಗ್ರಾ.ಪಂ.ಗಳಿಗೆ ಇತರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಉಪಯೋಗಿಸಲು ಅಡ್ಡಿಯಾಗುತ್ತದೆ. ಈ ಅಡ್ಡಿಯನ್ನು ನಿವಾರಿಸಿ ಕುಡಿಯುವ ನೀರು, ನೈರ್ಮಲ್ಯ ವಿಚಾರದಲ್ಲಿ ಅಭಿವೃದ್ಧಿಯಾಗಿರುವ ಗ್ರಾ.ಪಂ.ಗಳಿಗೆ ಅನುದಾನವನ್ನು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲು ಅವಕಾಶ ನೀಡಬೇಕು; ಅದಕ್ಕಾಗಿ ಮಾರ್ಗಸೂಚಿಯಲ್ಲಿ ಬದಲಾವಣೆ ತರಬೇಕು ಎಂಬುದು ಆಗ್ರಹ. ಇಲ್ಲದಿದ್ದರೆ ಹಲವು ಗ್ರಾ.ಪಂ.ಗಳಲ್ಲಿ ಈ ಅನುದಾನವನ್ನು ಬಳಕೆ ಮಾಡಲಾಗದೆ ಹಿಂದಿರುಗಿಸಬೇಕಾದ ಸ್ಥಿತಿ ಉಂಟಾಗುತ್ತದೆ ಎನ್ನುತ್ತಾರೆ ಶಿರೂರು ಗ್ರಾ.ಪಂ. ಸದಸ್ಯ ನಾಗೇಶ ಅಳ್ವೆಗದ್ದೆ.

ಪ್ರತೀ ಪಂಚಾಯತ್‌ನಿಂದಲೂ ಏನೆಲ್ಲ ಅಭಿವೃದ್ಧಿಗೆ ಒತ್ತು ನೀಡಬೇಕೋ ಆ ಬಗ್ಗೆ ಜಿ.ಪಂ. ಸಿಇಒಗಳಿಗೆ ಪತ್ರ ಬರೆದು, ಪ್ರತಿಯನ್ನು ನನಗೆ ಕಳುಹಿಸಿಕೊಡಲಿ. ಅದರ ಬಗ್ಗೆ ನಾವು ನಮ್ಮ ಕಡೆಯಿಂದ ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡುತ್ತೇವೆ.  ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಸಚಿವ

ಕೇಂದ್ರದ ಬಳಕೆ ಸೂತ್ರವನ್ನು ಬದಲಾಯಿಸಲಾಗದ್ದರಿಂದ ಅದನ್ನೇ ಅನುಸರಿಸಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಈ ಅನುದಾನದ ಒಂದು ಭಾಗವನ್ನು ರಾಜ್ಯ ಸರಕಾರವು ವಿದ್ಯುತ್‌ ಬಿಲ್‌ಗಾಗಿ ಪ್ರತ್ಯೇಕವಾಗಿ ಇರಿಸುವ ಎಸ್ಕ್ರೊ  ಖಾತೆಗೆ ವರ್ಗಾಯಿಸುತ್ತಿದೆಯಲ್ಲ? ಅಂದರೆ, ರಾಜ್ಯ ಸರಕಾರಕ್ಕೆ ಕೇಂದ್ರದ ಸೂತ್ರವನ್ನು ಬದಲಿಸಲು ಸಾಧ್ಯ ಎಂದಾಯಿತು. ಆದ್ದರಿಂದ ಮಾರ್ಗಸೂಚಿಯನ್ನು ಬದಲಿಸಲು ಶಾಸಕರು, ಸಂಸದರು ಪ್ರಯತ್ನಿಸಬೇಕು.  ಜನಾರ್ದನ ಮರವಂತೆ, ಪಂ. ರಾಜ್‌ ಒಕ್ಕೂಟದ ಸಂಪನ್ಮೂಲ ವ್ಯಕ್ತಿ

 

-ಕೃಷ್ಣ ಬಿಜೂರು

 

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಡಾಮಕ್ಕಿ ಗ್ರಾ.ಪಂ. ಆಸ್ತಿಗೆ ಹಾನಿ: ದೂರು ದಾಖಲು

ಮಡಾಮಕ್ಕಿ ಗ್ರಾ.ಪಂ. ಆಸ್ತಿಗೆ ಹಾನಿ: ದೂರು ದಾಖಲು

11

Missing Case: ಪತಿ ನಾಪತ್ತೆ; ಪತ್ನಿಯ ದೂರು

Gangolli: ಸ್ಕೂಟರ್‌ಗೆ ಕಾರು ಢಿಕ್ಕಿ ; ಮೂವರಿಗೆ ಗಾಯ

Gangolli: ಸ್ಕೂಟರ್‌ಗೆ ಕಾರು ಢಿಕ್ಕಿ ; ಮೂವರಿಗೆ ಗಾಯ

9

Kota: ಶಿರಿಯಾರ; ಅಕ್ರಮ ಗಣಿಗಾರಿಕೆಗೆ ದಾಳಿ

POlice

Gangolli: ಅಕ್ರಮ ಕೆಂಪು ಕಲ್ಲು ಸಾಗಾಟ; ಪ್ರಕರಣ ದಾಖಲು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.