Heart attack: ಬಿದ್ಕಲ್ ಕಟ್ಟೆ; ಬಸ್ ಸ್ಟ್ಯಾಂಡ್ ಸಮೀಪ ಹೃದಯಾಘಾತದಿಂದ ವ್ಯಕ್ತಿ ಸಾವು
Team Udayavani, Oct 14, 2023, 12:14 PM IST
ತೆಕ್ಕಟ್ಟೆ: ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬಿದ್ಕಲ್ ಕಟ್ಟೆ ಪ್ರಮುಖ ಭಾಗದ ಬಸ್ ಸ್ಟ್ಯಾಂಡ್ ಸಮೀಪ ಶನಿವಾರ(ಅ.14 ರಂದು) ನಡೆದಿದೆ.
ಮೃತರನ್ನು ಗುಡ್ಡೆಅಂಗಡಿ ಹಡ್ಕನಿವಾಸಿ ಶೀನ ದೇವಾಡಿಗ ಎಂದು ಗುರುತಿಸಲಾಗಿದೆ.
ಶೀನ ದೇವಾಡಿಗ ಅವರು ತನ್ನ ದ್ವಿಚಕ್ರ ವಾಹನ ನಿಲ್ಲಿಸಿ ವಿಶ್ರಾಂತಿಗೆಂದು ಬಿದ್ಕಲ್ ಕಟ್ಟೆ ಪ್ರಮುಖ ಭಾಗದ ಬಸ್ ಸ್ಟ್ಯಾಂಡ್ ಸಮೀಪ ಕೂತಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿ ಅಲ್ಲೇ ಕುಸಿದು ಬಿದ್ದಿದ್ದಾರೆ. ಇದನ್ನು ನೋಡಿದ ಸಾರ್ವಜನಿಕರು ತತ್ ಕ್ಷಣವೇ ತುರ್ತು ಚಿಕಿತ್ಸೆ ನೀಡಲು ಆಸ್ಪತ್ರೆಗೆ ರವಾನಿಸಿದ್ದಾರೆ. ವೈದ್ಯರು ತುರ್ತು ಚಿಕಿತ್ಸೆ ನೀಡಿದರಾದರೂ ಅಷ್ಟರಲ್ಲಿಯೇ ಅವರು ಅಸುನೀಗಿದ್ದರೆಂದು ತಿಳಿದು ಬಂದಿದೆ.
ಮಾನವೀಯತೆ ಮೆರೆದ ಸಾರ್ವಜನಿಕರು : ವೃತ್ತ ವ್ಯಕ್ತಿಯ ಶರ್ಟ್ ನಲ್ಲಿ ಆಧಾರ್ ಕಾರ್ಡ್ ನೋಡಿ ಗುರುತು ಪತ್ತೆ ಹಚ್ಚಿ, ಸಂಬಂಧಪಟ್ಟವರ ಗಮನಕ್ಕೆ ತಂದರು. ನಂತರ ಸ್ಥಳೀಯರಾದ ಸುಭಾಸ್ ಶೆಟ್ಟಿ ಹಾಗೂ ನಾಗರಾಜ್ ಶೆಟ್ಟಿ ಗಾವಳಿ ಅವರು ಮಾನವೀಯವಾಗಿ ಸ್ಪಂದಿಸಿ, ತನ್ನ ಸ್ವಂತ ವಾಹನದಲ್ಲಿಯೇ ಮೃತರ ಪಾರ್ಥಿವ ಶರೀರವನ್ನು ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.