Karkala: ಶಿರ್ಲಾಲು ಕಾಡಿನಲ್ಲಿದೆ ಪ್ರಾಚೀನ ಹೆರಿಗೆ ಕಲ್ಲು!

ಪಾರಂಪರಿಕ ಹೆರಿಗೆ ಪದ್ಧತಿಗೆ ಸಾಕ್ಷಿಯಾದ ಪೆದ್ಬೆತಿ ಕಲ್ಲು; ಪ್ರಸವಕ್ಕೆ ಅನುಕೂಲವಾಗುವ ವಿನ್ಯಾಸ

Team Udayavani, Oct 17, 2024, 3:23 PM IST

9

ಅಂಡಾರು ಸಮೀಪ ಕಾಡಿನಲ್ಲಿರುವ ಪೆದ್ಬೆತಿ ಕಲ್ಲು,

ಕಾರ್ಕಳ: ಪ್ರಾಚೀನ ಕಾಲದಲ್ಲಿ ದೇಶಿಯ ವೈದ್ಯ ಪದ್ಧತಿ ಮೂಲಕ ಹೆರಿಗೆಗಳು ನಡೆಯುತ್ತಿದ್ದವು. ಅದರ ಪಳೆಯುಳಿಕೆ ಎಂಬಂತೆ ಕಾರ್ಕಳ ತಾಲೂಕಿನ ಅಂಡಾರಿನಲ್ಲೊಂದು (ಶಿರ್ಲಾಲು) ವಿಶೇಷ ಕಲ್ಲಿದೆ. ಇದು ಹಿರಿಯರ ನಂಬಿಕೆಯ ಪೆದೆ³ತಿ ಕಲ್ಲು. ಮಹಿಳೆಯೊಬ್ಬಳು ಕುಳಿತು ಪ್ರಸವಿಸುವ ಮಾದರಿಯ ಕಲ್ಲಿದು. ವಿಶಿಷ್ಟ ಸಂಪ್ರದಾಯ, ಪದ್ಧತಿಗೆ ಸಾಕ್ಷಿಯಾಗಿರುವ ಕಲ್ಲು ಈಗ ಅಳಿವಿನಂಚಿನಲ್ಲಿದೆ.

ಆದಿವಾಸಿಗಳ ಹೆಚ್ಚು ವಾಸವಿದ್ದ ಜಾಗ
ಅಂಡಾರು ಸಮೀಪ ಬೈತಾಳ ಶಾಲೆಯಿಂದ 8 ಕಿ.ಮೀ. ದೂರದಲ್ಲಿ ಈ ಕಲ್ಲಿದೆ. ಅಜ್ಜಿಕುಂಜ ರಸ್ತೆ ಬಳಿಯ ಅಭಯಾರಣ್ಯದೊಳಗೆ ಈ ಕಲ್ಲು ಕಾಣ ಸಿಗುತ್ತದೆ. ಆದಿವಾಸಿಗಳೆ ಈ ಭಾಗದಲ್ಲಿ ಹೆಚ್ಚಾಗಿ ವಾಸವಿದ್ದರು. ಆ ದಿನಗಳಲ್ಲಿ ಮಹಿಳೆಯರು ಪ್ರಸವ ವೇದನೆ ಸಂದರ್ಭ ಹೆರಿಗೆಗಾಗಿ ಈ ಕಲ್ಲಿನ ಬಳಿ ಬರುತಿದ್ದರು ಎನ್ನುವ ಪ್ರತೀತಿಯಿದೆ.

ಮುಂದೆ ಇಲ್ಲಿ ಸಂಪ್ರದಾಯವೊಂದು ಪಾಲನೆಯಾಗಿ ಜಾರಿಗೆ ಬಂದಿದೆ. ಪ್ರಸವ ವೇದನೆ ಸಂದರ್ಭ ಇಲ್ಲಿನ ಕಲ್ಲಿನ ಮೂರ್ತಿಗೆ ಹರಕೆ ಹೇಳಲಾಗುತ್ತದೆ. ಹಿರಿಯರು ಹೇಳುವ ಪ್ರಕಾರ ಅವಲಕ್ಕಿ ಹರಕೆ ಇಲ್ಲಿ ಕಲ್ಲಿಗೆ ಸಮರ್ಪಣೆಯಾಗುತ್ತಿತ್ತು.

ಸರ್ವ ಋತುವಿನಲ್ಲಿ ತೋಡಲ್ಲಿ ನೀರು
ಬಂಡೆ ಕಲ್ಲಿನ ಬದಿಯಲ್ಲಿ 2 ಅಡಿ ಎತ್ತರದ ಮೂರ್ತಿ ಇದೆ. ಇದು ಮಹಿಳೆ ಕುಳಿತು ಹೆರಿಗೆ ಮಾಡುವ ವಿಧಾನದ ಮೂರ್ತಿಯಾಗಿದೆ. ಅಲ್ಲಿರುವ ಬಂಡೆಯ ಮೇಲೆ ಸಮತಟ್ಟಿದೆ. ಪಕ್ಕದಲ್ಲೇ ಸಣ್ಣ ತೋಡು ಹರಿಯುತ್ತಿದೆ. ಇಲ್ಲಿ ವರ್ಷದ ಎಲ್ಲ ಋತುಗಳಲ್ಲಿ ನೀರು ಹರಿಯುತ್ತಿರುತ್ತದೆ. ಹಿಂದೆ ಹೆರಿಗೆ ತೊಂದರೆಗಳಿಗೆ ಇಲ್ಲಿ ಪ್ರಾರ್ಥಿಸಿ ಅದಾದ ಬಳಿಕ ಸುಗಮ ಹೆರಿಗೆ ಆದ ಬಳಿಕ ಅಲ್ಲಿಗೆ ತೆರಳಿ ಹರಕೆ ಸಲ್ಲಿಸುತ್ತಿದ್ದರು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.

ಕಾಡಿನೊಳಗಿನ ಅನಾಥ ಕಲ್ಲು
ಕಾಲ ಕಳೆದಂತೆ ಆಧುನಿಕತೆ ಈ ಪ್ರದೇಶವನ್ನು ಪ್ರವೇಶಿಸಿದೆ. ಇಲ್ಲಿರುವ ಕಲ್ಲಿನ ಆರಾಧನೆಯೂ ಕಡಿಮೆಯಾಗುತ್ತ ಬಂದಿದೆ. ಬಳಿಕ ಈ ಕಲ್ಲಿರುವ ಕಡೆ ತೆರಳುವವರು ಇಲ್ಲದೆ ಅನಾಥವಾಗಿದೆ. ಈ ನಿಗೂಢ ಪ್ರದೇಶ ಅಭಯಾರಣ್ಯ ವ್ಯಾಪ್ತಿಗೆ ಒಳಪಟ್ಟಿದೆ. ಅರಣ್ಯ ಇಲಾಖೆ, ಪೊಲೀಸರ ಅನುಮತಿ ಇಲ್ಲದೆ ಅತ್ತ ಕಡೆ ಸುಳಿದಾಡುವಂತಿಲ್ಲ. ಈ ಹಿಂದೆ ಇದು ನಕ್ಸಲ್‌ ಬಾಧಿತ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿತ್ತು.

ಪ್ರಾಚೀನ ಸಾಕ್ಷ್ಯ ಉಳಿಯಲಿ; ಸಂರಕ್ಷಣೆ ಕಾರ್ಯ ನಡೆಯಲಿ
ಪ್ರಾಚೀನ ವೈದ್ಯಪದ್ಧತಿ ಕಣ್ಮರೆಯಾಗುತ್ತಿದೆ. ಆಧುನಿಕತೆಯಿಂದ ಹಿಂದಿನ ಕಾಲದ ಪದ್ಧತಿ ಆಚರಣೆಗಳು ದೂರವಾಗುತ್ತಿದೆ. ಇಂತಹ ಕೆಲವೊಂದು ಸ್ಥಳಗಳು ಹಿಂದಿನ ಕಾಲದ ವಿಶಿಷ್ಟ ಸಂಪ್ರದಾಯಗಳ ಸಾಕ್ಷ್ಯಗಳನ್ನು ಸಂರಕ್ಷಿಸುವ ಪ್ರಯತ್ನಗಳು ಆಗಬೇಕು. ಈ ನಿಟ್ಟಿನಲ್ಲಿ ಪೆದ್ಬೆತಿ ಕಲ್ಲಿನ ಸಂರಕ್ಷಣೆ ಕಾರ್ಯ ಆಗಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಕಲ್ಲಿನ ಬಗ್ಗೆ ಮಾಯಕದ ಕಥೆ
ಇಲ್ಲಿರುವ ಹೆರಿಗೆ ಕಲ್ಲಿನ ಬಗ್ಗೆ ಬೇರೆ ಬೇರೆ ಕಥೆಗಳೂ ಹರಿದಾಡುತ್ತಿವೆ. ಇಲ್ಲಿ ಹೆರಿಗೆಗೆ ಕುಳಿತ ಮಹಿಳೆ ಮಾಯವಾಗಿದ್ದಳು. ಅವಳ ನೆನಪಿಗಾಗಿ ಈ ಕಲ್ಲನ್ನು ಹಾಕಲಾಗಿದೆ. ಪಕ್ಕದಲ್ಲೇ ಮಗುವಿನ ಚಿತ್ರದ ಕೆತ್ತನೆ ಇತ್ತು ಅದೀಗ ಗೋಚರಿಸುತಿಲ್ಲ. ಇಲ್ಲಿನ ಕಲ್ಲನ್ನು ಆರಾಧಿಸಬೇಕು. ಮುಂದೆ ಜೀರ್ಣೋದ್ಧಾರಗೊಳಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಆರಾಧಿಸುವ ಚಿಂತನೆ ಮಾಡಬೇಕು ಎನ್ನುವ ಸಲಹೆಯನ್ನು ಜೋತಿಷಿಯೊಬ್ಬರು ಈ ಹಿಂದೆ ನೀಡಿದ್ದರು ಎನ್ನುತ್ತಾರೆ ಸ್ಥಳೀಯರು.

ಇಲ್ಲೇ ಪಕ್ಕದಲ್ಲಿ ಶಿರಕಲ್ಲು ಎಂಬ ಜಾಗವೂ ಇದೆ. ಈ ಪರಿಸರದಲ್ಲಿ ದೈವಗಳ ಮೂಲ ಸ್ಥಾನವೂ ಇದ್ದ ಬಗ್ಗೆ ಹಿರಿಯರೂ ಹೇಳುತ್ತಾರೆ. ಅಂಡಾರು ಕೊಡಮಣಿತ್ತಾಯಿ ದೈವದ ಮೂಲ ಆರಾಧನೆ ಇಲ್ಲಿ ನಡೆಯುತ್ತಿತ್ತು ಎನ್ನುವುದು ಹಿರಿಯರಿಂದ ಕೇಳಿ ಬರುವ ಸಂಗತಿಗಳಾಗಿವೆ.

-ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

ತಂತ್ರಜ್ಞಾನ ಬಳಕೆಯಿಂದ ಹೊಸತನಕ್ಕೆ ತೆರೆದುಕೊಂಡ ತುಳು ನಾಟಕ ರಂಗ

Tulu theater: ತಂತ್ರಜ್ಞಾನ ಬಳಕೆಯಿಂದ ಹೊಸತನಕ್ಕೆ ತೆರೆದುಕೊಂಡ ತುಳು ನಾಟಕ ರಂಗ

Lawrwnce: ಬಿಷ್ಣೋಯಿ ಗ್ಯಾಂಗ್‌ ಸದಸ್ಯರ ಗಡಿಪಾರು ಮನವಿಗೆ ಕೆನಡಾ ಪ್ರತಿಕ್ರಿಯೆ ಇಲ್ಲ: ಭಾರತ

Lawrwnce: ಬಿಷ್ಣೋಯಿ ಗ್ಯಾಂಗ್‌ ಸದಸ್ಯರ ಗಡಿಪಾರು ಮನವಿಗೆ ಕೆನಡಾ ಪ್ರತಿಕ್ರಿಯೆ ಇಲ್ಲ: ಭಾರತ

Panaji: ಗೋವಾದಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

Panaji: ಗೋವಾದಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

12

Actress: ಖ್ಯಾತ ನಟಿಯ ಮೇಲೆ ಸಾಮೂಹಿಕ ಅ*ತ್ಯಾಚಾರ.. ನಿರ್ದೇಶಕರಿಂದ ಶಾಕಿಂಗ್ ಸಂಗತಿ ರಿವೀಲ್

police crime

UP; ಬಹ್ರೈಚ್ ಘಟನೆ ಆರೋಪಿಗಳು ನೇಪಾಳಕ್ಕೆ ಪರಾರಿಯಾಗುತ್ತಿದ್ದ ವೇಳೆ ಎನ್ ಕೌಂಟರ್

ಪ್ರಯಾಣಿಕರ ಗಮನಕ್ಕೆ- ರೈಲು ಪ್ರಯಾಣದ Advance Ticket ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆ…

ಪ್ರಯಾಣಿಕರ ಗಮನಕ್ಕೆ- ರೈಲು ಪ್ರಯಾಣದ Advance Ticket ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆ…

240 Km ಅಂತರದಲ್ಲಿ ಸೇನಾ ದಂಪತಿ ಆತ್ಮಹತ್ಯೆ… ಜೊತೆಯಲ್ಲೇ ಅಂತ್ಯಸಂಸ್ಕಾರ ಮಾಡುವಂತೆ ಪತ್ರ

240Km ಅಂತರದಲ್ಲಿ ಸೇನಾ ದಂಪತಿ ಆತ್ಮಹ*ತ್ಯೆ… ಜೊತೆಯಲ್ಲೇ ಅಂತ್ಯಸಂಸ್ಕಾರ ನಡೆಸುವಂತೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13(1)

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ ಚುರುಕು

6-katapady

Katapady: ಟ್ಯಾಂಕರ್‌, ಕಾರು, ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ

police

Bangaladesh illegal immigrants: ಕಾರ್ಮಿಕರ ಮಾಹಿತಿ ಸಂಗ್ರಹ ಆರಂಭಿಸಿದ ಪೊಲೀಸರು

courts

Udupi: ಅಪ್ರಾಪ್ತೆಯ ಅತ್ಯಾಚಾರ; ಆರೋಪಿ ಖುಲಾಸೆ

kalla

Koni: ಬ್ಯಾಂಕ್‌ನಲ್ಲಿ ಕಳ್ಳತನಕ್ಕೆ ಯತ್ನ- ಹೈದರಾಬಾದ್‌ನಿಂದ ಎಚ್ಚರಿಸಿದ ಸೆಕ್ಯುರಿಟಿ ಸಂಸ್ಥೆ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

ತಂತ್ರಜ್ಞಾನ ಬಳಕೆಯಿಂದ ಹೊಸತನಕ್ಕೆ ತೆರೆದುಕೊಂಡ ತುಳು ನಾಟಕ ರಂಗ

Tulu theater: ತಂತ್ರಜ್ಞಾನ ಬಳಕೆಯಿಂದ ಹೊಸತನಕ್ಕೆ ತೆರೆದುಕೊಂಡ ತುಳು ನಾಟಕ ರಂಗ

Minister; ಸತೀಶ್ ಜಾರಕಿಹೊಳಿ ಸಿಎಂ‌ ಆಗಲಿ: ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ

Minister; ಸತೀಶ್ ಜಾರಕಿಹೊಳಿ ಸಿಎಂ‌ ಆಗಲಿ ಎಂದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ

Lawrwnce: ಬಿಷ್ಣೋಯಿ ಗ್ಯಾಂಗ್‌ ಸದಸ್ಯರ ಗಡಿಪಾರು ಮನವಿಗೆ ಕೆನಡಾ ಪ್ರತಿಕ್ರಿಯೆ ಇಲ್ಲ: ಭಾರತ

Lawrwnce: ಬಿಷ್ಣೋಯಿ ಗ್ಯಾಂಗ್‌ ಸದಸ್ಯರ ಗಡಿಪಾರು ಮನವಿಗೆ ಕೆನಡಾ ಪ್ರತಿಕ್ರಿಯೆ ಇಲ್ಲ: ಭಾರತ

14(1)

Gundlupete: 3 ತಿಂಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ

Komal Kumar’s Yala kunni ready to release

Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.