Karkala: ಮಕ್ಕಳ ಕೈಯ್ಯಲ್ಲಿ ಹೂವಿನಕೋಲು!; ನವರಾತ್ರಿ ವಿಶೇಷ ಆಚರಣೆ ಮುಂದುವರಿಸುವ ಮಕ್ಕಳು

ಹಿರಿಯರ ಸಾರಥ್ಯ; ತಾಳಮದ್ದಳೆ ಶೈಲಿಯಲ್ಲಿ ಮನೆಮನೆಗೆ ತಲುಪುತ್ತಿದೆ ದೇವಿ ಅವತಾರಗಳ ಕಥೆ

Team Udayavani, Oct 7, 2024, 3:02 PM IST

6(1)

ಕೊಮೆ-ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ಹೂವಿನ ಕೋಲು ತಂಡ.

ಕಾರ್ಕಳ/ತೆಕ್ಕಟ್ಟೆ: ನವರಾತ್ರಿ ಸಂದರ್ಭ ಕುಂದಾಪುರ, ಬ್ರಹ್ಮಾವರ, ಬೈಂದೂರು, ಹೆಬ್ರಿ ತಾಲೂಕಿನ ಕೆಲವು ಭಾಗಗಳಲ್ಲಿ ಕಾಣಸಿಗುವ ವಿಶೇಷವಾದ ಆಚರಣೆಗಳಲ್ಲಿ ಹೂವಿನ ಕೋಲು ಒಂದು. ತಾಳಮದ್ದಳೆ ಶೈಲಿಯಲ್ಲಿ ದೇವಿಯ ನಾನಾ ಅವತಾರಗಳ ಕಥೆಯನ್ನು ಮನೆಮನೆಗೆ ತಲುಪಿಸುವ ಅತ್ಯಂತ ಸಾಂಸ್ಕೃತಿಕ, ಜನಪದೀಯ ಕಲೆ ಇದು. ಹಿಂದೆ ಅಲ್ಲಲ್ಲಿ ಕಾಣುತ್ತಿದ್ದ ಈ ಕಲೆ ಈಗ ಅಪರೂಪವಾಗುತ್ತಿದೆ. ಅಂಥ ಸಂದರ್ಭದಲ್ಲಿ ಕೆಲವು ತಂಡಗಳು ವಿದ್ಯಾರ್ಥಿಗಳ ಭಾಗವಹಿಸುವಿಕೆ ಯೊಂದಿಗೆ ಮತ್ತೆ ಚಿಗುರಿವೆ.

ಏನಿದು ಹೂವಿನ ಕೋಲು?
ಯಕ್ಷಗಾನ ಮೇಳಗಳು ಸಾಧಾರಣವಾಗಿ ನವೆಂಬರ್‌ ತಿಂಗಳಿನಲ್ಲಿ ಆರಂಭಗೊಳ್ಳುತ್ತದೆ. ಅದಕ್ಕೂ ಮುಂಚೆ ನವರಾತ್ರಿಯ ದಿನಗಳಲ್ಲಿ ಹೂವಿನಕೋಲು ಎನ್ನುವ ಕಾರ್ಯಕ್ರಮವನ್ನು ಮನೆ ಮನೆಗೂ ಹೋಗಿ ನಡೆಸಿಕೊಡುತ್ತಾರೆ. ಹೂವಿನಕೋಲು ಪ್ರಕಾರದಲ್ಲಿ ಮಕ್ಕಳು ಪಾಲ್ಗೊಳ್ಳುತ್ತಾರೆ. ಹಾಗೆ ವೃತ್ತಿ ತಿರುಗಾಟದ ಹಿಮ್ಮೇಳ ಕಲಾವಿದರಿಗೆ ಒಂದು ಪೂರ್ವ ತಯಾರಿಯ ರೀತಿಯಲ್ಲಿ ಇದು ನಡೆಯುತ್ತದೆ. ಭಾಗವತರು ಮದ್ದಲೆಗಾರರು, ಶ್ರುತಿಪಾಲಕರು ಮತ್ತು 2 ಅಥವಾ 4 ಜನ ಮಕ್ಕಳು ಇರುತ್ತಾರೆ. ಹೀಗೆ ಒಂದು ಹೂವಿನಕೋಲು ತಂಡವಾಗುತ್ತದೆ. ಭಾಗವತರು ಕೇವಲ 2-3 ಪಾತ್ರಗಳ ಸಂಭಾಷಣೆಯನ್ನು ಪ್ರಸಂಗಗಳಿಂದ ಆಯ್ದು ಮಕ್ಕಳಿಗೆ ಕಂಠಪಾಠ ಮಾಡಿಸುತ್ತಾರೆ. ಹಿಂದೆ ಐಗಳ ಮಠಗಳ ಯಕ್ಷಗಾನ ಕಲಿಸುವ ಕೇಂದ್ರಗಳಾಗಿದ್ದು, ಯಕ್ಷಗಾನ ಪ್ರಸಂಗಗಳ ಹಾಡುಗಾರಿಕೆ ಅರ್ಥ ಹೇಳುವ ಕ್ರಮ ಹೇಳಿಕೊಟ್ಟು ನವರಾತ್ರಿಯ ವೇಳೆ ಶಿಷ್ಯರ ಪ್ರತಿಭಾ ಪ್ರದರ್ಶನಕ್ಕೆ ಇದು ವೇದಿಕೆ ಆಗುತ್ತಿತ್ತು. ತಂಡವು ಹೂವಿನಿಂದ ಅಲಂಕರಿಸಿದ ಒಂದು ಅಡಿ ಉದ್ದದ ಹೂವಿನ ಕೋಲನ್ನು ಹಿಡಿದುಕೊಂಡಿರುವುದರಿಂದ ಇದು ಹೂವಿನ ಕೋಲು ಎಂದು ಹೆಸರಾಗಿದೆ.

ಮನೆಗೆ ಭೇಟಿ ನೀಡುವ ತಂಡಕ್ಕೆ ವೀಳ್ಯದೆಲೆ, ಅಡಕೆ, ಅಕ್ಕಿ ಜೊತೆ ಸಂಭಾವನೆ ನೀಡುವುದು ವಾಡಿಕೆಯಾಗಿದೆ. ರಾಮಾಯಣ, ಮಹಾಭಾರತ, ಕೃಷ್ಣ ಪುರಾಣ ಸೇರಿದಂತೆ ಕಥೆಗಳನ್ನು ಸಹ ಹೂವಿನ ಕೋಲಿನ ಸಂದರ್ಭ ತಿಳಿಸುತ್ತಾರೆ.

ಕಲೆ ಅರಳಿಸುವ ಯಶಸ್ವಿ ಕಲಾವೃಂದ
ಕೊಮೆ-ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ಹೂವಿನ ಕೋಲಿಗೆ ಒಂದು ಅಭಿಯಾನದ ರೂಪವನ್ನು ನೀಡಿ ಮುನ್ನಡೆಸುತ್ತಿದೆ. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಈ ಸಂಸ್ಥೆ ಈ ಬಾರಿ ಸಿನ್ಸ್‌ 1999 ಶ್ವೇತಯಾನ -63ರಡಿ ಕಾರ್ಯಕ್ರಮ ನೀಡುತ್ತಿದೆ. ಆನೆಗುಡ್ಡೆ ದೇವಾಲಯದಲ್ಲಿ ಈ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಕುಂದಾಪುರ, ಉಡುಪಿ, ಮಂಗಳೂರು ಬೆ„ಂದೂರು, ಮಾರಣಕಟ್ಟೆ ಹೀಗೆ ಹಲವು ಕಡೆಗಳಲ್ಲಿ ಮಕ್ಕಳ ನಾಲ್ಕು ತಂಡವಾಗಿ ಪರಿಸರದ ಮನೆಮನೆಗಳಲ್ಲಿ ಧರ್ಮ, ಜಾತಿ ಮತ ಮೀರಿ ಹೂವಿನಕೋಲು ಪ್ರದರ್ಶನಗೊಳ್ಳುತ್ತಿದೆ.
ಅತ್ಯಮೂಲ್ಯ ಕಲಾ ಪ್ರಕಾರದ ಉಳಿವಿಗಾಗಿ ನವರಾತ್ರಿಯ ಸಂದರ್ಭ ಅ.3ರಿಂದ ಅ.12ರ ತನಕ ಮನೆ ಮನೆಗಳಲ್ಲಿ ಹೂವಿನಕೋಲು ಅಭಿಯಾನ ಕಾರ್ಯಕ್ರಮ ಯಶಸ್ವಿ ಪ್ರದರ್ಶನಗೊಳ್ಳುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ಸಂಘಟಕರಾದ ವೆಂಕಟೇಶ್‌ ವೈದ್ಯ ಅವರು.

ಬದಲಾದ ವೇಗದ ಬದುಕಿನ ನಡುವೆ ನಮ್ಮ ಸಂಸ್ಕೃತಿಯ ಪ್ರತೀಕವಾದ ಇಂತಹ ಕಲಾ ಪ್ರಕಾರಗಳ ಬಗ್ಗೆ ಯುವ ಸಮುದಾಯಕ್ಕೂ ಕೂಡಾ ಅರಿವು ಮೂಡಿಸುವ ಮಹತ್ವದ ಕಾರ್ಯವಾಗಬೇಕಾಗಿದೆ ಎನ್ನುವುದು ಟಿ.ಸುಧಾಕರ ಶೆಟ್ಟಿ ತೆಕ್ಕಟ್ಟೆ ಅವರ ಅಭಿಮತ.

ಮಹಾಬಲ ನಾಯ್ಕ ಸಾರಥ್ಯದ ಹೂವಿನ ಕೋಲು ಆಚರಣೆಯ ತಂಡ.

40 ವರ್ಷಗಳಿಂದ ಹೂವಿನ ಕೋಲು ಆಚರಿಸುವ ಮಹಾಬಲ ನಾಯ್ಕ್
ಮಂದಾರ್ತಿ ಮೇಳದ ಕಲಾವಿದರಾಗಿರುವ ಮಹಾಬಲ ನಾಯ್ಕ್ 40 ವರ್ಷಗಳಿಂದ ಹೂವಿನಕೋಲು ಆಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಬಿಳಿ ಬಟ್ಟೆ, ಖಾಕಿ ಚಡ್ಡಿ, ತಲೆಗೆ ಬಿಳಿ ಟೋಪಿ ಧರಿಸಿ ಕೈಯಲ್ಲಿ ಅಲಂಕೃತ ಕೋಲು ಹಿಡಿದು ಮನೆ ಮನೆಗೆ ಹೋಗಿ 10ರಿಂದ 20 ನಿಮಿಷದ ಪ್ರಸಂಗ ಪ್ರದರ್ಶಿಸುತ್ತಾರೆ. ಇವರ ತಂಡದಲ್ಲಿ ನಾಲ್ಕು ಮಂದಿ ಮಕ್ಕಳು ಅರ್ಥದಾರಿಗಳಾಗಿರುತ್ತಾರೆ.

ತಂದೆಯವರು ಹೂವಿನ ಕೋಲು ಆಚರಿಸು ತ್ತಿದ್ದರು. ಅದನ್ನು ಮುಂದುವರಿಸಿ ನಾನೂ 40 ವರ್ಷದಿಂದ ಮುನ್ನಡೆಸುತ್ತಿದ್ದೇನೆ. ಈ ಬಾರಿ ವರ್ಷ 13 ಮನೆಗಳಿಗೆ ಭೇಟಿ ನೀಡಿದ್ದೇವೆ. ಇನ್ನು 15 ಮನೆಗಳ ಭೇಟಿಯ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಮಹಾಬಲ ನಾಯ್ಕ.

ಹೂವಿನ ಕೋಲಿನಲ್ಲಿ ಮಕ್ಕಳು ಭಾಗವಹಿಸುವುದರಿಂದ ಸಂಸ್ಕೃತಿ ಉಳಿಯುತ್ತದೆ. ಮಕ್ಕಳ ಓದು, ಏಕಾಗ್ರತೆ, ಭಾಷೆಯ ಮೇಲೆ ಹಿಡಿತ, ನಿರರ್ಗಳ ಮಾತು, ವಾಕ್ಚಾತುರ್ಯ ಕೂಡಾ ಹೆಚ್ಚುತ್ತದೆ ಎನ್ನುವುದು ಮಹಾಬಲ ನಾಯ್ಕ್ ಅಭಿಮತ.

ಸಮೃದ್ಧಿಯ ಪ್ರತೀಕ
ನಾರಾಯಣಾಯ ನಮೋಃ ನಾರಾಯಣಾಯ, ನಾಭಿ ಚರಣಕ್ಕೆ ನಮೋಃ ನಾರಾಯಣಾಯ, ಗುರುದೆ„ವ ಗಣಪತಿಗೆ ಶರಣು ಶರಣೆಂದು ಕರಗಳೆರಡನು ಮುಗಿದು ಶಿರವೇರಿನಿಂದು…: ಮನೆಯವರಿಗೆ, ಗುರುಗಳಿಗೆ, ಊರಿಗೆ ಶುಭವಾಗಲಿ, ಸಂತತಿಯಾಗಲಿ, ಸಂಪತ್ತು ವೃದ್ಧಿಸಲಿ ಎಂಬ ಆಶಯಗಳನ್ನೂ ಹೊಂದಿರುವ ಈ ಚೌಪದಿಗಳನ್ನೂ ಮಾನೌಮಿಯ ಪದಗಳೆಂದೂ, ಈ ಮಕ್ಕಳು ಮಾನೌಮಿಯ ಮಕ್ಕಳೆಂದೂ ಕರೆಯುವುದು ರೂಢಿಯಿದೆ.
-ಕೋಟ ಸುದರ್ಶನ ಉರಾಳ, ಯಕ್ಷಚಿಂತಕ

ಸಂಸ್ಕೃತಿ ದಾಟಿಸುವ ಪ್ರಯೋಗ
ಪಾಶ್ಚಾತ್ಯ ಅನುಕರಣೆ, ಮಾಧ್ಯಮಗಳ ಭರಾಟೆ, ಆಧುನಿಕತೆಯ ನಡುವೆ ಸಾಂಪ್ರದಾಯಿಕ ಆಚರಣೆಗಳು ನಶಿಸಿ ಹೋಗುತ್ತಿವೆ. ಮೂಲ ಸಂಸ್ಕೃತಿ ಉಳಿದು, ಮುಂದಿನ ತಲೆಮಾರಿಗೆ ಸಂಸ್ಕೃತಿ ದಾಟಿಸಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಇಂತಹ ಸ್ಥಿತಿಯಲ್ಲಿ ಯಕ್ಷಗಾನದ ಮೂಲ ಪೀಠಿಕೆಯಾದ ಕೋಲು ಆಚರಣೆ ಚಾಲ್ತಿಯಲ್ಲಿದೆ.
-ವಾದಿರಾಜ ಆಚಾರ್ಯ, ಕಬ್ಬಿನಾಲೆ .

-ಬಾಲಕೃಷ್ಣ ಭೀಮಗುಳಿ
-ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

ಟಾಪ್ ನ್ಯೂಸ್

0821

BBK11: ಜಗದೀಶ್‌ ಬಿಟ್ಟು ಈ ವ್ಯಕ್ತಿ ಬಿಗ್‌ಬಾಸ್‌ ಮನೆಯಲ್ಲಿ ಇರೋದು ತುಂಬಾ ಡೇಂಜರ್..‌ ಯಮುನಾ

Hubli: Cricketer KL Rahul helped poor talent

Hubli: ಬಡ ಪ್ರತಿಭೆಗೆ ನೆರವಾದ ಕ್ರಿಕೆಟಿಗ ಕೆ.ಎಲ್.ರಾಹುಲ್

Nagpur: 6 ವರ್ಷಗಳಿಂದ ನಕಲಿ ವೈದ್ಯನ ದರ್ಬಾರ್:‌ ದೂರು ದಾಖಲು, ಆರೋಪಿ ಪರಾರಿ!

Nagpur: 6 ವರ್ಷಗಳಿಂದ ನಕಲಿ ವೈದ್ಯನ ದರ್ಬಾರ್:‌ ದೂರು ದಾಖಲು, ಆರೋಪಿ ಪರಾರಿ!

Singham Again trailer: ಭರಪೂರ ಆ್ಯಕ್ಷನ್ ಟ್ರೇಲರ್‌ನಲ್ಲಿ ʼರಾಮಾಯಣʼವೇ ಹೈಲೈಟ್

Singham Again trailer: ಭರಪೂರ ಆ್ಯಕ್ಷನ್ ಟ್ರೇಲರ್‌ನಲ್ಲಿ ʼರಾಮಾಯಣʼವೇ ಹೈಲೈಟ್

ವೈದ್ಯೆಯ ಮೇಲೆ ಅತ್ಯಾ*ಚಾರ ಎಸಗಿ ಕೊಂದಿದ್ದು ಸಂಜಯ್‌ ರಾಯ್:‌ ಸಿಬಿಐ ಚಾರ್ಜ್‌ ಶೀಟ್‌ ಸಲ್ಲಿಕೆ

ವೈದ್ಯೆಯ ಮೇಲೆ ಅತ್ಯಾ*ಚಾರ ಎಸಗಿ ಕೊಂದಿದ್ದು ಸಂಜಯ್‌ ರಾಯ್:‌ ಸಿಬಿಐ ಚಾರ್ಜ್‌ ಶೀಟ್‌ ಸಲ್ಲಿಕೆ

Mangaluru CCB team seized huge quantity of drugs; Siberian citizen arrested

Mangaluru: ಬೃಹತ್‌ ಪ್ರಮಾಣದ ಡ್ರಗ್ಸ್‌ ವಶಪಡಿಸಿಕೊಂಡ ಸಿಸಿಬಿ ತಂಡ; ನೈಜಿರಿಯಾ ಪ್ರಜೆ ಬಂಧನ

zameer ahmed khan

Vijayapura: ಸಿದ್ದರಾಮಯ್ಯ ಜತೆ ಕಾಂಗ್ರೆಸ್ ಹೈಕಮಾಂಡ್ ಇದೆ, ವಿಜಯೇಂದ್ರ ಯಾರು?: ಸಚಿವ ಜಮೀರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7(3)

Kaup: ಉಚ್ಚಿಲ ದಸರೆಗೆ ವಸ್ತುಪ್ರದರ್ಶನ ಮೆರುಗು

Kapu Pili Parba – Season 2 Competition on 11th

Kaup: ಅ.11ರಂದು ಕಾಪು ಪಿಲಿ ಪರ್ಬ- ಸೀಸನ್ 2 ಹುಲಿವೇಷ ಕುಣಿತ ಸ್ಪರ್ಧೆ

Hebri: ಮುದ್ರಾಡಿ ಬಲ್ಲಾಡಿ ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ವೃದ್ಧೆಯ ಮೃತದೇಹ ಪತ್ತೆ

Hebri: ಮುದ್ರಾಡಿ ಬಲ್ಲಾಡಿ ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ವೃದ್ಧೆಯ ಮೃತದೇಹ ಪತ್ತೆ

HEBRI-CAR2

Hebri: ವರುಣನ ರುದ್ರ ನರ್ತನ: ಮುದ್ರಾಡಿ ಬಲ್ಲಾಡಿ ಪರಿಸರ ತತ್ತರ

POlice

Gangolli: ಶ್ರೀ ಮಹಾಂಕಾಳಿ ದೇಗುಲದ ಅಡವಿರಿಸಿದ್ದ 256 ಗ್ರಾಂ ಚಿನ್ನಾಭರಣ ವಶ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Shine shetty’s just married movie teaser out

Just Married: ಟೀಸರ್‌ನಲ್ಲಿ ʼಜಸ್ಟ್‌ ಮ್ಯಾರೀಡ್‌ʼ; ನಿರ್ಮಾಣದತ್ತ ಅಜನೀಶ್‌ ಲೋಕನಾಥ್‌

0821

BBK11: ಜಗದೀಶ್‌ ಬಿಟ್ಟು ಈ ವ್ಯಕ್ತಿ ಬಿಗ್‌ಬಾಸ್‌ ಮನೆಯಲ್ಲಿ ಇರೋದು ತುಂಬಾ ಡೇಂಜರ್..‌ ಯಮುನಾ

Hubli: Cricketer KL Rahul helped poor talent

Hubli: ಬಡ ಪ್ರತಿಭೆಗೆ ನೆರವಾದ ಕ್ರಿಕೆಟಿಗ ಕೆ.ಎಲ್.ರಾಹುಲ್

Nagpur: 6 ವರ್ಷಗಳಿಂದ ನಕಲಿ ವೈದ್ಯನ ದರ್ಬಾರ್:‌ ದೂರು ದಾಖಲು, ಆರೋಪಿ ಪರಾರಿ!

Nagpur: 6 ವರ್ಷಗಳಿಂದ ನಕಲಿ ವೈದ್ಯನ ದರ್ಬಾರ್:‌ ದೂರು ದಾಖಲು, ಆರೋಪಿ ಪರಾರಿ!

Singham Again trailer: ಭರಪೂರ ಆ್ಯಕ್ಷನ್ ಟ್ರೇಲರ್‌ನಲ್ಲಿ ʼರಾಮಾಯಣʼವೇ ಹೈಲೈಟ್

Singham Again trailer: ಭರಪೂರ ಆ್ಯಕ್ಷನ್ ಟ್ರೇಲರ್‌ನಲ್ಲಿ ʼರಾಮಾಯಣʼವೇ ಹೈಲೈಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.