Kollur: ಸಂಪೂರ್ಣ ಹದಗೆಟ್ಟ ವಂಡ್ಸೆ- ಕೊಲ್ಲೂರು ಮುಖ್ಯ ರಸ್ತೆ; ವಾಹನ ಸಂಚಾರವೇ ಕಷ್ಟ

ಹೊಂಡಗಳ ರಾಶಿ: ಯಾತ್ರಿಕರಿಗೆ ಭಾರೀ ಆತಂಕ

Team Udayavani, Sep 25, 2024, 4:22 PM IST

Kollur: ಸಂಪೂರ್ಣ ಹದಗೆಟ್ಟ ವಂಡ್ಸೆ- ಕೊಲ್ಲೂರು ಮುಖ್ಯ ರಸ್ತೆ; ವಾಹನ ಸಂಚಾರವೇ ಕಷ್ಟ

ಕೊಲ್ಲೂರು: ವಂಡ್ಸೆಯಿಂದ ಹಾಲ್ಕಲ್‌ ವರೆಗಿನ ರಾ.ಹೆದ್ದಾರಿಯ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಿದೆ.

ಭಾರೀ ಹೊಂಡಮಯ ರಸ್ತೆ
ಹೆಮ್ಮಾಡಿಯಿಂದ ವಂಡ್ಸೆ ತನಕದ ಮುಖ್ಯ ರಸ್ತೆ ಸಂಪೂರ್ಣ ಡಾಮರೀಕರಣಗೊಂಡಿದೆ. ಆದರೆ ವಂಡ್ಸೆಯಿಂದ ಕೊಲ್ಲೂರಿಗೆ ಸಾಗುವ ಪ್ರಯಾಣದ ದಾರಿ ಪ್ರಯಾಸವಾಗಿದ್ದು, ದ್ವಿಚಕ್ರವಾಹನ ಕೂಡ ಸಾಗುವುದು ಕಷ್ಟಸಾಧ್ಯವಾಗಿದೆ. ಈ ಭಾಗದಲ್ಲಿ ರಾತ್ರಿ ಹೊತ್ತಿನಲ್ಲಿ ವಾಹನದಲ್ಲಿ ಸಾಗುವುದು ಅಪಾಯ ಆಹ್ವಾನಿಸುವಂತಿದೆ. ಅನೇಕ ಕಡೆ ಭಾರಿ ಹೊಂಡಗಳಿಂದ ಕೂಡಿದ್ದು, ಮಳೆಗಾಲದಲ್ಲಿ ನಿಂತ ನೀರಿನಿಂದ ದ್ವಿಚಕ್ರ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿರುತ್ತಾರೆ.

ಕೊಲ್ಲೂರು ಕ್ಷೇತ್ರಕ್ಕೆ ಸಾಗುವ ಪ್ರಮುಖ ರಸ್ತೆ
ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ಸಹಸ್ರಾರು ಭಕ್ತರು ದಿನಂಪ್ರತಿ ಕೊಲ್ಲೂರು ದೇಗುಲ ಹಾಗು ಸಿಗಂಧೂರು ಕ್ಷೇತ್ರ ದರ್ಶನಕ್ಕೆ ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಹೆಮ್ಮಾಡಿಯಿಂದ ಸುಮಾರು 45 ಕಿ.ಮೀ. ದೂರ ವ್ಯಾಪ್ತಿಯ ಕೊಲ್ಲೂರಿಗೆ ಸಾಗಲು ಯಾತ್ರಾರ್ಥಿಗಳು ಸಹಿತ ನಿತ್ಯ ಪ್ರಯಾಣಿಕರು ಹರಸಾಹಸ ಪಡಬೇಕಾಗಿದೆ.

ತಿರುವುಗಳಲ್ಲಿ ಭಾರೀ ಹೊಂಡ
ಅನೇಕ ಕಡೆ ತಿರುವುಗಳಲ್ಲಿ ಭಾರೀ ಗಾತ್ರದ ಹೊಂಡಗಳಿದ್ದು, ಹೊಂಡ ತಪ್ಪಿಸುವ ಪ್ರಯತ್ನದಲ್ಲಿ ಅನೇಕ ವಾಹನಗಳು ಮುಖಾಮುಖೀಯಾಗಿ ಅಪಘಾತ ಸಂಭವಿಸಿದೆ. ಜಡ್ಕಲ್‌ ಬಳಿಯ ರಸ್ತೆಯು ಸಂಪೂರ್ಣ ದುಸ್ತಿತಿಯಾಗಿದ್ದು, ಗ್ರಾಮಸ್ಥರು ಸಹಿತ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.

ನವರಾತ್ರಿ ಮೊದಲು ರಸ್ತೆ ದುರಸ್ತಿಯಾದೀತೇ
ಲಕ್ಷಾಂತರ ಭಕ್ತರ ಆರಾಧ್ಯ ಕ್ಷೇತ್ರವಾಗಿರುವ ಕೊಲ್ಲೂರಿನ ನವರಾತ್ರಿ ಉತ್ಸವ ಅಕ್ಟೋಬರ್‌ ಮೊದಲ ವಾರದಲ್ಲಿ ಆರಂಭಗೊಳ್ಳಲಿದ್ದು, ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸಲಿದೆ.ಕೇವಲ ಹೊಂಡ ಮುಚ್ಚುವ ಕಾರ್ಯಕ್ಕೆ ಮಾತ್ರ ಇಲಾಖೆ ಕ್ರಮ ಕೈಗೊಂಡಲ್ಲಿ ಒಂದಿಷ್ಟು ದಿನಗಳ ಅನಂತರ ರಸ್ತೆ ಮತ್ತಷ್ಟು ಹದಗೆಟ್ಟು ವಿರೂಪಗೊಳ್ಳಲಿದೆ. ಹಾಗಾಗಿ ಹಾಲ್ಕಲ್‌ ನಿಂದ ವಂಡ್ಸೆ ತನಕ ಸಂಪೂರ್ಣ ಡಾಮರೀಕರಣಕ್ಕೆ ಸರಕಾರ ಅನುದಾನ ಬಿಡುಗಡೆಗೊಳಿಸಿ ನಿತ್ಯ ಪ್ರಯಾಣಿಕರ ಗೋಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.

ತಾತ್ಕಾಲಿಕ ಹೊಂಡ ಮುಚ್ಚುವ ಕಾರ್ಯ
ಸಂಪೂರ್ಣ ಡಾಮರು ಕಾಮಗಾರಿಗೆ ಶಾಸಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅನುದಾನ ದೊರೆತೊಡನೆ ಕಾಮಗಾರಿ ಆರಂಭಿಸಲಾಗುವುದು. ರಾ. ಹೆದ್ದಾರಿ ಹಾಲ್ಕಲ್‌ನಿಂದ ಕುಂದಾಪುರ ತನಕ 10 ಕಿ.ಮೀ. ದೂರ ವ್ಯಾಪ್ತಿಯವರೆಗೆ ಸಂಪೂರ್ಣ ಡಾಮರು ರಸ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಹಾಲ್ಕಲ್‌ ನಿಂದ ವಂಡ್ಸೆವರೆಗೆ ಸದ್ಯದ ಪರಿಸ್ಥಿತಿಯಲ್ಲಿ ತಾತ್ಕಾಲಿಕವಾಗಿ ಜಲ್ಲಿ ಪುಡಿ ಬಳಸಿ ಹೊಂಡ ಮುಚ್ಚುವ ಕಾರ್ಯ ಮಾಡಲಾಗುವುದು.
-ಎಂ.ಪಿ. ಮೂರ್ತಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌

ಇಲಾಖೆ ಕ್ರಮ ಕೈಗೊಳ್ಳಲಿ
ಹದಗೆಟ್ಟ ಕೊಲ್ಲೂರು ವಂಡ್ಸೆ ರಸ್ತೆಯ ಸಂಪೂರ್ಣ ಡಾಮರು ಕಾಮಗಾರಿಗೆ ಸರಕಾರ ಅನುದಾನ ಬಿಡುಗಡೆಗೊಳಿಸಬೇಕು. ಕೊಲ್ಲೂರು ಕ್ಷೇತ್ರಕ್ಕೆ ಸಾಗುವ ಭಕ್ತರ ಸುಗಮ ವಾಹನ ಸಂಚಾರಕ್ಕೆ ಇಲಾಖೆ ಕ್ರಮ
ಕೈಗೊಳ್ಳಬೇಕಾಗಿದೆ.
-ಸರ್ವೋತ್ತಮ ಶೆಟ್ಟಿ, ಇಡೂರುಕುಂಜ್ಞಾಡಿ

-ಡಾ| ಸುಧಾಕರ ನಂಬಿಯಾರ್‌

ಟಾಪ್ ನ್ಯೂಸ್

vijayaendra

MUDA Case: ಭಂಡತನ ಬಿಟ್ಟು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ

ಎಲೆಕ್ಷನ್ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ರಾಜೀನಾಮೆ ಕೊಡಬೇಕಲ್ವಾ?: ಎಂ.ಬಿ.ಪಾಟೀಲ್ ಪ್ರಶ್ನೆ

ಎಲೆಕ್ಷನ್ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ರಾಜೀನಾಮೆ ಕೊಡಬೇಕಲ್ವಾ?: ಎಂ.ಬಿ.ಪಾಟೀಲ್ ಪ್ರಶ್ನೆ

Yuva Dasara: ಅ.6 -10 ರವರೆಗೆ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ; ಇಲ್ಲಿದೆ ವಿವರ

Yuva Dasara: ಅ.6 -10 ರವರೆಗೆ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ; ಇಲ್ಲಿದೆ ವಿವರ

17-v-somanna

Hubli: ಈ ಆರೋಪದಿಂದ ಹೊರಬರುವವರೆಗೂ ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ವಿ.ಸೋಮಣ್ಣ

Israel: ಲೈವ್‌ ಸಂದರ್ಶನದ ವೇಳೆಯೇ ಪತ್ರಕರ್ತನ ಮನೆ ಮೇಲೆ ಇಸ್ರೇಲ್‌ ಮಿಸೈಲ್‌ ದಾಳಿ!

Israel: ಲೈವ್‌ ಸಂದರ್ಶನದ ವೇಳೆಯೇ ಪತ್ರಕರ್ತನ ಮನೆ ಮೇಲೆ ಇಸ್ರೇಲ್‌ ಮಿಸೈಲ್‌ ದಾಳಿ!

High-Court

High Court Order: ಕೋರ್ಟ್‌ ಕಲಾಪ ವೀಡಿಯೋ ಬಳಕೆಗೆ ನಿಷೇಧ

Yadgir: ಸಿಎಂ ಸಿದ್ದರಾಮಯ್ಯನವರ ಜೊತೆ ಕರ್ನಾಟಕದ ಜನ‌ ಇದ್ದಾರೆ… ಸಚಿವ ಮಧು ಬಂಗಾರಪ್ಪ

Yadgir: ಸಿಎಂ ಸಿದ್ದರಾಮಯ್ಯನವರ ಜೊತೆ ಕರ್ನಾಟಕದ ಜನ‌ ಇದ್ದಾರೆ… ಸಚಿವ ಮಧು ಬಂಗಾರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Kundapura: ಹದಗೆಟ್ಟ ಬ್ರಹ್ಮಾವರ-ಬಿದ್ಕಲ್‌ಕಟ್ಟೆ ರಾಜ್ಯ ಹೆದ್ದಾರಿ

11

Malpe: ಸಮುದ್ರ ಪ್ರಕ್ಷುಬ್ಧ; ಸೆಪ್ಟೆಂಬರ್ 15ರ ಬಳಿಕವೂ ತೆರೆದುಕೊಳ್ಳದ ಮಲ್ಪೆ ಬೀಚ್‌

Karkala: ಪಾರ್ಕಿಂಗ್‌ಗೆ ಜಾಗವೇ ಇಲ್ಲ; ಹಾಗಾಗಿ ಕಂಡ ಕಡೆ ಠಿಕಾಣಿ!

Karkala: ಪಾರ್ಕಿಂಗ್‌ಗೆ ಜಾಗವೇ ಇಲ್ಲ; ಹಾಗಾಗಿ ಕಂಡ ಕಡೆ ಠಿಕಾಣಿ!

Kundapura ಪುರಸಭೆಗೆ ಹೊರೆಯಾದ ನೀರು ಪೂರೈಕೆ ಹೊಣೆ ಗೊಂದಲ; ಜಲಸಿರಿ ಬಿಳಿಯಾನೆಗೆ ಅಂಕುಶ?

Kundapura ಪುರಸಭೆಗೆ ಹೊರೆಯಾದ ನೀರು ಪೂರೈಕೆ ಹೊಣೆ ಗೊಂದಲ; ಜಲಸಿರಿ ಬಿಳಿಯಾನೆಗೆ ಅಂಕುಶ?

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಭೇಟೆಯಾಡಿದ ಚಿರತೆ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಬೇಟೆಯಾಡಿದ ಚಿರತೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

vijayaendra

MUDA Case: ಭಂಡತನ ಬಿಟ್ಟು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ

Kaalapatthar Celebrity Show: ಸೆಲೆಬ್ರೆಟಿ ಶೋನಲ್ಲಿ ಕಾಲಾಪತ್ಥರ್‌

Kaalapatthar Celebrity Show: ಸೆಲೆಬ್ರೆಟಿ ಶೋನಲ್ಲಿ ಕಾಲಾಪತ್ಥರ್‌

15

Container Kannada Movie: ಕಂಟೈನರ್‌ನೊಳಗೆ ಹೊಸಬರ ಕನಸು

14

Life Of Mrudula Kannada Movie: ಮೃದುಲಾಗೆ ಮೆಚ್ಚುಗೆ

Gopilola Trailer: ನೈಸರ್ಗಿಕ ಕೃಷಿಯತ್ತ ಗೋಪಿಲೋಲ

Gopilola Trailer: ನೈಸರ್ಗಿಕ ಕೃಷಿಯತ್ತ ಗೋಪಿಲೋಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.