![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Sep 11, 2022, 9:51 AM IST
ಕೊಲ್ಲೂರು : ಶ್ರೀ ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿದ ಕೇರಳದ ತಿರುವನಂತಪುರದ ಯಾತ್ರಾರ್ಥಿ ಕುಟುಂಬದ ಮಹಿಳೆಯೋರ್ವರು ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ತಿರುವನಂತಪುರದಿಂದ 14 ಮಂದಿಯ ತಂಡ ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸಿದ್ದು ಎಲ್ಲರು ತೀರ್ಥ ಸ್ನಾನಕ್ಕೆಂದು ನದಿಗೆ ಇಳಿದಿದ್ದರು. ಈ ಸಂದರ್ಭ ಮುರುಗನ್ ಅವರ ಪತ್ನಿ ಶಾಂತಿ ಶೇಖರನ್ (42) ಅವರು ನೀರುಪಾಲಾದರು.
ಮುರುಗನ್ ಮತ್ತು ಪುತ್ರ ಆದಿತ್ಯ ನದಿಯ ಸೆಳೆತಕ್ಕೆ ಒಳಗಾದರೂ ಈಜಿ ದಡ ಸೇರಿದರು. ಮಹಿಳೆಗಾಗಿ ಅಗ್ನಿ ಶಾಮಕ ದಳ, ಕೊಲ್ಲೂರು ಪೊಲೀಸರು ಹಾಗು ಗ್ರಾಮಸ್ಥರು ಶೋಧ ಕಾರ್ಯ ನಡೆಸುತ್ತಿದಾರೆ.
ಎಚ್ಚರಿಕೆ ನೀಡಿದ್ದರೂ…
ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು, ನೀರಿಗಿಳಿಯುವುದು ಅಪಕಾಯಕಾರಿ ಎಂದು ಸ್ಥಳೀಯ ವರ್ತಕರು ಎಚ್ಚರಿಕೆ ನೀಡಿದ್ದರೂ ಯಾತ್ರಿಕರು ಅದನ್ನು ಅವಗಣಿಸಿ ಸ್ನಾನಕ್ಕೆ ತೆರಳಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ : ಇನ್ನೂ ನಡೆಯದ ಸುರತ್ಕಲ್ ಟೋಲ್ಗೇಟ್ ವಿಲೀನ : ಸೆ. 13ರಂದು ಸಾಮೂಹಿಕ ಧರಣಿ
You seem to have an Ad Blocker on.
To continue reading, please turn it off or whitelist Udayavani.