ಕಟಾವು ಯಂತ್ರ ತೆರಳಲು ಅಡ್ಡಿ; ದೂರು-ಪ್ರತಿದೂರು
Team Udayavani, Nov 10, 2022, 12:44 AM IST
ಕೋಟ: ಕಟಾವು ಯಂತ್ರ ಗದ್ದೆಗೆ ತೆರಳಲು ಅಡ್ಡಿಪಡಿಸಿದ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ, ಹಲ್ಲೆ ನಡೆದು ದೂರು- ಪ್ರತಿದೂರು ದಾಖಲಾದ ಘಟನೆ ಅಚ್ಲಾಡಿಯಲ್ಲಿ ನ.7ರಂದು ಸಂಭವಿಸಿದೆ.
ಇಲ್ಲಿನ ಮಕ್ಕಿಮನೆ ನಿವಾಸಿ ಸಂಪಾವತಿ ಶೆಡ್ತಿ (62), ಇವರ ಮನೆಯ ಗದ್ದೆಯ ಕಟಾವು ಮಾಡಲು ಯಂತ್ರ ಬಂದಾಗ ಪಕ್ಕದ ಮನೆಯ ಚಂದ್ರ ಹಾಗೂ ಲತಾರವರು ಸಂಪಾವತಿಯವರ ಗದ್ದೆ ಯಲ್ಲಿ ಭತ್ತವನ್ನು ಕೊಂಡೊಯ್ಯಲು ದಾರಿ ಕೇಳಿದ್ದು, ಗದ್ದೆಯ ಬದಿಯಲ್ಲಿ ಹೋಗಲು ಒಪ್ಪಿಗೆ ಕೊಟ್ಟಿರುತ್ತಾರೆ. ಆದರೆ ಆಸುಪಾಸು ಮನೆಯವರು ಗದ್ದೆಯ ಮಧ್ಯದಲ್ಲಿ ದಾರಿ ಬೇಕು ಎಂದು ಕೇಳಿದಾಗ ಆಗುವುದಿಲ್ಲ ಎಂದು ಹೇಳಿದ್ದಕ್ಕೆ ಸುಶೀಲ ,ಶಾಂತ ಹಾಗೂ ಸಾಕು ಎನ್ನುವವರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿದೂರು
ಅಚ್ಲಾಡಿ ಮಕ್ಕಿಮನೆ ನಿವಾಸಿ ಸುಶೀಲಾ ಶೆಡ್ತಿ (67) ಇವರ ಮಾವನ ಮನೆಯ ಗದ್ದೆ ಕಟಾವಿಗೆ ಯಂತ್ರ ನೆರೆಮೆನೆಯ ಸಂಪಾ ಶೆಡ್ತಿಯವರ ಗದ್ದೆಯ ಮುಖಾಂತರ ಹೋದಾಗ ಸಂಪಾ ಅವರು ಹಾಗೂ ಅವರ ಗಂಡ ಕಾಳು ಶೆಟ್ಟಿಯವರು ಸುಶೀಲ ಶೆಡ್ತಿ ಹಾಗೂ ಅವರ ತಂಗಿ ಸಾಕು ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.