ಕುಂದಾಪುರ: ಹೈವೆ ಕಾಮಗಾರಿ ನಿರ್ಲಕ್ಷಿಸಿದ ಹೆದ್ದಾರಿ ಪ್ರಾಧಿಕಾರ!

 ಬಾಕಿ ಉಳಿದ ಕಾಮಗಾರಿಗೆ ಹತ್ತು ತಿಂಗಳಾದರೂ ಗಮನ ಹರಿಸಿಲ್ಲ

Team Udayavani, Jan 19, 2022, 7:11 PM IST

ಕುಂದಾಪುರ: ಹೈವೆ ಕಾಮಗಾರಿ ನಿರ್ಲಕ್ಷಿಸಿದ ಹೆದ್ದಾರಿ ಪ್ರಾಧಿಕಾರ!

ಕುಂದಾಪುರ: ನಗರದಲ್ಲಿ ನವಯುಗ ಕಂಪೆನಿಯವರು ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿದು ವಾಹನಗಳ ಓಡಾಟ 10 ತಿಂಗಳಿನಿಂದ ನಡೆಯುತ್ತಿದೆ. ಆದರೆ ಕಾಮಗಾರಿಯಲ್ಲಿ ಸಾಕಷ್ಟು ನ್ಯೂನತೆಗಳಿವೆ. ಈ ಬಗ್ಗೆ ಪುರಸಭೆ ಸಾಕಷ್ಟು ನಿರ್ಣಯಗಳನ್ನು ಮಾಡಿದರೂ, ಕೇಂದ್ರ ಸಚಿವರು ಹೇಳಿದರೂ, ಜಿಲ್ಲಾಧಿಕಾರಿ ಪತ್ರ ಬರೆದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸ್ಪಂದಿಸಿಲ್ಲ. ಎಸಿ ನೇತೃತ್ವದಲ್ಲಿ ಸಮಿತಿ ರಚಿಸಿ ಸಭೆಗೆ ಬನ್ನಿ ಎಂದರೂ ಬರುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ದಿವ್ಯ ನಿರ್ಲಕ್ಷ್ಯದ ಕುರಿತು ಕುಂದಾಪುರ ಜನತೆ ರೋಸಿ ಹೋಗಿದ್ದಾರೆ.

ಆಮೆಗತಿಯ ಕಾಮಗಾರಿ
ನಿರಂತರ 10 ವರ್ಷಗಳ ಕಾಲ ಕಾಮಗಾರಿ ನಡೆಸಿ ಫ್ಲೈಒವರ್‌ ಕಳೆದ ವರ್ಷಕ್ಕೆ ಮುಗಿದಿದೆ. ಅದಕ್ಕೂ ಮುನ್ನ
ಕೇಸು, ಗಲಾಟೆ, ಪ್ರತಿಭಟನೆ, ನೋಟಿಸ್‌ ಎಂದು ಸಾಕಷ್ಟು ಮುಜುಗರಕ್ಕೊಳಗಾದರೂ ಗುತ್ತಿಗೆದಾರ ಸಂಸ್ಥೆ ಬುದ್ಧಿ
ಕಲಿತಂತಿಲ್ಲ. ಬಾಕಿ ಉಳಿದ ಕಾಮಗಾರಿಗಳ ಕಡೆಗೆ ತಿಂಗಳು ಹತ್ತಾದರೂ ಗಮನ ಹರಿಸಿಲ್ಲ. ಫ್ಲೈಒವರ್‌ ಅಡಿ ವರ್ಷಾನುಗಟ್ಟಲೆಯಿಂದ ಪಾಳುಬಿದ್ದಿದ್ದ ವಸ್ತು, ತ್ಯಾಜ್ಯವನ್ನು ಸಹಾಯಕ ಕಮಿಷನರ್‌ ಖುದ್ದು ಸ್ಥಳಕ್ಕೆ ತೆರಳಿ ಖಾಲಿ ಮಾಡಿಸಬೇಕಾಗಿ ಬಂದಿತ್ತು. ಈಗಲೂ ಪೂರ್ಣ ತೆರವು ಕಾರ್ಯ ನಡೆದಿಲ್ಲ.

ಈಡೇರದ ಬೇಡಿಕೆ
ಕುಂದಾಪುರ ನಗರಕ್ಕೆ ಪ್ರವೇಶ ನೀಡಿಲ್ಲ. ಹೆದ್ದಾರಿಯಿಂದ ಸರ್ವಿಸ್‌ ರಸ್ತೆಗೆ ತೆರಳಲು ಅವಕಾಶ ಕೊಡಿ ಎಂದು
ಫ್ಲೈಒವರ್‌ ಕಾಮಗಾರಿ ಪೂರ್ಣವಾಗುವ ಮೊದಲೇ “ಉದಯವಾಣಿ “ಸುದಿನ’ ಪತ್ರಿಕೆಯಲ್ಲಿ ವರದಿಯೂ ಆಗಿತ್ತು. ಜನರೂ ಬೇಡಿಕೆ ಇಟ್ಟಿದ್ದರು. ತಾಂತ್ರಿಕ ಕಾರಣ ಗಳನ್ನು ನೀಡಿ ಪ್ರವೇಶ ನೀಡುತ್ತಿಲ್ಲ.

ವ್ಯವಸ್ಥೆಗಳೇ ಇಲ್ಲ
ಬೀದಿದೀಪ ಅಳವಡಿಸಿಲ್ಲ. ಕೆಲವು ಉರಿಯುತ್ತಿಲ್ಲ. ಫ್ಲೈಒವರ್‌ನಿಂದ ಮಳೆನೀರು ಸರ್ವಿಸ್‌ ರಸ್ತೆಗೆ ಬೀಳುವಾಗ ವಾಹನ ತೆರಳುವಾಗ ಸವಾರರ ಮೇಲೆ ಹಾರುತ್ತದೆ. ಇದನ್ನು ಸರಿಪಡಿಸಲಾಗಿದೆ ಎಂದು ಅಧಿವೇಶನದಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ.

ಮನವಿಗೆ ಬೆಲೆ ಇಲ್ಲ
ಪುರಸಭೆ ಈ ಕುರಿತು ಸಾಕಷ್ಟು ನಿರ್ಣಯ ಮಾಡಿದೆ. ಪುರಸಭೆಯ ಸಾಮಾನ್ಯ, ವಿಶೇಷ ಸಭೆಗೆ ಹೆದ್ದಾರಿ ಇಲಾಖೆ
ಅಧಿಕಾರಿಗಳು ಸರಿಯಾಗಿ ಬರುವುದಿಲ್ಲ. ಬಂದರೂ ಮಾಹಿತಿ ಕೊಡುವುದಿಲ್ಲ. ಕೊಟ್ಟರೂ ಬೇಡಿಕೆ ಈಡೇರಿಸುವುದಿಲ್ಲ. ಜಿಲ್ಲಾಧಿಕಾರಿಗಳು ಎಸಿ ಅಧ್ಯಕ್ಷತೆ ಯಲ್ಲಿ ಸಮಿತಿಯೊಂದನ್ನು ಮಾಡಿ ನಗರ ಪ್ರವೇಶಕ್ಕೆ ಅನುವಾಗುವಂತೆ ವರದಿ ನೀಡಲು ಹೇಳಿದ್ದರೂ ಹೆದ್ದಾರಿ ಇಲಾಖೆ ಮೌನವಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೂಚಿಸಿದ್ದರೂ ಪ್ರಯೋಜನ ಮಾತ್ರ ಆಗಲೇ ಇಲ್ಲ.

10 ಬೇಡಿಕೆಗಳು
– ಪಾದಚಾರಿ ಪಥ ಸಮರ್ಪಕವಾಗಿಲ್ಲ.
-ರಸ್ತೆ ನೀರು ಸರಾಗವಾಗಿ ಚರಂಡಿಗೆ   ಹರಿಯುವಂತಿಲ್ಲ.
– ಫ್ಲೈಒವರ್‌ ನೀರು ಸರ್ವಿಸ್‌ ರಸ್ತೆಗೆ ಬೀಳುತ್ತದೆ.
– ರಸ್ತೆ ದೀಪ ಅಳವಡಿಸಿಲ್ಲ
– ನಗರಕ್ಕೆ ಪ್ರವೇಶ ನೀಡಿಲ್ಲ
– ಶಾಸ್ತ್ರಿ ಸರ್ಕಲ್‌ ಬಳಿ ಫ್ಲೈ ಒವರ್‌ ಅಡಿ ಸ್ಥಳ ಪಾರ್ಕಿಂಗ್‌ಗೆ ಕೊಟ್ಟಿಲ್ಲ
– ಫ್ಲೈ ಒವರ್‌ ಕೆಳಗೆ ಉದ್ಯಾನ ನಿರ್ಮಿಸಿಲ್ಲ.
– ಸರ್ವಿಸ್‌ ರಸ್ತೆ ದುರಸ್ತಿಗೊಳಿಸಿಲ್ಲ.
– ಸರ್ವಿಸ್‌ ರಸ್ತೆಗೆ ಕೂಡುವ ರಸ್ತೆಯ ಸಂಪರ್ಕ ಸುಗಮವಾಗಿಲ್ಲ.
– ಸ್ವಾಗತ ಕಮಾನು ಇಲ್ಲ; ಕುಂದಾಪುರ ನಗರ ಎಂಬ ಫ‌ಲಕವೇ ಇಲ್ಲ

ಸೂಚಿಸಲಾಗಿದೆ
ಎಸಿ ಅಧ್ಯಕ್ಷತೆಯ ಸಮಿತಿ ಸಭೆಗೆ 3 ಬಾರಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಹಾಜರಾಗಿಲ್ಲ. ಇನ್ನೊಂದು ದಿನಾಂಕ ನಿಗದಿ ಮಾಡಿ ಸಭೆ ನಡೆಸುವಂತೆ ಎಸಿಯವರಿಗೆ ಸೂಚಿಸಲಾಗಿದೆ. ನಗರಕ್ಕೆ ಪ್ರವೇಶ ನೀಡುವ ಕುರಿತು ತೀರ್ಮಾನ ಆಗಲಿದೆ.
-ಎಂ. ಕೂರ್ಮಾ ರಾವ್‌,
ಜಿಲ್ಲಾಧಿಕಾರಿ, ಉಡುಪಿ

ಟಾಪ್ ನ್ಯೂಸ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-mit

Manipal MIT: ಅಂತಾರಾಷ್ಟ್ರೀಯ ಕಾರ್ಯಾಗಾರ

Manipal: ಮಾಹೆ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ರಜತ ಮಹೋತ್ಸವ

Manipal: ಮಾಹೆ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ರಜತ ಮಹೋತ್ಸವ

KND-Amber-greece

Whale: ಅಂಬರ್‌ ಗ್ರೀಸ್‌ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.