ಕುಂದಾಪುರ: ರಿಂಗ್‌ರೋಡ್‌ಗೆ ಯುಜಿಡಿ ಆತಂಕ-ರಸ್ತೆಗೆ ಅಪಾರ ಹಾನಿ ಸಾಧ್ಯತೆ…


Team Udayavani, Jul 10, 2024, 5:08 PM IST

ಕುಂದಾಪುರ: ರಿಂಗ್‌ರೋಡ್‌ಗೆ ಯುಜಿಡಿ ಆತಂಕ-ರಸ್ತೆಗೆ ಅಪಾರ ಹಾನಿ ಸಾಧ್ಯತೆ…

ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ನಗರದ ಎಲ್ಲ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಿಂಗ್‌ ರೋಡ್‌ ಅಭಿವೃದ್ಧಿಗೆ ಇದ್ದ ಎಲ್ಲ ಅಡೆತಡೆಗಳೂ ನಿವಾರಣೆಯಾಗಿದ್ದು ಹೊಸದಾಗಿ ಯುಜಿಡಿ ಆತಂಕ ಎದುರಾಗಿದೆ. ಸಿಆರ್‌ಝಡ್‌ ಅನುಮತಿಯೇ ಆಗದೇ ಯೋಜನೆ ತಯಾರಿಸಿ ಟೆಂಡರ್‌ ಕರೆದು ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗಿತ್ತು. ಈಚೆಗೆ ಶಾಸಕ ಕಿರಣ್‌ ಕುಮಾರ್‌
ಕೊಡ್ಗಿ ಅವರು ಸಿಆರ್‌ಝಡ್‌ ಅನುಮೋದನೆ ದೊರಕಿಸಿಕೊಟ್ಟಿದ್ದಾರೆ ಎಂಬಲ್ಲಿಗೆ ಕಾಮಗಾರಿಗೆ ಒಂದು ಹಂತದ ನಿರಾಕ್ಷೇಪಣೆ ದೊರೆತಿದೆ.

ಅದಕ್ಕಾಗಿ ಕಲ್ಲುಗಳು ಬಂದು ಬಿದ್ದಿವೆ. 2023 ಜನವರಿಯಲ್ಲಿ ಶಿಲಾನ್ಯಾಸವಾಗಿದ್ದು 18 ತಿಂಗಳ ಅವಧಿಯಲ್ಲಿ ಕೆಲಸ ಮುಗಿಯಬೇಕಿತ್ತು. ಈಗ 19 ತಿಂಗಳಾಗಿದ್ದು ಮಳೆಗಾಲದ ತಿಂಗಳುಗಳನ್ನು ಹೊರತುಪಡಿಸಿದರೆ ಇನ್ನು ಬೆರಳೆಣಿಕೆ ತಿಂಗಳಲ್ಲಿ ಕಾಮಗಾರಿ ಮುಗಿಯಬೇಕು. ಈ ಮಳೆಗಾಲ ಮುಗಿದ ಬಳಿಕವೇ ಕಾಮಗಾರಿ ಆರಂಭವಾಗಲಿದೆ.

ರಿಂಗ್‌ರೋಡ್‌ ವಿಶೇಷತೆ
ಪಾದಚಾರಿಗಳಿಗೆ ನಡೆಯಲು ದಾರಿ, ನದಿಗೆ ತಡೆಗೋಡೆ, ದ್ವಿಪಥ ಮಾದರಿಯಲ್ಲಿ, ವಿದ್ಯುತ್‌ ದೀಪಗಳ ಬೆಳಕಿನಲ್ಲಿ ರಿಂಗ್‌ರೋಡ್‌ ಅತ್ಯಾಕರ್ಷಕವಾಗಿ ಕಾಣುವಂತೆ ನಿರ್ಮಾಣವಾಗಲಿದೆ. ಈ ರಸ್ತೆಯಿಂದ ನಗರದ ಒಳಗಿನ ಮದ್ದುಗುಡ್ಡೆ, ಹೊಸಬಸ್‌ನಿಲ್ದಾಣ,
ಬಹದ್ದೂರ್‌ಶಾ ವಾರ್ಡ್‌, ಖಾರ್ವಿಕೇರಿ ಮೊದಲಾದ ರಸ್ತೆಗಳಿಗೆ ಸಂಪರ್ಕ ದೊರೆಯಲಿದೆ.

ಮಹತ್ವಾಕಾಂಕ್ಷಿ ಯೋಜನೆ
ಕುಂದಾಪುರ ನಗರವನ್ನು ಸುತ್ತುವರಿದಿರುವ ಮಹತ್ವಾಕಾಂಕ್ಷೆಯ ರಿಂಗ್‌ರೋಡ್‌ ನಾಗರಿಕರ ಪಾಲಿಗೆ ದುರ್ಲಭ ಎಂಬಂತೆ ಭಾಸವಾಗುತ್ತಿತ್ತು. ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ದೂರದೃಷ್ಟಿತ್ವದಲ್ಲಿ 2006-07ನೇ ಸಾಲಿನಲ್ಲಿ ಸಾಕಾರಗೊಂಡ ಈ ಮಹತ್ವಾಕಾಂಕ್ಷೆಯ ಯೋಜನೆ ನಿರ್ವಹಣೆ ಇಲ್ಲದೆ ಸೊರಗುತ್ತಿತ್ತು.

ರಿಂಗ್‌ರೋಡ್‌ ಕಾಡುವ ಯುಜಿಡಿ
ಖಾರ್ವಿಕೇರಿ ಪರಿಸರಕ್ಕೆ ಯುಜಿಡಿ ಸಂಪರ್ಕ ವ್ಯವಸ್ಥೆ ಆಗಲಿಲ್ಲ. ನಗರದ ಎಲ್ಲ ಕಡೆಯ ತ್ಯಾಜ್ಯ ಹರಿದು ಖಾರ್ವಿಕೇರಿ ಕಡೆಗೆ ಬರುತ್ತದೆ. ಇಲ್ಲಿನ ಸುಡುಗಾಡು ತೋಡು ಸೇರಿದಂತೆ ಖಾರ್ವಿಕೇರಿ ಜನರಿಗೆ ತ್ಯಾಜ್ಯ ನೀರಿನ ಅಶುದ್ಧ ವಾತಾವರಣ. ಸೊಳ್ಳೆ ಕಚ್ಚಿಸಿಕೊಳ್ಳುವ ಶಿಕ್ಷೆ. ವಾಸನೆಯ ನಿತ್ಯನರಕ. ಅದಕ್ಕಾಗಿ ಇಲ್ಲಿ ಒಳಚರಂಡಿ ಮಾಡಿ ಎನ್ನುವುದು ಅವರ ಬಹುಕಾಲದ ಬೇಡಿಕೆ.

ಆದರೆ ಚರಂಡಿ ಮಾತ್ರ ಮಾಡಿ ಆ ತ್ಯಾಜ್ಯ ನೀರು ಎಲ್ಲಿಗೆ ಹರಿದುಹೋಗಬೇಕೆಂಬುದೇ ತೀರ್ಮಾನವಾಗದೇ, ಹರಿದು ಹೋಗುವಲ್ಲಿನ ಭೂಸ್ವಾಧೀನ ಆಗದೇ, ಎಸ್‌ಟಿಪಿ ಘಟಕಗಳ ನಿರ್ಮಾಣವಾಗದೇ ಪೈಪ್‌ಲೈನ್‌ ಮಾಡಿದ ಬುದ್ಧಿವಂತ ಎಂಜಿನಿಯರ್‌ಗಳಿಂದಾಗಿ ಇಡೀ ನಗರದ ಜನತೆಗೆ ಸಂಕಷ್ಟ. 43 ಕೋ.ರೂ. ಚರಂಡಿ ನೀರಿನಲ್ಲಿ ತೊಳೆದು ಹೋದ ಅನುಭವ. ಈಗ
ಅಂತೂ ಇಂತೂ ಒಳಚರಂಡಿ ಮಾಡಬೇಕೆಂಬ ಹುಮ್ಮಸ್ಸು ಇದೆಯಾದರೂ ಭೂಸ್ವಾಧೀನದಲ್ಲಿ ಅಲ್ಲಲ್ಲಿ ಮೂಗಿಗೆ ಬಡಿಯುವ ಭ್ರಷ್ಟಾಚಾರದ ವಾಸನೆ. ಹಿಂದೊಮ್ಮೆ ಲೋಕಾಯುಕ್ತದಲ್ಲೂ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ಒಟ್ಟಿನಲ್ಲಿ ಯುಜಿಡಿಯೇ ಒಂದು ದೊಡ್ಡ ಅಪಧ್ವಾನ. ಈ ನಡುವೆ ಹೊಸದಾಗಿ ಯುಜಿಡಿ ಮಾಡಿದರೆ, ಖಾರ್ವಿಕೇರಿ ಭಾಗದ ಪೈಪ್‌ಲೈನ್‌ ಹೊಸದಾಗಿ ನಿರ್ಮಾಣವಾಗುವ ರಿಂಗ್‌ರೋಡ್‌ ಮೂಲಕ ಹೋಗಬೇಕಿದೆ. ರಸ್ತೆ ಮಾಡಿದ ಮೇಲೆ ಪೈಪ್‌ಲೈನ್‌ ಗಾಗಿ ಅಗೆದರೆ ಕೋಟ್ಯಂತರ ರೂ. ವ್ಯಯಿಸಿದ ರಿಂಗ್‌ರೋಡ್‌ ಹಾಳಾಗಲಿದೆ. ಈ ದೂರಾಲೋಚನೆಯಿಂದ ಶಾಸಕ ಕಿರಣ್‌
ಕುಮಾರ್‌ ಕೊಡ್ಗಿ ಅವರು ಯುಜಿಡಿ ಪೈಪ್‌ಲೈನ್‌ ಗೆ ಸ್ಥಳಾವಕಾಶ ಕಲ್ಪಿಸಿ ರಸ್ತೆ ನಿರ್ಮಿಸುವಂತೆ ಸಲಹೆ ನೀಡಿದ್ದಾರೆ. ಇದಕ್ಕಾಗಿ ಯುಜಿಡಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ, ಪುರಸಭೆಯವರು ಸಂಯುಕ್ತವಾಗಿ ಕಾರ್ಯನಿರ್ವಹಿಸಬೇಕಿದೆ. ರಸ್ತೆಯ ನಡುವೆ ಅಲ್ಲದಿದ್ದರೂ ಪಾದಚಾರಿ ಪಥದಲ್ಲಿ ಪೈಪ್‌ಲೈನ್‌ ಹಾಕುವಂತೆ ಶಾಸಕರು ಸೂಚಿಸಿದ್ದಾರೆ.

ಯುಜಿಡಿ ಸಮಸ್ಯೆ 
ನಗರದಲ್ಲಿ 43 ಕೋ.ರೂ. ವೆಚ್ಚದಲ್ಲಿ ಅನುಷ್ಠಾನ ಹಂತದಲ್ಲಿ ಇರುವ ಒಳಚರಂಡಿ ಕಾಮಗಾರಿಯ ಭೀತಿ ಈ ವರ್ತುಲ ರಸ್ತೆಯ
ಪಾಲಿಗಿದೆ. ಈ ಹಿಂದೆ ನಗರೋತ್ಥಾನದಲ್ಲಿ ಹೊಸದಾಗಿ ನಗರದ ರಸ್ತೆಗಳನ್ನು ಕಾಂಕ್ರಿಟ್‌ ರಸ್ತೆ ಮಾಡಿದಾಗ ಯುಜಿಡಿ ಪೈಪ್‌ಲೈನ್‌ಗಾಗಿ ನಡು ರಸ್ತೆಯನ್ನೇ ಕೊರೆಯಲಾಗಿತ್ತು. ನಗರದ ಬಹುತೇಕ ಎಲ್ಲ ಕಾಂಕ್ರಿಟ್‌ ರಸ್ತೆಗಳನ್ನು ಯುಜಿಡಿಗಾಗಿ ಕೊರೆದು
ಅಸಮರ್ಪಕವಾಗಿ ಮುಚ್ಚಿ ಇಂದಿಗೂ ಉತ್ತಮ ರಸ್ತೆ ಎಂದು ಯಾವುದನ್ನೂ ಗುರುತಿಸುವಂತಿಲ್ಲ ಎಂಬಂತೆ ಹಾಳುಗೆಡವಲಾಗಿದೆ. ಈಗಲೂ ಯುಜಿಡಿ ಸಂಬಂಧವಾಗಿ ಅಗೆದ ರಸ್ತೆಯ ದೂರುಗಳು ಇವೆ. ಅತ್ತ ಯುಜಿಡಿಯೂ ಆಗಲಿಲ್ಲ. ಇತ್ತ ರಸ್ತೆಯೂ ಉಳಿಯಲಿಲ್ಲ ಎಂಬಂತಹ ಅಯೋಮಯ ಸ್ಥಿತಿ.

20 ಕೋ.ರೂ.ಗಳ ರಿಂಗ್‌ರೋಡ್‌ ಯೋಜನೆ
915 ಮೀ. ಉದ್ದ ಹಾಗೂ 1,110 ಮೀ.ನಂತೆ ಉದ್ದದ ಎರಡು ಹಂತದಲ್ಲಿ ತಲಾ 9.98 ಕೋ. ರೂ. ವೆಚ್ಚದಲ್ಲಿ ಒಟ್ಟು 19.96 ಕೋ.ರೂ.ಗಳಲ್ಲಿ ಕಾಮಗಾರಿ ನಡೆಯಲಿದೆ. ಒಂದು ಬದಿಯಲ್ಲಿ ಚರಂಡಿ, ಇನ್ನೊಂದು ಬದಿಯಲ್ಲಿ ತಡೆಗೋಡೆ ಇರಲಿದ್ದು 10 ಅಡಿ ಅಗಲದ ಪಾದಚಾರಿ ಪಥ ಇರಲಿದೆ. ರಸ್ತೆ 12.5 ಮೀ. ಅಗಲ ಇರಲಿದೆ. 18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕೆಂಬ ಶರತ್ತಿದೆ. ಪ್ರಭಾಕರ ಟೈಲ್ಸ್‌ವರೆಗೆ ಈ ಕಾಮಗಾರಿ ನಡೆಯಲಿದ್ದು ಮುಂದಿನ ಕಾಮಗಾರಿಗೆ 16 ಕೋ.ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ.

ವರ್ತುಲ ರಸ್ತೆ
ಕುಂದಾಪುರದ ಸಂಗಂನಿಂದ ಮೊದಲ್ಗೊಂಡು ಪಂಚ ಗಂಗಾವಳಿ ನದಿ ಪಾತ್ರದಲ್ಲಿ ಹಾದು ಹೋಗುವ ರಿಂಗ್‌ ರೋಡ್‌ ಚರ್ಚ್‌ ರಸ್ತೆಯನ್ನು ಸಂಧಿಸುತ್ತದೆ. ಅಲ್ಲಿಂದ ಕುಂದಾಪುರ ನಗರವನ್ನು ಹತ್ತಿರದಿಂದ ಸಂಧಿಸಬಹುದಾಗಿದೆ.

ಮಂಜೂರಾತಿ ಆಗಿಲ್ಲ
ಯುಜಿಡಿ ಮುಂದುವರಿದ ಕಾಮಗಾರಿಗೆ ಟೆಂಡರ್‌ ಮಂಜೂರಾಗಿಲ್ಲ. ರಿಂಗ್‌ ರೋಡ್‌ ಹಾಳಾಗದಂತೆ ಪೈಪ್‌ಲೈನ್‌ ಹಾಕುವ ಕುರಿತು ಸಮನ್ವಯ ಮೂಲಕ ಕಾರ್ಯನಿರ್ವಹಿಸಲಾಗುವುದು.
*ಮಂಜುನಾಥ ಆರ್‌.
ಮುಖ್ಯಾಧಿಕಾರಿ, ಪುರಸಭೆ

*ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangolli: Disgusted person commits suicide

Gangolli: ಜುಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ

ಬಿಸಿಲಿನ ತಾಪಕ್ಕೆ ಕರಾವಳಿಯ ಯುವಕ ವಿದೇಶದಲ್ಲಿ ಸಾವು

Kundapura: ಬಿಸಿಲಿನ ತಾಪಕ್ಕೆ ಕರಾವಳಿಯ ಯುವಕ ವಿದೇಶದಲ್ಲಿ ಸಾವು

Gangolli: ಗೋ ಕಳವಿಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿಗಳ ಬಂಧನ

Gangolli: ಗೋ ಕಳವಿಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿಗಳ ಬಂಧನ

Maravanthe- ತ್ರಾಸಿ ಬೀಚ್‌: ಬಂಡೆಗಳು ಜಾರುತ್ತಿದ್ದರೂ ಪ್ರವಾಸಿಗರ ಮೋಜಿನಾಟ

Maravanthe- ತ್ರಾಸಿ ಬೀಚ್‌: ಬಂಡೆಗಳು ಜಾರುತ್ತಿದ್ದರೂ ಪ್ರವಾಸಿಗರ ಮೋಜಿನಾಟ

Thekkatte: ಸುಟ್ಟು ಕರಕಲಾದ ಎರಡು ದ್ವಿಚಕ್ರ ವಾಹನ

Thekkatte: ಸುಟ್ಟು ಕರಕಲಾದ ಎರಡು ದ್ವಿಚಕ್ರ ವಾಹನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.