Kundapura: ಬಸ್ರೂರಿಗೇ ಕದಿರು ನೀಡುವ ಕೊಳ್ಕೇರಿ ಮನೆತನ

ಕದಿರು ಗದ್ದೆಯಲ್ಲಿ ಬೆಳೆದ ಪೈರು ಬಸ್‌ ನಿಲ್ದಾಣದ ಕದಿರು ಕಟ್ಟೆಯ ಮೂಲಕ ಜನರಿಗೆ ಹಂಚಿಕೆ

Team Udayavani, Oct 8, 2024, 2:58 PM IST

6(1)

ಕುಂದಾಪುರ: ನವರಾತ್ರಿ ಸಂದರ್ಭ ನಡೆಯುವ ಕದಿರು ಪೂಜೆಯ ವೇಳೆ ಬಸ್ರೂರಿನ ಮನೆತನವೊಂದು ಇಡೀ ಊರಿಗೆ ಕದಿರು ದಾನ ಮಾಡುವ ಸಂಪ್ರದಾಯ ಉಳಿಸಿಕೊಂಡಿದೆ. ಅದಕ್ಕಾಗಿಯೇ ಭತ್ತ ಬಿತ್ತಿ ಪೈರು ಬೆಳೆಯುವ ಗದ್ದೆಗೆ ಕದಿರು ಗದ್ದೆ ಎಂದೇ ಹೆಸರು!

ಬಸ್ರೂರಿನ  ಪ್ರಮುಖ ಮನೆತನದಲ್ಲಿ ಒಂದಾದ ಕೊಳ್ಕೇರಿ  ಮನೆತನ ಊರಿನ ಯಾವುದೇ ಧಾರ್ಮಿಕ ಶುಭ ಕಾರ್ಯಕ್ರಮಗಳಲ್ಲಿ ಮುಂಚೂಣಿ ಯಲ್ಲಿರುತ್ತದೆ. ಹೊಸ್ತು ಅಥವಾ ಕದಿರು ಹಬ್ಬದಲ್ಲೂ ಕದಿರು ದಾನದ ಮೂಲಕ ಸಂಪ್ರದಾಯ ಪಾಲಿಸುತ್ತಿದೆ. ಕೊಳ್ಕೇರಿಯ ಕದಿರು ಗದ್ದೆಯಲ್ಲಿ ಬೆಳೆದ ಪೈರನ್ನು ಹೊಸ್ತಿನ ಮುಂಚಿನ ಕಟಾವು ಮಾಡಿ ತಂದು ದೇವರ ಪ್ರಸಾದವನ್ನು ಹಾಕಿ  ಮರುದಿನ ಬಸ್‌ ನಿಲ್ದಾಣದ ಸಮೀಪದ ಕದಿರು ಕಟ್ಟೆಯಲ್ಲಿ ಇಟ್ಟು ಸಾರ್ವಜನಿಕರಿಗೆ ಹಂಚುವುದು ರೂಢಿ.

ಕದಿರು ಉತ್ಸವದ ದಿನಾಂಕ ನಿಗದಿಯಾಗುವುದು ಪಂಚ ಗ್ರಾಮಗಳ ಅಧಿದೈವ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ. ಊರಿನ ಹಿರಿಯರು ಹಾಗೂ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆಯವರು ಇದರ ನೇತೃತ್ವ ವಹಿಸುತ್ತಾರೆ. ಹೊಸ್ತಿನ ಮುನ್ನಾ ದಿನ ಕದಿರು ಕಟಾವು ಮಾಡಿ ಮೆರವಣಿಗೆ ಮೂಲಕ ಕದಿರು ಕಟ್ಟೆಗೆ ತರಲಾಗುತ್ತದೆ. ಇದೊಂದು ರೀತಿಯಲ್ಲಿ ಕೊಡಗಿನ ಹುತ್ತರಿ ಹಬ್ಬವನ್ನು ನೆನಪಿಸುತ್ತದೆ.

ಹೊಸ್ತು ಹಬ್ಬದ ದಿನ  ಬೆಳಗ್ಗೆ  ದೇವಸ್ಥಾನದಲ್ಲಿ ಮಹಾ ಪೂಜೆಯಾದ ನಂತರ ಜಾಗಟೆ ಬಾರಿಸಲಾಗುತ್ತದೆ. ಆಗ  ಜನರು ಬಸ್‌ ನಿಲ್ದಾಣದಲ್ಲಿರುವ  ಕದಿರು ಕಟ್ಟೆಯ ಕಡೆ ತೆರಳುತ್ತಾರೆ. ಅಲ್ಲಿ ಊರಿನ ಜನರು ಸಾಮರಸ್ಯರಿಂದ ಕದಿರು ಪಡೆಯುತ್ತಾರೆ. ಆಗ ಮತ್ತೆ ದೇವಸ್ಥಾನದ ಜಾಗಟೆ ಮೊಳಗುತ್ತದೆ. ಆಗ ಎಲ್ಲರೂ ಸಾಲಾಗಿ ದೇವಸ್ಥಾನಕ್ಕೆ ಹೋಗಿ  ದೇವರ ದರುಷನ ಪಡೆದು ಮತ್ತೆ ಮನೆ ಕಡೆ ತೆರಳಿ ಹಬ್ಬದ ಆಚರಣೆ ಮಾಡಲಾಗುತ್ತದೆ.

ಮನೆತನಕ್ಕೆ ದೇವರ ನೈವೇದ್ಯ
ಕೊಳ್ಕೇರಿ  ಮನೆತನ ಸಾರ್ವಜನಿಕವಾಗಿ ಕದಿರು ದಾನ ನೀಡಿರುವ ಕಾರಣದಿಂದ ಮಹಾದೇವನ ಸನ್ನಿಧಿಯಲ್ಲಿ ನಡೆಯುವ ವಿಶೇಷ ನೈವೇದ್ಯ ಸೇವೆಯ ಪ್ರಸಾದವನ್ನು ಮನೆತನಕ್ಕೆ ನೀಡಲಾಗುತ್ತದೆ. “ಸಾರ್ವ ಜನಿಕ ಬಾಂಧವ್ಯ ಬೆಸೆಯುವಂತೆ ಮೆರವಣಿಗೆ ಮೂಲಕ ಕದಿರು ತರುವುದು ಅಪರೂಪದ ಕಾರ್ಯಕ್ರಮ. ಇದು ಇಂದಿಗೂ ಕೊಳ್ಕೇರಿ  ಮನೆತನದ ಹೆಮ್ಮೆಯ ಸಂಗತಿ ಎನಿಸಿದೆ” ಎನ್ನುತ್ತಾರೆ ವಿಕಾಸ್‌ ಹೆಗ್ಡೆ ಕೊಳ್ಕೇರಿ .

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

4(1

Manipal: ನಮ್ಮ ಸಂತೆಯಲ್ಲಿ ಜನ ಸಾಗರ

Namma-SANTHE-1

Manipal: ನಮ್ಮ ಸಂತೆಗೆ ಎರಡನೇ ದಿನವೂ ಅಭೂತಪೂರ್ವ ಸ್ಪಂದನೆ: ಇಂದೇ ಕೊನೆಯ ದಿನ

8

Karkala: ಚಾರ್ಚ್‌ಗಿಟ್ಟ ಮೊಬೈಲ್‌ ಸ್ಫೋ*ಟ; ಮನೆಗೆ ಬೆಂಕಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.