![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Sep 19, 2024, 9:30 PM IST
ಕುಂದಾಪುರ : ಕೆಂಚನೂರು ಗ್ರಾಮದ ಶಂಕರಪ್ಪನ ಕೊಡ್ಲು ಎಂಬಲ್ಲಿನ ಹೆಮ್ಮಾಡಿ – ಕೊಲ್ಲೂರು ಮುಖ್ಯ ರಸ್ತೆಯ ಬದಿಯ ಚರಂಡಿಯಲ್ಲಿ ಯಾರೋ ಕಿಡಿಗೇಡಿಗಳು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಯಾವುದೋ ಪ್ರಾಣಿಯ ತ್ಯಾಜ್ಯವನ್ನು ಬೀಸಾಡಿರುವುದು ಸೆ.18 ರಂದು ಪತ್ತೆಯಾಗಿದೆ.
ರಸ್ತೆ ಬದಿ ವಾಸನೆ ಬರುತ್ತಿರುವುದನ್ನು ಸತೀಶ್ ಎಂಬುವರು ಪರಿಶೀಲಿಸಿ, ರವಿ ಕೆಂಚನೂರು ಅವರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಾವುದೋ ಪ್ರಾಣಿಯ ತ್ಯಾಜ್ಯ ಕೊಳೆತು ವಾಸನೆ ಬರುತ್ತಿದ್ದು, ನಾಯಿಗಳು ಎಳೆದಾಡಿ, ಹರಡಿ ಹಾಕಿವೆ.
ಯಾರೋ ಕಿಡಿಗೇಡಿಗಳು ದ್ವೇಷ ಪೂರ್ವಕವಾಗಿ ಈ ಕೃತ್ಯ ಎಸಗಿರುವುದಾಗಿ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.