ಕುಂದಾಪುರ: ಸಮುದ್ರದ ಅಲೆಗಳಲ್ಲಿ ಕಪ್ಪು ದ್ರವ


Team Udayavani, May 25, 2022, 10:50 AM IST

black-liquid

ಕುಂದಾಪುರ: ದಕ್ಷಿಣ ಕನ್ನಡದ ಬೀಚ್‌ಗಳಲ್ಲಿ ಅಲೆಗಳ ಮೇಲೆ ತೇಲುತ್ತಿರುವ ಕಪ್ಪು ದ್ರವದ ಮಾದರಿಯಲ್ಲಿ ಕುಂದಾಪುರದಲ್ಲೂ ಸಮುದ್ರದ ಅಲೆಗಳಲ್ಲಿ ಕಪ್ಪುದ್ರವ ತೇಲುವುದು ಕಂಡುಬಂದಿದೆ. ಸಮುದ್ರದ ನೀರು ಕಲುಷಿತಗೊಂಡಿದ್ದು ಮೀನುಗಾರರಲ್ಲಿ ಆತಂಕ ಮೂಡಿಸಿದೆ.

ಮೀನುಗಳ ಸಾವು

ಪ್ರತೀ ವರ್ಷವೂ ಈ ಕಪ್ಪು ದ್ರವ ಕುಂದಾಪುರದ ಕಡಲ ತೀರವಿಡೀ ಕಾಣಲು ಸಿಗುತ್ತದೆ. ಆದರೆ ಸ್ಥಳೀಯರ ಅಭಿಪ್ರಾಯದ ಪ್ರಕಾರ ತೇಲುವ ಈ ಕಪ್ಪು ದ್ರವ ಬಂದಂತೆ ಪಂಜರದಲ್ಲಿ ಸಾಕಿದ ಮೀನುಗಳೂ ಏಕಾಏಕಿ ಸಾವಿಗೀಡಾಗುತ್ತವೆ. ಮೀನುಗಾರಿಕೆ ಮೇಲೆ ಇದು ಗಾಢ ಪರಿಣಾಮ ಬೀರುತ್ತಿದೆ.

ಪೆಟ್ರೋಲಿಯಂ ತ್ಯಾಜ್ಯ

ಸಮುದ್ರದ ಅಲೆಗಳಲ್ಲಿ ಕಂಡು ಬರುತ್ತಿರುವ ಕಪ್ಪುದ್ರವ ಹಡಗುಗಳಿಂದ ಸುರಿದ ಪೆಟ್ರೋಲಿಯಂ ತ್ಯಾಜ್ಯ – ಟಾರ್‌ ಬಾಲ್‌ಗ‌ಳು ಎನ್ನುವ ಆರೋಪ ಊರವರದು. ಏಕೆಂದರೆ ಸಮುದ್ರಕ್ಕೆ ಇಳಿದು ನಡೆದುಕೊಂಡು ಹೋದರೆ, ಕೈಗೆ ನೀರನ್ನು ಹಾಕಿಕೊಂಡರೆ ಕೈ ಕಾಲುಗಳು ಕಪ್ಪಾಗುತ್ತವೆ. ಸಣ್ಣ ಸಣ್ಣ ಗಡ್ಡೆಯಂತಹ ಆಕಾರಗಳು ಪತ್ತೆಯಾಗುತ್ತಿವೆ.

ಕ್ಲೀನ್‌ ಕುಂದಾಪುರ ತಂಡ

134 ನೇ ವಾರ ಕಡಲತಡಿಯ ಸ್ವತ್ಛತೆಗೆ ಬೀಜಾಡಿಯ ಸಮುದ್ರ ದಡಕ್ಕಿಳಿದ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ತಂಡಕ್ಕೆ ಈ ತೇಲುವ ಕಪ್ಪು ದ್ರವ ತೀರದುದ್ದಕ್ಕೂ ಹರಡಿರುವುದು ಗಮನಕ್ಕೆ ಬಂತು. ತಂಡದಲ್ಲಿದ್ದ ಒಂದಿಬ್ಬರು ಪರೀಕ್ಷಿಸಲು ಹೋಗಿ, ಎಣ್ಣೆ ಅಂಶದ ಟಾರ್‌ನ್ನು ಚಪ್ಪಲಿಗೆ ಮೆತ್ತಿಕೊಂಡು ಅದು ಏನಿರಬಹುದು? ಅನ್ನುವುದರ ಪ್ರತ್ಯಕ್ಷ ಅನುಭವ ಹೊತ್ತು ತಂದರು! ದೂರದೂರದಿಂದ ಸಮುದ್ರ ನೋಡಲು ಬಂದ ಕೆಲವು ಜೋಡಿಗಳು ಸಮುದ್ರ ಅಂದರೆ ಕಪ್ಪು ನೀರು ಅಂತ ತಿಳಿದು ಆ ನೀರಲ್ಲೇ ಹೊರಳಾಡೋದು, ತುರಿಕೆ ಶುರುವಿಟ್ಟುಕೊಳ್ಳುವುದು ಬೇಡ ಎಂದು ತಂಡದವರು ಸಮುದ್ರದ ನೀರಲ್ಲಿ ಆಟವಾಡದಂತೆ ಎಚ್ಚರಿಸಿದ್ದಾರೆ.

ಅಪಾಯ

ಸಮುದ್ರವನ್ನೇ ನಂಬಿದ ಜೀವ ಸಂಕುಲಗಳ ಬದುಕಿಗೆ ಮಾರಕವಾದ ಇದರ ಕುರಿತು ಸಮುದ್ರ ಜೀವಿಗಳಿಗೆ ಇದರ ಅಪಾಯದಿಂದ ತಪ್ಪಿಸಿಕೊಳ್ಳಲು ಎಚ್ಚರಿಸುವ ಅಗತ್ಯ ಇದೆ.

ಅಲ್ಲೇನು

ಮಾನ್ಸೂನ್‌ ಪೂರ್ವದಲ್ಲಿ ಬಯೋ ಲ್ಯೂಮಿನೆಸೆನ್ಸ್‌ ಆಲ್ಗೆಗಳ ಬ್ಲೂಮ್‌ನಿಂದ ಹೀಗಾಗುತ್ತದೆ. ಇದು ಸಹಜ ಎಂದು ಅಧಿಕಾರಿಗಳು ಹೇಳಿಕೆ ಕೊಟ್ಟು ದಕ್ಷಿಣಕನ್ನಡದಲ್ಲಿ ಪತ್ತೆಯಾದ ದ್ರವದ ಮಾದರಿಯನ್ನು ಹೆಚ್ಚಿನ ಮಾಹಿತಿಗೆ ಲ್ಯಾಬ್‌ ಗೆ ಕಳುಹಿಸಿಕೊಟ್ಟಿದ್ದರು. ಅಷ್ಟಕ್ಕೂ ಸಮುದ್ರ ತೀರದಲ್ಲಿ ಮಾನ್ಸೂನ್‌ ಪೂರ್ವದಲ್ಲಿ ಆಗುತ್ತಿರುವುದೇನು? ಸಮುದ್ರ ಜೈವಿಕ ವ್ಯವಸ್ಥೆಗೆ ಮಾರಕವಾದ ಈ ಪೆಟ್ರೋಲಿಯಂ ತ್ಯಾಜ್ಯ ಸಮುದ್ರ ತೀರದಲ್ಲಿ ನೂರಾರು ಕಿಲೋಮೀಟರ್‌ ಗಟ್ಟಲೆ ಹರಡೋದು ಹೇಗೆ? ಗೊತ್ತಿಲ್ಲದೆ ನಡೆಯುವ ಪ್ರಮಾದವೇ? ಪರೋಕ್ಷವಾಗಿ ಸಮುದ್ರದ ಆಹಾರ ತಿನ್ನುವವನ ಆರೋಗ್ಯಕ್ಕೂ ಇದು ಮಾರಕವಲ್ಲವೇ? ಎನ್ನುವ ಪ್ರಶ್ನೆಗಳಿಗೆ ಉತ್ತರ ದೊರೆತಿಲ್ಲ.

ಜಾಗೃತರಾಗಬೇಕಿದೆ

ಭೂಮಿಯ, ಅಷ್ಟೂ ಜೈವಿಕ ಪ್ರಕ್ರಿಯೆಯ ಮೂಲವಾದ ಸಾಗರವನ್ನು ಇನ್ನಿಲ್ಲದಂತೆ ಕಲುಷಿತ ಮಾಡುವುದನ್ನು ಮೂಕರಾಗಿ ನೋಡಬೇಕೆನ್ನುವ ಅಪರಾಧ ಪ್ರಜ್ಞೆ ಕಾಡುತ್ತ ಇದೆ. ಈ ಕುರಿತು ಇನ್ನಷ್ಟು ಮಂದಿ ಜಾಗೃತರಾಗುವ ಅಗತ್ಯವಿದೆ. ಸಮುದ್ರವನ್ನೇ ವಿಷ ಮಾಡುತ್ತಿರುವ ಈ ಗಂಭೀರ ವಿಚಾರ ಕಡಲನ್ನೇ ನಂಬಿ ಬದುಕುವವರ ಗಮನಕ್ಕೂ ಬಾರದಿರುವುದು ಆಶ್ಚರ್ಯ. -ಗಣೇಶ್‌ ಪುತ್ರನ್‌ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ತಂಡ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.