Kundapura: ಕುಡಿಯುವ ನೀರಿಗೆ ಬಿಲ್ಲಿನ ಭಾರ: ನಗರದಲ್ಲಿ ಏರಿದ ದರ

ಗಮನಕ್ಕೂ ತಾರದೇ ನಿರ್ಣಯ ಮಾಡಿರುವುದು ಖಂಡನೀಯ

Team Udayavani, Apr 2, 2024, 2:25 PM IST

Kundapura: ಕುಡಿಯುವ ನೀರಿಗೆ ಬಿಲ್ಲಿನ ಭಾರ: ನಗರದಲ್ಲಿ ಏರಿದ ದರ

ಕುಂದಾಪುರ: ಒಂದೆಡೆ ಎಲ್ಲೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ಕುಂದಾಪುರ ಪುರಸಭೆಗೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಆದರೆ ಕಳೆದ ವರ್ಷ 10 ವರ್ಷದ ಬಳಿಕ ಮೊದಲ ಬಾರಿ ಎಂಬಂತೆ ಕುಡಿಯಲು ಉಪ್ಪು ನೀರು ಬಂದು ಸಮಸ್ಯೆ ಆಗಿತ್ತು. ಸದ್ಯ ಕುಡಿಯುವ ನೀರಿನ ನಿರ್ವಹಣೆಯನ್ನು ಜಲಸಿರಿ ಯೋಜನೆ ಮೂಲಕ ನಡೆಸಲಾಗುತ್ತಿದೆ. ಈ ಮಧ್ಯೆ ಪುರಸಭೆ ನೀರಿನ ದರ ಪರಿಷ್ಕರಿಸಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ.

ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದರ ಏರಿಸಿದ್ದು ಎ.1ರಿಂದ ಜಾರಿಗೆ ಬಂದಿದೆ. ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದಿದ್ದಾಗ ನೀರಿನ ದರ ಏರಿಕೆ ಮಾಡಿರುವುದು ಜನಪ್ರತಿನಿಧಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸಾರ್ವಜನಿಕರಿಗೆ
ಇನ್ನೂ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯದ ಕಾರಣ ಗೊಂದಲ ಉಂಟಾಗಿದೆ. ದರ ಏರಿಕೆ ಕುರಿತು ಆಕ್ರೋಶ ವ್ಯಕ್ತವಾಗಿದೆ.

ಸೂಚನೆಯಂತೆ ಏರಿಕೆ
ರಾಜ್ಯ ಸರಕಾರದ 2021ರ ಸೂಚನೆಯಂತೆ ಮೂರು ವರ್ಷಗಳಿಗೊಮ್ಮೆ ನೀರಿನ ದರ ಪರಿಷ್ಕರಿಸಬೇಕು. ಆದರೆ ಕುಂದಾಪುರದಲ್ಲಿ
ಕಳೆದ 4 ವರ್ಷಗಳಿಂದ ಹಳೆಯ ದರವೇ ಇದೆ. ಅದರಂತೆ ನೂತನ ಪರಿಷ್ಕೃತ ದರವನ್ನು ಪುರಸಭೆ ಆಡಳಿತಾಧಿಕಾರಿ ಅವರು ಸಭೆಯಲ್ಲಿ ಮಂಜೂರು ಮಾಡಿದ್ದಾರೆ.

ಮನೆಗಳಿಗೆ
ಗೃಹಬಳಕೆಗೆ ಪ್ರತೀ ಸಾವಿರ ಲೀ.ಗೆ 2013ರಲ್ಲಿ 7 ರೂ., 2017ರಲ್ಲಿ 8 ರೂ., 2020ರಲ್ಲಿ 9 ರೂ. ಇದ್ದುದು 2024ರಿಂದ 10 ರೂ. ಆಗಲಿದೆ. ಇದು 8 ಸಾವಿರ ಲೀ.ವರೆಗಿನ ಬಳಕೆಗೆ. 25 ಸಾವಿರ ಲೀ.ಗಿಂತ ಹೆಚ್ಚು ಬಳಸಿದರೆ ಈ ದರ ಪ್ರತೀ ಸಾವಿರ ಲೀ.ಗೆ 16 ರೂ. ಆಗಲಿದೆ. ಮಾಸಿಕ ಕನಿಷ್ಠ ದರ 2013ರಲ್ಲಿ 56 ರೂ., 2017ರಲ್ಲಿ 64 ರೂ., 2020ರಲ್ಲಿ 72 ರೂ., 2024ರಲ್ಲಿ 80 ರೂ. ಆಗಲಿದೆ.

ಗೃಹೇತರ
ಗೃಹೇತರ ಬಳಕೆಗೆ ಪ್ರತೀ ಸಾವಿರ ಲೀ.ಗೆ 2013ರಲ್ಲಿ 14 ರೂ., 2017ರಲ್ಲಿ 16 ರೂ., 2020ರಲ್ಲಿ 18 ರೂ. ಇದ್ದುದು 2024ರಿಂದ 20 ರೂ. ಆಗಲಿದೆ. 25 ಸಾವಿರ ಲೀ.ಕ್ಕಿಂತ ಹೆಚ್ಚಿನ ಬಳಕೆಗೆ 32 ರೂ. ಆಗಲಿದೆ. ಮಾಸಿಕ ಕನಿಷ್ಠ ದರ 2013ರಲ್ಲಿ 112 ರೂ., 2017ರಲ್ಲಿ 128 ರೂ., 2020ರಲ್ಲಿ 144 ರೂ., 2024ರಲ್ಲಿ 160 ರೂ. ವಿಧಿಸಲಾಗಿದೆ.

ವಾಣಿಜ್ಯ
ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆಗೆ ದರ ಏರಿಸಲಾಗಿದ್ದು ಸಂಪರ್ಕ ಪಡೆಯಲು 6 ಸಾವಿರ ರೂ. ನಿಗದಿಪಡಿಸಲಾಗಿದೆ. ಮನೆಗೆ 1,500 ರೂ., ಗೃಹೇತರ 3 ಸಾವಿರ ರೂ. ನಿಗದಿಯಾಗಿದೆ. ಪ್ರತೀ ಸಾವಿರ ಲೀ.ಗೆ 2013ರಲ್ಲಿ 28 ರೂ., 2017ರಲ್ಲಿ 32 ರೂ., 2020ರಲ್ಲಿ 36 ರೂ., 2024ರಲ್ಲಿ 40 ರೂ. ನಿಗದಿಪಡಿಸಲಾಗಿದೆ. 25 ಸಾವಿರ ಲೀ.ಗಿಂತ ಹೆಚ್ಚು  ಬಳಸಿದರೆ ಪ್ರತೀ ಸಾವಿರ ಲೀ.ಗೆ 64 ರೂ. ದರ
ನೀಡಬೇಕಾಗುತ್ತದೆ. ಮಾಸಿಕ ಕನಿಷ್ಠ ದರ 2013ರಲ್ಲಿ 224 ರೂ., 2017ರಲ್ಲಿ 256 ರೂ., 2020ರಲ್ಲಿ 282 ರೂ. ಇದ್ದುದು ಈಗ 320 ರೂ. ನಿಗದಿಯಾಗಿದೆ.

ಖಂಡನೆ
ಎ. 1ರಿಂದ ಬಿಲ್ಲಿನಲ್ಲಿ ಹೆಚ್ಚಳ ಮಾಡಲು ಪುರಸಭಾ ಆಡಳಿತಾಧಿಕಾರಿಯ ಅಧ್ಯಕ್ಷತೆಯಲ್ಲಿ ನಿರ್ಣಯ ಮಾಡಿರುವುದು ಜನ ವಿರೋಧಿ ನೀತಿಯಾಗಿದೆ. ಜನರಿಗೆ ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದು ತೊಂದರೆ ಆಗುತ್ತದೆ. ಪುರಸಭೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಅಧಿಕಾರದಲ್ಲಿದ್ದು, ಅವರ ಗಮನಕ್ಕೂ ತಾರದೇ ನಿರ್ಣಯ ಮಾಡಿರುವುದು ಖಂಡನೀಯ. ನಾವು ಇದನ್ನು ಪ್ರತಿಭಟಿಸುತ್ತೇವೆ ಎಂದು ಪುರಸಭೆ ಸದಸ್ಯ, ಕಾಂಗ್ರೆಸ್‌ ಮುಖಂಡ ಚಂದ್ರಶೇಖರ ಖಾರ್ವಿ ಹೇಳಿದ್ದಾರೆ.

ಮಾಹಿತಿ ಇಲ್ಲ
ಅಚ್ಚರಿ ಎಂದರೆ ನೀರಿನ ದರ ಏರಿಸಿರುವುದು ಜನಪ್ರತಿನಿಧಿಗಳಿಗೂ ಮಾಹಿತಿ ಇಲ್ಲ, ಜನರಿಗೂ ಮಾಹಿತಿ ಇಲ್ಲ. ಸದಸ್ಯರು ಆಯ್ಕೆ ಮಾಡಿದ ಅಧ್ಯಕ್ಷ, ಉಪಾಧ್ಯಕ್ಷರ ಆಡಳಿತ ಮಂಡಳಿ ಇಲ್ಲ ವಿನಾ ಪುರಸಭೆ ಬರ್ಖಾಸ್ತುಗೊಂಡಿಲ್ಲ. ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗಿಲ್ಲ. ಹೀಗಿರುವಾಗ ಏಕಾಏಕಿ, ಸದಸ್ಯರಿಗೆ ಯಾವುದೇ ರೀತಿಯ ಮಾಹಿತಿ ನೀಡದೇ ನೀರಿನ ದರ ಏರಿಸಿರುವುದು ಸರಿಯಲ್ಲ. ಇದಕ್ಕೆ ನಮ್ಮ ಆಕ್ಷೇಪವಿದೆ ಎನ್ನುತ್ತಾರೆ ಬಿಜೆಪಿ ಸದಸ್ಯರಾದ ಮೋಹನದಾಸ ಶೆಣೈ ಹಾಗೂ ಸಂತೋಷ್‌ ಕುಮಾರ್‌ ಶೆಟ್ಟಿ .

ನಿಗದಿಯಂತೆ ಏರಿಕೆ
3 ವರ್ಷಗಳಿಗೊಮ್ಮೆ ದರ ಏರಿಸಲು ಸರಕಾರದ ಆದೇಶ ಇದ್ದು 4 ವರ್ಷಗಳಿಂದ ನೀರಿನ ದರ ಏರಿಸಿಲ್ಲ. ಈ ಬಾರಿ ಕನಿಷ್ಠ ದರ ಏರಿಸಿ ನಿರ್ಣಯಿಸಲಾಗಿದೆ. ಸದಸ್ಯರಿಗೆ ಮಾಹಿತಿ ನೀಡಲು ಮುಖ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ.
ರಶ್ಮೀ ಎಸ್‌.ಆರ್‌. ಪುರಸಭೆ ಆಡಳಿತಾಧಿಕಾರಿ/ ಸಹಾಯಕ ಕಮಿಷನರ್‌

ದರ ವ್ಯತ್ಯಾಸ
ಕಳೆದ 4 ಅವಧಿಯಲ್ಲಿ ಆದರ ದರದ ವ್ಯತ್ಯಾಸ ಈ ರೀತಿಯಾಗಿದೆ. ದರ ಏರಿಕೆಯಲ್ಲ ಗರಿಷ್ಠ 8 ಸಾವಿರ ಲೀ. ಬಳಕೆಗೆ ಒಂದು ದರ, ಗರಿಷ್ಠ 15 ಸಾವಿರ ಲೀ. ಬಳಕೆಗೆ ಒಂದು ದರ, ಗರಿಷ್ಠ 25 ಸಾವಿರ ಲೀ. ಬಳಕೆಗೆ ಒಂದು ದರ, 25 ಸಾವಿರ ಲೀ.ಗಿಂತ ಹೆಚ್ಚಿನ ಬಳಕೆಗೆ ಹೆಚ್ಚಿನ ದರ ನಿಗದಿಪಡಿಸಲಾಗಿದೆ.

*ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ottin

Baindur; ಒತ್ತಿನೆಣೆ ತಿರುವಿನಲ್ಲಿ ಗುಡ್ಡ ಕುಸಿತ

1-kotaaaaaa

Kota: ಅಚ್ಲಾಡಿ ಸಿದ್ಧಿವಿನಾಯಕ ದೇವಸ್ಥಾನ ತೀರ್ಥ ಪುಷ್ಕರಿಣಿ ಲೋಕಾರ್ಪಣೆ

train-track

Kundapura; ರೈಲಿನಿಂದ ಬಿದ್ದ ಯುವಕನ ರಕ್ಷಣೆ

robbers

Kota; ಪಾರಂಪಳ್ಳಿ ದೇವಸ್ಥಾನದ ಆಸುಪಾಸಿನಲ್ಲಿ ಕಳ್ಳನ ಓಡಾಟದ ಸುದ್ದಿ

1–a-KNDp[

Kundapura; ಕಂಚುಗೋಡಲ್ಲಿ ಕಡಲ್ಕೊರೆತ: ಮನೆಗಳು ಅಪಾಯದಲ್ಲಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

mantrika kannada movie

Kannada Cinema; ಮಾಂತ್ರಿಕ ಆಟ ಶುರು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.