Kundapura: ಕಾರು ಢಿಕ್ಕಿಯಾಗಿ ದನ ಸಾವು; ಕಾರು ಜಖಂ
Team Udayavani, Oct 18, 2024, 9:30 PM IST
ಕುಂದಾಪುರ: ತ್ರಾಸಿ ಸಮೀಪದ ಮೊವಾಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದನವೊಂದು ಕಾರಿಗೆ ಅಡ್ಡ ಬಂದು ಢಿಕ್ಕಿಯಾಗಿದ್ದು, ಪರಿಣಾಮ ದನ ಸಾವನ್ನಪ್ಪಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಈ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ಉಡುಪಿ ಮೂಲದ ಬಾಡಿಗೆ ಕಾರು ಇದಾಗಿದ್ದು, ಬಾಡಿಗೆಗೆಂದು ಮುರ್ಡೇಶ್ವರಕ್ಕೆ ಹೋಗಿ ವಾಪಸು ಮರವಂತೆ ಬೀಚ್ ದಾಟಿ ತ್ರಾಸಿ ಬಳಿ ಬರುತ್ತಿದ್ದಂತೆ ಈ ಅವಘಡ ಸಂಭವಿಸಿದೆ. ತ್ರಾಸಿಯಿಂದ ಮುಳ್ಳಿಕಟ್ಟೆಯವರೆಗಿನ ಹೆದ್ದಾರಿಯಲ್ಲಿ ಬೀದಿ ದೀಪ ಇಲ್ಲದೇ ಇರುವುದರಿಂದ ಆಗಾಗ್ಗೆ ಇಂತಹ ಅಪಘಾತಗಳು ಸಂಭವಿಸುತ್ತಿದ್ದು, ಇದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಇದಲ್ಲದೆ ಇಲ್ಲಿನ ರಸ್ತೆ ಡಿವೈಡರ್ನಲ್ಲಿ ಹುಲ್ಲು ಬೆಳೆದಿದ್ದು, ಅದನ್ನು ತಿನ್ನಲು ದನಗಳು ಬರುತ್ತಿರುತ್ತವೆ.
ರಾತ್ರಿ ವೇಳೆಗೆ ರಸ್ತೆಗೆ ಬರುವ ದನಗಳ ಬಗ್ಗೆ ವಾಹನ ಚಾಲಕರಿಗೆ ಗೊತ್ತಾಗದೆ ಢಿಕ್ಕಿ ಸಂಭವಿಸುತ್ತಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರ ಹೋದ ಕೂಡಲೇ ಆಡಿಯೋ ಹರಿಬಿಟ್ಟ ಜಗದೀಶ್ ; ವೈರಲ್
Reservation: ಚಳಿಗಾಲ ಅಧಿವೇಶನಕ್ಕೂ ಮುನ್ನ ಸರಕಾರ ನಿರ್ಧಾರ ಪ್ರಕಟಿಸಲಿ: ಜಯಮೃತ್ಯುಂಜಯ ಶ್ರೀ
Political: ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದಿಂದ ಅಸಹಕಾರ: ಎಚ್ಡಿಕೆ
Udupi;ವಿಧಾನಪರಿಷತ್ ಉಪಚುನಾವಣೆ: ನಿಷೇಧಾಜ್ಞೆ ಜಾರಿ
Siddapura: ಪುತ್ರನ ಮನೆ ಸಾಲದಿಂದ ತಂದೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.