Kundapura; ಕಂಚುಗೋಡಲ್ಲಿ ಕಡಲ್ಕೊರೆತ: ಮನೆಗಳು ಅಪಾಯದಲ್ಲಿ


Team Udayavani, Oct 18, 2024, 12:04 AM IST

1–a-KNDp[

ಕುಂದಾಪುರ: ವಾಯು ಭಾರ ಕುಸಿತದಿಂದಾಗಿ ಕಡಲ ಅಲೆಗಳ ಅಬ್ಬರ, ಗಾಳಿಯ ತೀವ್ರತೆ ಕಳೆ ದೆರಡು ದಿನಗಳಿಂದ ಜಾಸ್ತಿಯಿದೆ. ಇದರಿಂದ ಹೊಸಾಡು ಗ್ರಾಮದ ಕಂಚುಗೋಡು, ಗುಜ್ಜಾಡಿ ಗ್ರಾಮದ ಸನ್ಯಾಸಿಬಲೆ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, 7-8 ಮನೆಗಳು ಅಪಾಯದಲ್ಲಿವೆ.

ಕಂಚುಗೋಡಿನಲ್ಲಿ ಈ ಮುಂಗಾರು ಋತುವಿನಿಂದ ಈಚೆಗೆ ಸುಮಾರು 500 ಮೀ. ನಷ್ಟು ಕಡಲ್ಕೊರೆತ ಆಗಿದೆ. ಗುರುವಾರವೂ ಕಡಲ್ಕೊರೆತ ತೀವ್ರ ಗೊಂಡಿದ್ದು, ಬುಧವಾರ ರಾತ್ರಿ ಇಲ್ಲಿನ 3 ಮನೆಗಳ ಒಳಗೆ ನೀರು ನುಗ್ಗಿದೆ. ಈ ಪ್ರದೇಶದಿಂದ 20-30 ಮೀ. ದೂರದಲ್ಲಿ ನಾಗರಾಜ ಖಾರ್ವಿ, ಬಿಕ್ಕ ಖಾರ್ವಿ, ಚಂದು ಖಾರ್ವಿ, ಸಂಜೀವ ಖಾರ್ವಿ, ನಾಗೇಶ್‌ ಖಾರ್ವಿ ಹಾಗೂ ಮೋಹನ್‌ ಖಾರ್ವಿ ಅವರ ಮನೆಗಳೂ ಇದ್ದು, ಅವರು ಕೂಡ ಆತಂಕದಲ್ಲಿದ್ದಾರೆ.

ದಡದಲ್ಲಿದ್ದ ದೋಣಗಳಿಗೂ ಅಲೆಗಳು ಅಪ್ಪಳಿಸುತ್ತಿದ್ದು, ಕೆಲವರ ಬಲೆಗಳು ಮರಳಿನಡಿಗೆ ಬಿದ್ದಿವೆ. ದೋಣಿಗಳನ್ನು ಸುರಕ್ಷಿತವಾಗಿ ಇಡುವುದೇ ಸವಾಲಾಗಿದೆ.

ತಡೆಗೋಡೆಯಿಲ್ಲ
ಕಂಚುಗೋಡು ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ಕಡಲ್ಕೊ ರೆತ ತಡೆಯಲು ತಡೆಗೋಡೆ ನಿರ್ಮಿ ಸುವಂತೆ ಇಲ್ಲಿನ ತೀರ ನಿವಾಸಿಗರು ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಪೂರಕ ಸ್ಪಂದನೆ ಸಿಕ್ಕಿಲ್ಲ. 2 ವರ್ಷಗಳ ಹಿಂದೊಮ್ಮೆ ಕಡಲ್ಕೊರೆತ ಉಂಟಾದ ಒಂದಷ್ಟು ದೂರದವರೆಗೆ ಕಲ್ಲು ಹಾಕಿದ್ದರು. ಈಗ ಅದು ಸಮುದ್ರ ಪಾಲಾಗಿದೆ ಎನ್ನುತ್ತಾರೆ ಸ್ಥಳೀಯರು.

ಕರೆ ಮಾಡಿದರೂ ಬರಲಿಲ್ಲ
ಬುಧವಾರ ರಾತ್ರಿಯಿಂದ ನಾವು ಸಂಕಷ್ಟದಲ್ಲಿದ್ದೇವೆ. ರಾತ್ರಿಯಿಂದ ಗುರುವಾರ ಬೆಳಗ್ಗಿನವರೆಗೂ ಜನ ಪ್ರತಿನಿಧಿಗಳು, ಅಧಿಕಾರಿಗಳು, ರಾಜಕಾರಣಿಗಳೆಲ್ಲರಿಗೂ ನಾವು ಕರೆ ಮಾಡಿ ತಿಳಿಸಿದ್ದೆವು. ಆದರೆ ಯಾರೂ ನಮ್ಮ ಸಮಸ್ಯೆಯನ್ನು ಆಲಿಸಲು ಬರಲಿಲ್ಲ. ಕಡಲ್ಕೊರೆತ ಇದೇ ರೀತಿ ಮುಂದುವರಿದರೆ ಏನು ಮಾಡುವುದು ಅನ್ನುವ ಭಯ ಮೂಡಿದೆ ಎನ್ನುತ್ತಾರಿ ಸ್ಥಳೀಯರು.

ಅರಬ್ಬಿ ಸಮುದ್ರದಲ್ಲೂ ತೂಫಾನ್‌
ಬಂಗಾಲಕೊಲ್ಲಿಯಲ್ಲಿ ಉಂಟಾಗಿ ರುವ ವಾಯು ಭಾರ ಕುಸಿತದ ಜತೆಗೆ ಅರಬ್ಬಿ ಸಮುದ್ರದಲ್ಲೂ ಬುಧವಾರದಿಂದ ಸಣ್ಣ ರೀತಿಯ ತೂಫಾನ್‌ ಆರಂಭವಾಗಿದೆ ಅನ್ನುವ ಮಾಹಿತಿಯಿದೆ. ಕೇರಳದಿಂದ ಆರಂಭ ವಾಗಿ ಕರ್ನಾಟಕದ ಕರಾವಳಿ, ಗೋವಾ, ರತ್ನಾಗಿರಿಯವರೆಗೂ ಇದರ ಪರಿಣಾಮವಿದೆ. ಇನ್ನೆರಡು ದಿನ ಇದು ಮುಂದು ವರಿಯುವ ಸಾಧ್ಯತೆಯೂ ಇದೆ.

ದೋಣಿಗಳು ಬಂದರಿಗೆ
ಕೆಲವು ದೋಣಿಗಳು ಮೀನುಗಾರಿಕೆಗೆ ತೆರಳಿದ್ದರೂ, ಸಮುದ್ರದ ಆಳದಲ್ಲಿ ಅಲೆಗಳ ಅಬ್ಬರ, ಗಾಳಿಯ ತೀವ್ರತೆ ಜಾಸ್ತಿ ಇದ್ದುದರಿಂದ ಅರ್ಧದಲ್ಲೇ ಮರಳಿ ಸಮೀಪದ ಬಂದರುಗಳಿಗೆ ಬಂದಿವೆ. ಮರವಂತೆ, ಗಂಗೊಳ್ಳಿ, ಉಪ್ಪುಂದ, ನಾವುಂದ, ಶಿರೂರು ಭಾಗದ ಬಹುತೇಕ ದೋಣಿಗಳು ಅವರವರ ಬಂದರಿಗೆ ಹೋಗಲು ಸಾಧ್ಯವಾಗದೆ, ಮರವಂತೆಯ ಹೊರಬಂದರಿಗೆ ಬಂದು ಲಂಗರು ಹಾಕಿವೆ.

ಕಂಚುಗೋಡಿನಲ್ಲಿ ಕಡಲ್ಕೊರೆತ ತಡೆಗಾಗಿ ಶಾಶ್ವತ ಪರಿಹಾರ ವಾಗಿ ಕಾರ್‌ಲ್ಯಾಂಡ್‌ ಯೋಜನೆಯಡಿ ಸಮುದ್ರ ದಂಡೆ ಹಾಗೂ ತಡೆಗೋಡೆ ನಿರ್ಮಾಣ ಮಾಡಬೇಕೆಂಬ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ. ಆದರೆ ಸರಕಾರ ಅನುದಾನ ಇಲ್ಲ ಅನ್ನುವ ಕಾರಣ ನೀಡಿದೆ. ಇಂತಹ ತುರ್ತು ಸಂದರ್ಭದಲ್ಲಾದರೂ ಸ್ಪಂದಿಸುವ ಕಾರ್ಯ ಮಾಡಲಿ. ದುರಂತ ಸಂಭವಿಸುವ ಮುನ್ನ ಬೇಡಿಕೆ ಈಡೇರಿಸುವ ಪ್ರಯತ್ನವನ್ನು ಸರಕಾರ ಮಾಡಲಿ.
– ಗುರುರಾಜ್‌ ಗಂಟಿಹೊಳೆ, ಬೈಂದೂರು ಶಾಸಕರು

ಟಾಪ್ ನ್ಯೂಸ್

Salmana

Bollywood Actor: ಸಲ್ಮಾನ್‌ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್‌: ಪೊಲೀಸ್‌

Priyanka-VA

By Poll: ಪ್ರಿಯಾಂಕಾ ವಾದ್ರಾ ವಿರುದ್ಧ ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ

supreme-Court

Citizenship: ವಲಸಿಗರಿಗೆ ಪೌರತ್ವ ನೀಡುವ ಮಾನ್ಯತೆ ಎತ್ತಿಹಿಡಿದ ಸುಪ್ರೀಂಕೋರ್ಟ್‌

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Shivamogga:7 ಶಂಕಿತ ಬಾಂಗ್ಲಾದೇಶಿಯರ ವಶ

Shivamogga:7 ಶಂಕಿತ ಬಾಂಗ್ಲಾದೇಶಿಯರ ವಶ

1-reeeeee

Udupi Shri Krishna Matha; 100 ಕಲಾವಿದರಿಂದ ನಿರಂತರ 14 ತಾಸು ನೃತ್ಯ ಪ್ರದರ್ಶನ

Finance

Direct Tax: ನೇರ ತೆರಿಗೆ ಸಂಗ್ರಹ 19.60 ಲಕ್ಷ ಕೋಟಿ ರೂ.ಗೆ ಏರಿಕೆ: ಕೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ottin

Baindur; ಒತ್ತಿನೆಣೆ ತಿರುವಿನಲ್ಲಿ ಗುಡ್ಡ ಕುಸಿತ

1-kotaaaaaa

Kota: ಅಚ್ಲಾಡಿ ಸಿದ್ಧಿವಿನಾಯಕ ದೇವಸ್ಥಾನ ತೀರ್ಥ ಪುಷ್ಕರಿಣಿ ಲೋಕಾರ್ಪಣೆ

train-track

Kundapura; ರೈಲಿನಿಂದ ಬಿದ್ದ ಯುವಕನ ರಕ್ಷಣೆ

robbers

Kota; ಪಾರಂಪಳ್ಳಿ ದೇವಸ್ಥಾನದ ಆಸುಪಾಸಿನಲ್ಲಿ ಕಳ್ಳನ ಓಡಾಟದ ಸುದ್ದಿ

15

Kota: ಟೋಲ್‌ ತಪ್ಪಿಸಲು ನಕಲಿ ಆರ್‌ಸಿ ಸೃಷ್ಟಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salmana

Bollywood Actor: ಸಲ್ಮಾನ್‌ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್‌: ಪೊಲೀಸ್‌

Priyanka-VA

By Poll: ಪ್ರಿಯಾಂಕಾ ವಾದ್ರಾ ವಿರುದ್ಧ ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

police crime

Sullia; ಸ್ತ್ರೀಯರ ಬಗ್ಗೆ ತುತ್ಛ ಹೇಳಿಕೆ ಆರೋಪ: ಅರಣ್ಯಾಧಿಕಾರಿ ವಿರುದ್ಧ ದೂರು

1-ottin

Baindur; ಒತ್ತಿನೆಣೆ ತಿರುವಿನಲ್ಲಿ ಗುಡ್ಡ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.