ಕೋಡಿ ಕಡಲತಡಿಯಲ್ಲಿ ಹಸುರು ಹೊದಿಕೆ


Team Udayavani, Jul 30, 2022, 12:07 PM IST

5

ಕುಂದಾಪುರ: ಕೋಡಿ ಕಡಲ ತೀರದಲ್ಲಿ ಔಷಧೀಯ, ಆಲಂಕಾರಿಕ, ಇತರ ಗಿಡಗಳನ್ನು ಹಾಕಿಸಲು ಪುರಸಭೆ ಮುಂದಾಗಿದೆ. ಎರಡೂವರೆ ಸಾವಿರ ಗಿಡಗಳನ್ನು ಹಾಕಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಮುಂದಿನ ದಿನಗಳಲ್ಲಿ ಕೋಡಿಯ ಕಡಲತೀರತದಲ್ಲಿ ಅಪೂರ್ವ ವನ ಮಾದರಿಯಲ್ಲಿ ಗಿಡ ಮರಗಳನ್ನು ಕಾಣಬಹುದು.

ಯಾವೆಲ್ಲ ಗಿಡಗಳು 1

ಎಕರೆ ಪ್ರದೇಶದಲ್ಲಿ ಲೈಟ್‌ಹೌಸ್‌ ಬಳಿ ರೈಟಿಯಾ ಟಿನ್‌ ಟೊರಿಯಾ, ಪಾರಿಶಾ (ಹೂವರಸಿ), ಬೆಗ್ಗರ್ಸ್‌ ಬೌಲ್‌, ಸಮುದ್ರಫ‌ಲ (ಹಿಜ್ಜಾಲ), ಅಮೂರ ರೊಹಿತಕ, ಪುತ್ರನ್‌ ಜೀವಾ ರಾಕ್ಸ್‌ಬರ್ಗ್‌, ರಕ್ತಹೊನ್ನೆ (ಬೇಂಗ), ಬಿಕ್ಸಾ, ಶ್ರೀಕುಟಜ, ಅಮೂರ, ಗಾಳಿ, ಸುರಗೆ, ಜಾರಿಗೆ, ರೆಂಬೆ (ಬಕುಳ), ಸೀತಾ ಅಶೋಕ ಹೀಗೆ ವೈವಿಧ್ಯದ ಗಿಡಗಳು ಇಲ್ಲಿ ಜೀವಪಡೆಯಲಿವೆ. ಈ ಭಾಗಕ್ಕೆ ಬರುವ ಪ್ರವಾಸಿಗರಿಗೆ ಅಪರೂಪದ ಗಿಡಗಳನ್ನು ನೋಡುವ ಅವಕಾಶವೂ ದೊರೆಯಲಿದೆ. ಗಿಡಗಳನ್ನು ನೆಟ್ಟ ಬಳಿಕ ಅವುಗಳಿಗೆ ಬೇಲಿ ಹಾಕಿ ಸಂರಕ್ಷಿಸುವ ಕಾರ್ಯವೂ ನಡೆಯಲಿದೆ.

ವಾತಾವರಣ ಸ್ನೇಹಿ

ಸಮುದ್ರದ ಬದಿಯಲ್ಲಿ ಉಪ್ಪು ನೀರಿನ ಉಪ್ಪು ಗಾಳಿಯ ವಾತಾವರಣದಲ್ಲಿ ಬೆಳೆಯುವ ನಿರ್ದಿಷ್ಟ ತಳಿಯ ಗಿಡಗಳನ್ನೇ ವಿವಿಧ ಕಡೆಗಳ ನರ್ಸರಿಯಿಂದ ಆಯ್ಕೆ ಮಾಡಲಾಗಿದೆ. ಅದಕ್ಕಾಗಿ ಮಣ್ಣು ಹಾಕಿಸಿ ಅದರಲ್ಲೇ ಬೆಳೆಸಲು ತೀರ್ಮಾನಿಸಲಾಗಿದೆ. ಸರಕಾರಿ ನರ್ಸರಿಯಲ್ಲಿ ದೊರೆಯುವ ವಿಶಿಷ್ಟ ಗಿಡಗಳನ್ನು ಆಯ್ದು ನೆಡಲಾಗುತ್ತಿದೆ. ಅರಣ್ಯ ಇಲಾಖೆಯ ಸರಕಾರಿ ನರ್ಸರಿಗಳಲ್ಲಿ ಪ್ರತೀವರ್ಷ ಲಕ್ಷಾಂತರ ಗಿಡಗಳನ್ನು ಬೆಳೆಸಿ ನೆಡಲು ನೀಡಿದ ಮಾಹಿತಿಯನ್ನು ತಿಳಿಸಲಾಗುತ್ತದೆ. ಅದಕ್ಕಾಗಿ ಇಲಾಖೆ ಕೋಟ್ಯಂತರ ರೂ. ವ್ಯಯಿಸುತ್ತದೆ. ಆದರೆ ಪ್ರತೀ ವರ್ಷ ನೆಟ್ಟ ಆ ಲಕ್ಷಾಂತರ ಗಿಡಗಳು ಎಲ್ಲಿ ಹೋದವು ಎಂದು ಯಾರಿಗೂ ತಿಳಿದಿರುವುದಿಲ್ಲ. ಏಕೆಂದರೆ ಹಾಗೆ ವರ್ಷವೂ ಲಕ್ಷಗಟ್ಟಲೆ ಗಿಡಗಳನ್ನು ನೆಟ್ಟರೆ ವನಮಹೋತ್ಸವ ಎಂದೋ ಅರ್ಥಪೂರ್ಣವಾಗಬೇಕಿತ್ತು. ಕಳೆದ ವರ್ಷ ಗಿಡ ನೆಟ್ಟ ಗುಂಡಿಯಲ್ಲೇ ಈ ವರ್ಷವೂ ಗಿಡ ನೆಡುವ ಪ್ರಮೇಯ ಬರುತ್ತಿರಲಿಲ್ಲ. ಒಂದೊಮ್ಮೆ ಅರಣ್ಯ ಇಲಾಖೆ ನೀಡಿದ ಗಿಡಗಳು ನೆಡುವ ಕುರಿತು, ಅದು ಬೆಳೆಯುತ್ತದೆ ಎನ್ನುವ ಕುರಿತು ಸರಿಯಾದ ಸುಪರ್ದಿ ನಡೆಸಿದರೆ ಪುರಸಭೆ ಇಲ್ಲಿ ಗಿಡ ನೆಡಲು ತನ್ನ ಅನುದಾನ ವ್ಯಯಿಸಬೇಕಾದ ಅನಿವಾರ್ಯ ಬರುವುದಿಲ್ಲ.

ಹಸುರು ಕೋಡಿ

ಕೋಡಿ ಬ್ಯಾರೀಸ್‌ ಶಿಕ್ಷಣ ಸಂಸ್ಥೆಯವರು ಹಸುರು ಕೋಡಿ ಅಭಿಯಾನ ಹಮ್ಮಿಕೊಂಡಿದ್ದು ಪ್ರತೀ ವಾರ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದಾರೆ. ಬ್ಯಾರೀಸ್‌ ಶಿಕ್ಷಣ ಸಂಸ್ಥೆಯ ವಿವಿಧ ಶಾಲೆ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಶೌರ್ಯ ತಂಡ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಡೆಸಲ್ಪಡುತ್ತಿರುವ ಶೌರ್ಯ ತಂಡದವರು ಕೂಡ ಬೀಚ್‌ ಸ್ವಚ್ಛತೆ ನಡೆಸಿದ್ದಾರೆ. ಹೀಗೆ ಅನೇಕ ಸಂಘ ಸಂಸ್ಥೆಗಳು, ರೋಟರಿ ಕ್ಲಬ್‌, ಲಯನ್ಸ್‌ ಕ್ಲಬ್‌, ಜೆಸಿಐಯಂತಹ ಸಂಸ್ಥೆಗಳ ಸದಸ್ಯರು ಬೀಚ್‌ ಸ್ವಚ್ಛತೆಯಲ್ಲಿ ಆಗಾಗ ಭಾಗವಹಿಸುತ್ತಿದ್ದಾರೆ.

ಕ್ಲೀನ್ ಕುಂದಾಪುರ

ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಎಂಹ ಹೆಸರಿನಲ್ಲಿ ಸಮಾನಾಸಕ್ತರ ತಂಡ ಕಳೆದ 150 ವಾರಗಳಿಂದ ಕೋಡಿಯಲ್ಲಿ ಬೀಚ್‌ ಸ್ವಚ್ಛತೆ ನಡೆಸುತ್ತಿದೆ. ಇದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಸರಕಾರಿ ಖಾಸಗಿ ಸಂಸ್ಥೆಗಳ ಉದ್ಯೋಗಿಗಳು, ವಕೀಲರು, ವೈದ್ಯರು, ಉಪನ್ಯಾಸಕರು, ಅರಣ್ಯ ಪೊಲೀಸ್‌ ಇಲಾಖೆಯವರು ಎಂದು ವಿವಿಧ ವರ್ಗದವರು ಪ್ರತಿ ವಾರ ಭಾಗವಹಿಸುತ್ತಿದ್ದಾರೆ. ಲೋಡುಗಟ್ಟಲೆ ತ್ಯಾಜ್ಯ ಪ್ರತಿ ವಾರ ಸಂಗ್ರಹವಾಗುತ್ತದೆ. ಇದನ್ನು ಪುರಸಭೆ ವಿಲೇವಾರಿ ಮಾಡುತ್ತದೆ. ‌

ಪ್ರವಾಸಿ ತಾಣ

ಕೋಡಿಯಲ್ಲಿ ಸೀವಾಕ್‌, ಲೈಟ್‌ಹೌಸ್‌ ಇರುವ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಖಾಸಗಿಯವರು ಇಲ್ಲಿ ಬೋಟಿಂಗ್‌, ಕಯಾಕಿಂಗ್‌ ಹಾಗೂ ಮರಳ ಆಟಗಳು, ಬೈಕಿಂಗ್‌ ನಡೆಸುತ್ತಿರುವ ಕಾರಣ ಪ್ರವಾಸಿಗರ ಆಕರ್ಷಣೆ ಹೆಚ್ಚಾಗಿದೆ. ಈ ಪರಿಸರದ ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ. ಸಂಚಾರಿ ಶೌಚಾಲಯ ಅಳವಡಿಸಲಾಗಿದ್ದರೂ ಸಮರ್ಪಕ ನಿರ್ವಹಣೆ ಮಾಡಿಲ್ಲ.

ವೈವಿಧ್ಯಮಯ ಗಿಡಗಳು: ಸಮುದ್ರದ ಬದಿಯ ವಾತಾವರಣದಲ್ಲಿ ಬೆಳೆಯುವ ಗಿಡಗಳನ್ನೇ ಆಯ್ಕೆ ಮಾಡಿ ನೆಡಲು ತೀರ್ಮಾನಿಸಲಾಗಿದೆ. 1 ಎಕರೆ ಜಾಗದಲ್ಲಿ ಅಮೂಲ್ಯ ಗಿಡಗಳನ್ನು ನೆಡಲು ಆಡಳಿತ ಮಂಡಳಿ ಸಮ್ಮತಿಸಿದೆ. ಇದಕ್ಕಾಗಿ ಪುರಸಭೆ ನಿಧಿಯನ್ನು ಉಪಯೋಗಿಸಲಾಗುತ್ತದೆ. –ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಡಾಮಕ್ಕಿ ಗ್ರಾ.ಪಂ. ಆಸ್ತಿಗೆ ಹಾನಿ: ದೂರು ದಾಖಲು

ಮಡಾಮಕ್ಕಿ ಗ್ರಾ.ಪಂ. ಆಸ್ತಿಗೆ ಹಾನಿ: ದೂರು ದಾಖಲು

11

Missing Case: ಪತಿ ನಾಪತ್ತೆ; ಪತ್ನಿಯ ದೂರು

Gangolli: ಸ್ಕೂಟರ್‌ಗೆ ಕಾರು ಢಿಕ್ಕಿ ; ಮೂವರಿಗೆ ಗಾಯ

Gangolli: ಸ್ಕೂಟರ್‌ಗೆ ಕಾರು ಢಿಕ್ಕಿ ; ಮೂವರಿಗೆ ಗಾಯ

9

Kota: ಶಿರಿಯಾರ; ಅಕ್ರಮ ಗಣಿಗಾರಿಕೆಗೆ ದಾಳಿ

POlice

Gangolli: ಅಕ್ರಮ ಕೆಂಪು ಕಲ್ಲು ಸಾಗಾಟ; ಪ್ರಕರಣ ದಾಖಲು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.