![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Sep 12, 2023, 12:09 AM IST
ಕುಂದಾಪುರ: ಜಾಗ ಹಾಗೂ ಚಿನ್ನದ ತಕರಾರಿನಲ್ಲಿ ತಂಗಿಯು ಜೀವ ಬೆದರಿಕೆ ಒಡ್ಡಿರುವುದಾಗಿ ಮೂಡ್ಲಕಟ್ಟೆಯ ರಾಘವೇಂದ್ರ ಅವರ ಪತ್ನಿ ಸುಮನಾ ಗ್ರಾಮಾಂ ತರ ಠಾಣೆಗೆ ದೂರು ನೀಡಿದ್ದಾರೆ.
ಸುಮನಾ ಅಮೆರಿಕದಲ್ಲಿ ಹೊಟೇಲ್ ವ್ಯವಹಾರ ನಡೆಸಿಕೊಂಡಿ ದ್ದು, ಹಬ್ಬ ಹರಿದಿನಗಳಲ್ಲಿ ಮೂಡ್ಲ ಕಟ್ಟೆಯ ಮೂಲ ಮನೆಗೆ ಬರುತ್ತಿದ್ದರು. 2005ರಲ್ಲಿ ಕೋಣಿ ವಾಸುದೇವ ಹೆಬ್ಟಾರ್ ಅವರ 70 ಸೆಂಟ್ಸ್ ಜಾಗವನ್ನು 8 ಲಕ್ಷ ರೂ.ಗೆ ಖರೀದಿಸಿದ್ದು ಜಾಗದ ಮಾಲಕ ವಾಸುದೇವ ಹೆಬ್ಟಾರ್ ಅನಾರೋಗ್ಯದಿಂದ ಇರುವುದು ಹಾಗೂ ತಾನು ವಿದೇಶದಲ್ಲಿರುವ ಕಾರಣ ತಂಗಿ ರೋಹಿಣಿ ಹೆಸರಿಗೆ ನೋಂದಣಿ ಮಾಡಿಸಿ ಮುಂದಿನ ದಿನಗಳಲ್ಲಿ ವರ್ಗಾಯಿಸುವುದು ಎಂದು ಒಪ್ಪಂದ ಮಾಡಿಕೊಂಡಿದ್ದರು.
ಆ ಜಾಗದಲ್ಲಿ 65 ಲಕ್ಷ ರೂ.ಗಳ ಮನೆ ಕಟ್ಟಿಸಲಾಗಿತ್ತು. 2016ರಲ್ಲಿ ಚಿನ್ನದ 4 ಬಳೆ, 9 ಪವನ್ ತೂಕದ ಸರವನ್ನು ತೆಗೆದಿಡುವಂತೆ ಹಾಗೂ ರೋಹಿಣಿ ಅವರ ಪುತ್ರಿ ವಿನುತಾ ಕುಮಾರಿಗೆ ಚಿನ್ನದ 4 ಬಳೆ, 3 ಜೊತೆ ಬೆಂಡೋಲೆ, 1 ಉಂಗುರವನ್ನು ಧರಿಸಲು ಕೊಟ್ಟು ಕೇಳಿದಾಗ ವಾಪಸು ಕೊಡುವಂತೆ ತಿಳಿಸಿದ್ದರು. ಅದರಂತೆ ಇತ್ತೀಚೆಗೆ ಆಸ್ತಿ ಮತ್ತು ಚಿನ್ನವನ್ನು ಮರಳಿ ಕೇಳಿದಾಗ ಅವರು ಮರಳಿಸಿರಲಿಲ್ಲ. ಸುಮನಾ ರವಿವಾರ ಮೂಲ ಮನೆಗೆ ಬಂದಾಗ ರೋಹಿಣಿ ಮತ್ತು ಆಕೆಯ ಪತಿ ಜೀವ ಬೆದರಿಕೆ ಹಾಕಿದ್ದಾಗಿ ಪ್ರಕರಣ ದಾಖಲಾಗಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.