Kundapura: ಗೌರಿ ಗಣೇಶ ಹಬ್ಬಕ್ಕೆ ಇನ್ನು ಎರಡೇ ದಿನ; ವಿಗ್ರಹ ರಚನೆ ಪೂರ್ಣತೆಯ ಹಂತಕ್ಕೆ
ಸ್ಥಳೀಯವಾಗಿ ಮಣ್ಣು ಸಿಗದೆ ಕೊಂಚ ದುಬಾರಿಯಾದ ವಿಗ್ರಹ ದರ
Team Udayavani, Sep 4, 2024, 3:26 PM IST
ಕುಂದಾಪುರ: ಮನೆ ಮನೆಗಳಲ್ಲಿ ಹಾಗೂ ಸಾರ್ವಜನಿಕವಾಗಿ ಸಂಭ್ರಮದಿಂದ ಆಚರಿಸಲ್ಪಡುವ ಗೌರಿ ಗಣೇಶ ಹಬ್ಬಕ್ಕೆ ಇನ್ನು ಎರಡೇ ದಿನ. ಬೇರೆ ಬೇರೆ ಉದ್ಯೋಗದ ಸ್ಥಳಗಳಿಂದ ಹಬ್ಬಕ್ಕಾಗಿ ಊರಿಗೆ ಬರಲು ಸಿದ್ಧತೆ ನಡೆಸುತ್ತಿದ್ದರೆ ಹಾಗೆ ಬಂದವರಿಗೂ ಆತಿಥ್ಯವಾಗಬೇಕೆಂದು, ಹಬ್ಬ ಇನ್ನಷ್ಟು ಕಳೆಗಟ್ಟಬೇಕೆಂದು ಬಯಸುವವರ ಸಂಖ್ಯೆಯೂ ದೊಡ್ಡದಿದೆ. ಊರಿನ ಜಾತ್ರೆಯಂತೆಯೇ ಗಣೇಶ ಹಬ್ಬದ ಆಚರಣೆಗೂ ಕೆಲವೆಡೆ ಸಿದ್ಧತೆ ನಡೆದಿದೆ. ಸೆ.6ರಂದು ಗೌರಿ ತೃತೀಯಾ, ಸೆ.7ರಂದು ಗಣೇಶ ಚತುರ್ಥಿ.
ಬೋನಸ್ ರಜೆ
ಈ ಬಾರಿಯ ವಿಶೇಷ ಎಂಬಂತೆ ಶುಕ್ರವಾರ ಗೌರಿ ಹಬ್ಬ ಬಂದಿದ್ದು ಶನಿವಾರ ಚೌತಿ ಬಂದ ಕಾರಣ ರಜೆ ಒಂದು ದಿನ ಹೆಚ್ಚುವರಿಯಾಗಿ ದೊರೆಯಲಿದೆ. ಈ ಕಾರಣದಿಂದ ಹೆಚ್ಚು ಜನರ ಪಾಲ್ಗೊಳ್ಳುವಿಕೆಯಿಂದ ನಾಡಿನಾದ್ಯಂತ ಚೌತಿ ಸಂಭ್ರಮ ಕಳೆಗಟ್ಟಲಿದೆ. ಸಾರ್ವಜನಿಕವಾಗಿ ವ್ಯಾಪಕವಾಗಿ ಆಚರಿಸಲ್ಪಡುವ ಏಕೈಕ ಹಬ್ಬವಾದ ಗಣೇಶ ಚತುರ್ಥಿ ಹಬ್ಬಕ್ಕೆ ಎಲ್ಲೆಡೆ ಸಿದ್ಧತೆ ನಡೆಯುತ್ತಿದೆ. ತಾಲೂಕಿನ ಹಟ್ಟಿಯಂಗಡಿ, ಗುಡ್ಡಟ್ಟು, ಆನೆಗುಡ್ಡೆ ಗಣಪತಿ ದೇವಸ್ಥಾನ ಸೇರಿದಂತೆ ಎಲ್ಲೆಡೆ ಚೌತಿ ಆಚರಣೆ ನಡೆಯಲಿದೆ.
ವಿಗ್ರಹ ರಚನೆ
ಗಣೇಶ ವಿಗ್ರಹ ರಚನೆಯೂ ಪೂರ್ಣ ಹಂತಕ್ಕೆ ಬಂದಿದೆ. ಇಲ್ಲಿನ ಜೂನಿಯರ್ ಕಾಲೇಜು ಬಳಿ ವಸಂತ ಗುಡಿಗಾರ್ ಅವರು 75 ಗಣಪತಿ ವಿಗ್ರಹಗಳನ್ನು ರಚಿಸಿದ್ದಾರೆ. 8 ವಿಗ್ರಹಗಳು ಪರಿಸರಸ್ನೇಹಿ ವಿಗ್ರಹಗಳಾಗಿವೆ.
ಮಣ್ಣು ತೆಗೆಯದಂತೆ ಆದೇಶ
ಈ ಭಾಗದಲ್ಲಿ ಗದ್ದೆಯಿಂದ ಜೇಡಿಮಣ್ಣು ತೆಗೆಯಬಾರದು ಎಂದು ಸರಕಾರದ ಆದೇಶ ಇರುವ ಕಾರಣ ದೂರದ ಶಿರಸಿ ಸೇರಿದಂತೆ ವಿವಿಧೆಡೆಯಿಂದ ಕೆರೆಯಿಂದ ಹೂಳೆತ್ತಿದ ಮಣ್ಣನ್ನು ತಂದು ಹದಗೊಳಿಸಿ ಸಂಸ್ಕರಿಸಿ ಅನಂತರ ವಿಗ್ರಹ ಮಾಡಬೇಕಾಗಿ ಬಂದಿದೆ. ಸ್ಥಳೀಯ ಮಣ್ಣಾದರೆ ಕಡಿಮೆ ದರದಲ್ಲಿ ಭಕ್ತರಿಗೆ ವಿಗ್ರಹಗಳನ್ನು ತಯಾರಿಸಿ ಕೊಡಲು ಅನುಕೂಲ ವಾಗುತ್ತಿತ್ತು ಎನ್ನುತ್ತಾರೆ ಗುಡಿಗಾರ್ ಅವರು.
ಗಣೇಶ ಮೂರ್ತಿ ದರ ದುಬಾರಿ
ಈ ನಡುವೆ ಬೆಂಗಳೂರು, ಮುಂಬಯಿ ಮೊದಲಾದೆಡೆ ಪಿಒಪಿ ಗಣಪತಿ ಮಾಡದ ಕಾರಣ, ಸರಕಾರದ ಕಟ್ಟುನಿಟ್ಟಿನ ಆದೇಶ ಇರುವ ಕಾರಣ ಈ ಭಾಗದಿಂದಲೂ ಮಣ್ಣು ಮಾರಲ್ಪಡುತ್ತದೆ. ಹಾಗಾಗಿ ಕ್ವಿಂಟಾಲ್ಗೆ 110 ರೂ.ಗೆ ದೊರೆಯುತ್ತಿದ್ದ ಮಣ್ಣು ದರ 160 ರೂ.ಗೆ ಏರಿದೆ. ಜತೆಗೆ ಬಣ್ಣ, ಸಿಬಂದಿ ವೇತನ ಇತ್ಯಾದಿಗಳೂ ಹೆಚ್ಚಾಗಿದೆ. ಹಾಗಾಗಿ ಈ ಬಾರಿ ಗಣಪತಿ ವಿಗ್ರಹ ರಚನೆಯ ಕಾರ್ಯವೂ ತುಸು ದುಬಾರಿ ಎನಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ
Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.