ಜಲಸಿರಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ
Team Udayavani, Apr 26, 2022, 12:49 PM IST
ಕುಂದಾಪುರ: ಕರ್ನಾಟಕ ನಗರ ಮೂಲ ಸೌಕರ್ಯದ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಎಡಿಬಿ ನೆರವಿನ ಕರ್ನಾಟಕ ಸಮಗ್ರ ನೀರು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ-ಜಲಸಿರಿ ಯೋಜನೆಯಡಿಯಲ್ಲಿ ಚಿಕನ್ಸಾಲ್ ಬಲ ಬದಿ ವಾರ್ಡ್ ನಂ. 8ರಲ್ಲಿ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನ ಸಭೆ ನಡೆಯಿತು.
ಅಧ್ಯಕ್ಷತೆಯನ್ನು ಪುರಸಭೆ ಸದಸ್ಯ ಕೆ. ಜಿ. ನಿತ್ಯಾಂದ ವಹಿಸಿ, ಯೋಜನೆಯು ಕುಂದಾಪುರ ಪಟ್ಟಣಕ್ಕೆ 24×7 ನಿರಂತರ ನೀರು ಸರಬರಾಜು ಯೋಜನೆಯಾಗಿದೆ. ಇದರಿಂದ ನೀರು ವ್ಯರ್ಥವಾಗದೆ ಮಿತವಾಗಿ ಬಳಸಬಹುದು. ನೀರು ಬಳಸಿ ದಷ್ಟೆ ಬಿಲ್ ಬರುವುದು. ಈ ಯೋಜನೆ ಯಶ್ವಸಿಯಾಗಬೇಕಾದರೆ ಪಟ್ಟಣದ ಎಲ್ಲ ಮನೆಗಳೂ ನಳ್ಳಿ ಸಂಪರ್ಕ ತೆಗೆದುಕೊಂಡಾಗ ಮಾತ್ರ ಎಂದರು.
ಸಹಾಯಕ ಕಾರ್ಯಪಾಲಕ ಅಭಿಯಂತ ವಾಲ್ಮೀಕಿ ಹರೀಶ ವಿ., ನಳ್ಳಿಯಲ್ಲಿ ನಿರಂತರ ನೀರು ಬರುವುದರಿಂದ ನೀರು ತುಂಬಿಸಿಡುವ ಅಗತ್ಯವಿಲ್ಲ. ಸುರಕ್ಷಿತ ನೀರು ಸರಬರಾಜಿನಿಂದ ಜನರ ಆರೋಗ್ಯದಲ್ಲಿ ಸುಧಾರಣೆ, ವಿದ್ಯುತ್ ವೆಚ್ಚದಲ್ಲಿ ಉಳಿತಾಯವಾಗುತ್ತದೆ.
ಕುಂದಾಪುರ ವಿವಿಧ ಪ್ರದೇಶಗಳಲ್ಲಿ ಹಾಲಿ ಇರುವ 3 ಮೇಲ್ಮಟ್ಟದ ಜಲಸಂಗ್ರಹಗಾರದ ಜತೆಗೆ 2 ಹೆಚ್ಚುವರಿ ವಿವಿಧ ಸಾಮರ್ಥ್ಯಗಳ ಮೇಲ್ಮಟ್ಟದ ಟ್ಯಾಂಕ್ಗಳ ನಿರ್ಮಾಣ ಮಾಡಲಾಗಿದೆ. 24×7 ಗ್ರಾಹಕರ ಸೇವಾ ಕೇಂದ್ರ ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ನೀರಿಗೆ ಸಂಬಂಧಿಸಿದ ಯಾವುದೇ ತೊಂದರೆಯನ್ನು ಫೋನ್ ಮುಖಾಂತರ ಸಲ್ಲಿಸಬಹುದು ಎಂದರು.
ಪಿಐಯು ಉಡುಪಿ ಸಮುದಾಯ ಅಭಿವೃದ್ಧಿ ಸಹಾಯಕ ಮಾಲತೇಶ ಎಂ. ಎಚ್. ಪ್ರಸ್ತಾವಿಸಿದರು. ಆರತಿ ಕೆ.ಎಸ್. ಸ್ವಾಗತಿಸಿದರು. ಆರ್ಡಿಎಸ್ ಸಂಸ್ಥೆಯ ಜ್ಯೋತಿ ನಿರೂಪಿಸಿದರು. ಆರ್.ಡಿ.ಎಸ್. ನ ಸಮುದಾಯ ಅನುವುಗಾರರಾದ ಮಂಜುಳಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ
ನಾಡೋಜ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ
Disease: ಉಪ್ಪುಂದದಲ್ಲಿ ಕಾಲರಾ ಭೀತಿ; 200ಕ್ಕೂ ಅಧಿಕ ಮಂದಿ ಅಸ್ವಸ್ಥ; ತಹಶೀಲ್ದಾರ್ ಭೇಟಿ
Udupi: ಸರಣಿ ಕಳ್ಳತನ; 3 ಮಂದಿಯ ಕೃತ್ಯ! ಸಿಸಿಟಿವಿಯಲ್ಲಿ ದಾಖಲು
Udupi: ದಾಳಿ ಹೆಸರಲ್ಲಿ ಹಣ ಪಡೆದು ವಂಚನೆ: ಮುಂಜಾಗ್ರತೆಗೆ ಸೂಚನೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.