Maravanthe ತ್ರಾಸಿ ಬೀಚ್ ಗದಗ ಮೂಲದ ಯುವಕ ಸಮುದ್ರಪಾಲು
Team Udayavani, Jul 19, 2023, 6:55 AM IST
ಉಪ್ಪುಂದ: ಇಲ್ಲಿನ ತ್ರಾಸಿ ಮರವಂತೆ ಬೀಚ್ನಲ್ಲಿ ನೀರಿಗೆ ಇಳಿದ ಸಂದರ್ಭ ಯುವಕ ಸಮುದ್ರ ಪಾಲಾದ ಘಟನೆ ಜು. 18ರಂದು ಸಂಭವಿಸಿದೆ. ಗದಗ ಜಿಲ್ಲೆಯ ಮುಂಡ್ರಂಗಿ ತಾಲೂಕು ಮೇವಂಡಿ ಗ್ರಾಮದ ಪೀರ್ ನದಾಫ್ (21) ಸಮುದ್ರಪಾಲಾದ ವ್ಯಕ್ತಿ.
ಗದಗ ಮೂಲದ ಮೂವರು ಯುವಕರು ಮನೆಯವರೊಂದಿಗೆ ಮಂಗಳೂರಿನಲ್ಲಿ ಇದ್ದು ಜು. 18ರಂದು ತಮ್ಮೂರಿಗೆ ಹೋಗಲು ಟ್ಯಾಂಕರ್ ಮೂಲಕ ಹೊರಟ್ಟಿದರು. ಯುವಕರು ಮರವಂತೆ ಕಡಲ ತೀರಕ್ಕೆ ಬಂದಾಗ ಬೀಚ್ ನೋಡಲು ನಿಲ್ಲಿಸಲು ಹೇಳಿದರು.
ಬೀಚ್ ನೋಡುತ್ತ ಮೊಬೈಲ್ನಲ್ಲಿ ಫೋಟೋ ತೆಗೆಯುತ್ತ ನೀರಿಗೆ ಇಳಿದ ಸಂದರ್ಭ ಬೃಹತ್ ಅಲೆ ಅಪ್ಪಳಿಸಿದ ಪರಿಣಾಮ ಓರ್ವ ಯುವಕ ಅಲೆಯ ರಭಸಕ್ಕೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ಸ್ಥಳೀಯ ಆ್ಯಂಬುಲೆನ್ಸ್ ಚಾಲಕ, ಸಮಾಜಸೇವಕ ಇಬ್ರಾಹಿಂ ಗಂಗೊಳ್ಳಿ ಹಾಗೂ ತಂಡ, ಈಜುತಜ್ಞ ದಿನೇಶ್ ಖಾರ್ವಿ, ಅಗ್ನಿಶಾಮಕ ದಳ, ಕೋಸ್ಟಲ್ ಗಾರ್ಡ್ ಸಿಬಂದಿ ಹಾಗೂ ಗಂಗೊಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂಜೆ ಸಮಯ ಭಾರೀ ಗಾಳೆ ಮಳೆಯಾಗಿದ್ದು ಹುಡುಕಾಟ ನಡೆಸಲು ಸಮಸ್ಯೆಯಾಗಿದೆ.
ಯುವಕರು ಮೊಬೈಲ್ನಲ್ಲಿ ಮಗ್ನರಾಗಿರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಸಮುದ್ರದ ಅಬ್ಬರದ ಅಲೆ ಇರುವುದರಿಂದ ಕಾರ್ಯಾಚರಣೆಯನ್ನು ಸದ್ಯ ನಿಲ್ಲಿಸಲಾಗಿದೆ. ನೀರುಪಾಲಾದ ವ್ಯಕ್ತಿಯ ಮೃತದೇಹ ಪತ್ತೆಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.