![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Aug 17, 2024, 6:00 AM IST
ಕೊಲ್ಲೂರು: ಜಡ್ಕಲ್ ನಿವಾಸಿ ರಾಜನ್ ಅವರ ಪುತ್ರ ಶಿಜೋ ಅವರಿಗೆ ವಿದೇಶಕ್ಕೆ ತೆರಳಲು ವೀಸಾ ಒದಗಿಸುವುದಾಗಿ ಭರವಸೆ ನೀಡಿ 15 ಲಕ್ಷದ 50 ಸಾವಿರ ರೂ. ನಗದು ಪಡೆದು ವೀಸಾ ನೀಡದೆ ಬಾಕಿ ಕೊಡಬೇಕಾದ 8 ಲಕ್ಷದ 95 ಸಾವಿರ ರೂ. ನಗದು ವಾಪಸ್ ನೀಡದೇ ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿ ಗೌತಮ್ ವಿರುದ್ಧ ಕೊಲ್ಲೂರು ಠಾಣೆಗೆ ದೂರು ನೀಡಲಾಗಿದೆ.
ಕುಮಟಾದಲ್ಲಿರುವ ಆರೋಪಿ ತಂದೆ ಸುರೇಶ್ ಅವರನ್ನು ಸಂಪರ್ಕ ಮಾಡಿದಾಗ ತನ್ನ ಮಗ ಹಲವು ಜನರಿಗೆ ವೀಸಾ ಒದಗಿಸಿದ್ದಾನೆ ಎಂಬ ಭರವಸೆ ನೀಡಿದ ಮೇಲೆ 11 ಲಕ್ಷದ 75 ಸಾವಿರ ರೂ.ಗಳನ್ನು ಬ್ಯಾಂಕ್ ಮೂಲಕ ಪಾವತಿ ಮಾಡಲಾಗಿತ್ತು. ಹಣ ಪಾವತಿ ಅನಂತರ ವೀಸಾ ನೀಡದೇ ಕೇವಲ 3 ಲಕ್ಷದ 75 ಸಾವಿರ ರೂ. ಮರುಪಾವತಿ ಮಾಡಿ ಬಾಕಿ ಹಣ ನೀಡದೇ ವಂಚನೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.ಈ ಬಗ್ಗೆ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.