![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 27, 2022, 7:02 PM IST
ಕುಂದಾಪುರ: ಬಾಗಲಕೋಟೆ ಮೂಲದ, ಕುಂದಾಪುರದಲ್ಲಿ ನೆಲೆಸಿರುವ, ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಪಾರ್ವತಿ (25) ಎಂಬುವರು ಐದು ವರ್ಷದ ತನ್ನ ಪುತ್ರಿ ವಿದ್ಯಾಳೊಂದಿಗೆ ನಾಪತ್ತೆಯಾದ ಘಟನೆ ಸಂಭವಿಸಿದೆ.
ಇಲ್ಲಿನ ಟಿಟಿ ರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿರುವ ಪೂರ್ಣಾನಂದ ಎಂಬುವರ ಪತ್ನಿಯಾಗಿರುವ ಪಾರ್ವತಿ ಅವರು ಕುಂದಾಪುರದ ಹೋಟೆಲ್ವೊಂದರಲ್ಲಿ ಕೆಲಸಕ್ಕೆಂದು ಅ.19 ರಂದು ಮಗುವಿನೊಂದಿಗೆ ಮನೆಯಿಂದ ಬಂದಿದ್ದು, ಆ ಬಳಿಕ ಮನೆಗೂ ತೆರಳದೇ, ಊರಿಗೂ ತೆರಳದೇ ನಾಪತ್ತೆಯಾಗಿರುವುದಾಗಿದೆ.
ಪೂರ್ಣಾನಂದ ಅವರ ಸಹೋದರ ರವಿ ಗುರುಪುತ್ರಪ್ಪ ಹಟ್ಟಿ (28) ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.