ಮೂರು ಮುತ್ತು ನಾಟಕ ಸಿನಿಮಾ ಮಾಡಬೇಕೆಂಬ ಕನಸು ನನ್ನದು: ಹಾಸ್ಯ ಕಲಾವಿದ ಸತೀಶ್ ಪೈ

ನಾಟಕದಲ್ಲಿ ನಿಯತ್ತು, ನಿಷ್ಠೆಯಿಂದ ದುಡಿದರೆ ಹೆಸರು ಮತ್ತು ಹಣ ಸಂಪಾದಿಸಬಹುದು.

Team Udayavani, Apr 5, 2021, 7:25 PM IST

ಮೂರು ಮುತ್ತು ನಾಟಕ ಸಿನಿಮಾ ಮಾಡಬೇಕೆಂಬ ಕನಸು ನನ್ನದು: ಹಾಸ್ಯ ಕಲಾವಿದ ಸತೀಶ್ ಪೈ

ಮಣಿಪಾಲ:ಮೂರು ಮುತ್ತು ನಾಟಕ ಕಳೆದ 26 ವರ್ಷಗಳಿಂದ ಸುಮಾರು 1900 ಪ್ರದರ್ಶನ ಕಂಡಿದೆ. ಪ್ರತಿವರ್ಷ 50-60 ಮೂರು ಮುತ್ತು ನಾಟಕಗಳನ್ನು ನಾವು ಪ್ರದರ್ಶಿಸುತ್ತಿದ್ದೇವೆ. ಕಾಲಕ್ಕೆ ತಕ್ಕಂತೆ ನಾವು ಅದರಲ್ಲಿ ಬದಲಾವಣೆ ತಂದಿದ್ದೇವೆ. ನಮಗೆ ಮರುಜೀವ ಕೊಟ್ಟ ನಾಟಕ ಇದು ಎಂದು ಮೂರು ಮುತ್ತು ನಾಟಕದ ಖ್ಯಾತ ಕಲಾವಿದ ಸತೀಶ್ ಪೈ ಅವರ ಮನದಾಳದ ಮಾತು.

ಮೂರು ಮುತ್ತು ನಾಟಕದ “ಕರಾವಳಿ ಮುತ್ತು” ಖ್ಯಾತಿಯ ಸತೀಶ್ ಪೈ ಅವರು ಸೋಮವಾರ (ಏಪ್ರಿಲ್ 05) ಉದಯವಾಣಿ ಕಚೇರಿಗೆ ಭೇಟಿ ನೀಡಿ, ತಮ್ಮ ರಂಗಭೂಮಿ ಪಯಣ, ತಂದೆ ಕುಳ್ಳಪ್ಪು ಅವರ ಬಗ್ಗೆ ನೆನಪಿನ ಬುತ್ತಿಯನ್ನು ಉದಯವಾಣಿ ಡಾಟ್ ಕಾಮ್ ನ “ತೆರೆದಿದೆ ಮನೆ ಬಾ ಅತಿಥಿ” ಎಂಬ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಹಂಚಿಕೊಂಡರು. ಹಲವು ಮಂದಿ ಅಭಿಮಾನಿಗಳ ಪ್ರಶ್ನೆಗೂ ಅವರು ಉತ್ತರಿಸಿದರು.

ನಾಟಕದ ಮುಖ್ಯ ಆಶಯ ಮನರಂಜನೆ ನೀಡುವುದು ಎಂಬುದು ನಮ್ಮ ತಂದೆ ಕುಳ್ಳಪ್ಪು(ಬಾಲಕೃಷ್ಣ ಪೈ) ಅವರ ದೃಢ ನಿಲುವಾಗಿತ್ತು. ನಾಟಕದ ಗೀಳಿನಿಂದ ಅವರು ಸಿನಿಮಾ, ನಾಟಕ ಕಂಪನಿಗಳನ್ನು ಮಾಡಿದ್ದರು. ಸಾಲ ತೀರಿಸಲು ತಾಯಿಯ ಚಿನ್ನವನ್ನೆಲ್ಲಾ ಮಾರಿದ್ದರು. ನಾಟಕದಲ್ಲಿ ಅವರು ಸಂಪಾದಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಆದರೂ ಅವರು ನಾಟಕ ಆಡಿಸುವುದನ್ನು ಮುಂದುವರಿಸಿದ್ದರು ಎಂದು ಸತೀಶ್ ಪೈ ತಮ್ಮ ತಂದೆಯ ನೆನಪನ್ನು ಬಿಚ್ಚಿಟ್ಟರು.

ತಾನು ಸಿನಿಮಾ ಮಾಡಿ ನಷ್ಟ ಅನುಭವಿಸಿದ್ದರಿಂದ ನಮಗೆ(ಮಕ್ಕಳಿಗೆ) ಯಾವುದೇ ಕಾರಣಕ್ಕೂ ಸಿನಿಮಾದಲ್ಲಿ ನಟಿಸಲು ಹೋಗಬೇಡಿ ಎಂದು ಕಿವಿ ಮಾತು ಹೇಳಿದ್ದರು. ಹೀಗಾಗಿ ನಾನು ಸಿನಿಮಾದಲ್ಲಿ ನಟಿಸಲು ಹಲವು ಬಾರಿ ಅವಕಾಶ ಬಂದಿದ್ದರೂ ಕೂಡಾ ಅದನ್ನು ನಿರಾಕರಿಸಿದ್ದೆ. ಆದರೂ ಮೂರು ಮುತ್ತು ನಾಟಕವನ್ನು ಸಿನಿಮಾ ಮಾಡಬೇಕೆಂಬ ಆಸೆ ಇದೆ ಎಂದು ಸತೀಶ್ ಫೇಸ್ ಬುಕ್ ಲೈವ್ ಚಾಟ್ ನಲ್ಲಿ ಹೇಳಿದರು.

ನಾಟಕದಲ್ಲಿ ಮನರಂಜನೆ ಮುಖ್ಯ. ನಮ್ಮ ನಾಟಕದಲ್ಲಿ ನಾವು ಎಲ್ಲಿಯೂ ಅಶ್ಲೀಲತೆ ಬಳಸಲ್ಲ. ನಾಟಕದಲ್ಲಿ ಸಂದೇಶ ಇರಬೇಕು, ಇದ್ದರೆ ಒಳ್ಳೆಯದು. ಆದರೆ ಸಂದೇಶ ಇಲ್ಲದಿದ್ದ ಕೂಡಲೇ ನಾಟಕವನ್ನು ನಿರ್ಲಕ್ಷಿಸಬಾರದು ಎಂದು ಸತೀಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಟಕ, ಕಲಾವಿದ ಅಂದ ಕೂಡಲೇ ಅಸಡ್ಡೆ ಬೇಡ. ನಾಟಕದಲ್ಲಿ ನಿಯತ್ತು, ನಿಷ್ಠೆಯಿಂದ ದುಡಿದರೆ ಹೆಸರು ಮತ್ತು ಹಣ ಸಂಪಾದಿಸಬಹುದು. ನಾಟಕ ಕಲೆ ನಿರಂತರವಾಗಿ ಮುಂದುವರಿಯಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು.

ಉದಯವಾಣಿ ಕಚೇರಿಗೆ ಆಗಮಿಸಿದ್ದ ಮೂರು ಮುತ್ತು ಖ್ಯಾತಿಯ ಸತೀಶ್ ಪೈ ಅವರಿಗೆ ಎಂಡಿಎನ್ ಎಲ್ ಮುಖ್ಯಸ್ಥ ಹರೀಶ್ ಭಟ್ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಉದಯವಾಣಿ ಆನ್ ಲೈನ್ ತಂಡ ಜತೆಗಿತ್ತು.

ಟಾಪ್ ನ್ಯೂಸ್

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

4

Malpe: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

1

Udupi: ಅಡ್ಡಗಟ್ಟಿ ಹಲ್ಲೆ, ಜೀವಬೆದರಿಕೆ; ದೂರು

13(1)

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ ಚುರುಕು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

simha roopini kannada movie

Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್‌ ರಾಜ್‌ ನಿರ್ದೇಶನ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

mantrika kannada movie

Kannada Cinema; ಮಾಂತ್ರಿಕ ಆಟ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.