ಶಾಸ್ತ್ರೀ ವೃತ್ತ: ಕಾಮಗಾರಿ ಪೂರ್ತಿ ಆಗಿಲ್ಲ

ಸಿದ್ಧಗೊಳ್ಳುತ್ತಿದೆ ಶಾಸ್ತ್ರೀ ಪ್ರತಿಮೆ; ಉದ್ಯಾನ, ತಡೆಬೇಲಿ, ಬೆಳಕಿನ ವ್ಯವಸ್ಥೆ ಬಾಕಿ

Team Udayavani, Oct 14, 2022, 12:30 PM IST

11

ಕುಂದಾಪುರ: ನಗರದ ಪ್ರವೇಶದ್ವಾರ ಶಾಸ್ತ್ರೀ ವೃತ್ತದಲ್ಲಿ ವಿನೂತನ ಮಾದರಿಯಲ್ಲಿ ರಚನೆಯಾಗುತ್ತಿರುವ ಕಾಮಗಾರಿ ಎಂದೋ ಮುಗಿಯಬೇಕಿದ್ದುದು ಇನ್ನೂ ಪೂರ್ತಿಯಾಗಿಲ್ಲ.

ಬದಲಾದ ವಿನ್ಯಾಸ

ಆರಂಭದಲ್ಲಿ ಇದನ್ನು ಮೈಸೂರು ಜಯಚಾಮ ರಾಜೇಂದ್ರ ವೃತ್ತದ ಮಾದರಿಯಲ್ಲಿ ವಿನ್ಯಾಸವಾಗಲಿದೆ ಎಂದು ತಿಳಿಸಲಾಗಿತ್ತು. ಆನಂತರ ವಿನ್ಯಾಸ ಬದಲಾಯಿತು. ಸಿಮೆಂಟ್‌ ಬದಲು ಕಲ್ಲು ಬಳಸಲಾಯಿತು. ನಿಗದಿ ಪಡಿಸಿದ ಮೊತ್ತವೂ ಹೆಚ್ಚಾಯಿತು. ಅದು ಸಾಮಾಜಿಕ ಜಾಲತಾಣ ದಲ್ಲಿ ಬಂದು ಪುರಸಭೆ ಸಾಮಾನ್ಯ ಸಭೆಯಲ್ಲೂ ಚರ್ಚೆಯಾಯಿತು. ಒಂದಷ್ಟು ವಿವಾದ, ಟೀಕೆ ಎಲ್ಲ ಆಯಿತು. ಕೊನೆಗೆ ವೃತ್ತ ಮಾಡಿ ಕಾಮಗಾರಿ ನಿಲ್ಲಿಸಿದೆ. ಮುಂದಿನ ಕಾಮಗಾರಿ ವಿಳಂಬಗತಿಯಲ್ಲಿದೆ. ಜನರ, ತಮ್ಮದೇ ಪಕ್ಷದ ಜನಪ್ರತಿನಿಧಿಗಳ ಟೀಕೆಗೆ ಅಂಜಿದ ಆಡಳಿತ ಸರಕಾರದ ದುಡ್ಡು ಬಳಸುವುದೋ ಖಾಸಗಿಗೆ ಮೊರೆ ಹೋಗುವುದೋ ಎಂಬ ಡೋಲಾಯಮಾನದಲ್ಲಿದೆ.

ಸರ್ಕಲ್‌ ಅವಶ್ಯ

ಕುಂದಾಪುರ ಶಾಸ್ತ್ರೀ ಸರ್ಕಲ್‌, ಶಾಸ್ತ್ರೀ ಪಾರ್ಕ್‌ ಹೆಸರು ವಾಸಿ. ಕುಂದಾಪುರಕ್ಕೆ ಎಲ್ಲಿಂದಲೇ ಬಂದರೂ ಬಸ್ಸಿನಿಂದಿಳಿಯಲು ಸೂಚನೆ ಕೊಡುವುದು ಇದೇ ವೃತ್ತವನ್ನು. ಯಾವುದೇ ಸ್ಥಳದ ಗುರುತು ಪರಿಚಯ ಹೇಳಬೇಕಾದರೂ ಶಾಸ್ತ್ರೀ ಸರ್ಕಲನ್ನು ಹೆಸರಿಸುತ್ತಾರೆ. ಇಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟರ ಹೆಸರಿನಲ್ಲಿ ಎಸ್‌ಎಸ್‌ಎನ್‌ ಕನ್‌ಸ್ಟ್ರಕ್ಷನ್‌ ಕಂಪೆನಿ ನೀಡಿದ ಲಾಲ್‌ಬಹದ್ದೂರ್‌ ಶಾಸ್ತ್ರೀಗಳ ಸುಂದರ ಪ್ರತಿಮೆಯಿತ್ತು. ಅದೆಷ್ಟೋ ವರ್ಷಗಳಿಂದ ಹಸುರು ಹುಲ್ಲಿನ ನಡುವೆ ಶಿಲೆಯ ಮೇಲೆ ಕೂರಿಸಲ್ಪಟ್ಟ ಶಾಸ್ತ್ರೀ ವಿಗ್ರಹವುಳ್ಳ ಸರ್ಕಲ್‌ ಈಚಿನ ದಿನಗಳಲ್ಲಿ ಬೀಡಾಡಿ ಗಳ ತಾಣವಾಗಿತ್ತು. ಈಗ ಇವರೆಲ್ಲ ಫ್ಲೈಓವರ್‌ ಅಡಿಗೆ ಸ್ಥಳಾಂತರಗೊಂಡಿದ್ದಾರೆ!

ಪಾಳು ಬಿದ್ದಂತೆ ಇತ್ತು

ಶಾಸ್ತ್ರೀ ಪ್ರತಿಮೆಗೂ ಸೂಕ್ತ ಭದ್ರತೆ ಇರಲಿಲ್ಲ. ಶಾಸ್ತ್ರೀ ಸರ್ಕಲ್‌ನ ಸೌಂದರ್ಯ ಹೆಚ್ಚಿಸಬೇಕೆಂದು ಅನೇಕ ಸಮಯದಿಂದ ಬೇಡಿಕೆ ಇತ್ತು. ಅನೇಕ ವರ್ಷಗಳಿಂದ ಕುಂದಾಪುರದ ಸ್ವಾಗತ ದ್ವಾರ ಎಂದೇ ಪರಿಗಣಿಸಲ್ಪಟ್ಟಿರುವ ಶಾಸ್ತ್ರೀ ವೃತ್ತ ಸೌಂದರ್ಯಹೀನವಾಗಿತ್ತು. ಫ್ಲೈಓವರ್‌, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕವಂತೂ ಅನಾಥವಾದಂತಿತ್ತು. ನಗರಕ್ಕೆ ಪ್ರವೇಶ ಮಾಡುವಾಗಲೇ ದೊರೆಯುವ ವೃತ್ತ ಇದಾದ ಕಾರಣ ಇದರ ಸೌಂದರ್ಯ ಕಂಡೇ ಸುಂದರ ಕುಂದಾಪುರ ಕಲ್ಪನೆಗೆ ಪೂರಕ ಮನಃಸ್ಥಿತಿ ನಿರ್ಮಾಣವಾಗುತ್ತದೆ ಎಂದು ಪುರಸಭೆ ಆಡಳಿತ ಭಾವಿಸಿದೆ. ಈ ನಿಟ್ಟಿನಲ್ಲಿ ಪುರಸಭೆ ವೃತ್ತ ನಿರ್ಮಾಣಕ್ಕೆ ಮುಂದಾಗಿದೆ.

ಪ್ರತಿಮೆ, ಉದ್ಯಾನವನ ಆಗಿಲ್ಲ

ಶಾಸ್ತ್ರೀ ಸರ್ಕಲ್‌ ಪುರ ಸಭೆ ವ್ಯಾಪ್ತಿಗೆ ಬರುತ್ತದೆ. ಅದರ ಉಸ್ತುವಾರಿ, ನಿರ್ವಹಣೆ, ನವೀಕರಣ ಎಲ್ಲವೂ ಪುರಸಭೆ ಪಾಲಿಗೆ. ಆದರೆ ಈವರೆಗೆ ನವೀಕರಣ ಕಾರ್ಯ ನಡೆದಿರಲಿಲ್ಲ. ಏಕೆಂದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 10 ವರ್ಷಗಳ ಕಾಲ ಇಲ್ಲಿ ಹೆದ್ದಾರಿ ಕಾಮಗಾರಿ ಎಂದು ದಿನ ದೂಡಿತ್ತು. ವಸ್ತುಗಳನ್ನು ತಂದು ರಾಶಿ ಹಾಕಿತ್ತು. ರಸ್ತೆ ಅಗೆದು ಹೊಸ ರಸ್ತೆ ಮಾಡದೇ ಬಾಕಿ ಯಾದ ಕಾರಣ ವೃತ್ತದ ಆಧುನೀಕರಣ ಮಾತ್ರ ಸಾಧ್ಯವಾಗಿರಲಿಲ್ಲ. ಈಗ ವೃತ್ತದ ಮಂಟಪ ಆಗಿದ್ದು ಪ್ರತಿಮೆ, ಉದ್ಯಾನವನ, ಸುತ್ತಲಿನ ಕಬ್ಬಿಣದ ತಡೆ, ಬೆಳಕಿನ ವ್ಯವಸ್ಥೆ ಆಗಿಲ್ಲ, ಹೈಮಾಸ್ಟ್‌ ಲೈಟ್‌ ಸ್ಥಳಾಂತರ ಕಾರ್ಯ ಆಗಿಲ್ಲ.

ಶಾಸಕರ ಮಧ್ಯಪ್ರವೇಶ: ಕಾಮಗಾರಿ ಕುರಿತು ಶಾಸಕರವರೆಗೆ ದೂರು ಹೋಯಿತು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಪರಾಮರ್ಶೆ ನಡೆಸಿದರು. ಈ ಹಿಂದೆ ಶಾಸ್ತ್ರೀ ಪ್ರತಿಮೆಯನ್ನು ಕೊಡುಗೆಯಾಗಿ ನೀಡಿದ್ದ ಎಸೆಸೆಲ್ಸಿ ಸಂಸ್ಥೆಯನ್ನು ಸಂಪರ್ಕಿಸಿ ಚಾರ್ಮಕ್ಕಿ ನಾರಾಯಣ ಶೆಟ್ಟರ ನೆನಪಿನಲ್ಲಿ ನೀಡಿದ ಪ್ರತಿಮೆಯ ಸ್ಥಳದಲ್ಲಿ ನೂತನ ವೃತ್ತಕ್ಕೆ ಆಗುವಂತಹ ಪ್ರತಿಮೆ ನೀಡಲು ಮನವಿ ಮಾಡಿದರು. ಅದರಂತೆ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಪುಸ್ತಕ ಹಿಡಿದು ನಡೆಯುವ ಭಂಗಿಯ ಶಾಸ್ತ್ರೀಗಳ ಕಂಚಿನ ಪ್ರತಿಮೆ ನಿರ್ಮಾಣ ಹಂತದಲ್ಲಿದೆ. ಮೈಸೂರಿನಲ್ಲಿ ಬೈಂದೂರು ತಾಲೂಕಿನ ನಾಡ ಗುಡ್ಡೆಯಂಗಡಿಯ ಶಿಲ್ಪಿ ಪ್ರತಿಮೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಅಧಿಕ ವೆಚ್ಚ

ಮೊದಲ ಹಂತದ ಕಾಮಗಾರಿಗೆ 25 ಲಕ್ಷ, ಎರಡನೆ ಹಂತದ ಕಾಮಗಾರಿಗೆ 25 ಲಕ್ಷ, ಮೂರನೆ ಹಂತದಲ್ಲಿ ಮತ್ತೆ 10 ಲಕ್ಷ ರೂ. ಬೇಕಾಗಬಹುದು ಎಂದು ವೆಚ್ಚದ ಕುರಿತು ಆಕ್ಷೇಪ ಕೇಳಿ ಬಂದಿತ್ತು. ಪುರಸಭೆ ಸಾಮಾನ್ಯ ಸಭೆಯಲ್ಲೂ ಈ ಕುರಿತು ಚರ್ಚೆ ನಡೆದಿತ್ತು. ಕಾಮಗಾರಿ ಹಂತದಲ್ಲಿ ಬಳಸುವ ವಸ್ತುಗಳು ಬದಲಾದ ಕಾರಣ ವೆಚ್ಚ ಹೆಚ್ಚಾಗಿದೆ ಎಂದು ಸಮರ್ಥನೆ ನೀಡಲಾಗಿತ್ತು. ಎರಡು ಬಾರಿ ಟೆಂಡರ್‌ ಆಹ್ವಾನಿಸಿದಾಗಲೂ ಒಂದೇ ಟೆಂಡರ್‌ ಬಂದು ಮೂರನೆಯ ಬಾರಿ ಟೆಂಡರ್‌ ಅಂಗೀ ಕಾರವಾಗಿ ಈಗ ಎರಡನೆ ಹಂತದ ಕಾಮಗಾರಿಗೂ ಏಕ ಟೆಂಡರ್‌ ಬಂದಿದ್ದು ಪ್ರಕ್ರಿಯೆ ಮುಂದುವರಿಯಲಿಲ್ಲ.

ಪ್ರತಿಮೆ ಆಗುತ್ತಿದೆ: ಹೊಸ ಪ್ರತಿಮೆ ಶಾಸಕರ ಮೂಲಕ ದಾನಿಗಳಿಂದ ಮಂಜೂರಾಗಿದ್ದು ಈವರೆಗೆ ಇದ್ದ ಪ್ರತಿಮೆಯನ್ನು ಫೆರ್ರಿ ಪಾರ್ಕ್‌ನಲ್ಲಿ ಇರಿಸಲಾಗಿದ್ದು ಅಲ್ಲೇ ಶಾಶ್ವತವಾಗಿ ಇರಿಸುವಂತೆ ಅಲ್ಲಿನ ಪುರಸಭೆ ಸದಸ್ಯ ಅಬ್ಬು ಮಹಮ್ಮದ್‌ ಅವರೂ ಮನವಿ ಮಾಡಿದ್ದಾರೆ. ಶಾಸ್ತ್ರೀ ಸರ್ಕಲ್‌ ಕಾಮಗಾರಿ ಶೀಘ್ರದಲ್ಲಿ ನಡೆಯಲಿದೆ. ಸರ್ಕಲ್‌ನ ಉಳಿಕೆ ಕಾಮಗಾರಿಗಳಿಗೂ ದಾನಿಗಳಿದ್ದರೆ ಪ್ರಯತ್ನಿಸಲಾಗುವುದು. –ವೀಣಾ ಭಾಸ್ಕರ ಮೆಂಡನ್‌ ಅಧ್ಯಕ್ಷೆ, ಪುರಸಭೆ

ಶೀಘ್ರ ಪೂರ್ಣ: ಪ್ರತಿಮೆ ತಯಾರಿ ನಡೆಯುತ್ತಿದ್ದು ಎರಡನೆ ಹಂತದ ಕಾಮಗಾರಿಯ ಟೆಂಡರ್‌ನ ವೆಚ್ಚ ತಗ್ಗಿಸಲಾಗಿದೆ. ಸುಂದರವಾಗಿ ಕಾಣುವಂತೆ ಕಾಮಗಾರಿ ನಡೆಯಲಿದ್ದು ಶೀಘ್ರ ಪೂರ್ಣಗೊಳ್ಳಲಿದೆ. –ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

 

 

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಡಾಮಕ್ಕಿ ಗ್ರಾ.ಪಂ. ಆಸ್ತಿಗೆ ಹಾನಿ: ದೂರು ದಾಖಲು

ಮಡಾಮಕ್ಕಿ ಗ್ರಾ.ಪಂ. ಆಸ್ತಿಗೆ ಹಾನಿ: ದೂರು ದಾಖಲು

11

Missing Case: ಪತಿ ನಾಪತ್ತೆ; ಪತ್ನಿಯ ದೂರು

Gangolli: ಸ್ಕೂಟರ್‌ಗೆ ಕಾರು ಢಿಕ್ಕಿ ; ಮೂವರಿಗೆ ಗಾಯ

Gangolli: ಸ್ಕೂಟರ್‌ಗೆ ಕಾರು ಢಿಕ್ಕಿ ; ಮೂವರಿಗೆ ಗಾಯ

9

Kota: ಶಿರಿಯಾರ; ಅಕ್ರಮ ಗಣಿಗಾರಿಕೆಗೆ ದಾಳಿ

POlice

Gangolli: ಅಕ್ರಮ ಕೆಂಪು ಕಲ್ಲು ಸಾಗಾಟ; ಪ್ರಕರಣ ದಾಖಲು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.