Siddapura: ಪುತ್ರನ ಮನೆ ಸಾಲದಿಂದ ತಂದೆ ಆತ್ಮಹ*ತ್ಯೆ
Team Udayavani, Oct 18, 2024, 10:00 PM IST
ಸಿದ್ದಾಪುರ: ಪುತ್ರ ಮನೆ ನಿರ್ಮಾಣಕ್ಕೆ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಮನೆ ಕೂಡ ಪೂರ್ಣಗೊಳ್ಳದಿರುವುದರಿಂದ ತಂದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ವೆಯಲ್ಲಿ ನಡೆದಿದೆ.
ಬೆಳ್ವೆ ಗ್ರಾಮದ ಮಹಾಬಲ (75) ಆತ್ಮಹತ್ಯೆ ಮಾಡಿಕೊಂಡವರು. ಬೆಳ್ವೆ ಗ್ರಾಮದ ಭಾಸ್ಕರ ಅವರು 4 ವರ್ಷದ ಹಿಂದೆ ಮನೆ ಕಟ್ಟಲು ಪ್ರಾರಂಭಿಸಿದ್ದರು. ಮಗನ ಮನೆ ಕಟ್ಟಲು ತಾಯಿ ಕೂಡ ಸಾಲ ಮಾಡಿಕೊಟ್ಟಿದರು. ಅಪೂರ್ಣವಾಗಿದ್ದ ಮನೆಯನ್ನು ಅ. 13ರಂದು ಗೃಹ ಪ್ರವೇಶ ಮಾಡಿದ್ದರು.
ಮಗನ ಸಾಲದ ಚಿಂತೆಯಲ್ಲೇ ಕೊರಗಿದ್ದ ಮಹಾಬಲ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.